ಬಳ್ಳಾರಿ : ಲಾಕ್ಡೌನ್ನಲ್ಲಿ ಜನರ ಓಡಾಟ ಹೇಗಿದೆ, ಚೆಕ್ ಪೋಸ್ಟ್ನಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಿ ಕೆ ಬಾಬಾ ಅವರು ಸೈಕಲ್ನಲ್ಲಿ ಸವಾರಿ ಮಾಡಿ ವೀಕ್ಷಣೆ ಮಾಡಿದರು.
ಈ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಕಲ್ ಮೇಲೆ ಬಂದು, ಸರ್ಪ್ರೈಸ್ ಭೇಟಿ ನೀಡಿರುವೆ. ಸರಿ ಸುಮಾರು ಐವತ್ತು ಕಿಲೋಮೀಟರ್ ಸುತ್ತಾಡಿರುವೆ. ಸದ್ಯ ಜಿಲ್ಲೆಯಾದ್ಯಂತ ಲಾಕ್ಡೌನ್ ಶಾಂತಿಯುತವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಯುನಿಫಾರಂ ಮತ್ತು ಕಚೇರಿ ಕಾರ್ನಲ್ಲಿ ಬಂದರೆ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆಂದು ಸೈಕಲ್ ಪ್ರವಾಸ ಮಾಡಿರುವೆ. ಲಾಕ್ಡೌನ್ಗೆ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ. ಕೆಲವು ಕಡೆ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.