ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ಭಾವನಾತ್ಮಕವಾಗಿ ಹಾಗೂ ಸಾಂಸ್ಕೃತಿಕವಾಗಿ ಒಂದಾಗಿದೆ. ಆದರೆ, ಆಡಳಿತಾತ್ಮಕ ವಿಚಾರವಾಗಿ ಒಂದಾಗಲು ಅಸಾಧ್ಯವೆಂದು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆ ಭೌಗೋಳಿಕವಾಗಿ ಬಹು ವಿಸ್ತಾರವಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಈ ಜಿಲ್ಲೆಯ ವಿಭಜನೆ ಕುರಿತು ರಾಜ್ಯ ಸರ್ಕಾರ ಜನಪ್ರತಿನಿಧಿಗಳ ಅಭಿಪ್ರಾಯವನ್ನ ಕೇಳಿತ್ತು. ಅದಕ್ಕೆ ನಮ್ಮ ಸಮ್ಮತಿ ಇದೆ ಅಂತ ತಿಳಿಸಿದ್ದೆವು. ಅಲ್ಲದೇ, ಜಿಲ್ಲೆಯ ವಿಭಜನೆಗೆ ನಿರ್ದಿಷ್ಟ ಕಾರಣ ಹಾಗೂ ಸಲಹೆಗಳನ್ನ ನೀಡಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬರಲಿದೆ. ಹೀಗಾಗಿ, ಹರಪನಹಳ್ಳಿ ತಾಲೂಕಿನವರು ನಗರ ಕೇಂದ್ರಕ್ಕಾಗಿ ಬರಲು ಬಹು ದೂರವಾಗಲಿದೆ. ಆಡಳಿತಾತ್ಮಕ ವಿಚಾರವಾಗಿ ಈ ಜಿಲ್ಲೆಯ ವಿಭಜನೆ ಅನಿವಾರ್ಯತೆ ಇದೆ ಎಂದರು.
ಈಗ ಈ ಗಣಿಜಿಲ್ಲೆಯ ವಿಭಜನೆ ಕುರಿತು ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ. ಆದರೆ, ನಾನಾದರೂ ಏನು ಅಂತಾ ವಿರೋಧಿಸಲಿ, ನಾನೇ ಈ ವಿಭಜನೆಯ ಅನಿವಾರ್ಯತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಈಗ ನಾನು ವಿರೋಧಿಸಿದ್ರೆ, ಸರ್ಕಾರ ಕೇಳುತ್ತಾ ಎಂದು ಕೊಂಡಯ್ಯ ಪ್ರತತ್ಯೇಕ ವಿಜಯನಗರ ಜಿಲ್ಲೆ ಪರ ಮಾತನಾಡಿದರು.