ಹೊಸಪೇಟೆ: ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ -ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ್ದ ಪ್ರತಿಭಟನಕಾರರು, ಸರ್ಕಾರ ಆ.20 ರಂದು ಸಚಿವ ಸಂಪುಟದಲ್ಲಿ ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡಬೇಕು ಎಂಬ ಐತಿಹಾಸಿಕ ನಿರ್ಣಯವನ್ನು ತಗೆದುಕೊಂಡಿತ್ತು. ಅದರ ಪ್ರಕಾರ ರಾಜ್ಯದಲ್ಲಿ 1,873 ಕೊಳಚೆ ಪ್ರದೇಶಗಳಲ್ಲಿ 3.12 ಲಕ್ಷ ಕುಟುಂಬಗಳು ವಾಸಿಸುತ್ತಿವೆ. ಈ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದರಿಂದ ಜನರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕೂಡಲೇ ಸರ್ಕಾರ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡಬೇಕೆಂದು ಒತ್ತಾಯಿಸಿದರು. ಬಳಿಕ ಉಪವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ್ ಪ್ರತಿಭಾ ಅವರಿಗೆ ಮನವಿ ಸಲ್ಲಿಸಿದರು.
![ಸಂಘಟನೆ ಸದಸ್ಯರು ಸಲ್ಲಿಸಿದ ಮನವಿ ಪತ್ರ](https://etvbharatimages.akamaized.net/etvbharat/prod-images/03:35:46:1600077946_kn-hpt-05-issue-of-charter-to-slum-dwellers-vsl-ka10031_14092020134758_1409f_1600071478_962.jpg)
ಈ ವೇಳೆ ವೆಂಕಮ್ಮ, ತಾಯಮ್ಮ, ದೇವಮ್ಮ, ನಾಗಮ್ಮ ಸೇರಿ ಇನ್ನಿತರರಿದ್ದರು.