ETV Bharat / state

ಸಾರಿಗೆ ವ್ಯವಸ್ಥೆ ಹೆಚ್ಚಿಸಲು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ

author img

By

Published : Aug 1, 2019, 10:37 AM IST

ಹೊಸಪೇಟೆಯ ಹಲವು ಗ್ರಾಮಗಳಲ್ಲಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಹೆಚ್ಚಿನ ಸಾರಿಗೆ ವ್ಯವಸ್ಥೆ ಒದಗಿಸುವಂತೆ ಆಗ್ರಹಿಸಿ, ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.

ಬಸ್ ತಡೆದು ಪ್ರತಿಭಟನೆ

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದ ಬಸ್ ನಿಲ್ದಾಣದ ಬಳಿ ಶಾಲಾ - ಕಾಲೇಜಿನ ವಿದ್ಯಾರ್ಥಿಗಳು ಬಸ್​​ ತಡೆದು ಪ್ರತಿಭಟನೆ ನಡೆಸಿದರು.

ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಲ್ಲಾಪುರ, ಎನ್.ಆರ್.ಕ್ಯಾಂಪ್ ಹಾಗೂ ಹೊಸ ಚಿನ್ನಾಪುರ, ಸುಗ್ಗೇನಹಳ್ಳಿ, ಮೆಟ್ರಿ ಮತ್ತು ಕಮಲಾಪುರ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಹೊಸಪೇಟೆಯಲ್ಲಿನ ಶಾಲಾ, ಕಾಲೇಜುಗಳಿಗೆ ಹೋಗುತ್ತಾರೆ. ಆದರೆ, ಇಷ್ಟು ಮಂದಿ ವಿದ್ಯಾರ್ಥಿಗಳು ನಗರ ಸೇರಲು ಕೇವಲ ಒಂದೇ ಒಂದು ಬಸ್ ಇದೆ. ಈ ಬಸ್​​​​ ನೊಳಗೆ ಕಾಲಿಡಲು ಕೂಡ ಜಾಗವಿಲ್ಲ ಅಷ್ಟು ತುಂಬಿರುತ್ತದೆ ಇದಲ್ಲದೇ ದಶಕದಿಂದಲೂ ಈ ಒಂದೇ ಬಸ್ ಅನ್ನು ಓಡಿಸಲಾಗುತ್ತದೆ. ಮಾರ್ಗ ಮಧ್ಯೆ ಈ ಹಳೆಯ ಬಸ್ ದುರಸ್ತಿಯಾದ್ರೆ ಅಥವಾ ಅಪಘಾತ ಸಂಭವಿಸಿದ್ರೆ ಕೆಎಸ್​ಆರ್​ಟಿಸಿ ಸಾರಿಗೆ ಸಂಸ್ಥೆ ನೇರ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಬಸ್​​ ತಡೆದು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ

ತಾತ್ಸಾರ ಮನೋಭಾವ:

ಶಾಲಾ, ಕಾಲೇಜು ವಿದ್ಯಾರ್ಥಿಗಳೆಂದರೆ ಕೆಎಸ್ಆರ್​ಟಿಸಿ ಸಂಸ್ಥೆಯವರಿಗೆ ತಾತ್ಸಾರ ಮನೋಭಾವ ಇದೆ. ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸಿ ಬಸ್ ಪಾಸ್ ಪಡೆದರೂ ಕೂಡ ಬಸ್ಸಿನೊಳಗೆ ಪ್ರಯಾಣಿಸಲು ಚಾಲಕ ಮತ್ತು ನಿರ್ವಾಹಕರು ಆಸ್ಪದ ಕೊಡುತ್ತಿಲ್ಲ. ಹೀಗಾದ್ರೆ ನಾವ್ ವಿದ್ಯಾಭ್ಯಾಸ ಮಾಡೋದು ಹೇಗೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪರ್ಯಾಯ ವ್ಯವಸ್ಥೆ ಇಲ್ಲ:

ಮಾರ್ಗ ಮಧ್ಯೆ ಈ ಬಸ್ ಏನಾದ್ರೂ ಆದರೆ ಪರ್ಯಾಯ ವ್ಯವಸ್ಥೆಯನ್ನೇ ಕೆಎಸ್ಆರ್​ಟಿಸಿ ಕಲ್ಪಿಸೋದಿಲ್ಲ. ನಾವೇ ಬಸ್​​​ನಿಂದ ಕೆಳಗಿಳಿದು ಆ ಮಾರ್ಗದಲ್ಲಿ ಸಂಚರಿಸುತ್ತಿರುವ ದ್ವಿಚಕ್ರ ವಾಹನ ಅಥವಾ ಯಾವುದಾದ್ರೂ ಸರಕು ಸಾಗಣೆ ವಾಹನ ಹಾಗೂ ಸಾರ್ವಜನಿಕ ಸಂಚಾರದ ವಾಹನಗಳಿಗಳ ಸಹಾಯದಿಂದ ಶಾಲಾ, ಕಾಲೇಜುಗಳಿಗೆ ಹೋಗಬೇಕು ಎಂದು ವಿದ್ಯಾರ್ಥಿಗಳು ಸಂಸ್ಥೆಯ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ.

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದ ಬಸ್ ನಿಲ್ದಾಣದ ಬಳಿ ಶಾಲಾ - ಕಾಲೇಜಿನ ವಿದ್ಯಾರ್ಥಿಗಳು ಬಸ್​​ ತಡೆದು ಪ್ರತಿಭಟನೆ ನಡೆಸಿದರು.

ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಲ್ಲಾಪುರ, ಎನ್.ಆರ್.ಕ್ಯಾಂಪ್ ಹಾಗೂ ಹೊಸ ಚಿನ್ನಾಪುರ, ಸುಗ್ಗೇನಹಳ್ಳಿ, ಮೆಟ್ರಿ ಮತ್ತು ಕಮಲಾಪುರ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಹೊಸಪೇಟೆಯಲ್ಲಿನ ಶಾಲಾ, ಕಾಲೇಜುಗಳಿಗೆ ಹೋಗುತ್ತಾರೆ. ಆದರೆ, ಇಷ್ಟು ಮಂದಿ ವಿದ್ಯಾರ್ಥಿಗಳು ನಗರ ಸೇರಲು ಕೇವಲ ಒಂದೇ ಒಂದು ಬಸ್ ಇದೆ. ಈ ಬಸ್​​​​ ನೊಳಗೆ ಕಾಲಿಡಲು ಕೂಡ ಜಾಗವಿಲ್ಲ ಅಷ್ಟು ತುಂಬಿರುತ್ತದೆ ಇದಲ್ಲದೇ ದಶಕದಿಂದಲೂ ಈ ಒಂದೇ ಬಸ್ ಅನ್ನು ಓಡಿಸಲಾಗುತ್ತದೆ. ಮಾರ್ಗ ಮಧ್ಯೆ ಈ ಹಳೆಯ ಬಸ್ ದುರಸ್ತಿಯಾದ್ರೆ ಅಥವಾ ಅಪಘಾತ ಸಂಭವಿಸಿದ್ರೆ ಕೆಎಸ್​ಆರ್​ಟಿಸಿ ಸಾರಿಗೆ ಸಂಸ್ಥೆ ನೇರ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಬಸ್​​ ತಡೆದು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ

ತಾತ್ಸಾರ ಮನೋಭಾವ:

ಶಾಲಾ, ಕಾಲೇಜು ವಿದ್ಯಾರ್ಥಿಗಳೆಂದರೆ ಕೆಎಸ್ಆರ್​ಟಿಸಿ ಸಂಸ್ಥೆಯವರಿಗೆ ತಾತ್ಸಾರ ಮನೋಭಾವ ಇದೆ. ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸಿ ಬಸ್ ಪಾಸ್ ಪಡೆದರೂ ಕೂಡ ಬಸ್ಸಿನೊಳಗೆ ಪ್ರಯಾಣಿಸಲು ಚಾಲಕ ಮತ್ತು ನಿರ್ವಾಹಕರು ಆಸ್ಪದ ಕೊಡುತ್ತಿಲ್ಲ. ಹೀಗಾದ್ರೆ ನಾವ್ ವಿದ್ಯಾಭ್ಯಾಸ ಮಾಡೋದು ಹೇಗೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪರ್ಯಾಯ ವ್ಯವಸ್ಥೆ ಇಲ್ಲ:

ಮಾರ್ಗ ಮಧ್ಯೆ ಈ ಬಸ್ ಏನಾದ್ರೂ ಆದರೆ ಪರ್ಯಾಯ ವ್ಯವಸ್ಥೆಯನ್ನೇ ಕೆಎಸ್ಆರ್​ಟಿಸಿ ಕಲ್ಪಿಸೋದಿಲ್ಲ. ನಾವೇ ಬಸ್​​​ನಿಂದ ಕೆಳಗಿಳಿದು ಆ ಮಾರ್ಗದಲ್ಲಿ ಸಂಚರಿಸುತ್ತಿರುವ ದ್ವಿಚಕ್ರ ವಾಹನ ಅಥವಾ ಯಾವುದಾದ್ರೂ ಸರಕು ಸಾಗಣೆ ವಾಹನ ಹಾಗೂ ಸಾರ್ವಜನಿಕ ಸಂಚಾರದ ವಾಹನಗಳಿಗಳ ಸಹಾಯದಿಂದ ಶಾಲಾ, ಕಾಲೇಜುಗಳಿಗೆ ಹೋಗಬೇಕು ಎಂದು ವಿದ್ಯಾರ್ಥಿಗಳು ಸಂಸ್ಥೆಯ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ.

Intro:ಸೀತಾರಾಮ ತಾಂಡ: ವಿದ್ಯಾರ್ಥಿಗಳು ಬಸ್ ತಡೆದು ದಿಢೀರ್ ಪ್ರತಿಭಟನೆ
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡದ ಬಸ್ ನಿಲ್ದಾಣ ಬಳಿ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ದಿಢೀರನೆ ಪ್ರತಿಭಟನೆ ನಡೆಸಿದ ಪ್ರಸಂಗವು ಇಂದು ನಡೆಯಿತು.
ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲಾಪುರ, ಎನ್.ಆರ್.ಕ್ಯಾಂಪ್
ಹಾಗೂ ಹೊಸ ಚಿನ್ನಾಪುರ, ಸುಗ್ಗೇನಹಳ್ಳಿ, ಮೆಟ್ರಿ ಮತ್ತು ಕಮಲಾಪುರ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಹೊಸಪೇಟೆ ನಗರದ ಶಾಲಾ, ಕಾಲೇಜುಗಳಿಗೆ ದಿನಾಲು ತೆರಳುತ್ತಿದ್ದು, ಕೇವಲ ಒಂದೇ ಒಂದು ಬಸ್ ಅನ್ನು ಈ ಮಾರ್ಗವಾಗಿ ಓಡಿಸಲಾಗುತ್ತದೆ. ಆಗಾಗಿ, ಬಸ್ಸಿನೊಳಗೆ ಕಾಲಿಡಲು ಜಾಗ ಇರದ ಪರಿಸ್ಥಿತಿ ನಿರ್ಮಾಣ ಆಗಿರುತ್ತದೆ. ಅದಾಗ್ಯೂ ಸಹ ದಶಕದಿಂದಲೂ ಈ ಒಂದೇ ಬಸ್ ಅನ್ನು ಓಡಿಸಲಾಗುತ್ತದೆ. ಮಾರ್ಗ ಮಧ್ಯೆ ಈ ಬಸ್ ದುರಸ್ತಿಯಾದ್ರೆ ಅಥವಾ ಅಪಘಾತ ಸಂಭವಿಸಿದ್ರೆ ಕೆಎಸ್ ಆರ್ ಟಿಸಿ ಸಾರಿಗೆ ಸಂಸ್ಥೆ ನೇರ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದು ದಿಢೀರ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ದೂರಿದ್ದಾರೆ.
Body:ತಾತ್ಸಾರ ಮನೋಭಾವ: ಶಾಲಾ, ಕಾಲೇಜು ವಿದ್ಯಾರ್ಥಿಗಳೆಂದರೆ ಕೆಎಸ್ ಆರ್ ಟಿಸಿ ಸಂಸ್ಥೆಯವರಿಗೆ ತಾತ್ಸಾರ ಮನೋಭಾವ ಇದೆ. ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸಿ ಬಸ್ ಪಾಸ್ ಪಡೆದರೂ ಕೂಡ ಬಸ್ಸಿನೊಳಗೆ ಪ್ರಯಾಣಿಸಲು ಚಾಲಕ ಮತ್ತು ನಿರ್ವಾಹಕರು ಆಸ್ಪದ ಕೊಡಲ್ಲ. ಹೀಗಾದ್ರೆ ಹ್ಯಾಂಗ ನಾವ್ ವಿದ್ಯಾಭ್ಯಾಸ ಮಾಡೋದು ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪರ್ಯಾಯ ವ್ಯವಸ್ಥೆ ಇಲ್ಲ: ಮಾರ್ಗ ಮಧ್ಯೆ ಈ ಬಸ್ ಏನಾದ್ರೂ ಆಯಿತೆಂದರೆ ಪರ್ಯಾಯ ವ್ಯವಸ್ಥೆಯನ್ನೇ ಕೆಎಸ್ ಆರ್ ಟಿಸಿ ಸಂಸ್ಥೆಯವ್ರು ಕಲ್ಪಿಸೋಲ್ಲ. ನಾವೇ ಬಸ್ಸಿನಿಂದ ಕೆಳಗಿಳಿದು ಆ ಮಾರ್ಗದಲ್ಲಿ ಸಂಚರಿಸುತ್ತಿರುವ ದ್ವಿಚಕ್ರ ವಾಹನ ಅಥವಾ ಯಾವುದಾದ್ರೂ ಸರಕು ಸಾಗಣೆ ವಾಹನ ಹಾಗೂ ಸಾರ್ವಜನಿಕ ಸಂಚಾರದ ವಾಹನಗಳಿಗೆ ಕೈ ಎತ್ತುವ ಮುಖೇನ ಶಾಲಾ, ಕಾಲೇಜು ಗಳಿಗೆ ತೆರಳಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_SITHARAMA_TANDA_STUDENT_PROTEST_7203310

KN_BLY_1a_SITHARAMA_TANDA_STUDENT_PROTEST_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.