ETV Bharat / state

ಬೇಕೇ ಬೇಕು, ಎಣ್ಣೆ ಬೇಕು... ಮದ್ಯಪ್ರಿಯರಿಂದ ಬಾರ್​ ಆರಂಭಿಸಲು ಆಗ್ರಹಿಸಿ ಪ್ರತಿಭಟನೆ! - undefined

ಬಳ್ಳಾರಿಯಲ್ಲಿ ಮದ್ಯದ ಅಂಗಡಿ ಪ್ರಾರಂಭಿಸುವಂತೆ ಆಗ್ರಹಿಸಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.

ಸೋವೇನಹಳ್ಳಿ ಗ್ರಾಮದ ಗ್ರಾಮಸ್ಥರ ಪ್ರತಿಭಟನೆ
author img

By

Published : Jul 26, 2019, 6:26 AM IST

ಬಳ್ಳಾರಿ: ಮದ್ಯದ ಅಂಗಡಿ ಪ್ರಾರಂಭಿಸುವಂತೆ ಆಗ್ರಹಿಸಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು. ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಎದುರು ನೂರಾರು ಗ್ರಾಮಸ್ಥರು ಜಮಾಯಿಸಿ ಕೆಲಕಾಲ ಬೇಕೇ ಬೇಕು, ಬಾರ್ ಬೇಕು, ಎಣ್ಣೆ ಬೇಕು ಎಂದು ಘೋಷಣೆ ಕೂಗಿದರು.

ಈ ಹಿಂದೆ ಸೋವೇನ ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ಗ್ರಾಮದ ಮದ್ಯಪ್ರಿಯರ ಬೇಡಿಕೆಯಂತೆ ಈ ಗ್ರಾಮಕ್ಕೆ ಎಂಎಸ್​​ಐಎಲ್ ಬಾರ್ ಅಂಗಡಿ ಮಂಜೂರಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ವೈನ್ ಶಾಪ್ ಪ್ರಾರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಆದರೆ ಇದೇ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವರು ಈ ವೈನ್ ಶಾಪ್ ಪ್ರಾರಂಭಿಸುವುದು ಬೇಡ, ವೈನ್ ಶಾಪ್ ಪ್ರಾರಂಭವಾದರೆ ಇಲ್ಲಿನ ಸಾಕಷ್ಟು ಬಡ ಜನರು ಮದ್ಯ ವ್ಯಸನಿಯಾಗಿ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮದ್ಯದ ಅಂಗಡಿ ಪ್ರಾರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ

ಅಂದಹಾಗೆ ಬಾರ್ ಪ್ರಾರಂಭಿಸುವ ಸಂಬಂಧ ಈ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸಭೆ ಕೂಡ ನಡೆದಿತ್ತು. ಸ್ಥಳೀಯರ ಅಭಿಪ್ರಾಯ ಪಡೆದು ಬಾರ್ ಶಾಪ್ ಪ್ರಾರಂಭಿಸುವುದೋ ಅಥವಾ ಬೇಡವೋ ಎನ್ನುವುದು ಈ ಗ್ರಾಮಸಭೆಯ ಉದ್ದೇಶವಾಗಿತ್ತು. ಹಾಗಾಗಿ ನಮಗೆ ಬಾರ್ ಬೇಕು ಎಂದು ಬಂದಿದ್ದ ಕೆಲವು ಮದ್ಯ ಪ್ರಿಯರು ನೇರವಾಗಿ ಪ್ರತಿಭಟನೆ ಪ್ರಾರಂಭ ಮಾಡಿಯೇ ಬಿಟ್ಟರು.

ಅದಲ್ಲದೆ ಎಣ್ಣೆ ಹಾಕಿಕೊಂಡೇ ಪ್ರತಿಭಟನೆ ಪ್ರಾರಂಭಿಸಿದ್ದು, ಈ ಪ್ರತಿಭಟನಾಕಾರರು ಬಾರ್ ಬೇಡ ಎಂದು ಕಾರುಬಾರು ಮಾಡುತಿದ್ದವರಿಗೆ ಒಂದೆರಡು ಏಟು ಕೊಟ್ಟೇ ಬಿಟ್ಟಿದ್ದಾರೆ. ಸದ್ಯಕ್ಕೆ ಈ ಬಾರ್ ಪ್ರಾರಂಭಕ್ಕೆ ಅವಕಾಶ ಕೊಡಬೇಕೋ ಅಥವಾ ನಿರಾಕರಿಸಬೇಕೋ ಎಂಬ ಇಕ್ಕಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸಿಕ್ಕಿಹಾಕಿಕೊಂಡಿದೆ.

ಬಳ್ಳಾರಿ: ಮದ್ಯದ ಅಂಗಡಿ ಪ್ರಾರಂಭಿಸುವಂತೆ ಆಗ್ರಹಿಸಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು. ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಎದುರು ನೂರಾರು ಗ್ರಾಮಸ್ಥರು ಜಮಾಯಿಸಿ ಕೆಲಕಾಲ ಬೇಕೇ ಬೇಕು, ಬಾರ್ ಬೇಕು, ಎಣ್ಣೆ ಬೇಕು ಎಂದು ಘೋಷಣೆ ಕೂಗಿದರು.

ಈ ಹಿಂದೆ ಸೋವೇನ ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ಗ್ರಾಮದ ಮದ್ಯಪ್ರಿಯರ ಬೇಡಿಕೆಯಂತೆ ಈ ಗ್ರಾಮಕ್ಕೆ ಎಂಎಸ್​​ಐಎಲ್ ಬಾರ್ ಅಂಗಡಿ ಮಂಜೂರಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ವೈನ್ ಶಾಪ್ ಪ್ರಾರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಆದರೆ ಇದೇ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವರು ಈ ವೈನ್ ಶಾಪ್ ಪ್ರಾರಂಭಿಸುವುದು ಬೇಡ, ವೈನ್ ಶಾಪ್ ಪ್ರಾರಂಭವಾದರೆ ಇಲ್ಲಿನ ಸಾಕಷ್ಟು ಬಡ ಜನರು ಮದ್ಯ ವ್ಯಸನಿಯಾಗಿ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮದ್ಯದ ಅಂಗಡಿ ಪ್ರಾರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ

ಅಂದಹಾಗೆ ಬಾರ್ ಪ್ರಾರಂಭಿಸುವ ಸಂಬಂಧ ಈ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸಭೆ ಕೂಡ ನಡೆದಿತ್ತು. ಸ್ಥಳೀಯರ ಅಭಿಪ್ರಾಯ ಪಡೆದು ಬಾರ್ ಶಾಪ್ ಪ್ರಾರಂಭಿಸುವುದೋ ಅಥವಾ ಬೇಡವೋ ಎನ್ನುವುದು ಈ ಗ್ರಾಮಸಭೆಯ ಉದ್ದೇಶವಾಗಿತ್ತು. ಹಾಗಾಗಿ ನಮಗೆ ಬಾರ್ ಬೇಕು ಎಂದು ಬಂದಿದ್ದ ಕೆಲವು ಮದ್ಯ ಪ್ರಿಯರು ನೇರವಾಗಿ ಪ್ರತಿಭಟನೆ ಪ್ರಾರಂಭ ಮಾಡಿಯೇ ಬಿಟ್ಟರು.

ಅದಲ್ಲದೆ ಎಣ್ಣೆ ಹಾಕಿಕೊಂಡೇ ಪ್ರತಿಭಟನೆ ಪ್ರಾರಂಭಿಸಿದ್ದು, ಈ ಪ್ರತಿಭಟನಾಕಾರರು ಬಾರ್ ಬೇಡ ಎಂದು ಕಾರುಬಾರು ಮಾಡುತಿದ್ದವರಿಗೆ ಒಂದೆರಡು ಏಟು ಕೊಟ್ಟೇ ಬಿಟ್ಟಿದ್ದಾರೆ. ಸದ್ಯಕ್ಕೆ ಈ ಬಾರ್ ಪ್ರಾರಂಭಕ್ಕೆ ಅವಕಾಶ ಕೊಡಬೇಕೋ ಅಥವಾ ನಿರಾಕರಿಸಬೇಕೋ ಎಂಬ ಇಕ್ಕಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸಿಕ್ಕಿಹಾಕಿಕೊಂಡಿದೆ.

Intro:ಮದ್ಯದ ಅಂಗಡಿ ಪ್ರಾರಂಭಿಸುವಂತೆ ಆಗ್ರಹಿಸಿ ಸೋವೇನಹಳ್ಳಿ ಗ್ರಾಮಸ್ಥರ ಪ್ರತಿಭಟನೆ!
ಬಳ್ಳಾರಿ: ಮದ್ಯದ ಅಂಗಡಿ ಪ್ರಾರಂಭಿಸುವಂತೆ ಆಗ್ರಹಿಸಿ
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ
ಗ್ರಾಮದ ಗ್ರಾಮಸ್ಥರು ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಎದುರು ನೂರಾರು ಗ್ರಾಮಸ್ಥರು ಜಮಾಯಿಸಿ ಕೆಲಕಾಲ ಬೇಕೆ ಬೇಕು,
ಬಾರ್ ಬೇಕು, ಎಣ್ಣೆ ಬೇಕು ಎಂದು ಘೋಷಣೆ ಕೂಗಿದರು.
ಈ ಹಿಂದೆ ಸೋವೇನಹಳ್ಳಿಯಲ್ಲಿ ಅಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ಗ್ರಾಮದ ಮದ್ಯಪ್ರಿಯರ ಬೇಡಿಕೆ ಯಂತೆ ಈ ಗ್ರಾಮಕ್ಕೆ ಎಂಎಸ್ ಐಎಲ್ ಬಾರ್ ಅಂಗಡಿ ಮಂಜೂ ರಾಗಿದ್ದು, ಅದಕ್ಕೆ ಸಂಭಂದಪಟ್ಟಂತೆ ಈಗಾಗಲೇ ವೈನ್ ಶಾಪ್ ಪ್ರಾರಂಭಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಆದರೆ ಇದೇ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವರು
ಈ ವೈನ್ ಶಾಪ್ ಪ್ರಾರಂಭಿಸುವುದು ಬೇಡ, ವೈನ್ ಶಾಪ್ ಪ್ರಾರಂಭವಾದ್ರೆ ಇಲ್ಲಿನ ಸಾಕಷ್ಟು ಬಡ ಜನಗಳು ಮದ್ಯ ವ್ಯಸನಿಯಾಗಿ ಸಂಸಾರವನ್ನ ಹಾಳುಮಾಡಿಕೊಳ್ಳುತ್ತಾರೆ.
ಅಲ್ಲದೆ ಈಗಾಗಲೆ ಸಾಕಷ್ಟು ಜನ ರೈತರು ಸಾಲಸೋಲ ಮಾಡಿ ಕೊಂಡು ಆತ್ಮಹತ್ಯ ದಾರಿ ಹಿಡಿದಿದ್ದಾರೆ. ಹೀಗಿರುವಾಗ ಮತ್ತೆ ಮನೆ ಬಾಗಿಲಿಗೆ ಬಾರ್ ಬಂದ್ರೆ ಬದುಕು ಬರ್ಬಾದ್ ಆಗುತ್ತೆ ಎಂದು ವಿರೋಧ ವ್ಯಕ್ತಪಡಿಸಿದ್ರು.
ಹಾಗಾಗಿ ನೂತನ ವೈನ್ ಶಾಪ್ ಪ್ರಾರಂಭವಾಗುವುದಕ್ಕೆ ಕೆಲವು ದಿನಗಳು ವಿಳಂಬವಾಗಿದೆ. ಆದ್ರೆ ಇತ್ತ ವೈನ್ ಶಾಪ್ ಪ್ರಾರಂಭವಾಗುತ್ತದೆ ನಮ್ಮೂರಲ್ಲಿ ಎಂದು ಜಾತಕ ಪಕ್ಷಿಯಂತೆ ಕಾದು‌ ಕುಳಿತಿದ್ದ ಮದ್ಯ ಪ್ರಿಯರು ಬೇಸರಗೊಂಡು ಏಕಾಎಕಿ ಗ್ರಾಮಪಂಚಾಯಿತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಬಾರ್ ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ.
Body:ಅಂದಹಾಗೆ ಬಾರ್ ಪ್ರಾರಂಭಿಸುವ ಸಂಬಂಧ ಈ ಸೋವೇನಹಳ್ಳಿ ಗ್ರಾಮಪಂಚಾಯಿತಿ ಕಚೇರಿ ಮುಂದೆ ಗ್ರಾಮಸಭೆ ಕೂಡ ನಡೆದಿತ್ತು, ಸ್ಥಳೀಯರ ಅಭಿಪ್ರಾಯ ಪಡೆದು ಬಾರ್ ಶಾಪ್ ಪ್ರಾರಂಭಿಸುವುದು ಅಥವಾ ಬೇಡವೋ ಎನ್ನುವುದು ಈ ಗ್ರಾಮ ಸಭೆಯ ಉದ್ದೇಶವಾಗಿತ್ತು. ಹಾಗಾಗಿ ನಮಗೆ ಬಾರ್ ಬೇಕು ಎಂದು ಬಂದಿದ್ದ ಕೆಲವು ಮದ್ಯ ಪ್ರಿಯರು ನೇರವಾಗಿ ಪ್ರತಿಭಟನೆ ಪ್ರಾರಂಭ ಮಾಡಿಯೇ ಬಿಟ್ರು, ಅದಲ್ಲದೆ ಎಣ್ಣೆ ಹಾಕಿಕೊಂಡೇ ಪ್ರತಿಭಟನೆ ಪ್ರಾರಂಭಿಸಿದ್ದು ಈ ಪ್ರತಿಭಟನಾಕಾರರು ಬಾರ್ ಬೇಡ ಎಂದು ಕಾರುಬಾರು ಮಾಡುತಿದ್ದವರಿಗೆ ಒಂದೆರಡು ಏಟು ಕೊಟ್ಟೇ ಬಿಟ್ಟಿದ್ದಾರೆ. ಸದ್ಯಕ್ಕೆ ಈ ಬಾರ್ ಪ್ರಾರಂಭಕ್ಕೆ ಅವಕಾಶ ಕೊಡಬೇಕೊ ಅಥವಾ ನಿರಾಕರಿಸಬೇಕೊ ಎಂಬ ಇಕ್ಕಟ್ಟಿನಲ್ಲಿ ಗ್ರಾಮಪಂಚಾಯಿತಿ ಸಿಕ್ಕಿ ಹಾಕಿಕೊಂಡಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_MSIL_BAR_OPENING_DEMAND_7203310

KN_BLY_3f_MSIL_BAR_OPENING_DEMAND_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.