ETV Bharat / state

ಜಿಂದಾಲ್​​ ಕಾರ್ಮಿಕನ ನಿಗೂಢ ಸಾವಿನ ಪ್ರಕರಣಕ್ಕೆ ಕರವೇ ಆಕ್ರೋಶ

author img

By

Published : Dec 13, 2019, 9:58 AM IST

ಜಿಂದಾಲ್ ಕಂಪನಿಯಲ್ಲಿ ಡಂಪಿಂಗ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ದುರ್ಗಣ್ಣ ನಿಗೂಢ ಸಾವಿನ ಬಗ್ಗೆ ಕಂಪನಿ ನಿಜಾಂಶವನ್ನು ಹೇಳುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಯುವಶಕ್ತಿ ಘಟಕದ ಪದಾಧಿಕಾರಿಗಳು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು.

ballary
ಜಿಂದಾಲ್ ಕಾರ್ಮಿಕನ ನಿಗೂಢ ಸಾವಿನ ಪ್ರಕರಣಕ್ಕೆ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ: ಜಿಂದಾಲ್ ಕಂಪನಿಯಲ್ಲಿನ (ಜೆಎಸ್ ಡಬ್ಲ್ಯು) 10ನೇ ಎಂ.ಟಿ. ಗೇಟ್ ಕೋಕ್ ಪ್ಲಾಂಟ್ ಒಳಗಡೆ ಡಂಪಿಂಗ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದುರ್ಗಣ್ಣ ನಿಗೂಢ ಸಾವಿನ ಪ್ರಕರಣವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಯುವಶಕ್ತಿ) ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಂದಾಲ್ ಕಾರ್ಮಿಕನ ನಿಗೂಢ ಸಾವಿನ ಪ್ರಕರಣಕ್ಕೆ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಆರ್.ವಿಜಯಕುಮಾರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು‌ ಕೆಲಕಾಲ ಘೋಷಣೆ ಕೂಗಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ಮನವಿಪತ್ರ ಸಲ್ಲಿಸಿದರು.

ದುರ್ಗಣ್ಣ ಅವರ ಸಾವಿನ ಕುರಿತಾಗಿ ಇಂದಿನವರೆಗೂ ಜಿಂದಾಲ್ ಕಂಪನಿಯ ಆಡಳಿತ ಮಂಡಳಿ ಯಾವುದೇ ಮಾಹಿತಿ ನೀಡಲು ಮುಂದಾಗಿಲ್ಲ. ಇದರಿಂದ ಸಂಶಯಗಳು ಹೆಚ್ಚಾಗುತ್ತಿವೆ. ದುರ್ಗಣ್ಣ ಅವರ ಸಾವು ಬಹಳ‌ ನಿಗೂಢತೆಯಿಂದ ಕೂಡಿದ್ದು, ಜಿಲ್ಲಾಡಳಿತ ಮಧ್ಯೆಪ್ರವೇಶಿಸಿ ಕಾರ್ಮಿಕ ದುರ್ಗಣ್ಣ ಅವರ ಸಾವಿನ‌ ಕುರಿತು ಸೂಕ್ತ ತನಿಖೆ ನಡೆಸಬೇಕು ಹಾಗೂ ಅವಲಂಬಿತರಿಗೆ ಅಗತ್ಯ ಪರಿಹಾರಧನವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

ಬಳ್ಳಾರಿ: ಜಿಂದಾಲ್ ಕಂಪನಿಯಲ್ಲಿನ (ಜೆಎಸ್ ಡಬ್ಲ್ಯು) 10ನೇ ಎಂ.ಟಿ. ಗೇಟ್ ಕೋಕ್ ಪ್ಲಾಂಟ್ ಒಳಗಡೆ ಡಂಪಿಂಗ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದುರ್ಗಣ್ಣ ನಿಗೂಢ ಸಾವಿನ ಪ್ರಕರಣವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಯುವಶಕ್ತಿ) ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಂದಾಲ್ ಕಾರ್ಮಿಕನ ನಿಗೂಢ ಸಾವಿನ ಪ್ರಕರಣಕ್ಕೆ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಆರ್.ವಿಜಯಕುಮಾರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು‌ ಕೆಲಕಾಲ ಘೋಷಣೆ ಕೂಗಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ಮನವಿಪತ್ರ ಸಲ್ಲಿಸಿದರು.

ದುರ್ಗಣ್ಣ ಅವರ ಸಾವಿನ ಕುರಿತಾಗಿ ಇಂದಿನವರೆಗೂ ಜಿಂದಾಲ್ ಕಂಪನಿಯ ಆಡಳಿತ ಮಂಡಳಿ ಯಾವುದೇ ಮಾಹಿತಿ ನೀಡಲು ಮುಂದಾಗಿಲ್ಲ. ಇದರಿಂದ ಸಂಶಯಗಳು ಹೆಚ್ಚಾಗುತ್ತಿವೆ. ದುರ್ಗಣ್ಣ ಅವರ ಸಾವು ಬಹಳ‌ ನಿಗೂಢತೆಯಿಂದ ಕೂಡಿದ್ದು, ಜಿಲ್ಲಾಡಳಿತ ಮಧ್ಯೆಪ್ರವೇಶಿಸಿ ಕಾರ್ಮಿಕ ದುರ್ಗಣ್ಣ ಅವರ ಸಾವಿನ‌ ಕುರಿತು ಸೂಕ್ತ ತನಿಖೆ ನಡೆಸಬೇಕು ಹಾಗೂ ಅವಲಂಬಿತರಿಗೆ ಅಗತ್ಯ ಪರಿಹಾರಧನವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

Intro:ಜಿಂದಾಲ್ ಕಾರ್ಮಿಕನ ನಿಗೂಢ ಸಾವಿನ ಪ್ರಕರಣಕ್ಕೆ ಕರವೇ ಆಕ್ರೋಶ
ಬಳ್ಳಾರಿ: ಜಿಂದಾಲ್ ಕಂಪನಿಯಲ್ಲಿನ (ಜೆಎಸ್ ಡಬ್ಲ್ಯು)
10ನೇ ಎಂ.ಟಿ.ಗೇಟ್ ಕೋಕ್ ಪ್ಲಾಂಟ್ ಒಳಗಡೆ ಡಂಪಿಂಗ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದುರುಗಣ್ಣನವರ ನಿಗೂಢ ಸಾವಿನ ಪ್ರಕರಣವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಯವಶಕ್ತಿ) ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ದ್ದಾರೆ.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಆರ್.ವಿಜಯಕುಮಾರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ‌ ಕೆಲಕಾಲ ಘೋಷಣೆ ಕೂಗಿದ್ರು. ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ಮನವಿಪತ್ರ
ಸಲ್ಲಿಸಿದ್ರು.



Body:ಡಿಸೆಂಬರ್ 5 ರಂದು ರಾತ್ರಿ 9.40 ಕರ್ತವ್ಯಕ್ಕೆ ಹೋದ ದುರುಗಣ್ಣನವರು ಈವರೆಗೂ ಮನೆಗೆ ಬಾರದೆ ನಾಪತ್ತೆ ಯಾಗಿರೋದರಿಂದ ಸಂಬಂಧಿಸಿದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರೂ ಕೂಡ ಇಂದಿನವರೆಗೂ ಜಿಂದಾಲ್ ಕಂಪನಿ
ಯವ್ರು ಈವರೆಗೂ‌‌ ಯಾವುದೇ ಮಾಹಿತಿಯನ್ನು ನೀಡಲು ಮುಂದಾಗಿಲ್ಲ. ಹೀಗಾಗಿ, ದುರುಗಣ್ಣನವ್ರ ಸಾವು ಬಹಳ‌ ನಿಗೂಢತೆಯಿಂದ ಕೂಡಿದ್ದು, ಜಿಲ್ಲಾಡಳಿತ ಮಧ್ಯೆಪ್ರವೇಶಿಸಿ ದುರುಗಣ್ಣನವ್ರ ನಿಗೂಢ ಸಾವಿನ‌ ಕುರಿತು ಸೂಕ್ತ ತನಿಖೆ ನಡೆಸಬೇಕು. ಹಾಗೂ ಅವಲಂಬಿತರಿಗೆ ಅಗತ್ಯ ಪರಿಹಾರ ಧನವನ್ನು ವಿತರಿಸಬೇಕೆಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:ಕರವೇ ಕಾರ್ಯಕರ್ತರಾದ ಪರಮೇಶ್ವರ, ಹೊನ್ನಪ್ಪ, ರುದ್ರಪ್ಪ, ದುರುಗಪ್ಪ ನಡುವಮನಿ, ಪರಶುರಾಮ, ಕನಕಪ್ಪ ಕೆ.ತಳವಾರ, ಯಂಕಪ್ಪ, ಲಕ್ಷ್ಮಣಗಾಯಕ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

KN_BLY_3_JINDAL_AGAINST_KARAVE_PROTEST_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.