ETV Bharat / state

ಒಡವೆಗಳಿಗೆ ಪಾಲಿಶ್​ ಹಾಕುವುದಾಗಿ ನಂಬಿಸಿ ಚಿನ್ನಾಭರಣ ಎಗರಿಸಿದ ಖದೀಮರು..

author img

By

Published : Jan 4, 2020, 7:17 AM IST

ಬಸವಕಲ್ಯಾಣ ನಗರದ ನಿವೃತ್ತ ಶಿಕ್ಷಕರರೊಬ್ಬರ ಮನೆಗೆ ಬಂದ ಇಬ್ಬರು ಯುವಕರು ಚಿನ್ನಾಭರಣಗಳಿಗೆ ಪಾಲಿಶ್​ ಮಾಡಿಕೊಡುವುದಾಗಿ ಹೇಳಿ ಒಡವೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಒಡವೆಗಳಿಗೆ ಪಾಲಿಶ್​ ಹಾಕುವುದಾಗಿ ನಂಬಿಸಿ ಚಿನ್ನಾಭರಣ ಎಗರಿಸಿದ ಖದೀಮರು
Thieves theft jewellery

ಬಸವಕಲ್ಯಾಣ: ಚಿನ್ನಾಭರಣಗಳನ್ನು ಪಾಲಿಶ್​ ಮಾಡಿಕೊಡುವುದಾಗಿ ನಂಬಿಸಿ ಒಡವೆಗಳನ್ನು ಕದ್ದು ಖದೀಮರು ಪರಾರಿಯಾದ ಘಟನೆ ನಗರದ ಕಾಳಿ ಗಲ್ಲಿಯಲ್ಲಿ ನಡೆದಿದೆ.

ಕಾಳಿ ಗಲ್ಲಿಯ ನಿವಾಸಿ ನಿವೃತ್ತ ಶಿಕ್ಷಕ ರೇವಣಪ್ಪ ವಾಂಜರಖೇಡೆ ಎಂಬುವರ ಮನೆಗೆ ಚಿನ್ನಾಭರಣ ಪಾಲಿಶ್​ ಮಾಡುವವರು ಎಂದು ಹೇಳಿಕೊಂಡು ಇಬ್ಬರು ಯುವಕರು ಬಂದಿದ್ದಾರೆ. ಮೊದಲಿಗೆ ಬೆಳ್ಳಿ ಚೈನ್​ ಪಾಲಿಶ್​ ಮಾಡಿದ್ದಾರೆ. ನಂತರ ಚಿನ್ನಾಭರಣಗಳನ್ನು ಪಾಲಿಶ್​ ಮಾಡಲು ಕೇಳಿ, ಒಡವೆಗಳನ್ನು ನೀರಿನಲ್ಲಿ ಕುದಿಸಿದರೆ ಹೆಚ್ಚಿನ ಹೊಳಪು ಬರುವುದಾಗಿ ನಂಬಿಸಿದ್ದಾರೆ. ಖದೀಮರ ಮಾತು ಕೇಳಿ ಮನೆಯವರು ಅದರಂತೆ ಡಬ್ಬಿಯಲ್ಲಿ 5 ತೊಲಾದ ಚಿನ್ನದ ಸರಗಳನ್ನು ಹಾಕಿ ಗ್ಯಾಸ್​ ಮೇಲೆ ಕುದಿಸಲು ಇಟ್ಟಿದ್ದಾರೆ.

ಕೆಲ ಹೊತ್ತಿನಲ್ಲಿ ಒಬ್ಬ ಯುವಕ ಅಡುಗೆ ಮನೆ ಒಳಗೆ ಬಂದು ನಾನು ನೋಡಬೇಕು ಎಂದಾಗ, ಮಹಿಳೆ ಡಬ್ಬಾದಲ್ಲಿ ಸರಗಳನ್ನು ತೋರಿಸಿದ್ದಾರೆ. ಡಬ್ಬಾದ ಮೇಲೆ ಮುಚ್ಚಿ ಕುದಿಸಿದಲ್ಲಿ ಇನ್ನಷ್ಟು ಹೊಳಪು ಬರುತ್ತದೆ. ಡಬ್ಬದ ಮೇಲಿನ ಮುಚ್ಚಳಿಕೆ ತನ್ನಿ ಎಂದು ಹೇಳಿದ್ದಾನೆ. ಆತನ ಮಾತು ನಂಬಿದ ಮಹಿಳೆ ಪಕ್ಕದ ಕೋಣೆಗೆ ತೆರಳಿ ಮುಚ್ಚಳ ತೆಗೆದುಕೊಂಡು ಬರುಷ್ಟರಲ್ಲಿ ಸರಗಳನ್ನು ಕದ್ದು ಕಳ್ಳರು ಪರಾರಿಯಗಿದ್ದಾರೆ ಎನ್ನಲಾಗಿದೆ.

ಬಸವಕಲ್ಯಾಣ: ಚಿನ್ನಾಭರಣಗಳನ್ನು ಪಾಲಿಶ್​ ಮಾಡಿಕೊಡುವುದಾಗಿ ನಂಬಿಸಿ ಒಡವೆಗಳನ್ನು ಕದ್ದು ಖದೀಮರು ಪರಾರಿಯಾದ ಘಟನೆ ನಗರದ ಕಾಳಿ ಗಲ್ಲಿಯಲ್ಲಿ ನಡೆದಿದೆ.

ಕಾಳಿ ಗಲ್ಲಿಯ ನಿವಾಸಿ ನಿವೃತ್ತ ಶಿಕ್ಷಕ ರೇವಣಪ್ಪ ವಾಂಜರಖೇಡೆ ಎಂಬುವರ ಮನೆಗೆ ಚಿನ್ನಾಭರಣ ಪಾಲಿಶ್​ ಮಾಡುವವರು ಎಂದು ಹೇಳಿಕೊಂಡು ಇಬ್ಬರು ಯುವಕರು ಬಂದಿದ್ದಾರೆ. ಮೊದಲಿಗೆ ಬೆಳ್ಳಿ ಚೈನ್​ ಪಾಲಿಶ್​ ಮಾಡಿದ್ದಾರೆ. ನಂತರ ಚಿನ್ನಾಭರಣಗಳನ್ನು ಪಾಲಿಶ್​ ಮಾಡಲು ಕೇಳಿ, ಒಡವೆಗಳನ್ನು ನೀರಿನಲ್ಲಿ ಕುದಿಸಿದರೆ ಹೆಚ್ಚಿನ ಹೊಳಪು ಬರುವುದಾಗಿ ನಂಬಿಸಿದ್ದಾರೆ. ಖದೀಮರ ಮಾತು ಕೇಳಿ ಮನೆಯವರು ಅದರಂತೆ ಡಬ್ಬಿಯಲ್ಲಿ 5 ತೊಲಾದ ಚಿನ್ನದ ಸರಗಳನ್ನು ಹಾಕಿ ಗ್ಯಾಸ್​ ಮೇಲೆ ಕುದಿಸಲು ಇಟ್ಟಿದ್ದಾರೆ.

ಕೆಲ ಹೊತ್ತಿನಲ್ಲಿ ಒಬ್ಬ ಯುವಕ ಅಡುಗೆ ಮನೆ ಒಳಗೆ ಬಂದು ನಾನು ನೋಡಬೇಕು ಎಂದಾಗ, ಮಹಿಳೆ ಡಬ್ಬಾದಲ್ಲಿ ಸರಗಳನ್ನು ತೋರಿಸಿದ್ದಾರೆ. ಡಬ್ಬಾದ ಮೇಲೆ ಮುಚ್ಚಿ ಕುದಿಸಿದಲ್ಲಿ ಇನ್ನಷ್ಟು ಹೊಳಪು ಬರುತ್ತದೆ. ಡಬ್ಬದ ಮೇಲಿನ ಮುಚ್ಚಳಿಕೆ ತನ್ನಿ ಎಂದು ಹೇಳಿದ್ದಾನೆ. ಆತನ ಮಾತು ನಂಬಿದ ಮಹಿಳೆ ಪಕ್ಕದ ಕೋಣೆಗೆ ತೆರಳಿ ಮುಚ್ಚಳ ತೆಗೆದುಕೊಂಡು ಬರುಷ್ಟರಲ್ಲಿ ಸರಗಳನ್ನು ಕದ್ದು ಕಳ್ಳರು ಪರಾರಿಯಗಿದ್ದಾರೆ ಎನ್ನಲಾಗಿದೆ.

Intro:
(ಫೈಲ್ ಫೋಟೊ ಬಳಸಿಕೊಳ್ಳಿ ಸರ್)



ಬಸವಕಲ್ಯಾಣ: ಚಿನ್ನಾಭರಣಗಳಿಗೆ ಹೊಳಪು(ಶೈನಿಂಗ್) ಬರುವಂತೆ ಮಾಡಿಕೊಡುವದಾಗಿ ನಂಬಿಸಿ ಚಿನ್ನಾಭರಣವನ್ನು ವಂಚಕರಿಬ್ಬರು ಯಾಮಾರಿಸಿ ಪರಾರಿಯಾದ ಘಟನೆ ನಗರದ ಕಾಳಿ ಗಲ್ಲಿಯಲ್ಲಿ ಶುಕ್ರವಾರ ಜರುಗಿದೆ.
ಕಾಳಿ ಗಲ್ಲಿಯ ನಿವಾಸಿ ನಿವೃತ್ತ ಶಿಕ್ಷಕ ರೇವಣಪ್ಪ ವಾಂಜರಖೇಡೆ ಅವರ ಮನೆಗೆ ಮಧ್ಯಾಹ್ನ ೧೨ರ ಸುಮಾರಿ ಖಾಸಗಿ ಕಂಪನಿಯ ಪ್ರತಿನಿಧಿಗಳಂತೆ ಸಮವಸ್ತç ತೊಟ್ಟು ಬಂದಿದ್ದ ಇಬ್ಬರು ಯುವಕರು ಆಭರಣಗಳನ್ನು ತೊಳೆದುಕೊಡವದಾಗಿ ಹೇಳಿ ವಂಚಿಸಿರುವದು ಬೆಳಕಿಗೆ ಬಂದಿದೆ.
ಮನೆಯಲ್ಲಿದ್ದ ವಾಂಜರಖೇಡೆ ಅವರ ಮಗಳು ಕವಿತಾ ಮೊದಲು ಬೆಳ್ಳಿ ಚೈನ್ ನೀಡಿದ್ದಾರೆ. ಯುವಕರಿಬ್ಬರು ಮನೆ ಅಂಗಳದಲ್ಲಿಯೇ ಕುಳಿತು ತೊಳೆದುಕೊಟ್ಟಿದ್ದಾರೆ. ಜತೆಗೆ ಬಂಗಾರದ ಆಭರಣಗಳು ತೊಳೆದರೇ ಭಾರಿ ಶೈನಿಂಗ್ ಬರುತ್ತವೆ ಎಂದು ನಯವಾಗಿ ಮಾತನಾಡುತ್ತ ನಂಬಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ನಮ್ಮ ಮೇಲೆ ಭರವಸೆ ಇಲ್ಲವಾದರೆ ನಿಮ್ಮ ಮನೆಯಲ್ಲಿಯೇ ಡಬ್ಬಾದಲ್ಲಿ ನೀರಿಟ್ಟು, ನೀರಿನಲ್ಲಿ ಚಿನ್ನಾಭರಣ ಹಾಕಿ ಕುದಿಸಿ. ಅದರಲ್ಲಿ ಇದನ್ನು ಹಾಕಿ ಎಂದು ಪೌಡರ್ ಒಂದನ್ನು ಕೊಟ್ಟಿದ್ದಾರೆ. ವಂಚಕರ ಮಾತು ನಂಬಿ ಅಡುಗೆ ಮನೆಯ ಗ್ಯಾಸ್ ಒಲೆಯ ಮೇಲೆ ಡಬ್ಬಿಯಲ್ಲಿ ನೀರಿಟ್ಟು ಅದರಲ್ಲಿ ಚಿನ್ನದ ಎರಡು ಸರ(ಒಟ್ಟು ಸುಮಾರು ೫ ತೋಲಾ ಚಿನ್ನಾಭರಣ) ಹಾಕಿ ಕುದಿಯಲು ಇಟ್ಟಿದ್ದಾರೆ.
ಕೆಲ ಹೊತ್ತಿನಲ್ಲಿ ಒಬ್ಬ ಯುವಕ ಅಡುಗೆ ಮನೆ ಒಳಗೆ ಬಂದು ನಾನು ನೋಡಬೇಕು ಎಂದಾಗ ಮಹಿಳೆ ಡಬ್ಬಾದಲ್ಲಿ ಸರಗಳನ್ನು ತೊರಿಸಿದ್ದಾರೆ. ಡಬ್ಬಾದ ಮೇಲೆ ಮುಚ್ಚಿ ಕುದಿಸಿದಲ್ಲಿ ಇನ್ನುಷ್ಟ ಹೊಳಪು ಬರುತ್ತದೆ. ಡಬ್ಬಾ ಮೇಲಿನ ಮುಚ್ಚಳಿಕೆ ತನ್ನಿ ಎಂದು ಹೇಳಿದ್ದಾನೆ, ಆತನ ಮಾತು ನಂಬಿದ ಮಹಿಳೆಯು ಪಕ್ಕದ ಕೋಣೆಗೆ ತೆರಳಿ ಮುಚ್ಚಳಿಕೆ ತೆಗೆದುಕೊಂಡು ಬರುಷ್ಟರಲ್ಲಿ ಸರಗಳನ್ನು ತಗೆದುಕೊಂಡು ಕಳ್ಳರು ಪರಾರಿಯಗಿದ್ದಾರೆ ಎನ್ನಲಾಗಿದೆ. ಒಳಗೆ ಬಂದು ನೋಡಿದ್ದಾಗ ಮೋಸಕ್ಕೆ ಒಳಗಾಗಿರುವದು ಮನೆಯವರಿಗೆ ಗೊತ್ತಾಗಿದೆ.
ಮನೆಗೆ ಬಂದು ವಂಚಿಸುವ ಘಟನೆಗಳು ಅಲಲ್ಲಿ ಆಗಾಗ ನಡೆಯುತ್ತಿವೆ. ಅಪರಿಚಿತರ ಜೊತೆಗೆ ವ್ಯವಹರಿಸುವಾಗ ಜನರು ಜಾಗರುಕತೆಯಿಂದ ವ್ಯವಹರಿಸಬೇಕು ಎಂದು ಪೊಲೀಸ್ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರೂ ಜನ ಮಾತ್ರ ಜಾಗೃತರಾಗಿರದಿದ್ದರೆ ಇಂಥ ಘಟನೆಗಳು ಮರುಕಳಿಸುತ್ತಲೆ ಇರುತ್ತವೆ. ಅಪರಿಚಿರ ಜೊತೆಗೆ ವ್ಯವಹರಿಸುವಾಗ ಜಾಗರುಕತೆ ಇದ್ದರೆ ಇಂಥ ಘಟನೆಗಳನ್ನು ತಪ್ಪಿಸಬಹುದು ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.



ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ


Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.