ETV Bharat / state

ದೌರ್ಜನ್ಯ, ಅನುಚಿತ ವರ್ತನೆ ಆರೋಪ: ಮಂಗಳಮುಖಿಯರಿಗೆ ಪೊಲೀಸರಿಂದ ಖಡಕ್​ ವಾರ್ನಿಂಗ್ - BALLARI BRUCEPET POLICE WARNING OF HIZIDA'S

ಬಳ್ಳಾರಿ ಪೊಲೀಸರು ಮಂಗಳಮುಖಿಯರಿಗೆ ಖಡಕ್​ ವಾರ್ನಿಂಗ್​ ನೀಡಿದ್ದಾರೆ. ಹೊಟೇಲ್ ಮತ್ತು ಅಂಗಡಿಗಳಲ್ಲಿ ಗ್ರಾಹಕರು ಮತ್ತು ಮಾಲೀಕರ ಮೇಲೆ ದೌರ್ಜನ್ಯವೆಸಗಿ ಅನುಚಿತವಾಗಿ ವರ್ತಿಸುತ್ತಾರೆ ಎಂಬ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಮಂಗಳಮುಖಿಯರನ್ನು ಠಾಣೆಗೆ ಕರೆಯಿಸಿ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.

ಮಂಗಳಮುಖಿಯರಿಗೆ ಪೊಲೀಸರಿಂದ ವಾರ್ನಿಂಗ್
author img

By

Published : May 26, 2019, 10:13 AM IST

ಬಳ್ಳಾರಿ: ನಗರದ ಹೊಟೇಲ್ ಮತ್ತು ಅಂಗಡಿಗಳಲ್ಲಿ ಮಂಗಳಮುಖಿಯರ ಕಾಟ ಹೆಚ್ಚಾಗಿದೆ ಎಂಬ ದೂರು ಕೇಳಿಬಂದ ಹಿನ್ನೆಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ದುಡ್ಡಿಗಾಗಿ ದೌರ್ಜನ್ಯವೆಸಗುವುದು ಮತ್ತು ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಜನರು ನೀಡಿರುವ ದೂರಿನನ್ವಯ ಇಲ್ಲಿನ ಬ್ರೂಸ್‌ಪೇಟೆ ಠಾಣೆ ಪೊಲೀಸರು ಮಂಗಳಮುಖಿಯರನ್ನ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ.

ಮಂಗಳಮುಖಿಯರು ಅಂಗಡಿಗಳಿಗೆ ಬಂದಾಗ ಅವರು ಕೇಳಿದಷ್ಟು ಹಣ ನೀಡಬೇಕು, ಇಲ್ಲದಿದ್ದರೆ ಕೌಂಟರ್ ಬಳಿ ಹೋಗಿ ದಾಂಧಲೆ ಮಾಡುತ್ತಾರೆ. ಅವಾಚ್ಯ ಪದಗಳಿಂದ ನಿಂದಿಸುವುದಲ್ಲದೇ ಕೈಮಾಡಲು ಮುಂದಾಗುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಮಂಗಳಮುಖಿಯರ ಕಾಟದಿಂದ ವ್ಯಾಪಾರ ಮಾಡುವುದೇ ಕಷ್ಟವಾಗಿದೆ ಎಂದು ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಸಾರ್ವಜನಿಕರು ಸಹ ಮಂಗಳಮುಖಿಯರ ಕಾಟಕ್ಕೆ ಬೇಸತ್ತು ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಈ ಹಿನ್ನೆಲೆಯಲ್ಲಿ ಬ್ರೂಸ್​ಪೇಟೆ ಠಾಣೆಯ ಸಿಪಿಐ ಕಾಳೀಕೃಷ್ಣ ಸುಮಾರು 35 ರಿಂದ 40 ಮಂಗಳಮುಖಿಯರನ್ನು ಠಾಣೆಗೆ ಕರೆಯಿಸಿ ವ್ಯಾಪಾರಿಗಳಿಗೆ ತೊಂದರೆ ಕೊಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಅಂಗಡಿಗಳತ್ತ ತೆರಳದೇ ಕಷ್ಟಪಟ್ಟು ದುಡಿದು ಬದುಕು ಸಾಗಿಸಿ ಎಂದು ತಾಕೀತು ಮಾಡಿದ್ದಾರೆ.

ಬಳ್ಳಾರಿ: ನಗರದ ಹೊಟೇಲ್ ಮತ್ತು ಅಂಗಡಿಗಳಲ್ಲಿ ಮಂಗಳಮುಖಿಯರ ಕಾಟ ಹೆಚ್ಚಾಗಿದೆ ಎಂಬ ದೂರು ಕೇಳಿಬಂದ ಹಿನ್ನೆಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ದುಡ್ಡಿಗಾಗಿ ದೌರ್ಜನ್ಯವೆಸಗುವುದು ಮತ್ತು ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಜನರು ನೀಡಿರುವ ದೂರಿನನ್ವಯ ಇಲ್ಲಿನ ಬ್ರೂಸ್‌ಪೇಟೆ ಠಾಣೆ ಪೊಲೀಸರು ಮಂಗಳಮುಖಿಯರನ್ನ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ.

ಮಂಗಳಮುಖಿಯರು ಅಂಗಡಿಗಳಿಗೆ ಬಂದಾಗ ಅವರು ಕೇಳಿದಷ್ಟು ಹಣ ನೀಡಬೇಕು, ಇಲ್ಲದಿದ್ದರೆ ಕೌಂಟರ್ ಬಳಿ ಹೋಗಿ ದಾಂಧಲೆ ಮಾಡುತ್ತಾರೆ. ಅವಾಚ್ಯ ಪದಗಳಿಂದ ನಿಂದಿಸುವುದಲ್ಲದೇ ಕೈಮಾಡಲು ಮುಂದಾಗುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಮಂಗಳಮುಖಿಯರ ಕಾಟದಿಂದ ವ್ಯಾಪಾರ ಮಾಡುವುದೇ ಕಷ್ಟವಾಗಿದೆ ಎಂದು ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಸಾರ್ವಜನಿಕರು ಸಹ ಮಂಗಳಮುಖಿಯರ ಕಾಟಕ್ಕೆ ಬೇಸತ್ತು ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಈ ಹಿನ್ನೆಲೆಯಲ್ಲಿ ಬ್ರೂಸ್​ಪೇಟೆ ಠಾಣೆಯ ಸಿಪಿಐ ಕಾಳೀಕೃಷ್ಣ ಸುಮಾರು 35 ರಿಂದ 40 ಮಂಗಳಮುಖಿಯರನ್ನು ಠಾಣೆಗೆ ಕರೆಯಿಸಿ ವ್ಯಾಪಾರಿಗಳಿಗೆ ತೊಂದರೆ ಕೊಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಅಂಗಡಿಗಳತ್ತ ತೆರಳದೇ ಕಷ್ಟಪಟ್ಟು ದುಡಿದು ಬದುಕು ಸಾಗಿಸಿ ಎಂದು ತಾಕೀತು ಮಾಡಿದ್ದಾರೆ.

Intro:ಮಂಗಳಮುಖಿಯರ ದೌರ್ಜನ್ಯ, ಅಶ್ಲೀಲ ವರ್ತನೆ
ಬಳ್ಳಾರಿಯ ಬ್ರೂಸ್ ಪೇಟೆ ಠಾಣೆಯ ಪೊಲೀಸರಿಂದ ಎಚ್ಚರಿಕೆ!
ಬಳ್ಳಾರಿ: ನಗರದ ಹೊಟೇಲ್ ಮತ್ತು ಅಂಗಡಿಗಳಲ್ಲಿ ಮಂಗಳ ಮುಖಿಯರ ದೌರ್ಜನ್ಯ ಮತ್ತು ಅಶ್ಲೀಲ ವರ್ತನೆಗೆ ಮೀತಿ ಮೀರಿದೆ ಎಂದು ಅನೇಕರು ನೀಡಿರುವ ದೂರಿನ್ವಯ ಇಲ್ಲಿನ ಬ್ರೂಸ್‌ಪೇಟೆ ಠಾಣೆ ಪೊಲೀಸರು ನಿನ್ನೆಯ ದಿನ ಮಂಗಳ ಮುಖಿಯರನ್ನ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ.
ಮಂಗಳಮುಖಿಯರು ಅಂಗಡಿಗಳಿಗೆ ಬಂದು ಕೇಳಿದಷ್ಟು ಹಣ ನೀಡಬೇಕು. ಇಲ್ಲದಿದ್ದರೆ ಕೌಂಟರ್ ಬಳಿ ಹೋಗಿ ದಾಂಧಲೆ ಮಾಡುತ್ತಾರೆ. ಅಶ್ಲೀಲವಾಗಿ ನಿಂದಿಸುವುದಲ್ಲದೇ ಕೇಳದಿದ್ದರೆ ಹೊಡೆಯಲು ಬರುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಮಂಗಳಮುಖಿಯರ ಕಾಟದಿಂದ ವ್ಯಾಪಾರ ಮಾಡುವುದು ಕಷ್ಟವಾಗಿಬಿಟ್ಟಿದೆ ಎಂದು ವ್ಯಾಪಾರಿಗಳು ದೂರು ಸಲ್ಲಿಸಿದ್ದರು.
Body:ಅಲ್ಲದೇ ಸಾರ್ವಜನಿಕರು ಮತ್ತು ವ್ಯಾಪಾರಿಗಳು ಮಂಗಳಮುಖಿಯರ ಕಾಟಕ್ಕೆ ಬೇಸತ್ತು ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಈ ಹಿನ್ನೆಲೆಯಲ್ಲಿ ಠಾಣೆಯ ಸಿಪಿಐ ಕಾಳೀಕೃಷ್ಣ ಸುಮಾರು 35ರಿಂದ 40 ಮಂಗಳಮುಖಿ ಯರನ್ನು ಠಾಣೆಗೆ ಕರೆಸಿ ವ್ಯಾಪಾರಿಗಳಿಗೆ ತೊಂದರೆ ಕೊಡದಂತೆ ಎಚ್ಚಿಕೆ ನೀಡಿದ್ದಾರೆ. ಅಂಗಡಿಗಳತ್ತ ತೆರಳದೇ ಕಷ್ಟಪಟ್ಟು ದುಡಿದು ಬದುಕು ಸಾಗಿಸಿ ಎಂದು ತಾಕೀತು ಮಾಡಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_26_BRUCEPET_POLICE_WARNING_OF_HIZIDA'S_7203310

KN_BLY_01a_26_BRUCEPET_POLICE_WARNING_OF_HIZIDA'S_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.