ETV Bharat / state

ಬಂಗಾರದ ಬೆಳೆ ತೆಗೆದರೂ ಬೆಲೆ ಇಲ್ಲ: ಹೊಸಪೇಟೆಯಲ್ಲಿ ಪಪ್ಪಾಯ ಬೆಳೆಗಾರ ಕಂಗಾಲು

author img

By

Published : May 28, 2021, 12:04 PM IST

ಲಾಕ್ ಡೌನ್ ಮುಂಚೆ ರೈತರು ತಾವು ಬೆಳೆದ ಬೆಳೆಗಳನ್ನು ಒಳ್ಳೆಯ ದರಕ್ಕೆ ಮಾರಾಟ ಮಾಡುತ್ತಿದ್ದರು. ‌ಆದರೀಗ ಬೆಲೆ ಇಳಿಕೆಯಾಗಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.

papaya crop cannot be sold by the farmer
ಸಂಕಷ್ಟದಲ್ಲಿ ಪಪ್ಪಾಯ ಬೆಳೆದ ರೈತ

ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉತ್ತಮವಾಗಿ ಇಳುವರಿ ಬಂದ್ರೂ ಸಹ ರೈತರಿಗೆ ಹಾಕಿದ ಬಂಡವಾಳ ಬರುತ್ತಿಲ್ಲ. ಪರಿಣಾಮ, ರೈತರು ತಾವು ಬೆಳೆದ ಬೆಳೆ ನೋಡಿ ರೈತ ಕಣ್ಣೀರು ಹಾಕುವಂತಾಗಿದೆ.

ದರ ಇಳಿಕೆಯ ಬಿಸಿ:

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ತೂರಿನ ರೈತ ಅಳವುಂಡಿ ನಿಂಗಪ್ಪ 3.45 ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದಿದ್ದರು.‌ ಈ ಬಾರಿ ಉತ್ತಮ ಫಸಲು ಕೂಡಾ ಬಂದಿದೆ. ಲಾಕ್‌ಡೌನ್ ಮುನ್ನ ಒಂದು ಕೆ.ಜಿ.‌ ಪಪ್ಪಾಯಗೆ 14 ರೂ. ರವರೆಗೆ ಮಾರಾಟ ಮಾಡಿದ್ದಾರೆ. ಈಗ ಒಂದು ಕೆ‌.ಜಿ.ಗೆ 5 ರೂ.ಗೆ ಮಾರಾಟವಾಗುತ್ತಿದೆ. ಅಂದರೆ, 9 ರೂ. ವ್ಯತ್ಯಾಸವಾಗಿದೆ. ಇದನ್ನು ರೈತನಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಾಕ್ ಡೌನ್ ಮುಂಚೆ 40 ಟನ್‌ನಷ್ಟು ಪಪ್ಪಾಯ ಮಾರಾಟ ಮಾಡಿದ್ದು, 5 ಲಕ್ಷ ರೂ. ಆದಾಯ ಬಂದಿತ್ತು ಎಂದು ಅವರು ಹೇಳುತ್ತಾರೆ.

ಸಂಕಷ್ಟದಲ್ಲಿ ಪಪ್ಪಾಯ ಬೆಳೆದ ರೈತ

ಆದಾಯಕ್ಕೆ ಕುತ್ತು:

ಇವರ ಹೊಲದಲ್ಲಿ ಹತ್ತು ಜನ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪಪ್ಪಾಯ ಹಣ್ಣು ಕೀಳಲು ದಿನಕ್ಕೆ 300 ರೂ. ನೀಡಬೇಕು. ಪಪ್ಪಾಯ ದರ ಒಂದು ಕೆ.ಜಿಗೆ 5 ರೂಪಾಯಿ ಇದೆ. ಒಟ್ಟಾರೆ 3 ಲಕ್ಷ ರೂ.‌ನಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳುತ್ತಾರೆ.

ಮಾರಾಟ ಮಾಡುವ ಅನಿವಾರ್ಯತೆ:

ಈಗಾಗಲೇ ಪಪ್ಪಾಯ ಇಳುವರಿ ಬಂದಿದೆ. ಈಗ ಮಾರಾಟ ಮಾಡದಿದ್ದರೆ ಕೊಳೆತೇ ಹೋಗಬಹುದು. ಇದರಿಂದ ಮತ್ತಷ್ಟು ನಷ್ಟ ಅನುಭವಿಸಬೇಕಿದೆ. ರೈತ ಸಿಗುವ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ.

ಕಳೆದ ಎರಡು ವರ್ಷದಿಂದ ನಷ್ಟ:

ಕಳೆದ ಎರಡು ವರ್ಷಗಳಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಇದನ್ನು ತಪ್ಪಿಸಲು ಸರಕಾರ ಯೋಜನೆಯನ್ನು ಸಿದ್ಧಪಡಿಸಬೇಕು. ಇಲ್ಲದಿದ್ದರೆ ರೈತರು ನಷ್ಟದ ಸುಳಿಗೆ ಸಿಲುಕುತ್ತಾರೆ ಎಂದು ರೈತ ತನ್ನ ಅಳಲು ಹೇಳಿಕೊಂಡರು.‌

ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉತ್ತಮವಾಗಿ ಇಳುವರಿ ಬಂದ್ರೂ ಸಹ ರೈತರಿಗೆ ಹಾಕಿದ ಬಂಡವಾಳ ಬರುತ್ತಿಲ್ಲ. ಪರಿಣಾಮ, ರೈತರು ತಾವು ಬೆಳೆದ ಬೆಳೆ ನೋಡಿ ರೈತ ಕಣ್ಣೀರು ಹಾಕುವಂತಾಗಿದೆ.

ದರ ಇಳಿಕೆಯ ಬಿಸಿ:

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ತೂರಿನ ರೈತ ಅಳವುಂಡಿ ನಿಂಗಪ್ಪ 3.45 ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದಿದ್ದರು.‌ ಈ ಬಾರಿ ಉತ್ತಮ ಫಸಲು ಕೂಡಾ ಬಂದಿದೆ. ಲಾಕ್‌ಡೌನ್ ಮುನ್ನ ಒಂದು ಕೆ.ಜಿ.‌ ಪಪ್ಪಾಯಗೆ 14 ರೂ. ರವರೆಗೆ ಮಾರಾಟ ಮಾಡಿದ್ದಾರೆ. ಈಗ ಒಂದು ಕೆ‌.ಜಿ.ಗೆ 5 ರೂ.ಗೆ ಮಾರಾಟವಾಗುತ್ತಿದೆ. ಅಂದರೆ, 9 ರೂ. ವ್ಯತ್ಯಾಸವಾಗಿದೆ. ಇದನ್ನು ರೈತನಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಾಕ್ ಡೌನ್ ಮುಂಚೆ 40 ಟನ್‌ನಷ್ಟು ಪಪ್ಪಾಯ ಮಾರಾಟ ಮಾಡಿದ್ದು, 5 ಲಕ್ಷ ರೂ. ಆದಾಯ ಬಂದಿತ್ತು ಎಂದು ಅವರು ಹೇಳುತ್ತಾರೆ.

ಸಂಕಷ್ಟದಲ್ಲಿ ಪಪ್ಪಾಯ ಬೆಳೆದ ರೈತ

ಆದಾಯಕ್ಕೆ ಕುತ್ತು:

ಇವರ ಹೊಲದಲ್ಲಿ ಹತ್ತು ಜನ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪಪ್ಪಾಯ ಹಣ್ಣು ಕೀಳಲು ದಿನಕ್ಕೆ 300 ರೂ. ನೀಡಬೇಕು. ಪಪ್ಪಾಯ ದರ ಒಂದು ಕೆ.ಜಿಗೆ 5 ರೂಪಾಯಿ ಇದೆ. ಒಟ್ಟಾರೆ 3 ಲಕ್ಷ ರೂ.‌ನಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳುತ್ತಾರೆ.

ಮಾರಾಟ ಮಾಡುವ ಅನಿವಾರ್ಯತೆ:

ಈಗಾಗಲೇ ಪಪ್ಪಾಯ ಇಳುವರಿ ಬಂದಿದೆ. ಈಗ ಮಾರಾಟ ಮಾಡದಿದ್ದರೆ ಕೊಳೆತೇ ಹೋಗಬಹುದು. ಇದರಿಂದ ಮತ್ತಷ್ಟು ನಷ್ಟ ಅನುಭವಿಸಬೇಕಿದೆ. ರೈತ ಸಿಗುವ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ.

ಕಳೆದ ಎರಡು ವರ್ಷದಿಂದ ನಷ್ಟ:

ಕಳೆದ ಎರಡು ವರ್ಷಗಳಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಇದನ್ನು ತಪ್ಪಿಸಲು ಸರಕಾರ ಯೋಜನೆಯನ್ನು ಸಿದ್ಧಪಡಿಸಬೇಕು. ಇಲ್ಲದಿದ್ದರೆ ರೈತರು ನಷ್ಟದ ಸುಳಿಗೆ ಸಿಲುಕುತ್ತಾರೆ ಎಂದು ರೈತ ತನ್ನ ಅಳಲು ಹೇಳಿಕೊಂಡರು.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.