ETV Bharat / state

ಜಾತಿ-ಧರ್ಮದ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾದ ಶಿಕ್ಷಕ: ವಿಡಿಯೋ ವೈರಲ್​

ಬೀದರ್​ನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಚಂದಾ ಕೇಳಲು ಹೋದ ಯುವಕರಿಗೆ ದೇಶದ ಸಾಮಾಜಿಕ ಸ್ಥಿತಿಯ ಬಗ್ಗೆ ಮಾತನಾಡಿ ನೆಟ್ಟಿಗರ ಕೋಪಕ್ಕೆ ತುತ್ತಾಗಿದ್ದಾರೆ.

author img

By

Published : Sep 1, 2019, 5:12 AM IST

ಮುಖ್ಯಶಿಕ್ಷಕ

ಬೀದರ್: ಗಣೇಶ ಹಬ್ಬದ ಪ್ರಯುಕ್ತ ಚಂದಾ ಕೇಳಲು ಹೋದ ಯುವಕರಿಗೆ ಶಿಕ್ಷಕ ಬೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮುಖ್ಯಶಿಕ್ಷಕನ ವಿಡಿಯೋ ಸಖತ್ ವೈರಲ್

ತಾಲೂಕಿನ ಕಾಡವಾದ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಟಿ.ಆರ್ ದೊಡ್ಡಿ ಬಳಿ ಯುವಕರು ಚಂದಾ ಕೇಳಲು ಹೋಗಿದ್ದಾರೆ. ಈ ವೇಳೆ ಜಾತಿ-ಧರ್ಮದ ಹಾಗೂ ಪ್ರಸ್ತುತ ರಾಜಕೀಯದ ಬಗ್ಗೆ ಶಿಕ್ಷಕ ದೊಡ್ಡಿ ಯುವಕರಿಗೆ ತಿಳಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಯುವಕನೋರ್ವ ದೃಶ್ಯ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.

ಗಣೇಶ ಹಬ್ಬದ ಸಂಭ್ರಮ ಎಂಬುದೆಲ್ಲಾಒಂದು ರೀತಿಯ ಪಿತೂರಿ. ಒಂದೇ ಸಮುದಾಯ ಅಧಿಕಾರದಲ್ಲಿರಲು ಇಂತಹ ಹಬ್ಬ ಆಚರಣೆಗಳನ್ನು ಜಾರಿಗೆ ತರಲಾಯಿತು ಎಂದು ದೇವರ ಬಗ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾತಿ-ಧರ್ಮದ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾದ ಶಿಕ್ಷಕ: ವಿಡಿಯೋ ವೈರಲ್​

ಬೀದರ್: ಗಣೇಶ ಹಬ್ಬದ ಪ್ರಯುಕ್ತ ಚಂದಾ ಕೇಳಲು ಹೋದ ಯುವಕರಿಗೆ ಶಿಕ್ಷಕ ಬೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮುಖ್ಯಶಿಕ್ಷಕನ ವಿಡಿಯೋ ಸಖತ್ ವೈರಲ್

ತಾಲೂಕಿನ ಕಾಡವಾದ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಟಿ.ಆರ್ ದೊಡ್ಡಿ ಬಳಿ ಯುವಕರು ಚಂದಾ ಕೇಳಲು ಹೋಗಿದ್ದಾರೆ. ಈ ವೇಳೆ ಜಾತಿ-ಧರ್ಮದ ಹಾಗೂ ಪ್ರಸ್ತುತ ರಾಜಕೀಯದ ಬಗ್ಗೆ ಶಿಕ್ಷಕ ದೊಡ್ಡಿ ಯುವಕರಿಗೆ ತಿಳಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಯುವಕನೋರ್ವ ದೃಶ್ಯ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.

ಗಣೇಶ ಹಬ್ಬದ ಸಂಭ್ರಮ ಎಂಬುದೆಲ್ಲಾಒಂದು ರೀತಿಯ ಪಿತೂರಿ. ಒಂದೇ ಸಮುದಾಯ ಅಧಿಕಾರದಲ್ಲಿರಲು ಇಂತಹ ಹಬ್ಬ ಆಚರಣೆಗಳನ್ನು ಜಾರಿಗೆ ತರಲಾಯಿತು ಎಂದು ದೇವರ ಬಗ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಾಡೋ ಕೆಲಸ ಬಿಟ್ಟು ಶಾಲೆಯಲ್ಲಿ ಬಾಯಿಗ ಬಂದಂಗ ಮಾತಾಡಿದ ಶಿಕ್ಷಕ...!

ಬೀದರ್:
ಗಣೇಶ ಚಂದಾ ಕೆಳಲು ಹೊದ ಯುವಕರನ್ನು ಬಾಯಿಗೆ ಬಂದಂತೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಹಿಂದು ದೇವತೆಗಳನ್ನು ನಿಂದನೆ ಮಾಡಿ ದೊಡ್ಡ ಭಾಷಣ ಮಾಡಿದ ಮುಖ್ಯಗುರುವಿನ ವಿಡಿಯೊ ಸಖತ್ ವೈರಲ್ ಆಗಿದೆ.

ಬೀದರ್ ತಾಲೂಕಿನ ಕಾಡವಾದ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಟಿ.ಆರ್ ದೊಡ್ಡಿ ಬಾಯಿಗೆ ಬಂದಂತೆ ಮಾತನಾಡಿರುವುದು ಸ್ಥಳೀಯ ಯುವಕನೊಬ್ಬ ಗುಪ್ತವಾಗಿ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.

ಗಣೇಶ ಹಬ್ಬದ ನಿಮಿತ್ತ ಗ್ರಾಮದಲ್ಲಿ ಗಣಪತಿ ಪ್ರತಿಸ್ಠಾಪನೆಗೆ ಯುವಕರ ತಂಡ ಚಂದಾ ಕೆಳಲು ಈ ಮುಖ್ಯಗುರು ದೊಡ್ಡಿ ಅವರ ಬಳಿ ಹೊಗಿದೆ. ಕಚೇರಿಯಲ್ಲಿ ಹೊಗ್ತಿದ್ದಂತೆ ಯುವಕರನ್ನು ಕುಡಿಸಿಕೊಂಡು ದೊಡ್ಡ ಭಾಷಣ ಬಿಗಿದಿದ್ದಾರೆ. ಗಣೇಶ ಸಂಭ್ರಮ ಇದೆಲ್ಲಾ ದೇಶದ ಒಂದು ಪಿತೂರಿ ಒಂದೇ ಸಮುದಾಯ ಅಧಿಕಾರದಲ್ಲಿರಲು ಮಾಡಿದ ಕಥೆ ಎಂತೆಲ್ಲಾ ಪ್ರಧಾನಿ ಸೇರಿದಂತೆ ಮಹಾತ್ಮರ ಬಗ್ಗೆ ಅವಹೇಳನಕಾರಿ ಶಬ್ದ ಬಳಕೆ ಮಾಡಿದ್ದಾರೆ ಎಂದು ಈ ಕುರಿತು ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಶಿಕ್ಷಣ ಸಂಯೋಜಕರಾಗಿ ದೊಡ್ಡ ಹುದ್ದೆಯಲ್ಲಿದ್ದ ಮುಖ್ಯಗುರು ಟಿ.ಆರ್ ದೊಡ್ಡಿ ಸೇವಾವಧಿಯಲ್ಲಿ ಇಂಥ ಅನೇಕ ಬಾರಿ ಮಾಡಬಾರದ ಕೆಲಸ ಮಾಡಿ ಸೇವೆಯಲ್ಲಿ ಪದ ಹಿನ್ನಡೆ ಪಡೆದು ಈಗ ಕಾಡವಾದ ಶಾಲೆಯಲ್ಲಿ ಮತ್ತೊಂದು ಅವಾಂತರ ಮಾಡಿ ಸುದ್ದಿಯಲ್ಲಿದ್ದಾರೆ ಎನ್ನಲಾಗಿದೆ.

----- ಅನೀಲಕುಮಾರ್ ದೇಶಮುಖ್ ಈಟಿವಿ ಭಾರತ ಬೀದರ್-------Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.