ETV Bharat / state

ಜಿಲ್ಲಾ ಖನಿಜ ನಿಧಿ ಬಳಕೆ ಸಂಬಂಧ ಜಿಲ್ಲಾಧಿಕಾರಿ ಸ್ಪಷ್ಟನೆ; ಸಚಿವ ಆನಂದ್ ಸಿಂಗ್ ಅಸಮಾಧಾನ - ಬಳ್ಳಾರಿಯಲ್ಲಿ ಡಿಎಂಎಫ್​ ಹಣ ಬಳಕೆ ವಿಚಾರವಾಗಿ ವಾದ

ಡಿಎಂಎಫ್ ಹಣವನ್ನು ಕೋವಿಡ್​​-19 ಪರಿಹಾರ ನಿಧಿಗೆ ಬಳಸಿಕೊಳ್ಳುವ ವಿಚಾರವಾಗಿ ಡಿಸಿಎಂ ಲಕ್ಷ್ಮಣ್​ ಸವದಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

MINISTER ANADA SINGH  meeting
ಬಳ್ಳಾರಿಯಲ್ಲಿ ಸಚಿವರ ಸಭೆ
author img

By

Published : Apr 8, 2020, 3:19 PM IST

ಬಳ್ಳಾರಿ: ಜಿಲ್ಲಾ ಖನಿಜ ನಿಧಿಯನ್ನು ಕೋವಿಡ್​-19 ನಿಯಂತ್ರಣಕ್ಕೆ ಬಳಸಿಕೊಳ್ಳುವ ವಿಚಾರ ಸಂಬಂಧ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ ಸಚಿವ ಆನಂದ್ ಸಿಂಗ್ ಜಿಲ್ಲಾಧಿಕಾರಿ ಸ್ಪಷ್ಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ ಸಚಿವರ ಸಭೆ

ಸಭೆಯಲ್ಲಿ ಮಾತನಾಡಿದ ಅರಣ್ಯ ಸಚಿವ ಆನಂದ್​ ಸಿಂಗ್ ಕೋವಿಡ್​​ನಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ​ ನಿಯಮಾವಳಿಗಳನ್ನು ಬದಿಗೊತ್ತಿ ಕ್ರಮ ಕೈಗೊಳ್ಳಿ ಎಂದು ಡಿಸಿ ನಕುಲ್​​ ಅವರಿಗೆ ಸೂಚಿಸಿದರು. ಅಲ್ಲದೇ ಸರ್ಕಾರದಲ್ಲಿದ್ದುಕೊಂಡೇ ನಾವು ಅಸಹಾಯಕರಾಗಿದ್ದೇವೆ ಎಂದರು. ಹೀಗಾಗಿ ಬಳ್ಳಾರಿಯಲ್ಲಿ ಇರೋ ಕೋಟಿಗಟ್ಟಲೆ ಹಣವನ್ನು ಬಳಸಿ ಜಿಲ್ಲೆಯ ಜನರಿಗೆ ಪಡಿತರ ನೀಡಬೇಕು. ಪ್ರತಿ ತಾಲೂಕಿಗೂ 5 ಕೋಟಿ ಹಣ ಬಿಡುಗಡೆ ಮಾಡಿ ಜನರ ತೊಂದರೆ ನಿವಾರಣೆ ಮಾಡಬೇಕೆನ್ನುವುದು ಜನಪ್ರತಿನಿಧಿಗಳು ಒತ್ತಾಯಿಸಿದ್ರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಡಿಎಂಎಫ್ ಫಂಡ್ ( ಜಿಲ್ಲಾ ಖನಿಜ ನಿಧಿಯನ್ನು) ಮನಸ್ಸಿಗೆ ಬಂದ ಹಾಗೇ ಬಳಸಲು ಬರೋಲ್ಲ ಎಂದು ಸ್ಪಷ್ಟನೆ ನೀಡಿದ್ರು. ಡಿಎಂಎಫ್ ನಿಧಿ ಅಡಿ ಶೇ.10ರಷ್ಟು ಮಾತ್ರ ಅನುದಾನವನ್ನು ಕೋವಿಡ್-19 ಗಾಗಿ ಖರ್ಚು ಮಾಡಲು ಮಾತ್ರ ಸಾಧ್ಯವೆಂದು ಜಿಲ್ಲಾಧಿಕಾರಿ ನಕುಲ್ ಸಭೆಗೆ ತಿಳಿಸಿದ್ರು. ವೈದ್ಯಕೀಯ ಪರಿಕರಗಳು ಹಾಗೂ ಮಾಸ್ಕ್ ಖರೀದಿ‌‌‌ ಮಾಡಲು ಮಾತ್ರ ಹಣ ಬಳಕೆಗೆ ಸಾಧ್ಯತೆ ಇದೆ ಎಂದ್ರು.

ಊಟ ಮಾಡಲು ಧವಸ ಧಾನ್ಯವಿಲ್ಲದೇ ಜನರು ಪರದಾಡ್ತಿದ್ದಾರೆ. ಈ ವೇಳೆ ಡಿಎಂಎಫ್ ಬಳಕೆ ಮಾಡಲು ಬರೋದಿಲ್ಲವೆಂದ್ರೆ ಹೇಗೆ ಎಂದು ಪ್ರಶ್ನಿಸಿದ ಸಚಿವ ಆನಂದ್​ ಸಿಂಗ್​ಗೆ ಶಾಸಕರಾದ ಗಾಲಿ‌ ಸೋಮಶೇಖರ ರೆಡ್ಡಿ, ನಾಗೇಂದ್ರ ಸೋಮಲಿಂಗಪ್ಪ, ತುಕಾರಾಂ ಕೂಡ ಸಾಥ್​​ ನೀಡಿ ಜಿಲ್ಲಾಧಿಕಾರಿ ನಕುಲ್​​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.

ನಂತರ ಹಣ ಬಳಕೆಗೆ ಕಾನೂನಿನ ತೊಡಕುಗಳು ಮತ್ತು ಪರಿಹಾರ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಚರ್ಚಿಸುತ್ತೇನೆಂದು ಡಿಸಿಎಂ ಸವದಿ ಸಮಾಧಾನಪಡಿಸಿದ್ರು.

ಬಳ್ಳಾರಿ: ಜಿಲ್ಲಾ ಖನಿಜ ನಿಧಿಯನ್ನು ಕೋವಿಡ್​-19 ನಿಯಂತ್ರಣಕ್ಕೆ ಬಳಸಿಕೊಳ್ಳುವ ವಿಚಾರ ಸಂಬಂಧ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ ಸಚಿವ ಆನಂದ್ ಸಿಂಗ್ ಜಿಲ್ಲಾಧಿಕಾರಿ ಸ್ಪಷ್ಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ ಸಚಿವರ ಸಭೆ

ಸಭೆಯಲ್ಲಿ ಮಾತನಾಡಿದ ಅರಣ್ಯ ಸಚಿವ ಆನಂದ್​ ಸಿಂಗ್ ಕೋವಿಡ್​​ನಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ​ ನಿಯಮಾವಳಿಗಳನ್ನು ಬದಿಗೊತ್ತಿ ಕ್ರಮ ಕೈಗೊಳ್ಳಿ ಎಂದು ಡಿಸಿ ನಕುಲ್​​ ಅವರಿಗೆ ಸೂಚಿಸಿದರು. ಅಲ್ಲದೇ ಸರ್ಕಾರದಲ್ಲಿದ್ದುಕೊಂಡೇ ನಾವು ಅಸಹಾಯಕರಾಗಿದ್ದೇವೆ ಎಂದರು. ಹೀಗಾಗಿ ಬಳ್ಳಾರಿಯಲ್ಲಿ ಇರೋ ಕೋಟಿಗಟ್ಟಲೆ ಹಣವನ್ನು ಬಳಸಿ ಜಿಲ್ಲೆಯ ಜನರಿಗೆ ಪಡಿತರ ನೀಡಬೇಕು. ಪ್ರತಿ ತಾಲೂಕಿಗೂ 5 ಕೋಟಿ ಹಣ ಬಿಡುಗಡೆ ಮಾಡಿ ಜನರ ತೊಂದರೆ ನಿವಾರಣೆ ಮಾಡಬೇಕೆನ್ನುವುದು ಜನಪ್ರತಿನಿಧಿಗಳು ಒತ್ತಾಯಿಸಿದ್ರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಡಿಎಂಎಫ್ ಫಂಡ್ ( ಜಿಲ್ಲಾ ಖನಿಜ ನಿಧಿಯನ್ನು) ಮನಸ್ಸಿಗೆ ಬಂದ ಹಾಗೇ ಬಳಸಲು ಬರೋಲ್ಲ ಎಂದು ಸ್ಪಷ್ಟನೆ ನೀಡಿದ್ರು. ಡಿಎಂಎಫ್ ನಿಧಿ ಅಡಿ ಶೇ.10ರಷ್ಟು ಮಾತ್ರ ಅನುದಾನವನ್ನು ಕೋವಿಡ್-19 ಗಾಗಿ ಖರ್ಚು ಮಾಡಲು ಮಾತ್ರ ಸಾಧ್ಯವೆಂದು ಜಿಲ್ಲಾಧಿಕಾರಿ ನಕುಲ್ ಸಭೆಗೆ ತಿಳಿಸಿದ್ರು. ವೈದ್ಯಕೀಯ ಪರಿಕರಗಳು ಹಾಗೂ ಮಾಸ್ಕ್ ಖರೀದಿ‌‌‌ ಮಾಡಲು ಮಾತ್ರ ಹಣ ಬಳಕೆಗೆ ಸಾಧ್ಯತೆ ಇದೆ ಎಂದ್ರು.

ಊಟ ಮಾಡಲು ಧವಸ ಧಾನ್ಯವಿಲ್ಲದೇ ಜನರು ಪರದಾಡ್ತಿದ್ದಾರೆ. ಈ ವೇಳೆ ಡಿಎಂಎಫ್ ಬಳಕೆ ಮಾಡಲು ಬರೋದಿಲ್ಲವೆಂದ್ರೆ ಹೇಗೆ ಎಂದು ಪ್ರಶ್ನಿಸಿದ ಸಚಿವ ಆನಂದ್​ ಸಿಂಗ್​ಗೆ ಶಾಸಕರಾದ ಗಾಲಿ‌ ಸೋಮಶೇಖರ ರೆಡ್ಡಿ, ನಾಗೇಂದ್ರ ಸೋಮಲಿಂಗಪ್ಪ, ತುಕಾರಾಂ ಕೂಡ ಸಾಥ್​​ ನೀಡಿ ಜಿಲ್ಲಾಧಿಕಾರಿ ನಕುಲ್​​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.

ನಂತರ ಹಣ ಬಳಕೆಗೆ ಕಾನೂನಿನ ತೊಡಕುಗಳು ಮತ್ತು ಪರಿಹಾರ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಚರ್ಚಿಸುತ್ತೇನೆಂದು ಡಿಸಿಎಂ ಸವದಿ ಸಮಾಧಾನಪಡಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.