ಬಳ್ಳಾರಿ: ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರ ರಾಜೀನಾಮೆ ಕುರಿತು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಜಿಲ್ಲೆಯ ಕುರುಗೋಡಿನಲ್ಲಿ ವಿವಿಧ ವಾರ್ಡುಗಳ ಪರ್ಯಟನೆ ಹಾಗೂ ನಿವೇಶನಕ್ಕಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸೇರಿದಂತೆ ಸಾರ್ವಜನಿಕ ಕುಂದು ಕೊರತೆ ಆಲಿಸಲು ಬಂದಿದ್ದ ಶಾಸಕ ಜೆ.ಎನ್.ಗಣೇಶ್, ಶಾಸಕ ಆನಂದ್ ಸಿಂಗ್ ರಾಜೀನಾಮೆ ಕುರಿತು ತುಟಿ ಬಿಚ್ಚಲಿಲ್ಲ.
ಶಾಸಕ ಆನಂದ್ ಸಿಂಗ್ ರಾಜೀನಾಮೆ ಕುರಿತು ಶಾಸಕ ಗಣೇಶ್ ಅವರ ಗಮನ ಸೆಳೆದಾಗ, ಯಾವುದೇ ಪ್ರತಿಕ್ರಿಯೆ ನೀಡಲು ಅವರು ಇಷ್ಟಪಡಲಿಲ್ಲ. ಆ ಪ್ರಶ್ನೆ ಎತ್ತುತ್ತಿದ್ದಂತೆಯೇ ಕಾರಿನೊಳಗೆ ಹತ್ತಿಕೊಂಡು ಕಂಪ್ಲಿಯತ್ತ ಮುಖಮಾಡಿದರು.