ETV Bharat / state

ಕಾರಂಜಾ ಸಂತ್ರಸ್ತರಿಗೆ ಪರಿಹಾರಕ್ಕೆ ಒತ್ತಾಯ: ಸಚಿವ ಕಾಂಶೆಪೂರಗೆ ತರಾಟೆ

ಸತತ 4 ತಿಂಗಳಿಂದ ಪ್ರತಿಭಟನಾ ನಿರತ ಕಾರಂಜಾ ಸಂತ್ರಸ್ತರೊಂದಿಗೆ ಸಚಿವ ಬಂಡೆಪ್ಪ ಕಾಶೆಂಪೂರ ಸಂಧಾನ ಸಭೆ ನಡೆಸಿದ್ದು, ಈ ವೇಳೆ ಸಂತ್ರಸ್ತರೊಬ್ಬರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

author img

By

Published : Jun 19, 2019, 10:16 AM IST

ಬಂಡೆಪ್ಪ ಖಾಶೆಂಪೂರ್

ಬೀದರ್: ಕಾರಂಜಾ ಜಲಾಶಯದಲ್ಲಿ ಮುಳುಗಡೆಯಾದ ಸಂತ್ರಸ್ತರಿಗೆ ಸರಿಯಾದ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಕಾರಂಜಾ ಸಂತ್ರಸ್ತರು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕಾರಂಜಾ ಸಂತ್ರಸ್ತರೊಂದಿಗೆ ಸಚಿವ ಬಂಡೆಪ್ಪ ಕಾಶೆಂಪೂರ ಸಭೆ

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗಮನ ಹಿನ್ನೆಲೆಯಲ್ಲಿ ಸತತ ನಾಲ್ಕು ತಿಂಗಳಿಂದ ಪ್ರತಿಭಟನಾ ನಿರತ ಸಂತ್ರಸ್ತರೊಂದಿಗೆ ಬಂಡೆಪ್ಪ ಕಾಶೆಂಪೂರ ಸಂಧಾನ ಸಭೆ ನಡೆಸಿದರು. ಈ ವೇಳೆ ಸಂತ್ರಸ್ತರೊಬ್ಬರು ಮಾತನಾಡಿ, ಕಾರಂಜಾ ಜಲಾಶಯದಲ್ಲಿ ನೀರಿಲ್ಲ. ಜನರಿಗೆ ಕುಡಿಯುವುದಕ್ಕೆ ಹನಿ ನೀರು ಸಿಗುತ್ತಿಲ್ಲ. ನಾವು ಪರಿಹಾರ ಕೊಡ್ರಿ ಅಂತ ಹೆಂಡತಿ, ಮಕ್ಕಳು ಎಲ್ಲರೂ ಹೋಗಿ ಡಿಸಿ ಆಫೀಸ್ ಮುಂದೆ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿಮ್ಮ ಬಳಿ ಹಣ ಇಲ್ಲವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಸಿಎಂ ಕುಮಾರಸ್ವಾಮಿ ಮೊದಲ ಬಾರಿ ಸಭೆ ಮಾಡಿ ನೀಡಿದ ಭರವಸೆ ಹುಸಿಯಾಗಿದೆ. ಈಗ ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಪ್ರತಿಭಟನೆ ಮಾಡುವ ಮೂಲಕ ನಾವು ಅವರನ್ನೇ ಕೇಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬೀದರ್: ಕಾರಂಜಾ ಜಲಾಶಯದಲ್ಲಿ ಮುಳುಗಡೆಯಾದ ಸಂತ್ರಸ್ತರಿಗೆ ಸರಿಯಾದ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಕಾರಂಜಾ ಸಂತ್ರಸ್ತರು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕಾರಂಜಾ ಸಂತ್ರಸ್ತರೊಂದಿಗೆ ಸಚಿವ ಬಂಡೆಪ್ಪ ಕಾಶೆಂಪೂರ ಸಭೆ

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗಮನ ಹಿನ್ನೆಲೆಯಲ್ಲಿ ಸತತ ನಾಲ್ಕು ತಿಂಗಳಿಂದ ಪ್ರತಿಭಟನಾ ನಿರತ ಸಂತ್ರಸ್ತರೊಂದಿಗೆ ಬಂಡೆಪ್ಪ ಕಾಶೆಂಪೂರ ಸಂಧಾನ ಸಭೆ ನಡೆಸಿದರು. ಈ ವೇಳೆ ಸಂತ್ರಸ್ತರೊಬ್ಬರು ಮಾತನಾಡಿ, ಕಾರಂಜಾ ಜಲಾಶಯದಲ್ಲಿ ನೀರಿಲ್ಲ. ಜನರಿಗೆ ಕುಡಿಯುವುದಕ್ಕೆ ಹನಿ ನೀರು ಸಿಗುತ್ತಿಲ್ಲ. ನಾವು ಪರಿಹಾರ ಕೊಡ್ರಿ ಅಂತ ಹೆಂಡತಿ, ಮಕ್ಕಳು ಎಲ್ಲರೂ ಹೋಗಿ ಡಿಸಿ ಆಫೀಸ್ ಮುಂದೆ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿಮ್ಮ ಬಳಿ ಹಣ ಇಲ್ಲವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಸಿಎಂ ಕುಮಾರಸ್ವಾಮಿ ಮೊದಲ ಬಾರಿ ಸಭೆ ಮಾಡಿ ನೀಡಿದ ಭರವಸೆ ಹುಸಿಯಾಗಿದೆ. ಈಗ ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಪ್ರತಿಭಟನೆ ಮಾಡುವ ಮೂಲಕ ನಾವು ಅವರನ್ನೇ ಕೇಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

Intro:ಕಾರಂಜಾ ಸಂತ್ರಸ್ತರಿಂದ ಸಚಿವರಿಗೆ ಫೂಲ್ ಕ್ಲಾಸ್...!

ಬೀದರ್:
ಕಾರಂಜಾ ಜಲಾಶಯದಲ್ಲಿ ಮುಳುಗಡೆಯಾದ ಸಂತ್ರಸ್ತರಿಗೆ ಪರಿಹಾರ ಕೊಡಲಾಗದ ನಿಮಗೆ ಕೋಟಿಗಟ್ಟಲೆ ಖರ್ಚು ಮಾಡಿ ಕೆನಾಲ್ ಕೆಲಸ ಮಾಡ್ತಿರಿ. ಯಾಕ್ ನಾಡ್ತಿರಿ ಅಂತ ಕೆಲಸ ಬಂದ್ ಮಾಡ್ರಿ. ನಾಲ್ಕು ತಿಂಗಳಿಂದ ಪ್ರತಿಭಟನೆ ಮಾಡ್ತಿರುವ ನಮಗೆ ಸರ್ಕಾರ ನ್ಯಾಯ ಕೊಡಲಿಕ್ಕಾಗಲ್ಲ ಅಂದ್ರೆ ಹೆಂಗೆ...!

ಇದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಅವರಿಗೆ ಕಾರಂಜಾ ಸಂತ್ರಸ್ತರ ತುಂಬಿದ ಸಭೆಯಲ್ಲಿ ಸಕತ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗಮನ ಹಿನ್ನಲೆಯಲ್ಲಿ ಸತತ ನಾಲ್ಕು ತಿಂಗಳಿಂದ ಪ್ರತಿಭಟನಾ ನಿರತ ಸಂತ್ರಸ್ತರೊಂದಿಗೆ ಸಂಧಾನ ಸಭೆ ನಡೆಸಿದ ಬಂಡೆಪ್ಪ ಖಾಶೆಂಪೂರ್ ಅವರಿಗೆ ಸಂತ್ರಸ್ತರೊಬ್ಬರು ಮಾತನಾಡಿ ಕಾರಂಜಾ ಜಲಾಶಯದಲ್ಲಿ ನೀರೆ ಇಲ್ಲ. ಜನರಿಗೆ ಕುಡಿಯಲಿಕ್ಕೆ ಹನಿ ನೀರು ಸಿಗ್ತಿಲ್ಲ. ನಾವು ಪರಿಹಾರ ಕೊಡ್ರಿ ಅಂತ ಹೆಂಡ್ರು ಮಕ್ಕಳು ಎಲ್ಲವೂ ಡಿಸಿ ಆಫೀಸ್ ಮುಂದೆ ತಂದು ಪ್ರತಿಭಟನೆ ಮಾಡ್ತಿರುವಾಗ ೬೦೦ ಕೊಟಿ ವೇಚ್ಚದಲ್ಲಿ ಕಾಲುವೆ ಕಾಮಗಾರಿ ಭರದಿಂದ ಸಾಗಿಸಿದ್ದಿರಿ ಯಾಕೆ ಈ ನೀತಿ ರೈತರಿಗೆ ಪರಿಹಾರ ಕೊಡಲಿಕ್ಕ ನಿಮ್ಮ ಹತ್ರ ಹಣ ಇಲ್ಲ. ಕಾಲುವೆ ಮಾಡಲಿಕ್ಕೆ ಸಾಲಮನ್ನಾ ಮಾಡಲಿಕ್ಕೆ ಹಣ ಸಿಗುತ್ತೆ ಎನಿದು ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೆ ವೇಳೆಯಲ್ಲಿ ಸಿಎಂ ಅವರೊಂದಿಗೆ ಎಲ್ಲಿ ಬೇಕಾದ್ರು ಮಿಟಿಂಗ್ ಮಾಡಿಸಿ ಮೊದಲೊಂದು ಬಾರಿ ಸಭೆ ಮಾಡಿ ಸಿಎಂ ಕುಮಾರಸ್ವಾಮಿ ನೀಡಿದ ಭರವಸೆ ಹುಸಿಯಾಗಿದೆ. ಈಗ ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಪ್ರತಿಭಟನೆ ಮಾಡುವ ಮೂಲಕ ನಾವು ಅವರಿಗೆ ಕೆಳ್ತಿವಿ ಎಂದು ಎಚ್ಚರಿಕೆ ನೀಡಿದರು.Body:AnilConclusion:Bidar

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.