ETV Bharat / state

ಬೀದರ್​​ನಲ್ಲಿ ಮತ್ತೆ 2 ಕೊರೊನಾ ಸೋಂಕು ಪತ್ತೆ;  ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಚಿವರ ಮನವಿ

author img

By

Published : Apr 13, 2020, 3:56 PM IST

ದೆಹಲಿ ಜಮಾತ್​ಗೆ ಹೊಗಿ ಬಂದ 10 ಜನರ ಪೈಕಿ ಕೇಸ್​ ನಂಬರ್ 211ರ ಸಂಪರ್ಕದಲ್ಲಿದ್ದ ಇಬ್ಬರು ಮಹಿಳೆಯರಿಗೆ ಕೊರೊನಾ ಸೋಂಕು ದೃಢವಾಗಿದೆ.

2 more Corona case found in Bidar
ಬೀದರ್​​ನಲ್ಲಿ ಮತ್ತೆ 2 ಕೊರೊನಾ ಸೋಂಕು ಪತ್ತೆ; ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಚಿವ ಪ್ರಭು ಚವ್ಹಾಣ ಮನವಿ

ಬೀದರ್: ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ದೆಹಲಿಯ ಜಮಾತ್​ಗೆ ಹೋಗಿ ಬಂದ ಸೋಂಕಿತರ ಸಂಪರ್ಕದಲ್ಲಿರುವ ಇಬ್ಬರು ಮಹಿಳೆಯರಿಗೆ ಸೋಂಕು ದೃಢವಾಗಿದೆ.

ಸಚಿವ ಪ್ರಭು ಚವ್ಹಾಣ್​

ಸದ್ಯ ಓಲ್ಡ್ ಸಿಟಿಯ ನಿವಾಸಿಗಳಲ್ಲಿ ಸೋಂಕು ಪತ್ತೆಯಾಗಿದೆ. ದೆಹಲಿ ಜಮಾತ್​ಗೆ ಹೋಗಿ ಬಂದ 10 ಜನರ ಪೈಕಿ ಕೇಸ್​ ನಂಬರ್ 211ರ ಸಂಪರ್ಕದಲ್ಲಿದ್ದ (35)ವರ್ಷದ ಮಗಳು ಹಾಗೂ ಸಹೋದರನ 16 ವರ್ಷದ ಮಗಳಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮಾತನಾಡಿ, ಯಾದಗಿ ಹಾಗೂ ಬೀದರ್ ಜಿಲ್ಲೆಯ ಜನರಲ್ಲಿ ಮನೆಯಿಂದ ಹೊರ ಬಾರದಂತೆ ಮನವಿ ಮಾಡಿಕೊಂಡರು. ಸೋಂಕಿತರ ಸಂಪರ್ಕದಲ್ಲಿರುವವರು ಮುಂಜಾಗ್ರತೆ ವಹಿಸದೇ ಇರುವುದಕ್ಕಾಗಿ ಈ ಮಹಾಮಾರಿ ಹೆಚ್ಚಾಗಿದೆ. ಜಿಲ್ಲೆಯ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು, ಈ ಕೊರೊನಾ ಸಮಸ್ಯೆಯನ್ನು ಹೊಡೆದೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೀದರ್: ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ದೆಹಲಿಯ ಜಮಾತ್​ಗೆ ಹೋಗಿ ಬಂದ ಸೋಂಕಿತರ ಸಂಪರ್ಕದಲ್ಲಿರುವ ಇಬ್ಬರು ಮಹಿಳೆಯರಿಗೆ ಸೋಂಕು ದೃಢವಾಗಿದೆ.

ಸಚಿವ ಪ್ರಭು ಚವ್ಹಾಣ್​

ಸದ್ಯ ಓಲ್ಡ್ ಸಿಟಿಯ ನಿವಾಸಿಗಳಲ್ಲಿ ಸೋಂಕು ಪತ್ತೆಯಾಗಿದೆ. ದೆಹಲಿ ಜಮಾತ್​ಗೆ ಹೋಗಿ ಬಂದ 10 ಜನರ ಪೈಕಿ ಕೇಸ್​ ನಂಬರ್ 211ರ ಸಂಪರ್ಕದಲ್ಲಿದ್ದ (35)ವರ್ಷದ ಮಗಳು ಹಾಗೂ ಸಹೋದರನ 16 ವರ್ಷದ ಮಗಳಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮಾತನಾಡಿ, ಯಾದಗಿ ಹಾಗೂ ಬೀದರ್ ಜಿಲ್ಲೆಯ ಜನರಲ್ಲಿ ಮನೆಯಿಂದ ಹೊರ ಬಾರದಂತೆ ಮನವಿ ಮಾಡಿಕೊಂಡರು. ಸೋಂಕಿತರ ಸಂಪರ್ಕದಲ್ಲಿರುವವರು ಮುಂಜಾಗ್ರತೆ ವಹಿಸದೇ ಇರುವುದಕ್ಕಾಗಿ ಈ ಮಹಾಮಾರಿ ಹೆಚ್ಚಾಗಿದೆ. ಜಿಲ್ಲೆಯ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು, ಈ ಕೊರೊನಾ ಸಮಸ್ಯೆಯನ್ನು ಹೊಡೆದೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.