ETV Bharat / state

ವರ್ಷದಲ್ಲೇ ಬಳ್ಳಾರಿಗೆ 3 ಎಸ್ಪಿಗಳು: ಹೊಸಬರನ್ನೂ ಬದಲಾಯಿಸುತ್ತಾ ಬಿಜೆಪಿ ಸರ್ಕಾರ? - ಬಳ್ಳಾರಿ ಜಿಲ್ಲಾ ಪೊಲೀಸ್​ ಇಲಾಖೆ

ಕಳೆದ ಒಂದು ವರ್ಷದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್​ ಇಲಾಖೆ ಮೂವರು ವರಿಷ್ಠಾಧಿಕಾರಿಗಳನ್ನ ಕಂಡಿದ್ದು, ನೂತನ ಸರ್ಕಾರ ರಚನೆಯಾಗಿದ್ದರಿಂದ ಮತ್ತೆ ಎಸ್​​ಪಿಯನ್ನ ಬದಲಾವಣೆ ಮಾಡುತ್ತಾ ಎಂಬ ಕುತೂಹಲ ಕಾಡುತ್ತಿದೆ.

ವರ್ಷದಲ್ಲೆ ಮೂವರು ಎಸ್ಪಿಗಳು ಬದಲು
author img

By

Published : Jul 27, 2019, 9:58 PM IST

ಬಳ್ಳಾರಿ: ದಕ್ಷ - ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದ ಆರ್.ಚೇತನ್ ಅವರು ಪಕ್ಕದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡ ಬಳಿಕ ಗಣಿನಾಡಿಗೆ ವರ್ಷದಲ್ಲೇ ಮೂವರು ಎಸ್​ಪಿಗಳನ್ನ ಬದಲಿಸುವ ಮೂಲಕ ರಾಜ್ಯದ ಮೈತ್ರಿಕೂಟ ಸರ್ಕಾರ ವಿಶೇಷ ಗಮನ ಸೆಳೆದಿತ್ತು.

ವರ್ಷದಲ್ಲೇ ಮೂವರು ಎಸ್ಪಿಗಳು ಬದಲು

ಹಾಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಆರ್.ಚೇತನ್ ಅವರು ಗಣಿನಾಡು ಬಳ್ಳಾರಿಯಿಂದ ವರ್ಗಾವಣೆಗೊಂಡ ಬಳಿಕ 2018ರ ಮಾರ್ಚ್ 16ರಂದು ಅರುಣ್ ರಂಗರಾಜನ್ ಅವರು ಎಸ್​ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡ ಮಾರನೇ ದಿನ ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ರೌಡಿಗಳ ಪೆರೇಡ್ ನಡೆಸಿ, ತಮ್ಮ ಶಿಸ್ತುಬದ್ಧ ಅಧಿಕಾರವನ್ನು ಪ್ರದರ್ಶಿಸಿದ್ದರು.

ಆ ಬಳಿಕ ಹಾಲಿ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಲೋಕಸಭಾ ಉಪ ಚುನಾವಣೆ ಎದುರಾಯಿತು. ಉಪ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾದ ಅವರನ್ನ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ವರ್ಗಾವಣೆಗೊಳಿಸಿ ಕಾರ್ಯ ವ್ಯಾಪ್ತಿಯ ಸ್ಥಳ ತೋರಿಸದೆ 2019ರ ಮಾರ್ಚ್ 18ರಂದು ಏಕಾಏಕಿ ವರ್ಗಾವಣೆ ಮಾಡಿತ್ತು.

ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಅರುಣ್ ರಂಗರಾಜನ್ ಅವರು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಲಕ್ಷ್ಮಣ ಬಿ. ನಿಂಬರಗಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ 2019ರ ಮಾರ್ಚ್ 20ರಂದು ಅಧಿಕಾರ ಸ್ವೀಕರಿಸಿದರು.‌ ಅಷ್ಟೊತ್ತಿಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿತ್ತು.‌ ಕೇವಲ ಚುನಾವಣಾ ಕಾರ್ಯದ ನಿಮಿತ್ತ ಅವರನ್ನು ನೇಮಿಸಲಾಗಿದೆ ಎನ್ನಲಾಗಿತ್ತು. ಜಿಲ್ಲೆಯಲ್ಲಿ ಕೇವಲ ನಾಲ್ಕು ತಿಂಗಳು, ಎಂಟು ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸಿದ್ದರು.

ಮೈತ್ರಿಕೂಟ ಸರ್ಕಾರದ ಪತನವಾಗೋ ಮುನ್ಸೂಚನೆ ಹಿನ್ನೆಲೆಯಲ್ಲಿ ಲಕ್ಷ್ಮಣ ನಿಂಬರಗಿ ಅವರನ್ನು ರಾಜ್ಯ ಸರ್ಕಾರ ಏಕಾಏಕಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿತ್ತು. ಈಗ ಎಸ್ಪಿ ಸಿ.ಕೆ.ಬಾಬಾ ಅವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕಗೊಳಿಸಿ ಕೇವಲ‌ ಎಂಟು ದಿನಗಳಾಗಿದೆ.

ಇದೀಗ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ರಾಜಕೀಯ ಸ್ಥಿತ್ಯಂತರದ ಅನುಗುಣವಾಗಿ ತಮಗಿಷ್ಟವಾದ ಅಧಿಕಾರಿಗಳನ್ನು ವರ್ಗಾಯಿಸಿಕೊಳ್ಳುವ ಸಂಸ್ಕೃತಿ ಆಯಾ ರಾಜಕೀಯ ಪಕ್ಷಗಳಲ್ಲಿದೆ. ಕೇವಲ ಹದಿನಾಲ್ಕು ತಿಂಗಳಲ್ಲಿ ಮೂವರು ಎಸ್ಪಿಗಳನ್ನು ಕಂಡ ಗಣಿನಾಡಿನ ಜನರು ಇದೀಗ ಬದಲಾದ ಸರ್ಕಾರದಲ್ಲೂ ಇನ್ನೆಷ್ಟು ಅಧಿಕಾರಿಗಳ ವರ್ಗಾವಣೆಯಾಗುತ್ತೋ ಎಂಬುದನ್ನು ಕಾದು ನೋಡುವಂತಾಗಿದೆ.

ಬಳ್ಳಾರಿ: ದಕ್ಷ - ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದ ಆರ್.ಚೇತನ್ ಅವರು ಪಕ್ಕದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡ ಬಳಿಕ ಗಣಿನಾಡಿಗೆ ವರ್ಷದಲ್ಲೇ ಮೂವರು ಎಸ್​ಪಿಗಳನ್ನ ಬದಲಿಸುವ ಮೂಲಕ ರಾಜ್ಯದ ಮೈತ್ರಿಕೂಟ ಸರ್ಕಾರ ವಿಶೇಷ ಗಮನ ಸೆಳೆದಿತ್ತು.

ವರ್ಷದಲ್ಲೇ ಮೂವರು ಎಸ್ಪಿಗಳು ಬದಲು

ಹಾಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಆರ್.ಚೇತನ್ ಅವರು ಗಣಿನಾಡು ಬಳ್ಳಾರಿಯಿಂದ ವರ್ಗಾವಣೆಗೊಂಡ ಬಳಿಕ 2018ರ ಮಾರ್ಚ್ 16ರಂದು ಅರುಣ್ ರಂಗರಾಜನ್ ಅವರು ಎಸ್​ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡ ಮಾರನೇ ದಿನ ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ರೌಡಿಗಳ ಪೆರೇಡ್ ನಡೆಸಿ, ತಮ್ಮ ಶಿಸ್ತುಬದ್ಧ ಅಧಿಕಾರವನ್ನು ಪ್ರದರ್ಶಿಸಿದ್ದರು.

ಆ ಬಳಿಕ ಹಾಲಿ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಲೋಕಸಭಾ ಉಪ ಚುನಾವಣೆ ಎದುರಾಯಿತು. ಉಪ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾದ ಅವರನ್ನ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ವರ್ಗಾವಣೆಗೊಳಿಸಿ ಕಾರ್ಯ ವ್ಯಾಪ್ತಿಯ ಸ್ಥಳ ತೋರಿಸದೆ 2019ರ ಮಾರ್ಚ್ 18ರಂದು ಏಕಾಏಕಿ ವರ್ಗಾವಣೆ ಮಾಡಿತ್ತು.

ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಅರುಣ್ ರಂಗರಾಜನ್ ಅವರು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಲಕ್ಷ್ಮಣ ಬಿ. ನಿಂಬರಗಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ 2019ರ ಮಾರ್ಚ್ 20ರಂದು ಅಧಿಕಾರ ಸ್ವೀಕರಿಸಿದರು.‌ ಅಷ್ಟೊತ್ತಿಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿತ್ತು.‌ ಕೇವಲ ಚುನಾವಣಾ ಕಾರ್ಯದ ನಿಮಿತ್ತ ಅವರನ್ನು ನೇಮಿಸಲಾಗಿದೆ ಎನ್ನಲಾಗಿತ್ತು. ಜಿಲ್ಲೆಯಲ್ಲಿ ಕೇವಲ ನಾಲ್ಕು ತಿಂಗಳು, ಎಂಟು ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸಿದ್ದರು.

ಮೈತ್ರಿಕೂಟ ಸರ್ಕಾರದ ಪತನವಾಗೋ ಮುನ್ಸೂಚನೆ ಹಿನ್ನೆಲೆಯಲ್ಲಿ ಲಕ್ಷ್ಮಣ ನಿಂಬರಗಿ ಅವರನ್ನು ರಾಜ್ಯ ಸರ್ಕಾರ ಏಕಾಏಕಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿತ್ತು. ಈಗ ಎಸ್ಪಿ ಸಿ.ಕೆ.ಬಾಬಾ ಅವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕಗೊಳಿಸಿ ಕೇವಲ‌ ಎಂಟು ದಿನಗಳಾಗಿದೆ.

ಇದೀಗ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ರಾಜಕೀಯ ಸ್ಥಿತ್ಯಂತರದ ಅನುಗುಣವಾಗಿ ತಮಗಿಷ್ಟವಾದ ಅಧಿಕಾರಿಗಳನ್ನು ವರ್ಗಾಯಿಸಿಕೊಳ್ಳುವ ಸಂಸ್ಕೃತಿ ಆಯಾ ರಾಜಕೀಯ ಪಕ್ಷಗಳಲ್ಲಿದೆ. ಕೇವಲ ಹದಿನಾಲ್ಕು ತಿಂಗಳಲ್ಲಿ ಮೂವರು ಎಸ್ಪಿಗಳನ್ನು ಕಂಡ ಗಣಿನಾಡಿನ ಜನರು ಇದೀಗ ಬದಲಾದ ಸರ್ಕಾರದಲ್ಲೂ ಇನ್ನೆಷ್ಟು ಅಧಿಕಾರಿಗಳ ವರ್ಗಾವಣೆಯಾಗುತ್ತೋ ಎಂಬುದನ್ನು ಕಾದು ನೋಡುವಂತಾಗಿದೆ.

Intro:ಗಣಿನಾಡಿಗೆ ವರ್ಷದಲ್ಲೇ ಮೂವರು ಎಸ್ಪಿಗಳು ಬದಲು!
ಬಳ್ಳಾರಿ: ದಕ್ಷ - ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರು ವಾಸಿಯಾಗಿದ್ದ ಆರ್.ಚೇತನ್ ಅವರು ಪಕ್ಕದ ದಾವಣಗೆರೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡ
ಬಳಿಕ ಗಣಿನಾಡಿಗೆ ವರ್ಷದಲ್ಲೇ ಮೂವರು ಎಸ್ಪಿಗಳು ಬದಲಿಸುವ ಮುಖೇನ ರಾಜ್ಯದ ಮೈತ್ರಿಕೂಟ ಸರ್ಕಾರ ವಿಶೇಷ ಗಮನ ಸೆಳೆದಿತ್ತು.
ಹಾಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಆರ್.ಚೇತನ್ ಅವರು ಗಣಿನಾಡು ಬಳ್ಳಾರಿಯಿಂದ ವರ್ಗಾವಣೆ ಗೊಂಡ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅರುಣ್ ರಂಗರಾಜನ್ ಅಧಿಕಾರ ಸ್ವೀಕರಿಸಿದ್ದಾರೆ.
2018ರ ಮಾರ್ಚ್ 16 ತಾರೀಖಿನಂದು ಅರುಣ್ ರಂಗರಾಜನ್ ಅವರು ಎಸ್ಪಿಯಾಗಿ ಅಧಿಕಾರವಹಿಸಿಕೊಂಡರು. ಅಧಿಕಾರವಹಿಸಿ ಕೊಂಡ ಮಾರನೇ ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ರೌಡಿಗಳ ಪೆರೇಡ್ ನಡೆಸಿದ್ದರು. ರೌಡಿಗಳಿಗೆ ಲಾಠಿ ರುಚಿ ತೋರಿಸಿ ತಮ್ಮ ಶಿಸ್ತುಬದ್ಧ ಅಧಿಕಾರವನ್ನು ಪ್ರದರ್ಶಿಸಿದ್ದರು. ಆ ಬಳಿಕ, ಹಾಲಿ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಲೋಕ
ಸಭಾ ಉಪ ಚುನಾವಣೆ ಎದುರಾಯಿತು. ಉಪಚುನಾವಣೆಯಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾದ ಅವರು, ಲೋಕಸಭಾ ಸಾರ್ವತ್ರಿಕ ಚುನಾವಣೆಯಷ್ಟೋತ್ತಿಗಾಗಲೇ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಕಾರ್ಯ
ವ್ಯಾಪ್ತಿಯ ಸ್ಥಳವನ್ನು ತೋರಿಸದೇ 2019ರ ಮಾರ್ಚ್ 18ರಂದು ಎಕಾಏಕಿ ವರ್ಗಾವಣೆ ಮಾಡಿತ್ತು. ಕೇವಲ ಒಂದುವರ್ಷದ ಅವಧಿಗೆ ಮಾತ್ರ ಅರುಣ್ ರಂಗರಾಜನ್ ಅವರು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಆ ಬಳಿಕ ಲಕ್ಷ್ಮಣ ಬಿ.ನಿಂಬರಗಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ 2019ರ ಮಾರ್ಚ್ 20ರಂದು ಅಧಿಕಾರ ಸ್ವೀಕರಿಸಿದರು.‌ ಅಷ್ಟೋತ್ತಿಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿತ್ತು.‌ ಕೇವಲ ಚುನಾವಣಾ ಕಾರ್ಯದ ನಿಮಿತ್ತ ಅವರನ್ನು ನೇಮಿಸಲಾಗಿದೆ ಎನ್ನಲಾಗಿತ್ತು. ಆದರೆ, ಈ ಜಿಲ್ಲೆಯಲ್ಲಿ ಕೇವಲ ನಾಲ್ಕು ತಿಂಗಳು ಎಂಟು ದಿನಗಳಕಾಲ ಕರ್ತವ್ಯ ನಿರ್ವಹಿಸಿದರು. Body:ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರೂ ಕೂಡ ಶ್ರಮಿಸಿದ್ದರು. ಮೈತ್ರಿಕೂಟ ಸರ್ಕಾರದ ಪತನವಾಗೋ ಮುನ್ಸೂಚನೆ ಹಿನ್ನಲೆಯಲ್ಲಿ ಲಕ್ಷ್ಮಣ ನಿಂಬರಗಿ ಅವರನ್ನು ರಾಜ್ಯ ಸರ್ಕಾರ ಎಕಾಏಕಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯನ್ನಾಗಿ ವರ್ಗಾವಣೆ ಮಾಡಲಾಯಿತು. ಅಂದರೆ 2019ರ ಜುಲೈ 18 ರಂದು ಅವರನ್ನು ವರ್ಗಾವಣೆಗೊಳಿಸಿತು.
ಹಾಲಿ ಎಸ್ಪಿ ಸಿ.ಕೆ.ಬಾಬಾ ಅವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕಗೊಳಿಸಿ ಕೇವಲ‌ ಎಂಟೇ ದಿನಗಳಾಗಿದ್ದು, ಮೈತ್ರಿಕೂಟ ಸರ್ಕಾರ ಪತನವಾಗಿ ವಾರ ಕಳೆದವು. ಇದೀಗ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ. ರಾಜಕೀಯ ಸ್ಥಿತ್ಯಂತರದ ಅನುಗುಣವಾಗಿ ತಮಗಿಷ್ಟ ವಾದ ಅಧಿಕಾರಿಗಳನ್ನು ವರ್ಗಾಯಿಸಿಕೊಳ್ಳುವ ಸಂಸ್ಕೃತಿ ಆಯಾ ರಾಜಕೀಯ ಪಕ್ಷಗಳಲ್ಲಿದೆ. ಕೇವಲ ಹದಿನಾಲ್ಕು ತಿಂಗಳಲ್ಲಿ ಮೂವರು ಎಸ್ಪಿಗಳನ್ನು ಕಂಡ ಗಣಿನಾಡಿನ ಜನರು ಇದೀಗ ಬದಲಾದ ಸರ್ಕಾರದಲ್ಲೂ ಇನ್ನೇಷ್ಟು ಅಧಿಕಾರಿಗಳ ವರ್ಗಾವರ್ಗಿ ನೋಡಬೇಕಾಗುತ್ತೆ ಎಂಬುದು ಕಾದುನೋಡಬೇಕಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.
Conclusion:KN_BLY_2_THREE_SP_TRANSFERRED_ONE_YEAR_7203310

KN_BLY_2a_THREE_SP_TRANSFERRED_ONE_YEAR_7203310

KN_BLY_2b_THREE_SP_TRANSFERRED_ONE_YEAR_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.