ETV Bharat / state

ಸಮೇತನಹಳ್ಳಿ ಕೆರೆಯಲ್ಲಿ ನೊರೆ: ರೈತರಲ್ಲಿ ಹೆಚ್ಚಿದ ಆತಂಕ - undefined

ನೂರಾರು ಎಕರೆ ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿದ್ದ ಸಮೇತನಹಳ್ಳಿ ಕೆರೆಯಲ್ಲಿ ನೊರೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಪೂರ್ತಿ ಕೆರೆ ತ್ಯಾಜ್ಯದ ವಾಸನೆಯಿಂದ ಕೂಡಿದೆ.

ಸಮೇತನಹಳ್ಳಿ ಕೆರೆಯಲ್ಲಿ ನೊರೆ
author img

By

Published : May 26, 2019, 9:30 PM IST

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯಲ್ಲಿರುವ ಸುಮಾರು 76 ಎಕರೆ ವಿಸ್ತೀರ್ಣ ಹೊಂದಿರುವ ಸಮೇತನಹಳ್ಳಿ ಕೆರೆಯಲ್ಲಿ ನೊರೆ ಎದ್ದು ಕಾಣುತ್ತಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ.

ಸಮೇತನಹಳ್ಳಿ ಕೆರೆಯಲ್ಲಿ ನೊರೆ

ನೂರಾರು ಎಕರೆ ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿದ್ದ ಈ ಕೆರೆ ರೈತರ ಜೀವನಾಡಿಯಾಗಿದೆ. ಆದ್ರೆ ಈಗ ಕೆರೆಯ ನೀರು ನೊರೆಯಿಂದ ತುಂಬಿ ತುಳುಕುತ್ತಿದ್ದು, ಪೂರ್ತಿ ಕೆರೆ ತ್ಯಾಜ್ಯದ ವಾಸನೆಯಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಉಪಯೋಗಕ್ಕೆ ಬರದಂತಾದ ನೀರು :

ಸುಮಾರು 57 ವರ್ಷಗಳಿಂದ ವರ್ತೂರು ಕೆರೆಯಲ್ಲಿ ನೀರಿದ್ದು, ಕಳೆದ 15 ದಿನಗಳಿಂದ ಕೆರೆಯಲ್ಲಿ ನೊರೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಇಷ್ಟು ವರ್ಷಗಳಿಂದ ಈ ಕೆರೆ ನೀರನ್ನು ನಂಬಿ ಕೃಷಿ ಜೀವನ ನಡೆಸುತ್ತಿದ್ದ ರೈತರು ಹಾಗು ಜಾನುವಾರುಗಳು ನೊರೆಯಿಂದ ತೊಂದರೆ ಅನುಭವಿಸುವಂತಾಗಿದೆ. ನೊರೆ ಕಾರಣ ನೀರು ಕೃಷಿ ಮತ್ತು ದನಕರುಗಳ ಉಪಯೋಗಕ್ಕೆ ಬರದಂತಾಗಿದ್ದು, ಜನ-ಜಾನುವಾರಗಳು ರೋಗಗಳಿಗೆ ತುತ್ತಾಗುವಂತಾಗಿದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

ಶುದ್ದೀಕರಿಸಿ ಒಳ್ಳೆಯ ನೀರು ಹರಿಸಿ :

ಈ ಕೆರೆಯ ಕೂಗಳತೆ ದೂರದಲ್ಲಿ ವರ್ತೂರು ಕೆರೆಯ ಕೋಡಿ ನೀರು ಕಾಲುವೆ ಮುಖಾಂತರ ಹರಿಯುತ್ತಿದ್ದು, ಈ ಕಾಲುವೆಯಲ್ಲಿ ಸಹ ನೊರೆ ಹೆಚ್ಚಾಗಿದೆ. ಆದರೆ ಈ ಕಾಲುವೆ ಮುಖಾಂತರವೇ ಸರ್ಕಾರ 57 ವರ್ಷಗಳಿಂದ ಏತ ನೀರಾವರಿ ಮಾಡಿ ಸಮೇತನಹಳ್ಳಿ ಕೆರೆಗೆ ನೀರು ಹರಿಸುತ್ತಿದೆ. ಈ ಕಾಲುವೆಯ ನೀರನ್ನು ಸಮೇತನಹಳ್ಳಿ ಬಳಿಯ ಒಂದು ಬಾವಿಯ ಮುಖಾಂತರ ಸಂಗ್ರಹ ಮಾಡಿ, ನಂತರ ಪೈಪ್‌ಗಳ ಮೂಲಕ ಸಮೇತನಹಳ್ಳಿ ಕೆರೆಗೆ ಹರಿಸುತ್ತಿದ್ದಾರೆ. ಆದರೆ ಸಣ್ಣ ನೀರಾವರಿ ಇಲಾಖೆಯವರು ಒಂದು ಶುದ್ದೀಕರಣ ಯಂತ್ರವನ್ನು ಅಳವಡಿಸಿ ನೀರು ಶುದ್ದೀಕರಿಸಿ ಒಳ್ಳೆಯ ನೀರು ಹರಿಸಿದರೆ ತೊಂದರೆಯನ್ನು ತಪ್ಪಿಸಬಹುದಾಗಿದೆ.

ಇನ್ನು ಈ ಕೆರೆ ನೀರಿನಿಂದಲೇ ಈ ಭಾಗದ ರೈತರು ತರಕಾರಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದು ತಿನ್ನುತ್ತಿದ್ದು, ಇದನ್ನೇ ನಂಬಿ ಕೆಲವು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಆದರೆ ಈಗ ಕಾಣಿಸಿಕೊಂಡ ನೊರೆ ನೀರಿನಿಂದ ಬೆಳೆ ಸಮೃದ್ಧಿಯಾಗಿ ಬರುವುದಿಲ್ಲ, ಜತೆಗೆ ಬೆಳೆದ ಬೆಳೆಯನ್ನು ಸಹ ತಿನ್ನಲು ಯಾರು ಮುಂದೆ ಬರುವುದಿಲ್ಲ. ಹೀಗೆ ಮುಂದುವರಿದರೆ ಈ ಭಾಗದ ರೈತರು ಕೃಷಿಯಿಂದ ದೂರ ಸರಿಯಬೇಕಾದ ಪರಿಸ್ಥಿತಿ ಎದುರಾಗಲಿದೆ.

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯಲ್ಲಿರುವ ಸುಮಾರು 76 ಎಕರೆ ವಿಸ್ತೀರ್ಣ ಹೊಂದಿರುವ ಸಮೇತನಹಳ್ಳಿ ಕೆರೆಯಲ್ಲಿ ನೊರೆ ಎದ್ದು ಕಾಣುತ್ತಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ.

ಸಮೇತನಹಳ್ಳಿ ಕೆರೆಯಲ್ಲಿ ನೊರೆ

ನೂರಾರು ಎಕರೆ ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿದ್ದ ಈ ಕೆರೆ ರೈತರ ಜೀವನಾಡಿಯಾಗಿದೆ. ಆದ್ರೆ ಈಗ ಕೆರೆಯ ನೀರು ನೊರೆಯಿಂದ ತುಂಬಿ ತುಳುಕುತ್ತಿದ್ದು, ಪೂರ್ತಿ ಕೆರೆ ತ್ಯಾಜ್ಯದ ವಾಸನೆಯಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಉಪಯೋಗಕ್ಕೆ ಬರದಂತಾದ ನೀರು :

ಸುಮಾರು 57 ವರ್ಷಗಳಿಂದ ವರ್ತೂರು ಕೆರೆಯಲ್ಲಿ ನೀರಿದ್ದು, ಕಳೆದ 15 ದಿನಗಳಿಂದ ಕೆರೆಯಲ್ಲಿ ನೊರೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಇಷ್ಟು ವರ್ಷಗಳಿಂದ ಈ ಕೆರೆ ನೀರನ್ನು ನಂಬಿ ಕೃಷಿ ಜೀವನ ನಡೆಸುತ್ತಿದ್ದ ರೈತರು ಹಾಗು ಜಾನುವಾರುಗಳು ನೊರೆಯಿಂದ ತೊಂದರೆ ಅನುಭವಿಸುವಂತಾಗಿದೆ. ನೊರೆ ಕಾರಣ ನೀರು ಕೃಷಿ ಮತ್ತು ದನಕರುಗಳ ಉಪಯೋಗಕ್ಕೆ ಬರದಂತಾಗಿದ್ದು, ಜನ-ಜಾನುವಾರಗಳು ರೋಗಗಳಿಗೆ ತುತ್ತಾಗುವಂತಾಗಿದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

ಶುದ್ದೀಕರಿಸಿ ಒಳ್ಳೆಯ ನೀರು ಹರಿಸಿ :

ಈ ಕೆರೆಯ ಕೂಗಳತೆ ದೂರದಲ್ಲಿ ವರ್ತೂರು ಕೆರೆಯ ಕೋಡಿ ನೀರು ಕಾಲುವೆ ಮುಖಾಂತರ ಹರಿಯುತ್ತಿದ್ದು, ಈ ಕಾಲುವೆಯಲ್ಲಿ ಸಹ ನೊರೆ ಹೆಚ್ಚಾಗಿದೆ. ಆದರೆ ಈ ಕಾಲುವೆ ಮುಖಾಂತರವೇ ಸರ್ಕಾರ 57 ವರ್ಷಗಳಿಂದ ಏತ ನೀರಾವರಿ ಮಾಡಿ ಸಮೇತನಹಳ್ಳಿ ಕೆರೆಗೆ ನೀರು ಹರಿಸುತ್ತಿದೆ. ಈ ಕಾಲುವೆಯ ನೀರನ್ನು ಸಮೇತನಹಳ್ಳಿ ಬಳಿಯ ಒಂದು ಬಾವಿಯ ಮುಖಾಂತರ ಸಂಗ್ರಹ ಮಾಡಿ, ನಂತರ ಪೈಪ್‌ಗಳ ಮೂಲಕ ಸಮೇತನಹಳ್ಳಿ ಕೆರೆಗೆ ಹರಿಸುತ್ತಿದ್ದಾರೆ. ಆದರೆ ಸಣ್ಣ ನೀರಾವರಿ ಇಲಾಖೆಯವರು ಒಂದು ಶುದ್ದೀಕರಣ ಯಂತ್ರವನ್ನು ಅಳವಡಿಸಿ ನೀರು ಶುದ್ದೀಕರಿಸಿ ಒಳ್ಳೆಯ ನೀರು ಹರಿಸಿದರೆ ತೊಂದರೆಯನ್ನು ತಪ್ಪಿಸಬಹುದಾಗಿದೆ.

ಇನ್ನು ಈ ಕೆರೆ ನೀರಿನಿಂದಲೇ ಈ ಭಾಗದ ರೈತರು ತರಕಾರಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದು ತಿನ್ನುತ್ತಿದ್ದು, ಇದನ್ನೇ ನಂಬಿ ಕೆಲವು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಆದರೆ ಈಗ ಕಾಣಿಸಿಕೊಂಡ ನೊರೆ ನೀರಿನಿಂದ ಬೆಳೆ ಸಮೃದ್ಧಿಯಾಗಿ ಬರುವುದಿಲ್ಲ, ಜತೆಗೆ ಬೆಳೆದ ಬೆಳೆಯನ್ನು ಸಹ ತಿನ್ನಲು ಯಾರು ಮುಂದೆ ಬರುವುದಿಲ್ಲ. ಹೀಗೆ ಮುಂದುವರಿದರೆ ಈ ಭಾಗದ ರೈತರು ಕೃಷಿಯಿಂದ ದೂರ ಸರಿಯಬೇಕಾದ ಪರಿಸ್ಥಿತಿ ಎದುರಾಗಲಿದೆ.

Intro:ಸಮೇತನಹಳ್ಳಿ ಕೆರೆಯಲ್ಲಿ ನೊರೆ.ರೈತರಲ್ಲಿ ಆತಂಕ.ಕೃಷಿ ದನಕರುಗಳಿಗೆ ಉಪಯೋಗಕ್ಕೆ ಬಾರದ ನೀರು.



ಬೆಂಗಳೂರು ಗ್ರಾಮಾಂತರ ಜೀರ ಹೊಸಕೋಟೆ ತಾಲೂಕ ಅನುಗೊಂಡನಹಳ್ಳಿ ಹೋಬಳಿಯ ಸಮೇತನಹಳ್ಳಿ ಕೆರೆಯಲ್ಲಿ ನೊರೆ ಎದು ಕಾಣುತ್ತಿದ್ದು ರೈತರಲ್ಲಿ ಆತಂಕ ಉಂಟುಮಾಡಿದೆ . ಸುಮಾರು 76 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ನೂರಾರು ಎಕರೆ ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿದ್ದು , ಈ ಭಾಗದ ರೈತರ ಜೀವನಾಡಿಯಾಗಿದೆ ರೈತರು ತರಕಾರಿ , ದನ - ಕುರಿಗಳು ಮೇವು ತಿನ್ನಲು ಸಹ ಈ ಕೆರೆಯನ್ನು ಅವಲಂಬಿಸಿದೆ . ಈಗ ಕೆರೆಯ ನೀರು ನೊರೆಯಿಂದ ತುಂಬಿ ತುಳುಕುತ್ತಿದ್ದು . ಕೆರೆಯಲ್ಲಾ ವರ್ತೂರು ಕೆರೆಯಂತೆ ತ್ಯಾಜ್ಯದ ವಾಸನೆಯಿಂದ ಕೂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.



ಉಪಯೋಗಕ್ಕೆ ಬರದಂತಾದ ನೀರು :

ಸುಮಾರು 57 ವರ್ಷಗಳಿಂದ ವರ್ತೂರು ಕೆರೆಯ ಕೋಡಿಯಿಂದ ಏತ ನೀರಾವರಿ ' ಪದ್ಧತಿಯಿಂದ ಈ ಕೆರೆಗೆ ನೀರು ಹರಿದು ಬರುತ್ತಿದೆ. ಆದರೆ 15 ದಿನಗಳಿಂದ ಈಚೆಗೆ ಕೆರೆಯಲ್ಲಿ ನೊರೆ ಹೆಚ್ಚಾಗಿ ಕಾಣಿಸಿಕೊಂಡಿದೆ .ಇಷ್ಟು ವರ್ಷಗಳಿಂದ ಈ ಕೆರೆ ನೀರನ್ನು ನಂಬಿ ಕೃಷಿ ಜೀವನ ನಡೆಸುತ್ತಿದ್ದ ರೈತರು ಹಾಗು ಜಾನುವಾರುಗಳಿಗೆ ನೊರೆಯಿಂದ ತೊಂದರೆ ಅನುಭವಿಸುವಂತಾಗಿದೆ .
ಇಷ್ಟು ವರ್ಷಗಳ ಕಾಲ ಶುದ್ದೀಕರಣವಾಗಿ ಬರುತ್ತಿದ್ದ ನೀರು ಈಗ ನೊರೆ ಮಿಶ್ರಿತವಾಗಿ ಹರಿಯುತ್ತಿದೆ . ಇದರಿಂದಾಗಿ ಆ ನೀರು ಕೃಷಿ ಮತ್ತು ದನಕರುಗಳ ಉಪಯೋಗಕ್ಕೆ ಬರದಂತಾಗಿದ್ದು,ಜನ- ಜಾನುವಾರಗಳು ರೋಗಗಳಿಗೆ ತುತ್ತಾಗುವಂತಾಗಿದೆ . ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಂಡು ಸರಿಪಡಿಸಬೇಕೆಂದು
ರೈತರು ಆಗ್ರಹಿಸಿದ್ದಾರೆ.


Body:ಶುದ್ದೀಕರಿಸಿ ಒಳ್ಳೆಯ ನೀರು ಹರಿಸಿ :

ಈ ಕೆರೆಯ ಕೂಗಳತೆ ದೂರದಲ್ಲಿ ವರ್ತೂರು ಕೆರೆಯ ಕೋಡಿ ನೀರು ಕಾಲುವೆ ಮುಖಾಂತರ ಹರಿಯುತ್ತಿದ್ದು ಈ ಕಾಲುವೆಯಲ್ಲಿ ಸಹ ನೊರೆ ಹೆಚ್ಚಾಗಿದೆ . ಆದರೆ , ಈ ಕಾಲುವೆ ಮುಖಾಂತರವೇ ಸರಕಾರ 57 ವರ್ಷಗಳಿಂದ ಏತ ನೀರಾವರಿ ಮುಖಾಂತರ ಸಮೇತನಹಳ್ಳಿ ಕೆರೆಗೆ ನೀರು ಹರಿಸುತ್ತಿದ್ದಾರೆ . ಈ ಕಾಲುವೆಯ ನೀರು ಸಮೇತನಹಳ್ಳಿ ಬಳಿಯ ಒಂದು ಬಾವಿಯ ಮುಖಾಂತರ ನೀರು ಸಂಗ್ರಹವಾಗಿ ಪೈಪ್‌ಗಳ ಮೂಲಕ ಸಮೇತನಹಳ್ಳಿ ಕೆರೆಗೆ ಹರಿಸುತ್ತಿದ್ದಾರೆ . ಆದರೆ ಸಣ್ಣ ನೀರಾವರಿ ಇಲಾಖೆಯವರು ಒಂದು ಶುದ್ದೀಕರಣ ಯಂತ್ರವನ್ನು ಅಳವಡಿಸಿ ನೀರು ಶುದ್ದೀಕರಿಸಿ ಒಳ್ಳೆಯ ನೀರು ಹರಿಸಿದರೆ ಯಾವುದೇ ರೀತಿಯ ತೊಂದರೆಯಾಗುವುದನ್ನು ತಪ್ಪಿಸಬಹುದಾಗಿದೆ .

Conclusion:ತರಕಾರಿ ಬೆಳೆವ ರೈತರು :

ಈ ಕೆರೆಯ ನೀರಿನಿಂದಲೇ ಈ ಭಾಗದ ರೈತರು ತರಕಾರಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದು ತಿನ್ನುತ್ತಿದ್ದು ಇದನ್ನೇ ನಂಬಿ ಕೆಲವು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ .
ಆದರೆ ಈಗ ಕಾಣಿಸಿಕೊಂಡ ನೊರೆ ನೀರಿ ನಿಂದ ಬೆಳೆ ಸಮೃದ್ಧಿಯಾಗಿ ಬರುವುದಿಲ್ಲ , ಜತೆಗೆ ಬೆಳೆದ ಬೆಳೆಯನ್ನು ಸಹ ತಿನ್ನಲು ಯಾರು ಮುಂದೆ ಬರುವುದಿಲ್ಲ ಇದು ಈಗೆ ಮುಂದುವರಿದರೆ ಈ ಭಾಗದ ರೈತರು ಕೃಷಿಯಿಂದ ದೂರ ಸರಿಯಬೇಕಾದ ಪರಿಸ್ಥಿತಿ ಎದುರಾಗಲಿದೆ .

ಧರ್ಮರಾಜು ಎಂ ಕೆಆರ್ ಪುರ.



ಬೈಟ್1 ) ನಾರಾಯಣ ಸ್ವಾಮಿ: ರೈತರು.

ಬೈಟ್ 2)ಲಕ್ಷ್ಮಣ್ ಸಿಂಗ್ :ಸಮೇತನ ಹಳ್ಳಿಯ ಮಾನವ ಹಕ್ಕುಗಳ ಅಧ್ಯಕ್ಷರು.

ಬೈಟ್ 3)ನಾಗರಾಜ್: ಕುರಿಗಾಹಿ

ಬೈಟ್ 4)ಸೊಣ್ಣಪ್ಪ: ಗ್ರಾಮಸ್ಥರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.