ETV Bharat / state

ಬೀದರ್ ಸಮಾಜ ಕಲ್ಯಾಣಾಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ:​​ ನಾಪತ್ತೆ ವದಂತಿ..!? - ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮ್ ಸಾಗರ್ ದಾಂಡೇಕರ್

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮ್ ಸಾಗರ್ ದಾಂಡೇಕರ್ ವಿರುದ್ಧ, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

fir-against-bidar-district-social-welfare-officer
ಬೀದರ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮೇಲೆ ಎಫ್​​ಐಆರ್
author img

By

Published : Jan 21, 2020, 7:17 PM IST

ಬೀದರ್: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮ್ ಸಾಗರ್ ದಾಂಡೇಕರ್ ವಿರುದ್ಧ, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಂಧನದ ಭೀತಿಯಿಂದ ಅವರು, ತಲೆ ಮರೆಸಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ್ದು, ಎಫ್​ಐಆರ್​ ದಾಖಲಾಗಿರುವುದನ್ನ ಖಚಿತ ಪಡಿಸಿದ್ದಾರೆ.

ಬೀದರ್ ನಗರಸಭೆ ಅನುದಾನದ ಎಸ್​ಎಫ್​ಸಿ ಮುಕ್ತ ನಿಧಿಯಡಿ, ಪರಿಶಿಷ್ಟ ಜಾತಿ ಯುವಕರಿಗೆ ಜಿಮ್ ಉಪಕರಣಗಳು, ಕ್ರೀಡಾ ಸಾಮಗ್ರಿಗಳು, ಗ್ರಂಥಾಲಯ ಮತ್ತು ಕಂಪ್ಯೂಟರ್​​​ಗಳ ವಿತರಣೆಗಾಗಿ ಬರೊಬ್ಬರಿ ₹ 22.50 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಪ್ರೇಮ್ ಸಾಗರ್ ಅವರು ನಕಲಿ ಬಿಲ್​​​ಗಳನ್ನು ಸೃಷ್ಟಿಸಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಆರೋಪದಡಿ ಬೀದರ್ ನಿವಾಸಿ ಅವಿನಾಶ್​​ ದೀನೆ ಎಂಬುವವರು ಎಸಿಬಿಗೆ ದೂರು ನೀಡಿದ್ದರು. ದೂರು ಆಧರಿಸಿ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ತನಿಖೆ ಬಳಿಕ ಐಪಿಸಿ ಸೆಕ್ಷನ್ 409, 420, 465, 466, 468 ಕಲಂ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಬೀದರ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮೇಲೆ ಎಫ್​​ಐಆರ್

ಇತ್ತ ತನಿಖೆ ಹಂತದಲ್ಲಿರುವಾಗಲೇ ಕಳೆದ ತಿಂಗಳಲ್ಲಿ ಪ್ರೇಮ ಸಾಗರ ಅವರನ್ನು ರಾಜ್ಯ ಸರ್ಕಾರ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿತ್ತು. ಉಡುಪಿಗೆ ಹೋಗಿ ಕಾರ್ಯನಿರ್ವಹಿಸಬೇಕು ಎನ್ನುವಷ್ಟರಲ್ಲಿ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ವಿಷಯ ತಿಳಿದ ಪ್ರೇಮ್ ಸಾಗರ್, ಕರ್ತವ್ಯಕ್ಕೆ ಹಾಜರಾಗದೇ ಇತ್ತ ಬೀದರ್ ಜಿಲ್ಲೆಯಲ್ಲೂ ಅಧಿಕಾರಿಗಳ ಕೈಗೆ ಸಿಗದೇ ಓಡಾಡುತ್ತಿದ್ದಾರೆ ಎನ್ನಲಾಗಿದೆ.

ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಅಜ್ಞಾತ ಸ್ಥಳದಿಂದ ಜಾಮೀನು ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಅವ್ಯವಹಾರ ಮತ್ತು ಅಕ್ರಮಗಳನ್ನ ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದ್ದವು.

ಬೀದರ್: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮ್ ಸಾಗರ್ ದಾಂಡೇಕರ್ ವಿರುದ್ಧ, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಂಧನದ ಭೀತಿಯಿಂದ ಅವರು, ತಲೆ ಮರೆಸಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ್ದು, ಎಫ್​ಐಆರ್​ ದಾಖಲಾಗಿರುವುದನ್ನ ಖಚಿತ ಪಡಿಸಿದ್ದಾರೆ.

ಬೀದರ್ ನಗರಸಭೆ ಅನುದಾನದ ಎಸ್​ಎಫ್​ಸಿ ಮುಕ್ತ ನಿಧಿಯಡಿ, ಪರಿಶಿಷ್ಟ ಜಾತಿ ಯುವಕರಿಗೆ ಜಿಮ್ ಉಪಕರಣಗಳು, ಕ್ರೀಡಾ ಸಾಮಗ್ರಿಗಳು, ಗ್ರಂಥಾಲಯ ಮತ್ತು ಕಂಪ್ಯೂಟರ್​​​ಗಳ ವಿತರಣೆಗಾಗಿ ಬರೊಬ್ಬರಿ ₹ 22.50 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಪ್ರೇಮ್ ಸಾಗರ್ ಅವರು ನಕಲಿ ಬಿಲ್​​​ಗಳನ್ನು ಸೃಷ್ಟಿಸಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಆರೋಪದಡಿ ಬೀದರ್ ನಿವಾಸಿ ಅವಿನಾಶ್​​ ದೀನೆ ಎಂಬುವವರು ಎಸಿಬಿಗೆ ದೂರು ನೀಡಿದ್ದರು. ದೂರು ಆಧರಿಸಿ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ತನಿಖೆ ಬಳಿಕ ಐಪಿಸಿ ಸೆಕ್ಷನ್ 409, 420, 465, 466, 468 ಕಲಂ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಬೀದರ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮೇಲೆ ಎಫ್​​ಐಆರ್

ಇತ್ತ ತನಿಖೆ ಹಂತದಲ್ಲಿರುವಾಗಲೇ ಕಳೆದ ತಿಂಗಳಲ್ಲಿ ಪ್ರೇಮ ಸಾಗರ ಅವರನ್ನು ರಾಜ್ಯ ಸರ್ಕಾರ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿತ್ತು. ಉಡುಪಿಗೆ ಹೋಗಿ ಕಾರ್ಯನಿರ್ವಹಿಸಬೇಕು ಎನ್ನುವಷ್ಟರಲ್ಲಿ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ವಿಷಯ ತಿಳಿದ ಪ್ರೇಮ್ ಸಾಗರ್, ಕರ್ತವ್ಯಕ್ಕೆ ಹಾಜರಾಗದೇ ಇತ್ತ ಬೀದರ್ ಜಿಲ್ಲೆಯಲ್ಲೂ ಅಧಿಕಾರಿಗಳ ಕೈಗೆ ಸಿಗದೇ ಓಡಾಡುತ್ತಿದ್ದಾರೆ ಎನ್ನಲಾಗಿದೆ.

ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಅಜ್ಞಾತ ಸ್ಥಳದಿಂದ ಜಾಮೀನು ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಅವ್ಯವಹಾರ ಮತ್ತು ಅಕ್ರಮಗಳನ್ನ ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದ್ದವು.

Intro:ಬೀದರ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮೇಲೆ ಎಫ್ ಐ ಆರ್ ದಾಖಲು...!

ಬೀದರ್:
ಶೋಷಿತರ ಅಭಿವೃದ್ದಿಗಾಗಿ ರಾಜ್ಯ ಸರರ್ಕಾರ ಕೋಟಿ ಕೋಟಿ ಹಣ ನೀಡುತ್ತಿದೆ. ಆದ್ರೆ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳು ತಾವೆ ನುಂಗಿ ನೀರು ಕುಡಿದ ಅಧಿಕಾರಿಯೊಬ್ಬರ ವಿರುದ್ದ ಈಗ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಂಧನ ಭೀತಿಗೊಳಗಾದ ಅಧಿಕಾರಿ ಈಗ ತಲೆ ಮರೆಸಿಕೊಂಡು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಹೌದು ಬೀದರ್ ನಗರಸಭೆ ಅನುದಾನವಾದ ಎಸ್.ಎಫ್.ಸಿ ಮುಕ್ತ ನಿಧಿಯಡಿಯಲ್ಲಿ ಪರಿಶಿಷ್ಟ ಜಾತಿ ಓಣಿಗಳಲ್ಲಿ ಯುವಕರಿಗೆ ಜಿಮ್ ಉಪಕರಣಗಳು, ಕ್ರೀಡಾ ಸಾಮಗ್ರಿಗಳು ಹಾಗೂ ಗ್ರಂಥಾಲಯ ಮತ್ತು ಕಂಪ್ಯೂಟರ್ ಗಳನ್ನ ವಿತರಣೆಗಾಗಿ ಬರೊಬ್ಬರಿ 22.50 ಲಕ್ಷ ಹಣವವನ್ನ ಬೀಡುಗಡೆ ಮಾಡಿತ್ತು. ಆದ್ರೆ ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮ್ ಸಾಗರ ದಾಂಡೆಕರ್ ನಕಲಿ ಬಿಲ್ ಗಳನ್ನ ಸೃಷ್ಟಿಸಿ ಹಣವನ್ನ ದುರುಪಯೋಗ ಪಡೆಸಿಕೊಂಡಿರುವ ಆರೋಪದಡಿ ಬೀದರ್ ನಿವಾಸಿ ಅವಿನಾಶ ದೀನೆ ಎಂಬಾತರು ಎಸಿಬಿಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಎಸಿಬಿ ಅಧಿಕಾರಿಗಳು ತನಿಖೆಯನ್ನ ನಡೆಸಿ ಪ್ರೇಮ್ ಸಾಗರ್ ವಿರುದ್ದ ಕೇಳಿ ಬಂದ ಆರೋಪ ಮೇಲ್ನೋಟಕ್ಕೆ ಸಾಬೀತು ಆಗಿರುವ ಹಿನ್ನಲೆಯಲ್ಲಿ ಇದೇ ತಿಂಗಳು 4ರಂದು ಐಪಿಸಿ ಸೆಕ್ಷನ್ 409, 420, 465, 466, 468 ಕಲಂ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಬೈಟ್-೦೧: ಎಂ.ವಿ.ಜ್ಯೋತಿ, ಎಸಿಬಿ ಎಸ್ಪಿ, ಕಲಬುರಗಿ(ಆಡಿಯೋ ಕ್ಲೀಪ್ ಇದೆ ಬಳಸಿಕೊಳ್ಳಿ)

ಇತ್ತ ತನಿಖೆ ಹಂತದಲ್ಲಿರುವಾಗಲೇ ಕಳೆದ ತಿಂಗಳಲ್ಲಿ ಪ್ರೇಮ ಸಾಗರ ಅವರನ್ನ ರಾಜ್ಯ ಸರ್ಕಾರ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿದ್ರು ಉಡುಪಿಗೆ ಹೋಗಿ ಕಾರ್ಯನಿರ್ವಹಿಸಬೇಕು ಎನ್ನುವಷ್ಟರಲ್ಲಿ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ವಿಷಯ ತಿಳಿದ ಉಪನಿರ್ದೇಶಕ ಪ್ರೇಮ್ ಸಾಗರ್ ದಾಂಡೆಕರ್ ಕರ್ತವ್ಯಕ್ಕೆ ಹಾಜರಾಗದೆ ಬೀದರ್ ಜಿಲ್ಲೆಯಲ್ಲೂ ಅಧಿಕಾರಿಗಳ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆ.

ಬಂಧನ ಬೀತಿಯಿಂದ ತಪ್ಪಿಸಿಕೊಳ್ಳಲು ಅಜ್ಞಾತ ಸ್ಥಳದದಿಂದ ಜಾಮಿನು ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮ್ ಸಾಗರ್ ದಾಂಡೆಕರ್ ಕಳೆದ ಹಲವು ವರ್ಷಗಳಿಂದ ಅವ್ಯವಹಾರ ಮತ್ತು ಕ್ರಮಗಳನ್ನ ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಸಹ ಸಾಕಷ್ಟು ಕೇಳಿ ಬಂದಿದ್ದವು.
----------Body:ಅನೀಲConclusion:ಬೀದರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.