ETV Bharat / state

ಬೀದರ್​​​ನಲ್ಲಿ ಇಂದಿನಿಂದ ರಸ್ತೆಗಿಳಿಯಲಿವೆ ಕೆಂಪು ಬಸ್​​ಗಳು - ಇಂದಿನಿಂದ ರಸ್ತೆಗಿಯಳಿವೆ ಕೆಂಪು ಬಸ್​​ಗಳು

ಬಸ್​ ಸಂಚಾರಕ್ಕೆ ಸರ್ಕಾರ ಹಸಿರು ನಿಶಾನೆ ತೋರಿರುವ ಹಿನ್ನೆಲೆ ಬೀದರ್​ನಲ್ಲಿ ತಾಲೂಕು ಮಟ್ಟದಲ್ಲಿ ಸಂಪರ್ಕ ಕಲ್ಪಿಸುವ ಮತ್ತು ಅಂತರ್​ ಜಿಲ್ಲೆಯಾದ ಕಲಬುರಗಿ-ಬೀದರ್ ನಡುವೆ ಇಂದಿನಿಂದ ಬಸ್​ ಸಂಚಾರ ಪುನಾರಾರಂಭವಾಗಲಿದೆ.

Bus  Services resumes from today in Bidar
ಇಂದಿನಿಂದ ರಸ್ತೆಗಿಯಳಿವೆ ಕೆಂಪು ಬಸ್​​ಗಳು
author img

By

Published : May 19, 2020, 10:23 AM IST

ಬೀದರ್: ಜಿಲ್ಲೆಯಲ್ಲಿ ಇಂದಿನಿಂದ ಸಾರಿಗೆ ಬಸ್​ಗಳ ಓಡಾಟ ಪುನಾರಾರಂಭವಾಗಲಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ತಿಳಿಸಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ತಾಲೂಕುಮಟ್ಟದ ಸಂಪರ್ಕ ಕಲ್ಪಿಸುವ ಬಸ್​ಗಳ ಓಡಾಟ ಪುನಾರಾರಂಭವಾಗಲಿದೆ. ಜೊತೆಗೆ ಅಂತರ್​ ಜಿಲ್ಲೆ ಕಲಬುರಗಿ-ಬೀದರ್ ನಡುವೆಯೂ ಬಸ್​ಗಳು ಸಂಚರಿಸಲಿವೆ ಎಂದಿದ್ದಾರೆ.

ಇಂದಿನಿಂದ ರಸ್ತೆಗಿಳಿಯಲಿವೆ ಕೆಂಪು ಬಸ್​​ಗಳು

ವಿಭಾಗದ ಒಟ್ಟು 582 ಬಸ್​ಗಳು ಸಾರ್ವಜನಿಕ ಸೇವೆಗಾಗಿ ಸಿದ್ಧವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಒಂದು ಬಸ್​ನಲ್ಲಿ ಗರಿಷ್ಠ 30 ಜನರು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಬೀದರ್-ಔರಾದ್, ಬೀದರ್-ಭಾಲ್ಕಿ, ಬೀದರ್- ಬಸವಕಲ್ಯಾಣ, ಬೀದರ್ - ಚಿಟಗುಪ್ಪ ಹಾಗೂ ಬೀದರ್- ಕಲಬುರಗಿ ಬಸ್​ಗಳು ಸಂಚಾರ ಮಾಡಲಿವೆ. ಆಯಾ ಘಟಕದ ವ್ಯವಸ್ಥಾಪಕರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬಸ್​ಗಳು ಒಂದು ಪಾಯಿಂಟ್​ನಿಂದ ಬಿಟ್ಟರೆ ನೇರವಾಗಿ ಮತ್ತೊಂದು ಪಾಯಿಂಟ್​ಗೆ ಬಂದು ನಿಲ್ಲುತ್ತವೆ. ಮಧ್ಯದಲ್ಲಿ ಎಲ್ಲೂ ನಿಲುಗಡೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಎಕ್ಸ್​​ಪ್ರೆಸ್​ ಮಾರ್ಗಗಳಲ್ಲೂ ಬಸ್​ಗಳು ಸಂಚರಿಸುವುದಿಲ್ಲ. ಅಂತರ್​ ರಾಜ್ಯ ಸಂಚಾರವೂ ಇರುವುದಿಲ್ಲ. ಪ್ರಯಾಣಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಬೀದರ್: ಜಿಲ್ಲೆಯಲ್ಲಿ ಇಂದಿನಿಂದ ಸಾರಿಗೆ ಬಸ್​ಗಳ ಓಡಾಟ ಪುನಾರಾರಂಭವಾಗಲಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ತಿಳಿಸಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ತಾಲೂಕುಮಟ್ಟದ ಸಂಪರ್ಕ ಕಲ್ಪಿಸುವ ಬಸ್​ಗಳ ಓಡಾಟ ಪುನಾರಾರಂಭವಾಗಲಿದೆ. ಜೊತೆಗೆ ಅಂತರ್​ ಜಿಲ್ಲೆ ಕಲಬುರಗಿ-ಬೀದರ್ ನಡುವೆಯೂ ಬಸ್​ಗಳು ಸಂಚರಿಸಲಿವೆ ಎಂದಿದ್ದಾರೆ.

ಇಂದಿನಿಂದ ರಸ್ತೆಗಿಳಿಯಲಿವೆ ಕೆಂಪು ಬಸ್​​ಗಳು

ವಿಭಾಗದ ಒಟ್ಟು 582 ಬಸ್​ಗಳು ಸಾರ್ವಜನಿಕ ಸೇವೆಗಾಗಿ ಸಿದ್ಧವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಒಂದು ಬಸ್​ನಲ್ಲಿ ಗರಿಷ್ಠ 30 ಜನರು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಬೀದರ್-ಔರಾದ್, ಬೀದರ್-ಭಾಲ್ಕಿ, ಬೀದರ್- ಬಸವಕಲ್ಯಾಣ, ಬೀದರ್ - ಚಿಟಗುಪ್ಪ ಹಾಗೂ ಬೀದರ್- ಕಲಬುರಗಿ ಬಸ್​ಗಳು ಸಂಚಾರ ಮಾಡಲಿವೆ. ಆಯಾ ಘಟಕದ ವ್ಯವಸ್ಥಾಪಕರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬಸ್​ಗಳು ಒಂದು ಪಾಯಿಂಟ್​ನಿಂದ ಬಿಟ್ಟರೆ ನೇರವಾಗಿ ಮತ್ತೊಂದು ಪಾಯಿಂಟ್​ಗೆ ಬಂದು ನಿಲ್ಲುತ್ತವೆ. ಮಧ್ಯದಲ್ಲಿ ಎಲ್ಲೂ ನಿಲುಗಡೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಎಕ್ಸ್​​ಪ್ರೆಸ್​ ಮಾರ್ಗಗಳಲ್ಲೂ ಬಸ್​ಗಳು ಸಂಚರಿಸುವುದಿಲ್ಲ. ಅಂತರ್​ ರಾಜ್ಯ ಸಂಚಾರವೂ ಇರುವುದಿಲ್ಲ. ಪ್ರಯಾಣಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.