ಬೀದರ್: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ನ ನಿಯಂತ್ರಣಕ್ಕಾಗಿ ನೆರೆ ರಾಜ್ಯದಿಂದ ಬಂದ ಜನರನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಆದ್ರೆ ಇದರ ಮೇಲುಸ್ತುವಾರಿ ವಹಿಸಿಕೊಂಡ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ್ಯ ತೋರುತ್ತಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯ ಕಮಲನಗರ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕ್ವಾರಂಟೈನ್ ಕೇಂದ್ರಕ್ಕೆ ಹಗಲಿನಲ್ಲಿ ಮಾತ್ರ ಒಬ್ಬ ಅಧಿಕಾರಿ ಬಂದು ಹೋಗುತ್ತಿದ್ದಾರೆ. ಆದ್ರೆ ರಾತ್ರಿ ಪಾಳಿಯಲ್ಲಿರುವ ಶಿಕ್ಷಕ ನಾಲ್ಕು ದಿನಗಳಿಂದ ಇತ್ತ ಕಾಲಿಟ್ಟಿಲ್ಲವಂತೆ. ಕೇಳಿದ್ರೆ ಕೊರೊನಾ ಸೋಂಕಿತರು ಇರ್ತಾರೆ, ನಾನು ಬರೋದಿಲ್ಲ ಎಂದು ಹೇಳ್ತಿದ್ದಾರಂತೆ.
ಇಷ್ಟಾದ್ರೂ ಮೇಲುಸ್ತುವಾರಿ ವಹಿಸಿಕೊಂಡಿರುವ ಸ್ಥಳೀಯ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಯಾರೊಬ್ಬರೂ ಬಂದು ನಮ್ಮ ಗೋಳು ಕೇಳ್ತಿಲ್ಲ. ಪೊಲೀಸ್ ಸಿಬ್ಬಂದಿಯೂ ಬಂದಿಲ್ಲ. ನಮ್ಮ ಆರೋಗ್ಯ ಕಾಪಾಡಬೇಕಾದ ವೈದ್ಯರೇ ನಮ್ಮ ಕಡೆ ನೋಡುತ್ತಿಲ್ಲ ಎಂದು ಕ್ವಾರಂಟೈನ್ನಲ್ಲಿದ್ದವರು ತಮ್ಮ ಅಳಲು ತೋಡಿಕೊಂಡಿದ್ದಾರೆ.