ETV Bharat / state

ಗಣಿನಗರಿ ಬೈಕ್​ ಸವಾರರಿಗೆ 'ಸಂಜೀವಿನಿ' ಹೆಲ್ಮೆಟ್​.. ತಲೆ ಕಾಪಾಡ್ತಿರುವ ಉದ್ಯಮಿ.. - ಬಳ್ಳಾರಿಯಲ್ಲಿ ಬೈಕ್​ ಸವಾರರಿಗೆ ಉಚಿತ ಹೆಲ್ಮೆಟ್​ ನೀಡಿದ ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್

ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟಿನ ಸ್ಥಾಪಕಾರದ ಮುಂಡ್ಲೂರು ಪ್ರಭಂಜನಕುಮಾರ ಬಳ್ಳಾರಿಯಲ್ಲಿ ಹೆಲ್ಮೆಟ್​ ರಹಿತ ವಾಹನ ಸವಾರರನ್ನು ನಿಲ್ಲಿಸಿ ಹೆಲ್ಮೆಟ್​ ಧರಿಸುವ ಬಗ್ಗೆ ಜಾಗೃತಿ ಮೂಡಿಸಿ ಉಚಿತ ಹೆಲ್ಮೆಟ್​ ನೀಡಿ ಸಮಾಜಮುಖಿ ಕಾರ್ಯ ಮಾಡಿದ್ದಾರೆ.

ಉಚಿತವಾಗಿ ಹೆಲ್ಮೆಟ್​​ ವಿತರಿಸುತ್ತಿರುವ ಮುಂಡ್ಲೂರು ಪ್ರಭಂಜನ ಕುಮಾರ
author img

By

Published : Oct 8, 2019, 5:55 PM IST

ಬಳ್ಳಾರಿ: ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಬೈಕ್ ಸವಾರರ ತಲೆಗೆ ಪೆಟ್ಟಾಗಿ ಸಾವನ್ನಪ್ಪಿರುವ ಪ್ರಕರಣಗಳೇ ಹೆಚ್ಚಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಣಿನಗರಿ ಬಳ್ಳಾರಿ ಉದ್ಯಮಿಯೊಬ್ಬರು ಈ ಹೆಲ್ಮೆಟ್‌ಗಳನ್ನು ಉಚಿತವಾಗಿ ನೀಡಿ ಬೈಕ್ ಸವಾರರ ಸಂಜೀವಿನಿಯಾಗಿದ್ದಾರೆ.

ವಾಹನಸವಾರರಿಗೆ ಉಚಿತ ಹೆಲ್ಮೆಟ್​​ ವಿತರಣೆ..

ರಾಯಲ್ ಎನ್‌ಫೀಲ್ಡ್ ಶೋ ರೂಂನ ಮಾಲೀಕರಾದ ಮುಂಡ್ಲೂರು ಪ್ರಭಂಜನಕುಮಾರ, ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಿಸಿ, ಅದರಡಿ ಬಳ್ಳಾರಿಯ ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್‌ನ ಸ್ವತಃ ವಿತರಿಸುವ ಮುಖೇನ ಸಾರ್ವಜನಿಕರ ವಿಶೇಷ ಗಮನ ಸೆಳೆದಿದ್ದಾರೆ. ದಸರಾ ಹಬ್ಬದ ನಿಮಿತ್ತ ಆಯುಧ ಪೂಜೆಯ ದಿನದಂದೇ ಬಳ್ಳಾರಿಯ ಡಾ.ರಾಜಕುಮಾರ್ ರಸ್ತೆ, ಹೊಸ ಬಸ್ ನಿಲ್ದಾಣ ಸೇರಿ ಇತರೆಡೆ ಸ್ವತಃ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಐಎಸ್‌ಐ ಮಾರ್ಕ್​ವುಳ್ಳ ಹೆಲ್ಮೆಟ್ ಬಾಕ್ಸ್‌ನ ಕೈಯಲ್ಲಿ ಹಿಡಿದು ಬೈಕ್ ಸವಾರರನ್ನು ನಿಲ್ಲಿಸಿ, ಹೆಲ್ಮೆಟ್‌ನ ಸವಾರರ ತಲೆಗೆ ಹಾಕಿದ್ದಾರೆ. ಅಲ್ಲದೇ, ಪ್ರತಿದಿನ ಕಡ್ಡಾಯವಾಗಿ ಈ ಹೆಲ್ಮೆಟ್ ಧರಿಸುವಂತೆ ಸವಾರರಿಗೆ ಸಲಹೆ ನೀಡಿದ್ದಾರೆ.

ಪ್ರೇರಣೆಯಾಗಿದ್ದು ಹೇಗೆ: ಪ್ರಭಂಜನಕುಮಾರ ಅವರ ಆತ್ಮೀಯರು ಬೆಳಗಾವಿಯ ಬೈಕ್ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸಾವನ್ನಪ್ಪಿದ್ದರಂತೆ.‌ ಆಗ ಹೆಲ್ಮೆಟ್ ಧರಿಸಿದ್ದರೆ ಜೀವಕ್ಕೆ ಯಾವುದೇ ಕುತ್ತು ಬರುತ್ತಿರಲಿಲ್ಲ ಎಂದು ಸ್ನೇಹಿತರು ಹೇಳಿದ್ದರು. ಹಾಗಾಗಿ ಈ ನಿರ್ಧಾರಕ್ಕೆ ಬಂದು ಪ್ರತಿಯೊಬ್ಬರ ಜೀವರಕ್ಷಣೆ ನಮ್ಮೆಲ್ಲರದ್ದಾಗ ಬೇಕಿದೆ ಎಂದು ಈ ಕಾರ್ಯ ಹಮ್ಮಿಕೊಂಡಿದ್ದಾರೆ.

ಬಳ್ಳಾರಿ: ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಬೈಕ್ ಸವಾರರ ತಲೆಗೆ ಪೆಟ್ಟಾಗಿ ಸಾವನ್ನಪ್ಪಿರುವ ಪ್ರಕರಣಗಳೇ ಹೆಚ್ಚಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಣಿನಗರಿ ಬಳ್ಳಾರಿ ಉದ್ಯಮಿಯೊಬ್ಬರು ಈ ಹೆಲ್ಮೆಟ್‌ಗಳನ್ನು ಉಚಿತವಾಗಿ ನೀಡಿ ಬೈಕ್ ಸವಾರರ ಸಂಜೀವಿನಿಯಾಗಿದ್ದಾರೆ.

ವಾಹನಸವಾರರಿಗೆ ಉಚಿತ ಹೆಲ್ಮೆಟ್​​ ವಿತರಣೆ..

ರಾಯಲ್ ಎನ್‌ಫೀಲ್ಡ್ ಶೋ ರೂಂನ ಮಾಲೀಕರಾದ ಮುಂಡ್ಲೂರು ಪ್ರಭಂಜನಕುಮಾರ, ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಿಸಿ, ಅದರಡಿ ಬಳ್ಳಾರಿಯ ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್‌ನ ಸ್ವತಃ ವಿತರಿಸುವ ಮುಖೇನ ಸಾರ್ವಜನಿಕರ ವಿಶೇಷ ಗಮನ ಸೆಳೆದಿದ್ದಾರೆ. ದಸರಾ ಹಬ್ಬದ ನಿಮಿತ್ತ ಆಯುಧ ಪೂಜೆಯ ದಿನದಂದೇ ಬಳ್ಳಾರಿಯ ಡಾ.ರಾಜಕುಮಾರ್ ರಸ್ತೆ, ಹೊಸ ಬಸ್ ನಿಲ್ದಾಣ ಸೇರಿ ಇತರೆಡೆ ಸ್ವತಃ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಐಎಸ್‌ಐ ಮಾರ್ಕ್​ವುಳ್ಳ ಹೆಲ್ಮೆಟ್ ಬಾಕ್ಸ್‌ನ ಕೈಯಲ್ಲಿ ಹಿಡಿದು ಬೈಕ್ ಸವಾರರನ್ನು ನಿಲ್ಲಿಸಿ, ಹೆಲ್ಮೆಟ್‌ನ ಸವಾರರ ತಲೆಗೆ ಹಾಕಿದ್ದಾರೆ. ಅಲ್ಲದೇ, ಪ್ರತಿದಿನ ಕಡ್ಡಾಯವಾಗಿ ಈ ಹೆಲ್ಮೆಟ್ ಧರಿಸುವಂತೆ ಸವಾರರಿಗೆ ಸಲಹೆ ನೀಡಿದ್ದಾರೆ.

ಪ್ರೇರಣೆಯಾಗಿದ್ದು ಹೇಗೆ: ಪ್ರಭಂಜನಕುಮಾರ ಅವರ ಆತ್ಮೀಯರು ಬೆಳಗಾವಿಯ ಬೈಕ್ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸಾವನ್ನಪ್ಪಿದ್ದರಂತೆ.‌ ಆಗ ಹೆಲ್ಮೆಟ್ ಧರಿಸಿದ್ದರೆ ಜೀವಕ್ಕೆ ಯಾವುದೇ ಕುತ್ತು ಬರುತ್ತಿರಲಿಲ್ಲ ಎಂದು ಸ್ನೇಹಿತರು ಹೇಳಿದ್ದರು. ಹಾಗಾಗಿ ಈ ನಿರ್ಧಾರಕ್ಕೆ ಬಂದು ಪ್ರತಿಯೊಬ್ಬರ ಜೀವರಕ್ಷಣೆ ನಮ್ಮೆಲ್ಲರದ್ದಾಗ ಬೇಕಿದೆ ಎಂದು ಈ ಕಾರ್ಯ ಹಮ್ಮಿಕೊಂಡಿದ್ದಾರೆ.

Intro:ಸ್ಲಗ್ : ಬೈಕ್ ಸವಾರರಿಗೆ ಸಂಜೀವಿನಿ 'ಹೆಲ್ಮೆಟ್'

* ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್ ಅಂದಾಜು 500 ಹೆಲ್ಮೆಟ್ ವಿತರಣೆ

* ಉದ್ಯಮಿ ಮುಂಡ್ಲೂರು ಪ್ರಭಂಜನಕುಮಾರ ಅವರಿಂದ ಲಕ್ಷಾಂತರ ರೂ.ಗಳ ಹಣವ್ಯಯಿಸಿ ಗಣಿನಗರಿಯ ಬೈಕ್ ಸವಾ
ರರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ.

ಆ್ಯಂಕರ್: ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಬೈಕ್ ಸವಾರರ ತಲೆಗೆ ಪೆಟ್ಟಾಗಿ ಸಾವನ್ನಪ್ಪಿರುವ ಪ್ರಕರಣಗಳೇ ಹೆಚ್ಚಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಣಿನಗರಿ ಬಳ್ಳಾರಿ ಉದ್ಯಮಿಯೊಬ್ಬರು ಈ ಹೆಲ್ಮೆಟ್ ಅನ್ನು ಉಚಿತವಾಗಿ ನೀಡುವ ಮುಖೇನ ಬೈಕ್ ಸವಾರರ ಜೀವ ಸಂಜೀವಿನಿಯಾಗಿದ್ದಾರೆ.
ಹೌದು, ರಾಯಲ್ ಎನ್ ಫಿಲ್ಡ್ ಷೋ ರೂಂನ ಮಾಲೀಕರಾದ ಮುಂಡ್ಲೂರು ಪ್ರಭಂಜನಕುಮಾರ ಅವರು ಈ ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್ ಅನ್ನು ಸ್ಥಾಪಿಸಿ, ಅದರಡಿಯಲ್ಲಿ ಬಳ್ಳಾರಿಯ ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ಅನ್ನು ಸ್ವತಃ ವಿತರಿಸುವ ಮುಖೇನ ಸಾರ್ವಜನಿಕರ ವಿಶೇಷ ಗಮನ ಸೆಳೆದಿದ್ದಾರೆ.
ದಸರಾ ಹಬ್ಬದ ನಿಮಿತ್ತ ಆಯುಧ ಪೂಜೆಯ ದಿನದಂದೇ ಬಳ್ಳಾರಿಯ ಡಾ.ರಾಜಕುಮಾರ್ ರಸ್ತೆ, ಹೊಸ ಬಸ್ ನಿಲ್ದಾಣ ಸೇರಿದಂತೆ ಇತರೆಡೆ ಸ್ವತಃ ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊಂಡೇ ಐಎಸ್ ಐ ಮಾರ್ಕ್ ವುಳ್ಳ ಹೆಲ್ಮೆಟ್ ಬಾಕ್ಸ್ ಅನ್ನು ಕೈಯಲ್ಲಿಡಿದು ಬೈಕ್ ಸವಾರರನ್ನು ನಿಲ್ಲಿಸಿ, ಬಾಕ್ಸ್ ತೆಗೆದು ಅದರೊಳಗಿನ ಹೆಲ್ಮೆಟ್ ಅನ್ನು ಸವಾರರ ತಲೆಗೆ ಹಾಕುತ್ತಾರೆ. ಅಲ್ಲದೇ, ಪ್ರತಿದಿನ ಕಡ್ಡಾಯ ವಾಗಿ ಈ ಹೆಲ್ಮೆಟ್ ಧರಿಸುವಂತೆ ಸವಾರರಿಗೆ ಸಲಹೆ ನೀಡುತ್ತಾರೆ.
ಹೆಲ್ಮೆಟ್ ಧರಿಸದೇ ಎಷ್ಟೋ ಜೀವಗಳು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿವೆ. ಅಲ್ಲದೇ, ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಬೆನ್ನಲ್ಲೇ ಉಚಿತವಾಗಿ ಈ ಹೆಲ್ಮೆಟ್ ಅನ್ನು ವಿತರಿಸುವ ಮುಖೇನ ಬೈಕ್ ಸವಾರರ ಆರ್ಥಿಕ ಹೊರೆಯನ್ನು ತಗ್ಗಿಸಿದ್ದಾರೆ.

Body:ವಾ..ಓ..೧: ಈ ನವರಾತ್ರಿ ಹಬ್ಬದ ಸಂದರ್ಭ ಈ ನಾಡಿನ ಜನರಿಗೆಲ್ಲಾ ಒಳ್ಳೆದಾಗಲಿ ಎಂದು ಪ್ರಾರ್ಥಿಸಿ ಕಳೆದ ಒಂಭತ್ತು ದಿನಗಳಕಾಲ ನಾನಾ ರೀತಿಯ ಪೂಜೆ, ಹೋಮ-ಹವನ ಮಾಡಿಸಲಾಗಿದೆ. ಯಾವುದೇ ರೀತಿಯ ಭದ್ರತೆ ಇಲ್ಲದೇ, ಬೈಕ್ ಸವಾರರು ರಸ್ತೆಯಲ್ಲಿ ಸಂಚರಿಸುತ್ತಿದ್ದು, ಈ ಹೆಲ್ಮೆಟ್ ಇಲ್ಲದೇ
ಸಂಚರಿಸುವ ಬೈಕ್ ಸವಾರರು ಅಪಘಾತದಲ್ಲಿ ಸಾವನ್ನಪ್ಪುತ್ತಿ ದ್ದಾರೆ. ಅದನ್ನು ತಡೆಯುವ ಸಲುವಾಗಿಯೇ ಹೆಲ್ಮೆಟ್ ಅನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಬೈಕ್ ಸಂಚಾರದಲ್ಲಿ ನಮ್ಮ ಪ್ರಾಣ ರಕ್ಷಣೆ ಮಾಡುವ ಈ ಹೆಲ್ಮೆಟ್ ಕೂಡ ಆಯುಧ ಇದ್ದಂತೆ. ಅಂಥ ಜೀವರಕ್ಷಕ ಹೆಲ್ಮೆಟ್ ಅನ್ನು ಧರಿಸಿ ತಮ್ಮ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳಬೇಕು.
ಬೈಟ್: ಮುಂಡ್ಲೂರು ಪ್ರಭಂಜನಕುಮಾರ, ಅಧ್ಯಕ್ಷರು, ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್, ಬಳ್ಳಾರಿ.

ಪ್ರೇರಣೆಯಾಗಿದ್ದು ಹೇಗೆ: ಪ್ರಭಂಜನಕುಮಾರ ಅವರ ಆತ್ಮೀಯರು ಬೆಳಗಾವಿಯ ಬೈಕ್ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸಾವನ್ನಪ್ಪಿದ್ದರಂತೆ.‌ ಆಗ ಹೆಲ್ಮೆಟ್ ಧರಿಸಿದ್ದರೇ ಜೀವಕ್ಕೆ ಯಾವುದೇ ಕುತ್ತು ಬರುತ್ತಿರಲಿಲ್ಲ. ಆಗಾಗಿ, ಈ ನಿರ್ಧಾರಕ್ಕೆ ಬಂದು ಪ್ರತಿಯೊಬ್ಬರ ಜೀವರಕ್ಷಣೆ ನಮ್ಮೆಲ್ಲರದ್ದಾಗ ಬೇಕಿದೆ. ಈ ಹೆಲ್ಮೆಟ್ ವಿತರಣೆಯು ನನಗೆ ತೃಪ್ತಿದಾಯಕವಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_HELIMET_DISTRIBUTION_VISUALS_7203310

KN_BLY_2a_HELIMET_DISTRIBUTION_VISUALS_7203310

KN_BLY_2b_HELIMET_DISTRIBUTION_VISUALS_7203310

KN_BLY_2c_HELIMET_DISTRIBUTION_VISUALS_7203310

KN_BLY_2d_HELIMET_DISTRIBUTION_VISUALS_7203310

KN_BLY_2e_HELIMET_DISTRIBUTION_VISUALS_7203310

KN_BLY_2f_HELIMET_DISTRIBUTION_VISUALS_7203310

KN_BLY_2g_HELIMET_DISTRIBUTION_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.