ಬಸವಕಲ್ಯಾಣ: ನಾಡಿನಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಬಸವಕಲ್ಯಾಣದಲ್ಲಿಯೂ ಕೂಡಾ ಸೌಹಾರ್ದತೆಯಿಂದ ಬಣ್ಣದ ಹಬ್ಬವನ್ನು ಆಚರಣೆ ಮಾಡಲಾಯಿತು.
ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ರಂಗಿನಾಟ ನಡೆಯಿತು. ನಗರದ ಮುಖ್ಯ ರಸ್ತೆ ಸೇರಿದಂತೆ ಬಡಾವಣೆಗಳಲ್ಲಿಯೂ ಹಲವಡೆ ಹಬ್ಬದ ಉತ್ಸಾಹದೊಂದಿಗೆ ಯುವಕರು ಗುಂಪು ಗುಂಪಾಗಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರೆ, ಕೆಲವಡೆ ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ರಂಗಿನಾಟಕ್ಕೆ ರಂಗು ತಂದರು.
ಹೋಳಿ ಹಿನ್ನೆಲೆ ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆಯ್ದ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.
ಕೊರೊನಾ ಭೀತಿ
ಪ್ರತಿ ವರ್ಷ ಕಂಡು ಬರುತ್ತಿದ್ದ ಯುವ ಸಮೂಹ ಈ ವರ್ಷ ತುಸು ಕಡಿಮೆಯಾದಂತೆ ಕಂಡು ಬಂತು. ಮಹಾಮಾರಿ ಕೊರೊನಾ ವೈರಸ್ನ ಭಯದಿಂದ ಬಹುತೇಕ ಯುವಕರು ಬಣ್ಣದಾಟದಿಂದ ದೂರ ಉಳಿದಿದ್ದಾರೆ.