ETV Bharat / state

ಹಂಪಿ ಉತ್ಸವದಲ್ಲಿ ಪುಂಡಾಟಿಕೆ ಪ್ರದರ್ಶಿಸಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

author img

By

Published : Jan 12, 2020, 3:52 AM IST

ಹಂಪಿ ಉತ್ಸವದಲ್ಲಿ ನೀತಿ ಮೋಹನ್ ರಸಮಂಜರಿ ಕಾರ್ಯಕ್ರಮ ನಡೆಸಿಕೊಡುವಾಗ ಕೆಲವು ಯುವಕರು ಪ್ರೇಕ್ಷಕರಿಗೆ ತೊಂದರೆ ಕೊಟ್ಟು ಪುಂಡಾಟಿಕೆ ಪ್ರದರ್ಶಿಸಿದ್ದರು. ಪ್ರೇಕ್ಷಕರ ಮೇಲೆ ಬಾಟಲಿ, ಬಟ್ಟೆ ಎಸೆದು ಅಸಭ್ಯವಾಗಿ ವರ್ತಿಸಿದ ಯುವಕರಿಗೆ ಪೊಲೀಸರು ಶಿಸ್ತು ಕಾಪಾಡುವಂತೆ ಎಚ್ಚರಿಕೆ ನೀಡಿದರು.

Police action in Hampi Uthsava in Hospet Taluk of Bellary District
ಹಂಪಿ ಉತ್ಸವದಲ್ಲಿ ಪುಂಡಪುಡಾರಿ ಯುವಕರಿಗೆ ಬಿಸಿ ಮುಟ್ಟಿಸಿದ ಖಾಕಿ ಪಡೆ

ಬಳ್ಳಾರಿ: ಹಂಪಿ ಉತ್ಸವದಲ್ಲಿ ನೀತಿ ಮೋಹನ್ ರಸಮಂಜರಿ ಕಾರ್ಯಕ್ರಮ ನಡೆಯುವಾಗ ಪ್ರೇಕ್ಷಕರಿಗೆ ತೊಂದರೆ ನೀಡುತ್ತಿದ್ದ ಪುಂಡ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹಂಪಿ ಉತ್ಸವದಲ್ಲಿ ಪುಂಡಾಟಿಕೆ ಪ್ರದರ್ಶಿಸಿದ ಯುವಕರು

ಹೊಸಪೇಟೆ ತಾಲೂಕಿನ ಹಂಪಿ ಉತ್ಸವ- 2020ರ ನಿಮಿತ್ತ ಕೃಷ್ಣದೇವರಾಯ ವೇದಿಕೆಯಲ್ಲಿ ಮುಂಬೈನ ನೀತಿ ಮೋಹನ್ ಮತ್ತು ತಂಡದವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆಗ ಕೆಲ ಯುವಕರು ಗಲಾಟೆ ಮಾಡಿದರು. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸ್ ಯುವಕರಿಗೆ ಗಲಾಟೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ವೇದಿಕ ಮೇಲೆ ಸಾಂಸ್ಕೃತಿ ಕಾರ್ಯಕ್ರಮಗಳು ನಡಯುತ್ತಿದ್ದಂತೆ ಕೆಲ ಪುಂಡ ಯುವಕರು ಪ್ರೇಕ್ಷಕರ ಮೇಲೆ ಬಾಟಲಿ, ಬಟ್ಟೆ ಎಸೆದು ಅಸಭ್ಯವಾಗಿ ವರ್ತಿಸಿದರು. ಗಲಾಟೆ ಮಾಡುತ್ತಿದ್ದ ಯುವಕರ ಬಳಿ ತೆರಳಿದ ಪೊಲೀಸರು, ಕಾರ್ಯಕ್ರಮಕ್ಕೆ ಭಂಗ ತರದಂತೆ, ಇನ್ನೊಬ್ಬರಿಗೆ ತೊಂದರೆ ಮಾಡದಂತೆ ಕಾರ್ಯಕ್ರಮಗಳನ್ನು ವೀಕ್ಷಿಸಿ. ಇಲ್ಲದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಳ್ಳಾರಿ: ಹಂಪಿ ಉತ್ಸವದಲ್ಲಿ ನೀತಿ ಮೋಹನ್ ರಸಮಂಜರಿ ಕಾರ್ಯಕ್ರಮ ನಡೆಯುವಾಗ ಪ್ರೇಕ್ಷಕರಿಗೆ ತೊಂದರೆ ನೀಡುತ್ತಿದ್ದ ಪುಂಡ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹಂಪಿ ಉತ್ಸವದಲ್ಲಿ ಪುಂಡಾಟಿಕೆ ಪ್ರದರ್ಶಿಸಿದ ಯುವಕರು

ಹೊಸಪೇಟೆ ತಾಲೂಕಿನ ಹಂಪಿ ಉತ್ಸವ- 2020ರ ನಿಮಿತ್ತ ಕೃಷ್ಣದೇವರಾಯ ವೇದಿಕೆಯಲ್ಲಿ ಮುಂಬೈನ ನೀತಿ ಮೋಹನ್ ಮತ್ತು ತಂಡದವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆಗ ಕೆಲ ಯುವಕರು ಗಲಾಟೆ ಮಾಡಿದರು. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸ್ ಯುವಕರಿಗೆ ಗಲಾಟೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ವೇದಿಕ ಮೇಲೆ ಸಾಂಸ್ಕೃತಿ ಕಾರ್ಯಕ್ರಮಗಳು ನಡಯುತ್ತಿದ್ದಂತೆ ಕೆಲ ಪುಂಡ ಯುವಕರು ಪ್ರೇಕ್ಷಕರ ಮೇಲೆ ಬಾಟಲಿ, ಬಟ್ಟೆ ಎಸೆದು ಅಸಭ್ಯವಾಗಿ ವರ್ತಿಸಿದರು. ಗಲಾಟೆ ಮಾಡುತ್ತಿದ್ದ ಯುವಕರ ಬಳಿ ತೆರಳಿದ ಪೊಲೀಸರು, ಕಾರ್ಯಕ್ರಮಕ್ಕೆ ಭಂಗ ತರದಂತೆ, ಇನ್ನೊಬ್ಬರಿಗೆ ತೊಂದರೆ ಮಾಡದಂತೆ ಕಾರ್ಯಕ್ರಮಗಳನ್ನು ವೀಕ್ಷಿಸಿ. ಇಲ್ಲದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

Intro:kn_07_bly_110120_policecontoralnewsvideo_ka10007

ಹಂಪಿ ಉತ್ಸವದಲ್ಲಿ ನೀತಿ ಮೋಹನ್ ರಸಮಂಜರಿ ಕಾರ್ಯಕ್ರಮ ನಡೆಯುವಾಗ ಪ್ರೇಕ್ಷಕರಿಗೆ ತೊಂದರೆ ಮಾಡಿದ ಪುಂಡಪುಡಾರಿ ಯುವಕರಿಗೆ ಬಿಸಿ ಮುಟ್ಟಿಸಿದರು ಖಾಕಿ


Body:.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಉತ್ಸವ 2020ರ ಕೃಷ್ಣದೇವರಾಯ ವೇದಿಕೆಯಲ್ಲಿ ಮುಂಬೈ ನ ನೀತಿ ಮೋಹನ್ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯುವಾಗ ಕೆಲ ಪುಂಡಪುಡಾರಿಗಳಿಗೆ ಗಲಾಟೆ ಮಾಡುವುದನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಪುಂಡಪುಡಾರಿಯನ್ನು ಬಿಸಿ ಮುಟ್ಟಿಸಿದರು.

ರಸಮಂಜರಿಗೆ ಕಾರ್ಯಕ್ರಮ ನಡೆಯುವಾಗ ಕೆಲ ಪುಂಡಪುಡಾರಿ ಯುವಕರು ಪ್ರೇಕ್ಷಕರ ಮೇಲೆ ಬಾಟಲಿ,ಬಟ್ಟೆ ಎಸೆಯುವುದನ್ನು ತಡೆಯುವ ಕೆಲಸವನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಡಿದರು. ಪುಂಡಪುಡಾರಿಗೆ ಬಿಸಿ ಮುಟ್ಟಿಸಿದರು.




Conclusion:ಈ ಸಮಯದಲ್ಲಿ ಬಳ್ಳಾರಿ ಜಿಲ್ಲಾ ಎಸ್.ಪಿ ಸಿ.ಕೆ ಬಾಬಾ, ಹೆಚ್ಚುವರಿ ಎಸ್.ಪಿ ಲಾವಣ್ಯ, ಹತ್ತಾರು ಪೊಲಿಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಗಲಾಟೆ ಮಾಡುವುದನ್ನು ಕಂಟ್ರೋಲ್ ಮಾಡಿ ಪ್ರೇಕ್ಷಕರಿಗೆ ಅನುಕೂಲ ಮಾಡಿಕೊಟ್ಟರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.