ETV Bharat / state

ತಿಂಗಳ 4ನೇ ಶನಿವಾರ ರಜೆ ಇಂದಿನಿಂದ ಜಾರಿ - undefined

ನಾಲ್ಕನೇ ಶನಿವಾರ ರಜೆ ಎಲ್ಲ ಇಲಾಖೆಯ ನೌಕರರಿಗೆ ಇಂದಿನಿಂದ ಅನ್ವಯವಾಗಲಿದೆ. ಆದರೆ, 4ನೇ ಶನಿವಾರದ ರಜೆಗೆ ಪ್ರತಿಯಾಗಿ ಸರ್ಕಾರಿ ನೌಕರರ ಸಾಂದರ್ಭಿಕ ರಜೆ ಪೈಕಿ ಐದಕ್ಕೆ ಕತ್ತರಿ ಹಾಕಲಾಗಿದೆ. ಅದೇ ರೀತಿ ಯಾವುದೇ ಜಯಂತಿ ರಜೆಯನ್ನು ಕಡಿತ ಮಾಡದೇ ಇರಲು ತೀರ್ಮಾನಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Jun 22, 2019, 12:48 AM IST

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ ಬಳಿಕ ಇಂದಿನಿಂದ ಜಾರಿಗೆ ಬರುತ್ತಿದೆ.

ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಹಿಂದೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿತ್ತು.

ನಾಲ್ಕನೇ ಶನಿವಾರ ರಜೆ ಎಲ್ಲ ಇಲಾಖೆಯ ನೌಕರರಿಗೆ ಅನ್ವಯವಾಗಲಿದೆ. ಆದರೆ, 4ನೇ ಶನಿವಾರದ ರಜೆಗೆ ಪ್ರತಿಯಾಗಿ ಸರ್ಕಾರಿ ನೌಕರರ ಸಾಂದರ್ಭಿಕ ರಜೆ ಪೈಕಿ ಐದಕ್ಕೆ ಕತ್ತರಿ ಹಾಕಲಾಗಿದೆ. ಅದೇ ರೀತಿ ಯಾವುದೇ ಜಯಂತಿ ರಜೆಯನ್ನು ಕಡಿತ ಮಾಡದೇ ಇರಲು ತೀರ್ಮಾನಿಸಿದೆ.

ಇದರಿಂದ ಸರ್ಕಾರಿ ನೌಕರರಿಗೆ ಒಟ್ಟಾರೆಯಾಗಿ ಏಳು ರಜೆಗಳು ಹೆಚ್ಚುವರಿಯಾಗಿ ದೊರೆಯಲಿವೆ. ಜಯಂತಿಗಳ ರಜೆ ಕಡಿತಗೊಳಿಸಿ ನಾಲ್ಕನೇ ಶನಿವಾರ ರಜೆ ನೀಡಲು 6ನೇ ವೇತನ ಆಯೋಗದ ಶಿಫಾರಸಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ಕೃಷ್ಣ ಭೈರೇಗೌಡ ನೇತೃತ್ವದ ಸಂಪುಟ ಉಪ ಸಮಿತಿ ವರದಿ ನೀಡಿತ್ತು. ಯಾವುದೇ ಜಯಂತಿಯ ರಜೆ ಕಡಿತಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ.

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ ಬಳಿಕ ಇಂದಿನಿಂದ ಜಾರಿಗೆ ಬರುತ್ತಿದೆ.

ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಹಿಂದೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿತ್ತು.

ನಾಲ್ಕನೇ ಶನಿವಾರ ರಜೆ ಎಲ್ಲ ಇಲಾಖೆಯ ನೌಕರರಿಗೆ ಅನ್ವಯವಾಗಲಿದೆ. ಆದರೆ, 4ನೇ ಶನಿವಾರದ ರಜೆಗೆ ಪ್ರತಿಯಾಗಿ ಸರ್ಕಾರಿ ನೌಕರರ ಸಾಂದರ್ಭಿಕ ರಜೆ ಪೈಕಿ ಐದಕ್ಕೆ ಕತ್ತರಿ ಹಾಕಲಾಗಿದೆ. ಅದೇ ರೀತಿ ಯಾವುದೇ ಜಯಂತಿ ರಜೆಯನ್ನು ಕಡಿತ ಮಾಡದೇ ಇರಲು ತೀರ್ಮಾನಿಸಿದೆ.

ಇದರಿಂದ ಸರ್ಕಾರಿ ನೌಕರರಿಗೆ ಒಟ್ಟಾರೆಯಾಗಿ ಏಳು ರಜೆಗಳು ಹೆಚ್ಚುವರಿಯಾಗಿ ದೊರೆಯಲಿವೆ. ಜಯಂತಿಗಳ ರಜೆ ಕಡಿತಗೊಳಿಸಿ ನಾಲ್ಕನೇ ಶನಿವಾರ ರಜೆ ನೀಡಲು 6ನೇ ವೇತನ ಆಯೋಗದ ಶಿಫಾರಸಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ಕೃಷ್ಣ ಭೈರೇಗೌಡ ನೇತೃತ್ವದ ಸಂಪುಟ ಉಪ ಸಮಿತಿ ವರದಿ ನೀಡಿತ್ತು. ಯಾವುದೇ ಜಯಂತಿಯ ರಜೆ ಕಡಿತಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ.

Intro: ರಾಜ್ಯ ಸರಕಾರಿ ನೌಕರರಿಗೂ ಇಂದು ವೀಕೆಂಡ್ ರಜೆ..!

ಬೆಂಗಳೂರು :

ರಾಜ್ಯ ಸರಕಾರಿ ನೌಕರರು ಮತ್ತು ಸಾರ್ವಜನಿಕರು ಇಂದು ಪ್ರತಿ ದಿನದಂತೆ ಕೆಲಸಕ್ಕಾಗಿ ಸರಕಾರಿ ಕಚೇರಿಯತ್ತ ಸುಳಿಯಬೇಡಿ....ಒಂದೊಮ್ಮೆ ನೀವು ಅಭ್ಯಾಸ ಬಲದಂತೆ ಶನಿವಾರವೆಂದು ಹೋದರೆ ಬೀಗ ಹಾಕಿದ ಬಾಗಿಲಿನ ದರ್ಶನ ನಿಮಗಾಗುತ್ತದೆ.

ರಾಜ್ಯ ಸರಕಾರ ತಿಂಗಳ ಪ್ರತಿ ಶನಿವಾರ ಸಾರ್ವಜನಿಕ ಘೋಷಣೆ ಮಾಡಿರುವ ಆದೇಶ ಈ ತಿಂಗಳಿನಿಂದಲೇ ಜಾರಿಗೆ ಬಂದಿರುವುದರಿಂದ ಇಂದು ನಾಲ್ಕನೇ ಶನಿವಾರ ಆಗಿದ್ದರಿಂದ "" ಸರಕಾರದ ಕೆಲಸ ದೇವರ ಕೆಲಸ " Government Work Is God's Work ಎಂದು ಕಲ್ಲಿನಲ್ಲಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಅಚ್ಚು ಹಾಕಿರುವ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ಸೇರಿದಂತೆ ರಾಜ್ಯ ಸರಕಾರದ ವ್ಯಾಪ್ತಿಗೆ ಒಳಪಟ್ಟ ಕಚೇರಿಗಳು ಇಂದು ತೆರೆದಿರುವುದಿಲ್ಲ.




Body:

ಸಚಿವ ಸಂಪುಟದಲ್ಲಿ ಇತ್ತೀಚೆಗೆ ತಗೆದುಕೊಂಡ ನಿರ್ಧಾರದಂತೆ
ರಾಜ್ಯ ಸರಕಾರದ ಕಚೇರಿಗಳಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ನೀಡುವ ಸಾರ್ವಜನಿಕ ರಜೆ ಈ ತಿಂಗಳಿನಿಂದಲೇ ಅನ್ವಯವಾಗಿ ಜಾರಿಗೆ ಬಂದಿರುತ್ತದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ನೇತ್ರತ್ವದ ಮೈತ್ರಿ ಸರಕಾರ ಕೊಡುಗೆಯಾಗಿ ನೀಡಿದ ರಜೆಯ ಮೊದಲ ಸವಿಯನ್ನು ರಾಜ್ಯ ಸರಕಾರಿ ಇಂದು ಅನುಭವಿಸುತ್ತಿದ್ದಾರೆ.

ರಾಜ್ಯ ಸರಕಾರಿ ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ವೀಕೆಂಡ್ ನಲ್ಲಿ ಕೇಂದ್ರ ಸರಕಾರಿ ನೌಕರರಿಗೆ ಮತ್ತು ಐಟಿ- ಬಿಟಿ ಖಾಸಗಿ ನೌಕರರಿಗೆ ಇರುವಂತೆ ಪ್ರತಿ ಶನಿವಾರ ರಜೆ ನೀಡಬೇಕೆನ್ನುವ ಬೇಡಿಕೆ ಇತ್ತು. ಆರನೇ ವೇತನ ಆಯೋಗ ಶಿಫಾರಸ್ಸು ಸಹ ಮಾಡಿತ್ತು ಆದರೆ ಸರಕಾರ ಪ್ರತಿ ಶನಿವಾರದ ಬದಲು ಎರಡನೇ ಶನಿವಾರದ ಜತೆಗೆ ನಾಲ್ಕನೇ ಶನಿವಾರ ಮಾತ್ರ ನೀಡಲು ಒಪ್ಪಿ ಆದೇಶ ಹೊರಡಿಸಿದೆ.




Conclusion: ನಾಲ್ಕನೆ ಶನಿವಾರ ನೀಡುವ ರಜೆ ಗೆ ಪ್ರತಿ ಯಾಗಿ ಸರಕಾರಿ ನೌಕರರಿಗೆ ಇದ್ದ ಸಾಂದರ್ಭಿಕ ೧೫ ರಜೆಗಳಲ್ಲಿ ೫ ರಜೆಗಳನ್ನ ಕಡಿತಗೊಳಿಸಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.