ETV Bharat / state

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ - ಬಸವಕಲ್ಯಾಣ ಅಂಗನವಾಡಿ ಕಾರ್ಯಕರ್ತೆಯರ ನ್ಯೂಸ್​

ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

Protest by Anganvadi workers in basavakalyana
ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
author img

By

Published : Jan 8, 2020, 11:02 PM IST

ಬಸವಕಲ್ಯಾಣ: ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಆಶ್ರಯದಲ್ಲಿ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಧರಣಿ ಕುಳಿತ ಅಂಗನವಾಡಿ ಕಾರ್ಯಕರ್ತೆಯರು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿ, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ 2019 ಅಕ್ಟೋಬರ್​ನಿಂದ ನೌಕರರಿಗೆ ಬರಬೇಕಾಗಿದ್ದ ಒಟ್ಟು ಎರಡು ಸಾವಿರ ರೂ. ಗೌರವ ಧನ ಕೂಡಲೇ ಪಾವತಿಸಬೇಕು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಗೌರವಧನ ಪ್ರತಿ ತಿಂಗಳಿನ ಐದನೇ ತಾರೀಖಿನ ಒಳಗಾಗಿ ಪಾವತಿಸುವ ವ್ಯವಸ್ಥೆ ಮಾಡಬೇಕು. ಎಸ್​ಎಸ್​ಎಲ್​ಸಿ ಪಾಸಾದ ಅಂಗನವಾಡಿ ಸಹಾಯಕಿಯರಿಗೆ ಕೂಡಲೇ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

2019 ಮಾರ್ಚ್ ತಿಂಗಳಿಂದ ಇದುವರೆಗೆ ಮಾತೃಪೂರ್ಣ ಯೋಜನೆಯ ತರಕಾರಿ ಬಿಲ್ ಪಾವತಿಯಾಗಿಲ್ಲ. ಹಿಂದಿನ ಬಿಲ್ ಪಾವತಿಸುವ ಜೊತೆಗೆ ಪ್ರತಿ ತಿಂಗಳು ಮುಂಗಡವಾಗಿ ಬಿಲ್ ಪಾವತಿಸುವ ವ್ಯವಸ್ಥೆ ಮಾಡಬೇಕು. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕಳೆದ ಒಂದೂವರೆ ವರ್ಷದಿಂದ ಬಾಡಿಗೆ ಹಣ ಪಾವತಿಸಿಲ್ಲ, ಬಾಡಿಗೆ ಹಣ ತಕ್ಷಣ ಬಿಡುಗಡೆ ಮಾಡಬೇಕು ಎಂದರು.

ಬಸವಕಲ್ಯಾಣ: ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಆಶ್ರಯದಲ್ಲಿ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಧರಣಿ ಕುಳಿತ ಅಂಗನವಾಡಿ ಕಾರ್ಯಕರ್ತೆಯರು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿ, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ 2019 ಅಕ್ಟೋಬರ್​ನಿಂದ ನೌಕರರಿಗೆ ಬರಬೇಕಾಗಿದ್ದ ಒಟ್ಟು ಎರಡು ಸಾವಿರ ರೂ. ಗೌರವ ಧನ ಕೂಡಲೇ ಪಾವತಿಸಬೇಕು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಗೌರವಧನ ಪ್ರತಿ ತಿಂಗಳಿನ ಐದನೇ ತಾರೀಖಿನ ಒಳಗಾಗಿ ಪಾವತಿಸುವ ವ್ಯವಸ್ಥೆ ಮಾಡಬೇಕು. ಎಸ್​ಎಸ್​ಎಲ್​ಸಿ ಪಾಸಾದ ಅಂಗನವಾಡಿ ಸಹಾಯಕಿಯರಿಗೆ ಕೂಡಲೇ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

2019 ಮಾರ್ಚ್ ತಿಂಗಳಿಂದ ಇದುವರೆಗೆ ಮಾತೃಪೂರ್ಣ ಯೋಜನೆಯ ತರಕಾರಿ ಬಿಲ್ ಪಾವತಿಯಾಗಿಲ್ಲ. ಹಿಂದಿನ ಬಿಲ್ ಪಾವತಿಸುವ ಜೊತೆಗೆ ಪ್ರತಿ ತಿಂಗಳು ಮುಂಗಡವಾಗಿ ಬಿಲ್ ಪಾವತಿಸುವ ವ್ಯವಸ್ಥೆ ಮಾಡಬೇಕು. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕಳೆದ ಒಂದೂವರೆ ವರ್ಷದಿಂದ ಬಾಡಿಗೆ ಹಣ ಪಾವತಿಸಿಲ್ಲ, ಬಾಡಿಗೆ ಹಣ ತಕ್ಷಣ ಬಿಡುಗಡೆ ಮಾಡಬೇಕು ಎಂದರು.

Intro:

ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೆಟ್ ಲೈನ್ ಮೇಲೆ ಹಾಕಿಕೊಳ್ಳಿ, ಹಾಗೂ ಈ ಸುದ್ದಿಯಲ್ಲಿ ಬರೆಯಲಾದ ಹೆಸರುಗಳನ್ನು ಕಟ್ ಮಾಡಬೇಡಿ ಸರ್.

ಮೂರು ವಿಡಿಯೊ ಕಳಿಸಲಾಗಿದೆ.

ಬಸವಕಲ್ಯಾಣ: ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದಿAದ ಪ್ರತಿಭಟನೆ ನಡೆಸಲಾಯಿತು.
ವಿವಿಧ ಬೇಡಿಕೆ ಈಡೇರಿಕೆ ಸಂಬAಧ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಆಶ್ರಯದಲ್ಲಿ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಬೆಳಗ್ಗೆಯಿಂದ ಸಂಜೆ ವರಗೆ ಧರಣಿ ಕುಳಿತ ಅಂಗನವಾಡಿ ಕಾರ್ಯಕರ್ತೆಯರು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸೇರಿ ೨೦೧೯ ಅಕ್ಟೊಬರ್ನಿಂದ ನೌಕರರಿಗೆ ಬರಬೇಕಾಗಿದ್ದ ಒಟ್ಟು ಎರಡು ಸಾವಿರ ರೂ. ಗೌರವಧನ ಕೂಡಲೆ ಬಿಲ್ಲು ತಯಾರಿಸಿ ಪಾವತಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಗೌರವಧನ ಪ್ರತಿ ತಿಂಗಳಿನ ಐದನೆ ತಾರೀಖಿನ ಒಳಗಾಗಿ ಪಾವತಿಸುವ ವ್ಯವಸ್ಥೆ ಮಾಡಬೇಕು. ಎಸ್ಸೆಸ್ಸೆಲ್ಸಿ ಪಾಸಾದ ಅಂಗನವಾಡಿ ಸಹಾಯಕಿಯರನ್ನು ಕೂಡಲೇ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
೨೦೧೯ ಮಾರ್ಚ್ ತಿಂಗಳಿAದ ಇದುವರೆಗೆ ಮಾತೃಪೂರ್ಣ ಯೋಜನೆಯ ತರಕಾರಿ ಬಿಲ್ ಪಾವತಿಸಲಾಗಿಲ್ಲ. ಹಿಂದಿನ ಬಿಲ್ ಪಾವತಿಸುವ ಜೊತೆಗೆ ಪ್ರತಿ ತಿಂಗಳು ಮುಂಗಡವಾಗಿ ಬಿಲ್ ಪಾವತಿಸುವ ವ್ಯವಸ್ಥೆ ಮಾಡಬೇಕು. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕಳೆದ ಒಂದೂವರೆ ವರ್ಷದಿಂದ ಬಾಡಿಗೆ ಹಣ ಪಾವತಿಸಿಲ್ಲ. ಬಾಡಿಗೆ ಹಣ ತಕ್ಷಣ ಬಿಡುಗಡೆ ಮಾಡಬೇಕು ಎಂದರು.
ಅAಗನವಾಡಿ ಕೇಂದ್ರಗಳಿಗೆ ಪ್ರತಿ ವರ್ಷ ೮ ಗ್ಯಾಸ್ ಸಿಲಿಂಡರ್ ಪೂರೈಸಬೇಕು ಎಂದು ಸರ್ಕಾರದ ಆದೇಶವಿದ್ದರೂ ಸಹ ೨೦೧೮ರಲ್ಲಿ ಕೇವಲ ೪ ಗ್ಯಾಸ್ ಸಿಲಿಂಡರ್ ನೀಡಲಾಗಿತ್ತು. ಆದರೆ ೨೦೧೯ರಲ್ಲಿ ಒಂದೇ ಒಂದು ಸಿಲಿಂಡರ್ ನೀಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸರ್ಕಾರದ ನಿಯಮದಂತೆ ನಿಯಮಿತವಾಗಿ ಗ್ಯಾಸ್ ಸಿಲಿಂಡರ್ ಪೂರೈಸಲು ಕ್ರಮ ಕೈಗೋಳ್ಳಬೇಕು ಎಂದು ಒತ್ತಾಯಿಸಿದರು.
೨೦೧೮ ಹಾಗೂ ೨೦೧೯ರ ಅವಧಿಯ ಫ್ಲೆಕ್ಸಿ ಫಂಡ್ ಪಾವತಿಸಲು ಕ್ರಮ ಕೈಗೊಳ್ಳಬೇಕು. ಮಾತೃಪೂರ್ಣ ಯೋಜನೆ ಪೂರ್ಣಗೊಳಿಸಲು ಅಗತ್ಯ ಸಾಮಾನುಗಳು ನೀಡಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಿಂಗಳಿಗೆ ತಗುಲುವ ಆಹಾರ ಪೂರೈಸಬೇಕು. ಇಲಾಖೆಯಿಂದ ನಡೆಯುವ ತರಬೇತಿಗೆ ಹಾಜರಾಗುವ ಕಾರ್ಯಕರ್ತೆಯರಿಗೆ ಟಿಎ, ಡಿಎ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಜಯಶ್ರೀ ಮೆಂಡೋಳೆ, ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಚಿವಡೆ, ಉಪಾಧ್ಯಕ್ಷೆ ಫುಲಾಬಾಯಿ, ಕೋಶಾಧ್ಯಕ್ಷೆ ಸುಪ್ರೀಯಾ ಬುಡ್ಕೆ, ಪ್ರಮುಖರಾದ ಪದ್ಮಾವತಿ ಸ್ವಾಮಿ, ಸುನೀತಾಬಾಯಿ ಜಮಾದಾರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಸAಜೆ ವರೆಗೆ ಧರಣಿ ನಡೆಸಿದ ಅಂಗನವಾಡಿ ನೌಕರರು, ಸ್ಥಳಕ್ಕೆ ಭೇಟಿನೀಡಿದ ಸಿಡಿಪಿಓ ಶಾರದಾ ಕಲ್ಮಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.


ಬೈಟ್-೧
ಶ್ರೀದೇವಿ ಚಿವಡೆ
ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ
(ನೀಲಿ ಬಣ್ಣದ ಸಿರೆ ಉಟ್ಟವರು)



ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.