ETV Bharat / state

ಹಳೇಕೋಟೆ ವೀರಭದ್ರೇಶ್ವರ ಜಾತ್ರೆಯ ಸಂಭ್ರಮದಲ್ಲಿ ಮಿಂದೆದ್ದ ಭಕ್ತರು.. - ಹಳೇಕೋಟೆ ವೀರಭದ್ರೇಶ್ವರ ಜಾತ್ರೆ ಲೆಟೆಸ್ಟ್ ನ್ಯೂಸ್​

ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರನ ಜಾತ್ರೆ ಅದ್ದೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಹಳೇಕೋಟೆ ವೀರಭದ್ರೇಶ್ವರ ಜಾತ್ರೆ
Halekote Veerabhadreshwara fair
author img

By

Published : Dec 7, 2019, 9:49 AM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರನ ಜಾತ್ರೆ ಅದ್ದೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಹಳೇಕೋಟೆ ಶ್ರೀ ವೀರಭದ್ರೇಶ್ವರ ಜಾತ್ರೆ..

ವೀರಭದ್ರೇಶ್ವರನ ರಥೋತ್ಸವದ ಹಿನ್ನೆಲೆಯಲ್ಲಿ ಹಳೇಕೋಟೆ ಗ್ರಾಮದಲ್ಲಿ ವಾದ್ಯಮೇಳಗಳ ಸದ್ದು ಜೋರಾಗಿತ್ತು. ಜಾತ್ರೆಗೆ ಸಿರುಗುಪ್ಪ ತಾಲೂಕಿನ ನಾನಾ ಗ್ರಾಮಗಳಿಂದ ಸಾವಿರಾರು ಭಕ್ತರು ಸನ್ನಿಧಾನದಲ್ಲಿ ರಾತ್ರಿಯೇ ಬೀಡುಬಿಟ್ಟಿದ್ದರು. ಇಂದು ಬೆಳಗಿನಜಾವ ಅಗ್ನಿಕುಂಡ ಸೇರಿದಂತೆ ಇನ್ನಿತರೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡರು. ಗ್ರಾಮದ ರಾಜ ಬೀದಿಯಲ್ಲಿ ವೀರಭದ್ರೇಶ್ವರನ ಮಡೆತೇರನ್ನು ಎಳೆಯಲಾಯಿತು. ಬಾಳೆಹಣ್ಣು, ನಿಂಬೆಹಣ್ಣು ಸಮರ್ಪಿಸಿ ಭಕ್ತರು ಭಕ್ತಿ ಮೆರೆದರು.

ಅಗ್ನಿಕುಂಡದಲಿ ಮಹಿಳೆಯರ ಪಾದಸ್ಪರ್ಶ:
ಹಿಮದ ಕಾರ್ಮೋಡದಲ್ಲೂ ಈ ದಿನ ಬೆಳ್ಳಂಬೆಳಗ್ಗೆ ಮಹಿಳೆಯರು, ಪುರುಷರು ಹಾಗೂ ಚಿಣ್ಣರು, ಯುವಕ-ಯುವತಿಯರು ಮಡೆಸ್ನಾನ ಮಾಡಿ ಅಗ್ನಿಕುಂಡ ಪಾದಸ್ಪರ್ಶ ಮಾಡಿದರು. ಆ ಮೂಲಕ ವೀರಭದ್ರೇಶ್ವರನಿಗೆ ತಮ್ಮ
ಭಕ್ತಿಯನ್ನು ತೋರ್ಪಡಿಸಿದರು. ಈ ದೃಶ್ಯಕ್ಕೆ ಭಕ್ತಗಣ‌‌ ಸಾಕ್ಷಿಯಾಗಿತ್ತು.

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರನ ಜಾತ್ರೆ ಅದ್ದೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಹಳೇಕೋಟೆ ಶ್ರೀ ವೀರಭದ್ರೇಶ್ವರ ಜಾತ್ರೆ..

ವೀರಭದ್ರೇಶ್ವರನ ರಥೋತ್ಸವದ ಹಿನ್ನೆಲೆಯಲ್ಲಿ ಹಳೇಕೋಟೆ ಗ್ರಾಮದಲ್ಲಿ ವಾದ್ಯಮೇಳಗಳ ಸದ್ದು ಜೋರಾಗಿತ್ತು. ಜಾತ್ರೆಗೆ ಸಿರುಗುಪ್ಪ ತಾಲೂಕಿನ ನಾನಾ ಗ್ರಾಮಗಳಿಂದ ಸಾವಿರಾರು ಭಕ್ತರು ಸನ್ನಿಧಾನದಲ್ಲಿ ರಾತ್ರಿಯೇ ಬೀಡುಬಿಟ್ಟಿದ್ದರು. ಇಂದು ಬೆಳಗಿನಜಾವ ಅಗ್ನಿಕುಂಡ ಸೇರಿದಂತೆ ಇನ್ನಿತರೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡರು. ಗ್ರಾಮದ ರಾಜ ಬೀದಿಯಲ್ಲಿ ವೀರಭದ್ರೇಶ್ವರನ ಮಡೆತೇರನ್ನು ಎಳೆಯಲಾಯಿತು. ಬಾಳೆಹಣ್ಣು, ನಿಂಬೆಹಣ್ಣು ಸಮರ್ಪಿಸಿ ಭಕ್ತರು ಭಕ್ತಿ ಮೆರೆದರು.

ಅಗ್ನಿಕುಂಡದಲಿ ಮಹಿಳೆಯರ ಪಾದಸ್ಪರ್ಶ:
ಹಿಮದ ಕಾರ್ಮೋಡದಲ್ಲೂ ಈ ದಿನ ಬೆಳ್ಳಂಬೆಳಗ್ಗೆ ಮಹಿಳೆಯರು, ಪುರುಷರು ಹಾಗೂ ಚಿಣ್ಣರು, ಯುವಕ-ಯುವತಿಯರು ಮಡೆಸ್ನಾನ ಮಾಡಿ ಅಗ್ನಿಕುಂಡ ಪಾದಸ್ಪರ್ಶ ಮಾಡಿದರು. ಆ ಮೂಲಕ ವೀರಭದ್ರೇಶ್ವರನಿಗೆ ತಮ್ಮ
ಭಕ್ತಿಯನ್ನು ತೋರ್ಪಡಿಸಿದರು. ಈ ದೃಶ್ಯಕ್ಕೆ ಭಕ್ತಗಣ‌‌ ಸಾಕ್ಷಿಯಾಗಿತ್ತು.

Intro:ಹಳೇಕೋಟೆ ವೀರಭದ್ರೇಶ್ವರನ ಜಾತ್ರೆಯ ಸಂಭ್ರಮದಲಿ ಮಿಂದೆದ್ದ ಭಕ್ತಗಣ: ಕೆಂಡದಲಿ ಪಾದಾರ್ಪಣೆ ಮಾಡಿದ ಮಹಿಳೆಯರು
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ
ಗ್ರಾಮದ ಆರಾಧ್ಯದೈವ ವೀರಭದ್ರೇಶ್ವರನ ಜಾತ್ರೆಯ ಸಂಭ್ರಮ
ದಲಿ ಸಾವಿರಾರು ಭಕ್ತರು ತೇಲಾಡಿದ್ರು.
ಈ ದಿನ ನಡೆಯಲಿರೊ ವೀರಭದ್ರೇಶ್ವರನ ರಥೋತ್ಸವದ ನಿಮಿತ್ತ ಸಿರುಗುಪ್ಪ ತಾಲೂಕಿನ ನಾನಾ ಗ್ರಾಮಗಳಿಂದ ಸಾವಿರಾರು ಭಕ್ತರು ಹಳೇಕೋಟೆ ವೀರಭದ್ರೇಶ್ವರನ ಸನ್ನಿಧಾನದಲ್ಲಿ ಶುಕ್ರವಾರ ರಾತ್ರಿ ಬೀಡುಬಿಟ್ಟಿದ್ದರು.‌ ಶನಿವಾರ ಬೆಳಗಿನಜಾವ ಅಗ್ನಿಕುಂಡ ಸೇರಿದಂತೆ ಇನ್ನಿತರೆ ಧಾರ್ಮಿಕ ಕಾರ್ಯಗಳಲ್ಲಿ ವೀರಭದ್ರೇಶ್ವರನ ಆರಾಧಕರು ತೊಡಗಿಕೊಂಡರು.
ವೀರಭದ್ರೇಶ್ವರನ ಜಾತ್ರೆಯ ಹಿನ್ನಲೆಯಲ್ಲಿ ಹಳೇಕೋಟೆ ಗ್ರಾಮ ದಲ್ಲಿ ವಾದ್ಯಮೇಳಗಳ ಸದ್ದೇ ಸದ್ದು ಅಡಗಿತ್ತು.‌ ಗ್ರಾಮದ ರಾಜ ಬೀದಿಯಲ್ಲಿ ವೀರಭದ್ರೇಶ್ವರನ ಮಡೆತೇರನ್ನು ಎಳೆಯಲಾಯಿತು. ಬಾಳೆಹಣ್ಣು-ನಿಂಬೆಹಣ್ಣು ಸಮರ್ಪಿಸೊ ಮುಖೇನ ಭಕ್ತಗಣ ಭಕ್ತಿ ಮೆರೆದರು.
Body:ಅಗ್ನಿಕುಂಡದಲಿ ಮಹಿಳೆಯರು ಪಾದಸ್ಪರ್ಶ: ಈ ದಿನ ಬೆಳಗಿನ ಜಾವ ವೀರಭದ್ರೇಶ್ವರನ ಸನ್ನಿಧಾನದಲ್ಲಿನ ಅಗ್ನಿಕುಂಡದಲಿ ನೂರಾರು ಮಹಿಳೆಯರು, ಪುರುಷರು ಸೇರಿದಂತೆ ಚಿಣ್ಣರು ಪಾದಸ್ಪರ್ಶ ಮಾಡಿ ಭಕ್ತಿ ಮೆರೆದರು.
ಹಿಮದ ಕಾರ್ಮೋಡದಲ್ಲೂ ಈ ದಿನ ಬೆಳ್ಳಂಬೆಳಿಗ್ಗೆ ಮಹಿಳೆಯರು, ಪುರುಷರು ಹಾಗೂ ಚಿಣ್ಣರು ಮತ್ತು ಯುವಕ, ಯುವತಿಯರು ಮಡೆಸ್ನಾನ ಮಾಡಿ, ಅಗ್ನಿಕುಂಡದಲಿ ಪಾದಸ್ಪರ್ಶ ಮಾಡಿ ಭಕ್ತಿ ಯನ್ನು ವೀರಭದ್ರೇಶ್ವರನಿಗೆ ಸಮರ್ಪಿಸಿದರು. ಈ ದೃಶ್ಯವನ್ನು ನೋಡಲು ಭಕ್ತಗಣ‌‌ ಮುಗಿಬಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_HALEKOTE_VEERABHADRESWARA_JATRE_VSL_7203310

KN_BLY_1a_HALEKOTE_VEERABHADRESWARA_JATRE_VSL_7203310

KN_BLY_1b_HALEKOTE_VEERABHADRESWARA_JATRE_VSL_7203310

KN_BLY_1c_HALEKOTE_VEERABHADRESWARA_JATRE_VSL_7203310

KN_BLY_1d_HALEKOTE_VEERABHADRESWARA_JATRE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.