ETV Bharat / state

ಕಾಂಗ್ರೆಸ್‌ನ ಮಾಜಿ ಶಾಸಕರಿಂದ 5000 ಇಫ್ತಿಯಾರ್ ಆಹಾರ ಪಾಕೇಟ್ ವಿತರಣೆ..

author img

By

Published : Apr 30, 2020, 9:39 AM IST

ಚಿಕನ್ ಕಬಾಬ್, ಬಿರಿಯಾನಿ ಪಾಕೇಟ್‌ಗಳ ಮೇಲೆ ರಂಜಾನ್ ಹಬ್ಬದ ಶುಭಕಾಮನೆಗಳ ಜೊತೆಗೆ, ಎಲ್ಲರೂ ಮನೆಯಲ್ಲಿರಿ.. ಸುರಕ್ಷಿತವಾಗಿರಿ.. ಕೊರೊನಾ ವೈರಸ್ ಹೋಗುವವರೆಗೂ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸೋಣ.. ದೇಶ ಮೊದಲು.. ಎಂಬ ಘೋಷ ವಾಕ್ಯವನ್ನ ಲೇಬಲ್ ಮೇಲೆ ಮುದ್ರಿಸಲಾಗಿದೆ.

Lockdown Effect: 5000 Iftiyar Food Pocket sponcer by Former MLA
ಲಾಕ್ ಡೌನ್ ಎಫೆಕ್ಟ್​: ಮಾಜಿ ಶಾಸಕರಿಂದ 5000 ಇಫ್ತಿಯಾರ್ ಆಹಾರ ಪಾಕೇಟ್ ತಯಾರಿಕೆ…

ಬಳ್ಳಾರಿ : ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸದ ಹಬ್ಬ ಶುರುವಾಗಿದೆ. ಉಪವಾಸ ವ್ರತಾಚರಣೆ ಮಾಡುವ ಬಡ ಮುಸ್ಲಿಂ ಬಾಂಧವರಿಗೆ ಕಾಂಗ್ರೆಸ್‌ನ‌ ಮಾಜಿ ಶಾಸಕರೊಬ್ಬರು ಸುಮಾರು 5000 ಇಫ್ತಿಯಾರ್ ಆಹಾರ ಪಾಕೇಟ್‌ ತಯಾರಿಸಿ ಹಂಚಿಕೆ ಮಾಡಲು‌ ಮುಂದಾಗಿದ್ದಾರೆ.

Lockdown Effect: 5000 Iftiyar Food Pocket sponcer by Former MLA
ಕಾಂಗ್ರೆಸ್‌ ಮಾಜಿ ಶಾಸಕರಿಂದ 5000 ಇಫ್ತಿಯಾರ್ ಆಹಾರ ಪಾಕೇಟ್ ತಯಾರಿಕೆ..

ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಜಿ ಶಾಸಕ ಸಿರಾಜ್ ಶೇಖ್ ಅವರು, ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಿಯಾರ್ ಆಹಾರ ಪ್ಯಾಕೇಟ್‌ಗಳನ್ನ ರೆಡಿ ಮಾಡಿ ಪ್ರತಿದಿನ 650 ಪ್ಯಾಕೇಟ್‌ಗಳನ್ನ ವಿತರಿಸುತ್ತಿದ್ದಾರೆ. ವಾರಗಳಕಾಲ ಸುಮಾರು 5000 ಪ್ಯಾಕೇಟ್‌ಗಳನ್ನ ಮನೆಮನೆಗೆ ವಿತರಿಸುವ ಪವಿತ್ರ ಕಾರ್ಯಕ್ಕೆ ಮುಂದಾಗಿರೋದು ಮುಸ್ಲಿಂ ಬಾಂಧವರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ವತಃ ಮಾಜಿ ಶಾಸಕ ಸಿರಾಜ್ ಶೇಖ್ ಅವರೇ, ಇಫ್ತಿಯಾರ್ ಆಹಾರ ಪಾಕೇಟ್​ಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಚಿಕನ್ ಕಬಾಬ್, ಬಿರಿಯಾನಿ ಪಾಕೇಟ್‌ಗಳ ಮೇಲೆ ರಂಜಾನ್ ಹಬ್ಬದ ಶುಭಕಾಮನೆಗಳ ಜೊತೆಗೆ, ಎಲ್ಲರೂ ಮನೆಯಲ್ಲಿರಿ.. ಸುರಕ್ಷಿತವಾಗಿರಿ.. ಕೊರೊನಾ ವೈರಸ್ ಹೋಗುವವರೆಗೂ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸೋಣ.. ದೇಶ ಮೊದಲು.. ಎಂಬ ಘೋಷ ವಾಕ್ಯವನ್ನ ಲೇಬಲ್ ಮೇಲೆ ಮುದ್ರಿಸಿ ಜಾಗೃತಿ‌ ಮೂಡಿಸಲಾಗುತ್ತಿದೆ.

ಬಳ್ಳಾರಿ : ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸದ ಹಬ್ಬ ಶುರುವಾಗಿದೆ. ಉಪವಾಸ ವ್ರತಾಚರಣೆ ಮಾಡುವ ಬಡ ಮುಸ್ಲಿಂ ಬಾಂಧವರಿಗೆ ಕಾಂಗ್ರೆಸ್‌ನ‌ ಮಾಜಿ ಶಾಸಕರೊಬ್ಬರು ಸುಮಾರು 5000 ಇಫ್ತಿಯಾರ್ ಆಹಾರ ಪಾಕೇಟ್‌ ತಯಾರಿಸಿ ಹಂಚಿಕೆ ಮಾಡಲು‌ ಮುಂದಾಗಿದ್ದಾರೆ.

Lockdown Effect: 5000 Iftiyar Food Pocket sponcer by Former MLA
ಕಾಂಗ್ರೆಸ್‌ ಮಾಜಿ ಶಾಸಕರಿಂದ 5000 ಇಫ್ತಿಯಾರ್ ಆಹಾರ ಪಾಕೇಟ್ ತಯಾರಿಕೆ..

ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಜಿ ಶಾಸಕ ಸಿರಾಜ್ ಶೇಖ್ ಅವರು, ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಿಯಾರ್ ಆಹಾರ ಪ್ಯಾಕೇಟ್‌ಗಳನ್ನ ರೆಡಿ ಮಾಡಿ ಪ್ರತಿದಿನ 650 ಪ್ಯಾಕೇಟ್‌ಗಳನ್ನ ವಿತರಿಸುತ್ತಿದ್ದಾರೆ. ವಾರಗಳಕಾಲ ಸುಮಾರು 5000 ಪ್ಯಾಕೇಟ್‌ಗಳನ್ನ ಮನೆಮನೆಗೆ ವಿತರಿಸುವ ಪವಿತ್ರ ಕಾರ್ಯಕ್ಕೆ ಮುಂದಾಗಿರೋದು ಮುಸ್ಲಿಂ ಬಾಂಧವರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ವತಃ ಮಾಜಿ ಶಾಸಕ ಸಿರಾಜ್ ಶೇಖ್ ಅವರೇ, ಇಫ್ತಿಯಾರ್ ಆಹಾರ ಪಾಕೇಟ್​ಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಚಿಕನ್ ಕಬಾಬ್, ಬಿರಿಯಾನಿ ಪಾಕೇಟ್‌ಗಳ ಮೇಲೆ ರಂಜಾನ್ ಹಬ್ಬದ ಶುಭಕಾಮನೆಗಳ ಜೊತೆಗೆ, ಎಲ್ಲರೂ ಮನೆಯಲ್ಲಿರಿ.. ಸುರಕ್ಷಿತವಾಗಿರಿ.. ಕೊರೊನಾ ವೈರಸ್ ಹೋಗುವವರೆಗೂ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸೋಣ.. ದೇಶ ಮೊದಲು.. ಎಂಬ ಘೋಷ ವಾಕ್ಯವನ್ನ ಲೇಬಲ್ ಮೇಲೆ ಮುದ್ರಿಸಿ ಜಾಗೃತಿ‌ ಮೂಡಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.