ETV Bharat / state

ಸರ್ಕಾರಿ ನೌಕರರ ಸಂಘದ ಚಟುವಟಿಕೆ ಹೆಸರಲ್ಲಿ ನೌಕರಿಗೆ ಗೈರಾಗುವ ಅವಕಾಶವಿಲ್ಲ: ಸಿ. ಎಸ್. ಷಡಕ್ಷರಿ - ರಾಜ್ಯ ಸರ್ಕಾರಿ ನೌಕರರ ಸಂಘ ನ್ಯೂಸ್​

ಸರ್ಕಾರಿ ನೌಕರರ ಸಂಘದ ಚಟುವಟಿಕೆ ಹೆಸರಲ್ಲಿ ನೌಕರಿಗೆ ಗೈರಾಗುವ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಹೇಳಿದ್ದಾರೆ.

ಸರ್ಕಾರಿ ನೌಕರರ ಸಂಘದ ಚಟುವಟಿಕೆ ಹೆಸರಲ್ಲಿ ನೌಕರಿಗೆ ಗೈರಾಗುವ ಅವಕಾಶವಿಲ್ಲ: ಸಿ. ಎಸ್. ಷಡಕ್ಷರಿ
author img

By

Published : Nov 8, 2019, 7:56 PM IST

ಬಳ್ಳಾರಿ: ಸರ್ಕಾರಿ ನೌಕರರ ಸಂಘದ ಚಟುವಟಿಕೆ ಹೆಸರಲ್ಲಿ ನೌಕರಿಗೆ ಗೈರಾಗುವ ಅವಕಾಶವಿಲ್ಲ.‌ ಈ ನಿಯಮ ಎಲ್ಲರಿಗೂ ಅನ್ವಯಿಸುತ್ತೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಹೇಳಿದ್ದಾರೆ.

ಸರ್ಕಾರಿ ನೌಕರರ ಸಂಘದ ಚಟುವಟಿಕೆ ಹೆಸರಲ್ಲಿ ನೌಕರಿಗೆ ಗೈರಾಗುವ ಅವಕಾಶವಿಲ್ಲ: ಸಿ. ಎಸ್. ಷಡಕ್ಷರಿ

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ‌ ಘಟಕದ ಕಚೇರಿಯಲ್ಲಿಂದು ಮಾತನಾಡಿದ ಅವರು, ಸರ್ಕಾರಿ ನೌಕರರನ್ನು ನಿಯಂತ್ರಿಸಲು ಆಯಾ ಇಲಾಖೆಗಳ ಮೇಲಾಧಿಕಾರಿಗಳಿದ್ದಾರೆ.‌ ಸಂಘದ ಚಟುವಟಿಕೆ ಜೊತೆಜೊತೆಗೆ ತಮ್ಮ‌ ನೌಕರಿಯನ್ನೂ ಕೂಡ ಸಮರ್ಥವಾಗಿ ನಿಭಾಯಿಸಬೇಕೆಂದರು.

ಸರ್ಕಾರಿ ಅಧಿಕಾರಿಗಳ ವಿರುದ್ಧ ಅನಾಮಧೇಯ ದೂರು ಬಂದರೆ ಅವುಗಳನ್ನು ಪರಿಶೀಲಿಸಿ ಪೂರಕ ಮಾಹಿತಿ ಸಿಕ್ಕ ನಂತರ ಕ್ರಮ ಕೈಗೊಳ್ಳಬೇಕು. ಸಂಘ ಐದು ಲಕ್ಷ ನೌಕರರ ನಾನಾ ಬೇಡಿಕೆ ಮತ್ತು ಹಿತ ಕಾಪಾಡಲು ಅವಿರತವಾಗಿ ಶ್ರಮಿಸುತ್ತಿದೆ. ಸರ್ಕಾರದ ಸಲಹೆ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾ, ಸಂಘದಿಂದಲೂ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿನ ಸಂಘದ ಎಲ್ಲ ಕಚೇರಿಗಳಲ್ಲಿ ಕಂಪ್ಯೂಟರೀಕರಣಕ್ಕೆ ಸರ್ಕಾರ ರೂ‌. 3 ಕೋಟಿ ಅನುದಾನ ನೀಡಿದೆ. ಈಗಾಗಲೇ ಕೆಲಸಕ್ಕೆ ಚಾಲನೆ ನೀಡಲಾಗಿದೆ‌. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿಯಿದ್ದು, ಶೀಘ್ರ ಭರ್ತಿಗೆ ಒತ್ತಾಯಿಸಿದ್ದೇವೆ. 6 ಕೋಟಿಗೂ ಅಧಿಕ ಜನಸಂಖ್ಯೆಗೆ ತಕ್ಕ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಈಗಿರುವ ಅಧಿಕಾರಿಗಳು ಮೂರ್ನಾಲ್ಕು ಕಡೆ ಕೆಲಸ ಮಾಡುವಂತಾಗಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ಮಾಡಿ, ದೂರದ ಊರುಗಳಿಗೆ ವರ್ಗಾಯಿಸುವ ಬದಲು 50 ಕಿ.ಮೀ. ವ್ಯಾಪ್ತಿಯಲ್ಲಿ ಬಳ್ಳಾರಿ ನಗರದಿಂದ ಹಳ್ಳಿಗೆ, ಹಳ್ಳಿಯಿಂದ ನಗರಕ್ಕೆ ವರ್ಗಾಯಿಸಬೇಕು ಎಂದು ಹೇಳಿದ್ರು.

ಶತಮಾನೋತ್ಸವ: 2020 ಮೇ ತಿಂಗಳಿಗೆ ಸಂಘ ಅಸ್ತಿತ್ವಕ್ಕೆ ಬಂದು ನೂರು ವರ್ಷಗಳಾಗಿದ್ದು, ಶತಮಾನೋತ್ಸವ ಸಮಾರಂಭ ಆಚರಿಸಲಾಗುತ್ತದೆ. ಈ ಹಿನ್ನೆಲೆ ಭವನಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕು ಎಂದು ಷಡಕ್ಷರಿ ಕೋರಿದರು.

ಬಳ್ಳಾರಿ: ಸರ್ಕಾರಿ ನೌಕರರ ಸಂಘದ ಚಟುವಟಿಕೆ ಹೆಸರಲ್ಲಿ ನೌಕರಿಗೆ ಗೈರಾಗುವ ಅವಕಾಶವಿಲ್ಲ.‌ ಈ ನಿಯಮ ಎಲ್ಲರಿಗೂ ಅನ್ವಯಿಸುತ್ತೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಹೇಳಿದ್ದಾರೆ.

ಸರ್ಕಾರಿ ನೌಕರರ ಸಂಘದ ಚಟುವಟಿಕೆ ಹೆಸರಲ್ಲಿ ನೌಕರಿಗೆ ಗೈರಾಗುವ ಅವಕಾಶವಿಲ್ಲ: ಸಿ. ಎಸ್. ಷಡಕ್ಷರಿ

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ‌ ಘಟಕದ ಕಚೇರಿಯಲ್ಲಿಂದು ಮಾತನಾಡಿದ ಅವರು, ಸರ್ಕಾರಿ ನೌಕರರನ್ನು ನಿಯಂತ್ರಿಸಲು ಆಯಾ ಇಲಾಖೆಗಳ ಮೇಲಾಧಿಕಾರಿಗಳಿದ್ದಾರೆ.‌ ಸಂಘದ ಚಟುವಟಿಕೆ ಜೊತೆಜೊತೆಗೆ ತಮ್ಮ‌ ನೌಕರಿಯನ್ನೂ ಕೂಡ ಸಮರ್ಥವಾಗಿ ನಿಭಾಯಿಸಬೇಕೆಂದರು.

ಸರ್ಕಾರಿ ಅಧಿಕಾರಿಗಳ ವಿರುದ್ಧ ಅನಾಮಧೇಯ ದೂರು ಬಂದರೆ ಅವುಗಳನ್ನು ಪರಿಶೀಲಿಸಿ ಪೂರಕ ಮಾಹಿತಿ ಸಿಕ್ಕ ನಂತರ ಕ್ರಮ ಕೈಗೊಳ್ಳಬೇಕು. ಸಂಘ ಐದು ಲಕ್ಷ ನೌಕರರ ನಾನಾ ಬೇಡಿಕೆ ಮತ್ತು ಹಿತ ಕಾಪಾಡಲು ಅವಿರತವಾಗಿ ಶ್ರಮಿಸುತ್ತಿದೆ. ಸರ್ಕಾರದ ಸಲಹೆ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾ, ಸಂಘದಿಂದಲೂ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿನ ಸಂಘದ ಎಲ್ಲ ಕಚೇರಿಗಳಲ್ಲಿ ಕಂಪ್ಯೂಟರೀಕರಣಕ್ಕೆ ಸರ್ಕಾರ ರೂ‌. 3 ಕೋಟಿ ಅನುದಾನ ನೀಡಿದೆ. ಈಗಾಗಲೇ ಕೆಲಸಕ್ಕೆ ಚಾಲನೆ ನೀಡಲಾಗಿದೆ‌. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿಯಿದ್ದು, ಶೀಘ್ರ ಭರ್ತಿಗೆ ಒತ್ತಾಯಿಸಿದ್ದೇವೆ. 6 ಕೋಟಿಗೂ ಅಧಿಕ ಜನಸಂಖ್ಯೆಗೆ ತಕ್ಕ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಈಗಿರುವ ಅಧಿಕಾರಿಗಳು ಮೂರ್ನಾಲ್ಕು ಕಡೆ ಕೆಲಸ ಮಾಡುವಂತಾಗಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ಮಾಡಿ, ದೂರದ ಊರುಗಳಿಗೆ ವರ್ಗಾಯಿಸುವ ಬದಲು 50 ಕಿ.ಮೀ. ವ್ಯಾಪ್ತಿಯಲ್ಲಿ ಬಳ್ಳಾರಿ ನಗರದಿಂದ ಹಳ್ಳಿಗೆ, ಹಳ್ಳಿಯಿಂದ ನಗರಕ್ಕೆ ವರ್ಗಾಯಿಸಬೇಕು ಎಂದು ಹೇಳಿದ್ರು.

ಶತಮಾನೋತ್ಸವ: 2020 ಮೇ ತಿಂಗಳಿಗೆ ಸಂಘ ಅಸ್ತಿತ್ವಕ್ಕೆ ಬಂದು ನೂರು ವರ್ಷಗಳಾಗಿದ್ದು, ಶತಮಾನೋತ್ಸವ ಸಮಾರಂಭ ಆಚರಿಸಲಾಗುತ್ತದೆ. ಈ ಹಿನ್ನೆಲೆ ಭವನಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕು ಎಂದು ಷಡಕ್ಷರಿ ಕೋರಿದರು.

Intro:ಸರ್ಕಾರಿ ನೌಕರರ ಸಂಘದ ಚಟುವಟಿಕೆ ಹೆಸರಲ್ಲಿ ನೌಕರಿಗೆ ಗೈರಾಗುವ ಅವಕಾಶವಿಲ್ಲ: ಸಿ.ಎಸ್.ಷಡಕ್ಷರಿ
ಬಳ್ಳಾರಿ: ಸರ್ಕಾರಿ ನೌಕರರ ಸಂಘದ ಚಟುವಟಿಕೆ ಹೆಸರಲ್ಲಿ ನೌಕರಿಗೆ ಗೈರಾಗುವ ಅವಕಾಶವಿಲ್ಲ.‌ ಅದು ನನಗೊಬ್ಬನಿಗೆ
ಮಾತ್ರ ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿ ಕೊಳ್ಳಲು ಅವಕಾಶವಿದೆಯಾದ್ರೂ ಜಿಲ್ಲಾ ಘಟಕಗಳಲ್ಲಿ ಈ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ
ಅಧ್ಯಕ್ಷ ಸಿ.ಎಸ್.ಷಡಕ್ಷರಿ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ‌ ಘಟಕದ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಆ ರೀತಿಯಾಗಿ ನಡೆದುಕೊಂಡು ನೌಕರರನ್ನು ನಿಯಂತ್ರಿಸಲು ಆಯಾ ಇಲಾಖೆಗಳ ಮೇಲಾಧಿಕಾರಿಗಳಿದ್ದಾರೆ.‌ ಅದೇನ್ ಕ್ರಮ ತೆಗೆದುಕೊಳ್ಳಬೇಕು. ಅವ್ರು ಕೈಗೊಳ್ಳುತ್ತಾರೆ. ಅದಕ್ಕೂ ನಮಗೂ‌ ಸಂಬಂಧವೇ‌ ಇಲ್ಲ. ಸಂಘದ ಚಟುವಟಿಕೆ ಜೊತೆಜೊತೆಗೆ ತಮ್ಮ‌ ನೌಕರಿಯನ್ನೂ ಕೂಡ ಸಮರ್ಥವಾಗಿ ನಿಭಾಯಿಸಬೇಕೆಂದರು.
ಸರ್ಕಾರಿ ಅಧಿಕಾರಿಗಳ ವಿರುದ್ಧ ಅನಾಮಧೇಯ ದೂರು ಬಂದರೆ ಅವುಗಳನ್ನು ಪರಿಶೀಲಿಸಿ, ಪೂರಕ ಮಾಹಿತಿ ಸಿಕ್ಕ ನಂತರ ಕ್ರಮ ಕೈಗೊಳ್ಳಬೇಕು. ಸಂಘ ಐದು ಲಕ್ಷ ನೌಕರರ ನಾನಾ ಬೇಡಿಕೆ ಮತ್ತು ಹಿತಕಾಡಲು ಅವಿರತವಾಗಿ ಶ್ರಮಿಸುತ್ತಿದೆ. ಸರ್ಕಾರದ ಸಲಹೆ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾ, ಸಂಘದಿಂದಲೂ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡುತ್ತಿದ್ದೇ
ವೆ ಎಂದರು.
ರಾಜ್ಯದಲ್ಲಿನ ಸಂಘದ ಎಲ್ಲ ಕಚೇರಿಗಳಲ್ಲಿ ಕಂಪ್ಯೂಟರೀಕರಣಕ್ಕೆ ಸರ್ಕಾರ ರೂ‌. 3ಕೋಟಿ ಅನುದಾನ ನೀಡಿದೆ. ಈಗಾಗಲೇ ಕೆಲಸಕ್ಕೆ ಚಾಲನೆ ನೀಡಲಾಗಿದೆ‌. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿಯಿದ್ದು, ಶೀಘ್ರ ಭರ್ತಿಗೆ ಒತ್ತಾಯಿಸಿದ್ದೇವೆ. 6 ಕೋಟಿಗೂ ಅಧಿಕ ಜನಸಂಖ್ಯೆಗೆ ತಕ್ಕ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಈಗಿರುವ ಅಧಿಕಾರಿಗಳು ಮೂರ್ನಾಲ್ಕು ಕಡೆ ಕೆಲಸ ಮಾಡುವಂತಾಗಿದೆ. ಶಿಕ್ಷಕರ ವರ್ಗಾವಣೆ ಕಾಯಿದೆಗೆ ತಿದ್ದುಪಡಿ ಮಾಡಿ, ದೂರದ ಊರುಗಳಿಗೆ ವರ್ಗಾಯಿಸುವ ಬದಲು 50 ಕಿ.ಮೀ. ವ್ಯಾಪ್ತಿಯಲ್ಕಿ ಬಳ್ಳಾರಿ ನಗರದಿಂದ ಹಳ್ಳಿಗೆ, ಹಳ್ಳಿಯಿಂದ ನಗರಕ್ಕೆ ವರ್ಗಾಯಸಬೇಕು ಎಂದು ಹೇಳಿದರು.
ಶಿಕ್ಷಕರ ಕಡ್ಡಾಯ ವರ್ಗಾವಣೆ ನಿಯಮವನ್ನು ವಿರೋಧಿಸುತ್ತದೆ‌. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸಮನಾಂತರ ಶಿಕ್ಷಕರ ವರ್ಗಾವಣೆ ಕಾಯಿದೆ ಜಾರಿಗೊಳಿಸುವಂತೆ ಮನವಿ‌ ಮಾಡುತ್ತೇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
Body:ನ.30ರಂದು ಸಂಘದಿಂದ ಗಡಿನಾಡ ಕನ್ನಡ ಉತ್ಸವವನ್ನು ಬಾಗಲಕೋಟೆಯಲ್ಲಿ ಆಚರಿಸಲಾಗುವುದು. ಮುಂದಿನ ವರ್ಷದಲ್ಲಿ ಬಳ್ಳಾರಿಯಲ್ಲಿ ಏರ್ಪಡಿಸಲಾಗುವುದು.
ಶತಮಾನೋತ್ಸವ: 2020 ಮೇ ತಿಂಗಳಿಗೆ ಸಂಘ ಅಸ್ತಿತ್ವಕ್ಕೆ ಬಂದು ನೂರು ವರ್ಷಗಳಾಗಿದ್ದು, ಶತಮಾನೋತ್ಸವ ಸಮಾರಂಭ ಆಚರಣೆ ಮಾಡಲಾಗುತ್ತದೆ. ಭವನಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕು ಎಂದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವಾಜಿರಾವ್, ಪದಾಧಿಕಾರಿಗಳಾದ ಎಂ.ಟಿ.ಮಲ್ಲೇಶ, ಎಸ್.ಎಂ.ಭದ್ರಯ್ಯ, ಜಿ.ಕೆ.ರಾಮಕೃಷ್ಣ, ಮಸೀದಿಪುರ ಪಂಪನಗೌಡ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_4_GOVT_EMPLOYEES_ASSOCIATION_PRESS_MEET_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.