ETV Bharat / state

ಪಕ್ಷಿಗಳ ದಾಹ ತಣಿಸಲು ಮುಂದಾದ ಹಂಪಿ ಸಂಶೋಧನಾ ವಿದ್ಯಾರ್ಥಿಗಳು!

ಪ್ರಾಣಿ ಪಕ್ಷಿಗಳಿಗೆ ಬೇಸಿಗೆ ಸಮಯದಲ್ಲಿ ನೀರು ದೊರೆಯುವುದು ವಿರಳ. ಅದಕ್ಕಾಗಿ ಪಕ್ಷಿಗಳಿಗೆ ನೀರಿಡುವ ಸಣ್ಣ ಪ್ರಯತ್ನ ಮಾಡಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳಾದ ಬಸವರಾಜ್ ಮತ್ತು ಸುಭಾಷ್ ಈಟಿವಿ ಭಾರತ್​ಗೆ ತಿಳಿಸಿದರು.

author img

By

Published : Apr 5, 2019, 4:10 AM IST

ಪಕ್ಷಿಗಳಿಗೆ ನೀರು ಇಡುವ ಸಣ್ಣ ಪ್ರಯತ್ನ

ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಕೋರ್ಸ್​ವರ್ಕ್ ಅಂತಿಮ ದಿನದಂದು ಸ್ವಯಂ ಹಣ ಖರ್ಚು ಮಾಡಿ ಪಕ್ಷಿಗಳ ದಾಹ ತಣಿಸುವ ಪ್ರಯತ್ನ ಮಾಡಿದರು. ಹೌದು, ಮಡಿಕೆಯ ಬಟ್ಟಲಿನಲ್ಲಿ ನೀರು ಹಾಕಿ ಗಿಡಗಳಿಗೆ ನೇತು ಹಾಕುವ ಮೂಲಕ ಹಕ್ಕಿಗಳಿಗೆ ನೀರುಣಿಸುವ ಕಾರ್ಯ ಮಾಡಿದರು .

ಗಣಿನಾಡು ಬಳ್ಳಾರಿಯಲ್ಲಿ ಬಿಸಿಲು ಮತ್ತು ಅತಿಬಿಸಿಲು ಎನ್ನುವ ಎರಡು ಕಾಲಗಳಿವೆ. ಪ್ರಾಣಿ ಪಕ್ಷಿಗಳಿಗೆ ಈ ಸಮಯದಲ್ಲಿ ನೀರು ದೊರೆಯುವುದು ಬಹಳ ವಿರಳ. ಅದಕ್ಕಾಗಿ ಪಕ್ಷಿಗಳಿಗೆ ನೀರಿಡುವ ಸಣ್ಣ ಪ್ರಯತ್ನ ಮಾಡಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳಾದ ಬಸವರಾಜ್ ಮತ್ತು ಸುಭಾಷ್ ಈಟಿವಿ ಭಾರತ್​ಗೆ ತಿಳಿಸಿದರು.

ಪಕ್ಷಿಗಳಿಗೆ ನೀರಿಡುವ ಸಣ್ಣ ಪ್ರಯತ್ನ

ಸಂಶೋಧನಾ ವಿದ್ಯಾರ್ಥಿಗಳಾದ ಸಿಂಧನೂರಿನ ಬಸವರಾಜ್ ಮತ್ತು ಕೂಡ್ಲಿಗಿಯ ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಪಕ್ಷಿಗಳಿಗೆ ನೀರುಣಿಸುವ ಪ್ರಯತ್ನ ಮಾಡಿದರು. ಬೇಸಿಗೆಯಲ್ಲಿ ಪ್ರತಿನಿತ್ಯ ಸಂಶೋಧನಾ ವಿದ್ಯಾರ್ಥಿಗಳು ಈ ಮಡಿಕೆಯ ಬಟ್ಟಲುಗಳಿಗೆ ನೀರು ಹಾಕುತ್ತಾರೆ.

ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಕೋರ್ಸ್​ವರ್ಕ್ ಅಂತಿಮ ದಿನದಂದು ಸ್ವಯಂ ಹಣ ಖರ್ಚು ಮಾಡಿ ಪಕ್ಷಿಗಳ ದಾಹ ತಣಿಸುವ ಪ್ರಯತ್ನ ಮಾಡಿದರು. ಹೌದು, ಮಡಿಕೆಯ ಬಟ್ಟಲಿನಲ್ಲಿ ನೀರು ಹಾಕಿ ಗಿಡಗಳಿಗೆ ನೇತು ಹಾಕುವ ಮೂಲಕ ಹಕ್ಕಿಗಳಿಗೆ ನೀರುಣಿಸುವ ಕಾರ್ಯ ಮಾಡಿದರು .

ಗಣಿನಾಡು ಬಳ್ಳಾರಿಯಲ್ಲಿ ಬಿಸಿಲು ಮತ್ತು ಅತಿಬಿಸಿಲು ಎನ್ನುವ ಎರಡು ಕಾಲಗಳಿವೆ. ಪ್ರಾಣಿ ಪಕ್ಷಿಗಳಿಗೆ ಈ ಸಮಯದಲ್ಲಿ ನೀರು ದೊರೆಯುವುದು ಬಹಳ ವಿರಳ. ಅದಕ್ಕಾಗಿ ಪಕ್ಷಿಗಳಿಗೆ ನೀರಿಡುವ ಸಣ್ಣ ಪ್ರಯತ್ನ ಮಾಡಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳಾದ ಬಸವರಾಜ್ ಮತ್ತು ಸುಭಾಷ್ ಈಟಿವಿ ಭಾರತ್​ಗೆ ತಿಳಿಸಿದರು.

ಪಕ್ಷಿಗಳಿಗೆ ನೀರಿಡುವ ಸಣ್ಣ ಪ್ರಯತ್ನ

ಸಂಶೋಧನಾ ವಿದ್ಯಾರ್ಥಿಗಳಾದ ಸಿಂಧನೂರಿನ ಬಸವರಾಜ್ ಮತ್ತು ಕೂಡ್ಲಿಗಿಯ ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಪಕ್ಷಿಗಳಿಗೆ ನೀರುಣಿಸುವ ಪ್ರಯತ್ನ ಮಾಡಿದರು. ಬೇಸಿಗೆಯಲ್ಲಿ ಪ್ರತಿನಿತ್ಯ ಸಂಶೋಧನಾ ವಿದ್ಯಾರ್ಥಿಗಳು ಈ ಮಡಿಕೆಯ ಬಟ್ಟಲುಗಳಿಗೆ ನೀರು ಹಾಕುತ್ತಾರೆ.

Intro:ಪಕ್ಷಿದಾಹಕ್ಕೆ ಮಡಿಕೆಯ ಬಟ್ಟಲಿನಲ್ಲಿ ನೀರಿ ಇಟ್ಟು ಗಿಡಗಳಿಗೆ ನೇತು ಹಾಕಿದ ಮಹಿಳಾ ಅಧ್ಯಯನದ ಸಂಶೋಧನಾ ವಿದ್ಯಾರ್ಥಿಗಳು.


Body:ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನಾ ಕೋರ್ಸ ವರ್ಕ್ ಅಂತಿಮ ದಿನದಂದು ಇಂದು ಸ್ವಯಂ ಹಣ ಖರ್ಚು ಮಾಡಿ
ಪಕ್ಷಿದಾಹಕ್ಕೆ ಮಡಿಕೆಯ ಬಟ್ಟಲಿನಲ್ಲಿ ನೀರಿ ಹಾಕಿ ಗಿಡಗಳಿಗೆ ನೇತು ಹಾಕಿದ್ದು ವಿಶೇಷವಾಗಿತ್ತು.


ಅತಿ ಬಿಸಿಲು :

ಗಣಿನಾಡು ಬಳ್ಳಾರಿಯಲ್ಲಿ ಬಿಸಿಲು ಮತ್ತು ಅತಿಬಿಸಿಲು ಎನ್ನುವ ಎರಡು ಕಾಲಗಳಿವೆ. ಪ್ರಾಣಿ ಪಕ್ಷಿಗಳಿಗೆ ನೀರು ದೊರೆಯುವುದು
ಬಹಳ ವಿರಳ ಅದಕ್ಕಾಗಿ ಪಕ್ಷಿಗಳಿಗೆ ನೀರು ಇಡುವ ಸಣ್ಣ ಪ್ರಯತ್ನ ಮಾಡಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳಾದ ಬಸವರಾಜ್ ಮತ್ತು ಸುಭಾಷ್ ಈಟಿವಿ ಭಾರತ್ ಗೆ ತಿಳಿಸಿದರು.

ಸಂಶೋಧನಾ ವಿದ್ಯಾರ್ಥಿಗಳಾದ ಸಿಂಧನೂರಿನ ಬಸವರಾಜ್ ಮತ್ತು ಕೂಡ್ಲಿಗಿಯ ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದಲ್ಲಿ ಸಹಪಾಠಗಳ ಜೊತೆಗೆ ಈ ರೀತಿಯ ಪಕ್ಷಿಗಳಿಗೆ ನೀರನ್ನು ಇಡುವ ಪ್ರಯತ್ನ ಮಾಡಿದರು. ಬೇಸಿಗೆಯಲ್ಲಿ
ಪ್ರತಿನಿತ್ಯ ಸಂಶೋಧನಾ ವಿದ್ಯಾರ್ಥಿಗಳು ಈ ಮಡಿಕೆಯ ಬಟ್ಟಲುಗಳಿಗೆ ನೀರು ಹಾಕುತ್ತಾರೆ.

ಉರುಕೋನಿ ಮತ್ತು ಮಣ್ಣಿನ ಬಟ್ಟಲುಗಳನ್ನು ಬಳಸಿ ಪಕ್ಷಿಗಳಿಗೆ ನೀರನ್ನು ಉಣಿಸುವ ಪ್ರಯತ್ನ ಮಾಡಿದರು‌.


Conclusion:ಈ ಸಮಯದಲ್ಲಿ ಮಹಿಳಾ ಅಧ್ಯಯನ ವಿಭಾದ ಸಂಶೋಧನಾ ವಿದ್ಯಾರ್ಥಿಗಳಾದ ಭಾರ್ಗವಿ ಶ್ರೀಪಾದ್ ಹೆಗಡೆ ಗಿರೀಶ್, ರೆಹಮಾನ್, ಸುವರ್ಣ, ತಿಪ್ಪೇಸ್ವಾಮಿ, ಶಶಿಕಲಾ, ಸಿದ್ದರಾಮಪ್ಪ, ಮಹಾಂತಮ್ಮ, ರಾಮಕೃಷ್ಣ ಭಾಗವಹಿಸಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.