ETV Bharat / state

ಜಿಂದಾಲ್ ಸೀಲ್​ಡೌನ್ ಮಾಡಿದ್ರೆ ಕೊರೊನಾ ದೇಶ ಬಿಟ್ಟು ಹೋಗುತ್ತಾ?: ಸಚಿವ ಆನಂದ್ ಸಿಂಗ್

author img

By

Published : Jul 8, 2020, 9:59 AM IST

ಕೆಲವು ಗುಂಪುಗಳು ಜಿಂದಾಲ್ ಕಂಪನಿಯನ್ನು ಟಾರ್ಗೆಟ್ ಮಾಡುತ್ತಿವೆ. ಅದಕ್ಕೆ ಏನೂ ಮಾಡುವುದಕ್ಕೆ ಆಗಲ್ಲ. ಜಿಂದಾಲ್ ಉಕ್ಕು ಕಾರ್ಖಾನೆಯನ್ನು ಸೀಲ್​ಡೌನ್ ಮಾಡುವುದಾದರೆ ಕೊರೊನಾ ರಾಜ್ಯ ಮತ್ತು ದೇಶ ಬಿಟ್ಟು ಹೋಗುತ್ತಾ? ಎಂದು ಸಚಿವ ಆನಂದ್ ಸಿಂಗ್ ಪ್ರಶ್ನಿಸಿದ್ದಾರೆ.

Minister Anandasingh
ಸಚಿವ ಆನಂದಸಿಂಗ್

ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನು ಸೀಲ್​ಡೌನ್ ಮಾಡಿದರೆ ಕೊರೊನಾ ಸೋಂಕು ಈ ದೇಶ ಅಥವಾ ರಾಜ್ಯ ಬಿಟ್ಟು ಹೊಗುತ್ತಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮಾಧ್ಯಮಗಳಿಗೆ ಮರು ಪ್ರಶ್ನೆ ಹಾಕಿದರು.

ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಸಚಿವ ಆನಂದ್ ಸಿಂಗ್ ಮಾತನಾಡಿದರು.

ಬಳ್ಳಾರಿಯ ಜಿಲ್ಲಾ ಕೋವಿಡ್ -19 ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್​ನಿಂದಲೇ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರೋದರಿಂದ ಜಿಲ್ಲೆಯ ಸಂಡೂರು ಮತ್ತು ತೋರಣಗಲ್ಲು ಭಾಗದಲ್ಲಿ ನೆಲೆಸಿರುವವರು ಹೆದರಿ ಬೇರೆಡೆಗೆ ವಲಸೆ ಹೋಗಲು ಚಿಂತನೆ ನಡೆಸಿದ್ದಾರೆ.‌‌ ಹೀಗಾಗಿ, ಜಿಂದಾಲ್ ಸೀಲ್​ಡೌನ್ ಮಾಡಬೇಕು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಚಿವ ಆನಂದ್ ಸಿಂಗ್ ಹೀಗೆ ಪ್ರತಿಕ್ರಿಯಿಸಿದರು.

ಬಳ್ಳಾರಿಯಲ್ಲಿ ವೈದ್ಯರಿಗೆ ಈ ಸೋಂಕು ಹರಡಿರುವ ಕಾರಣ ಸಿಬ್ಬಂದಿಗೆ ತೊಂದರೆಯಾಗಿದೆ. ಕೋವಿಡ್ ಆಸ್ಪತ್ರೆಗೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಕೊರೊನಾ ಸೋಂಕಿನ ಕುರಿತು ಎಲ್ಲರಲ್ಲೂ ಅತಂಕ ಇದೆ. ಮೇಲಿಂದ ಮೇಲೆ ಸಾವುಗಳು ಸಂಭವಿಸಿದಾಗ ಈ ರೀತಿ ಭಯವಾಗೋದು ಸಹಜ.

ಕೋವಿಡ್ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇದೆ. ಸರಿ ಮಾಡಿಸೋ ಪ್ರಯತ್ನ ಮಾಡ್ತಿದ್ದೇವೆ. ಜಿಂದಾಲ್​ನಿಂದ ಸೋಂಕು ಹರಡಿಲ್ಲ ಎಂದು ಹೇಳೋಕೆ ಆಗಲ್ಲ. ಇಡೀ ರಾಜ್ಯಕ್ಕೆ ಗೊತ್ತು. ಅವರಿಂದಲೇ ಹೆಚ್ಚು ರೋಗ ಹರಡಿದೆ ಅನ್ನೋದು. ಕೆಲವು ಗುಂಪುಗಳು ಜಿಂದಾಲ್ ಕಂಪನಿಯನ್ನು ಟಾರ್ಗೆಟ್ ಮಾಡುತ್ತಿವೆ. ಅದಕ್ಕೆ ಏನು ಮಾಡೋಕೆ ಆಗಲ್ಲ. ಈ ಜಿಂದಾಲ್ ಉಕ್ಕು ಕಾರ್ಖಾನೆಯನ್ನು ಸೀಲ್​ಡೌನ್ ಮಾಡುವುದಾದರೆ, ಕೊರೊನಾ ರಾಜ್ಯ ಮತ್ತು ದೇಶ ಬಿಟ್ಟು ಹೋಗುತ್ತಾ? ಎಂದು ಅವರು ಕೇಳಿದರು.

ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನು ಸೀಲ್​ಡೌನ್ ಮಾಡಿದರೆ ಕೊರೊನಾ ಸೋಂಕು ಈ ದೇಶ ಅಥವಾ ರಾಜ್ಯ ಬಿಟ್ಟು ಹೊಗುತ್ತಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮಾಧ್ಯಮಗಳಿಗೆ ಮರು ಪ್ರಶ್ನೆ ಹಾಕಿದರು.

ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಸಚಿವ ಆನಂದ್ ಸಿಂಗ್ ಮಾತನಾಡಿದರು.

ಬಳ್ಳಾರಿಯ ಜಿಲ್ಲಾ ಕೋವಿಡ್ -19 ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್​ನಿಂದಲೇ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರೋದರಿಂದ ಜಿಲ್ಲೆಯ ಸಂಡೂರು ಮತ್ತು ತೋರಣಗಲ್ಲು ಭಾಗದಲ್ಲಿ ನೆಲೆಸಿರುವವರು ಹೆದರಿ ಬೇರೆಡೆಗೆ ವಲಸೆ ಹೋಗಲು ಚಿಂತನೆ ನಡೆಸಿದ್ದಾರೆ.‌‌ ಹೀಗಾಗಿ, ಜಿಂದಾಲ್ ಸೀಲ್​ಡೌನ್ ಮಾಡಬೇಕು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಚಿವ ಆನಂದ್ ಸಿಂಗ್ ಹೀಗೆ ಪ್ರತಿಕ್ರಿಯಿಸಿದರು.

ಬಳ್ಳಾರಿಯಲ್ಲಿ ವೈದ್ಯರಿಗೆ ಈ ಸೋಂಕು ಹರಡಿರುವ ಕಾರಣ ಸಿಬ್ಬಂದಿಗೆ ತೊಂದರೆಯಾಗಿದೆ. ಕೋವಿಡ್ ಆಸ್ಪತ್ರೆಗೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಕೊರೊನಾ ಸೋಂಕಿನ ಕುರಿತು ಎಲ್ಲರಲ್ಲೂ ಅತಂಕ ಇದೆ. ಮೇಲಿಂದ ಮೇಲೆ ಸಾವುಗಳು ಸಂಭವಿಸಿದಾಗ ಈ ರೀತಿ ಭಯವಾಗೋದು ಸಹಜ.

ಕೋವಿಡ್ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇದೆ. ಸರಿ ಮಾಡಿಸೋ ಪ್ರಯತ್ನ ಮಾಡ್ತಿದ್ದೇವೆ. ಜಿಂದಾಲ್​ನಿಂದ ಸೋಂಕು ಹರಡಿಲ್ಲ ಎಂದು ಹೇಳೋಕೆ ಆಗಲ್ಲ. ಇಡೀ ರಾಜ್ಯಕ್ಕೆ ಗೊತ್ತು. ಅವರಿಂದಲೇ ಹೆಚ್ಚು ರೋಗ ಹರಡಿದೆ ಅನ್ನೋದು. ಕೆಲವು ಗುಂಪುಗಳು ಜಿಂದಾಲ್ ಕಂಪನಿಯನ್ನು ಟಾರ್ಗೆಟ್ ಮಾಡುತ್ತಿವೆ. ಅದಕ್ಕೆ ಏನು ಮಾಡೋಕೆ ಆಗಲ್ಲ. ಈ ಜಿಂದಾಲ್ ಉಕ್ಕು ಕಾರ್ಖಾನೆಯನ್ನು ಸೀಲ್​ಡೌನ್ ಮಾಡುವುದಾದರೆ, ಕೊರೊನಾ ರಾಜ್ಯ ಮತ್ತು ದೇಶ ಬಿಟ್ಟು ಹೋಗುತ್ತಾ? ಎಂದು ಅವರು ಕೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.