ಬೀದರ್: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ಜಿಲ್ಲೆಯ ವರವಟ್ಟಿ ಗ್ರಾಮದ ವೀರ ಯೋಧನಿಗೆ ನಮನ ಸಲ್ಲಿಸುವ ಮೂಲಕ ಯುವಕರು ಕಾರ್ಗಿಲ್ ವಿಜಯ ದಿವಸ್ ಆಚರಿಸಿದರು.
![Kargil Vijay Diwas: Youth pays homage to war hero](https://etvbharatimages.akamaized.net/etvbharat/prod-images/kn-bdr-02-28-katgildivas-7203280-av-0_26072020182629_2607f_1595768189_938.jpg)
ಜಿಲ್ಲೆಯ ಭಾಲ್ಕಿ ಪಟ್ಟಣದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಯುವ ಬ್ರಿಗೇಡ್ ವತಿಯಿಂದ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ವೀರ ಯೋಧ ಗೋವಿಂದರಾವ್ ಶೇಡೋಳೆ ಬಲಿದಾನವನ್ನು ಸ್ಮರಿಸಲಾಯಿತು.
ಯುವ ಬ್ರಿಗೇಡ್ ಮುಖಂಡರಾದ ಆಕಾಶ ಪಾಟೀಲ್, ರಾಹುಲ್ ಮೈನಾಳೆ, ಪ್ರಶಾಂತ ಕಾಕನಾಳೆ, ನಿಖಿಲ್ ಸಪಟೆ, ಮೈಯಾಡಿ ಕಲ್ಲಶೆಟ್ಟಿ, ಸುಮೀತ ಪಾಟೀಲ ಹಾಗೂ ಆಶಿಶ್ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.