ETV Bharat / state

ಬಳ್ಳಾರಿಯ ಈ ಸರ್ಕಾರಿ ಶಾಲೆಗೆ ಬೇಕಾಗಿದೆ ದುರಸ್ತಿ ಭಾಗ್ಯ

ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆ ತಲುಪಿದ್ದು, ಮಕ್ಕಳು ಆತಂಕದಲ್ಲೇ ಶಾಲೆಗೆ ಹೋಗುವಂತಾಗಿದೆ.

author img

By

Published : Jun 11, 2019, 11:39 PM IST

ಸೋರುತಿಹುದು ಶಾಲೆ ಕೊಠಡಿ ಮಾಳಿಗೆ

ಬಳ್ಳಾರಿ: ಜಿಲ್ಲೆಯ ಅಣತಿ ದೂರದಲ್ಲಿರುವ ಸಿರವಾರ ಗ್ರಾಮದ ಸರ್ಕಾರಿ ಶಾಲೆ ಅವ್ಯವಸ್ಥೆಗಳ ಆಗರವಾಗಿದ್ದು, ವಿದ್ಯಾರ್ಥಿಗಳ ಪಾಲಿಗೆ ನರಕವಾಗಿ ಪರಿಣಮಿಸಿದೆ.

ಈ ಶಾಲೆಯ ಕೊಠಡಿಯ ನಾಲ್ಕು ಕಡೆಗಳಲ್ಲೂ ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದಾಗ ಎಲ್ಲಾ ಮೂಲೆಗಳಿಂದಲೂ ಮಳೆ ನೀರು ಸರಾಗವಾಗಿ ಒಳನುಗ್ಗುತ್ತದೆ. ಇಡೀ ಶಾಲೆಯ ಬಹುತೇಕ ಎಲ್ಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಇಂಥ ಅವ್ಯವಸ್ಥೆಯಲ್ಲಿ ಮಕ್ಕಳು ಪ್ರತಿನಿತ್ಯ ವಿದ್ಯಾಭ್ಯಾಸ ಮಾಡುವ ಅನಿವಾರ್ಯ ಪರಿಸ್ಥಿತಿ ಈ ಮಕ್ಕಳದ್ದಾಗಿದೆ. ಶಾಲೆಯಲ್ಲಿರುವ ಬೇರೆ ಬೇರೆ ತರಗತಿಗಳ ಒಳಹೊಕ್ಕು ನೋಡಿದ್ರೆ, ಇದೇನು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುವ ಕೊಠಡಿಯೋ ಅಥವಾ ನಿರುಪಯುಕ್ತ ಸಾಮಾಗ್ರಿಗಳನ್ನು ತುಂಬಿಡುವ ಉಗ್ರಾಣವೋ ಎಂಬ ಸಂದೇಹ ಕಾಡದೆ ಇರದು. ತಗಡಿನ ಶೀಟು, ಮುರಿದ ಆಸನಗಳು ಸೇರಿದಂತೆ ಇತರೆ ಸಾಮಾಗ್ರಿಗಳು ತುಕ್ಕು ಹಿಡಿದಿವೆ. ಈ ಅವ್ಯವಸ್ಥೆಯ ಆಗರದಲ್ಲೇ‌ ಹೆಚ್ಚುವರಿ ವಿದ್ಯಾರ್ಥಿಗಳನ್ನೂ ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ. 16 ಕೊಠಡಿಗಳಿರುವ ಈ ಶಾಲೆಯಲ್ಲಿ ಒಟ್ಟು 800ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

ಸೋರುತಿಹುದು ಶಾಲೆ ಕೊಠಡಿ ಮಾಳಿಗೆ
ಅದೆಷ್ಟೋ ಮಕ್ಕಳ ಉತ್ತಮ ಭವಿಷ್ಯಕ್ಕೆ ಕಾರಣವಾಗಬೇಕಾಗಿದ್ದ ಸರ್ಕಾರಿ ಶಾಲೆ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಇದು ಮಕ್ಕಳ ಭವಿಷ್ಯಕ್ಕೆ ಮುಳುವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಶಿಕ್ಷಣ ಇಲಾಖೆ ಈ ಶಾಲೆಯತ್ತ ಗಮನಹರಿಸಿ ಕನಿಷ್ಠ ಸೌಕರ್ಯವನ್ನಾದ್ರೂ ಒದಗಿಸಿ ಮಕ್ಕಳು ನಿಶ್ಚಿಂತೆಯಿಂದ ಶಾಲೆಗೆ ಹೋಗುವಂತೆ ಮಾಡಬೇಕಾಗಿದೆ.

ಬಳ್ಳಾರಿ: ಜಿಲ್ಲೆಯ ಅಣತಿ ದೂರದಲ್ಲಿರುವ ಸಿರವಾರ ಗ್ರಾಮದ ಸರ್ಕಾರಿ ಶಾಲೆ ಅವ್ಯವಸ್ಥೆಗಳ ಆಗರವಾಗಿದ್ದು, ವಿದ್ಯಾರ್ಥಿಗಳ ಪಾಲಿಗೆ ನರಕವಾಗಿ ಪರಿಣಮಿಸಿದೆ.

ಈ ಶಾಲೆಯ ಕೊಠಡಿಯ ನಾಲ್ಕು ಕಡೆಗಳಲ್ಲೂ ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದಾಗ ಎಲ್ಲಾ ಮೂಲೆಗಳಿಂದಲೂ ಮಳೆ ನೀರು ಸರಾಗವಾಗಿ ಒಳನುಗ್ಗುತ್ತದೆ. ಇಡೀ ಶಾಲೆಯ ಬಹುತೇಕ ಎಲ್ಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಇಂಥ ಅವ್ಯವಸ್ಥೆಯಲ್ಲಿ ಮಕ್ಕಳು ಪ್ರತಿನಿತ್ಯ ವಿದ್ಯಾಭ್ಯಾಸ ಮಾಡುವ ಅನಿವಾರ್ಯ ಪರಿಸ್ಥಿತಿ ಈ ಮಕ್ಕಳದ್ದಾಗಿದೆ. ಶಾಲೆಯಲ್ಲಿರುವ ಬೇರೆ ಬೇರೆ ತರಗತಿಗಳ ಒಳಹೊಕ್ಕು ನೋಡಿದ್ರೆ, ಇದೇನು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುವ ಕೊಠಡಿಯೋ ಅಥವಾ ನಿರುಪಯುಕ್ತ ಸಾಮಾಗ್ರಿಗಳನ್ನು ತುಂಬಿಡುವ ಉಗ್ರಾಣವೋ ಎಂಬ ಸಂದೇಹ ಕಾಡದೆ ಇರದು. ತಗಡಿನ ಶೀಟು, ಮುರಿದ ಆಸನಗಳು ಸೇರಿದಂತೆ ಇತರೆ ಸಾಮಾಗ್ರಿಗಳು ತುಕ್ಕು ಹಿಡಿದಿವೆ. ಈ ಅವ್ಯವಸ್ಥೆಯ ಆಗರದಲ್ಲೇ‌ ಹೆಚ್ಚುವರಿ ವಿದ್ಯಾರ್ಥಿಗಳನ್ನೂ ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ. 16 ಕೊಠಡಿಗಳಿರುವ ಈ ಶಾಲೆಯಲ್ಲಿ ಒಟ್ಟು 800ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

ಸೋರುತಿಹುದು ಶಾಲೆ ಕೊಠಡಿ ಮಾಳಿಗೆ
ಅದೆಷ್ಟೋ ಮಕ್ಕಳ ಉತ್ತಮ ಭವಿಷ್ಯಕ್ಕೆ ಕಾರಣವಾಗಬೇಕಾಗಿದ್ದ ಸರ್ಕಾರಿ ಶಾಲೆ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಇದು ಮಕ್ಕಳ ಭವಿಷ್ಯಕ್ಕೆ ಮುಳುವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಶಿಕ್ಷಣ ಇಲಾಖೆ ಈ ಶಾಲೆಯತ್ತ ಗಮನಹರಿಸಿ ಕನಿಷ್ಠ ಸೌಕರ್ಯವನ್ನಾದ್ರೂ ಒದಗಿಸಿ ಮಕ್ಕಳು ನಿಶ್ಚಿಂತೆಯಿಂದ ಶಾಲೆಗೆ ಹೋಗುವಂತೆ ಮಾಡಬೇಕಾಗಿದೆ.
Intro:ಸೋರುತಿಹವು ಸರ್ಕಾರಿ ಶಾಲೆ ತರಗತಿ ಕೊಠಡಿಗಳು
ಅಧೋಗತಿಯತ್ತ ಸಿರವಾರ ಕಿರಿಯ ಪ್ರಾಥಮಿಕ ಶಾಲೆ...!
ಬಳ್ಳಾರಿ: ತಾಲೂಕಿನ ಅಣತಿ ದೂರದಲ್ಲಿ ಸಿರವಾರ ಗ್ರಾಮ
ವಿದೆ. ಆ ಗ್ರಾಮದಲ್ಲೊಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಪ್ರಾಥಮಿಕ ಹಂತದವರೆಗೆ ಇರುವ ಈ ಶಾಲೆಯ ಆವರಣದಲ್ಲಿ ಅಂದಾಜು 16ಕ್ಕೂ ಹೆಚ್ಚು ತರಗತಿ ಕೊಠಡಿ ಗಳಿವೆ. ಆ ಪೈಕಿ ಬಹುತೇಕ ಕೊಠಡಿಗಳು ಶಿಥಿಲಾವ್ಯಸ್ತೆಯಲ್ಲಿವೆ. ಕೆಲ ಕೊಠಡಿಗಳ ಮೇಲ್ಛಾವಣೆ ಕುಸಿತ ಕಂಡರೂ ಕೂಡ ಅದಕ್ಕೆ ಪರ್ಯಾಯವಾಗಿ ಕಟ್ಟಿಗೆ ಕಂಬದ ಹೆಗಲನ್ನು ಕೊಡಲಾಗಿದೆ.
ಹೌದು, ಅಕ್ಷರಶಃ ಸತ್ಯ. ಇಂತಹ ಸರ್ಕಾರಿ ಶಾಲೆಯನ್ನ ನಾವೆಂದು ಕಂಡಿಲ್ಲ. ನೋಡಿಲ್ಲ. ಈ ಶಾಲೆಯನ್ನ ನೋಡಿದರೆ ಥಟ್ಟನೆ ನೆನಪಿಗೆ ಬರೋದು ಸೋರುತಿಹದು ಮನೆಯ ಮಾಳಗಿ, ಅಜ್ಞಾನದಿಂದ ಎಂಬ ಸಂತ ಶಿಶುನಾಳ ಶರೀಫರ ಪದ್ಯದ ಸಾಲು ನೆನಪಿಗೆ ಬರುತ್ತದೆ.
ಆದ್ರೆ, ಅದನ್ನೇ ಉಲ್ಟಾ ಹಾಡಿದರೆ ಸೋರುತಿಹವು ಸರ್ಕಾರಿ ಶಾಲೆ ತರಗತಿ ಕೊಠಡಿಗಳು. ಶಿಕ್ಷಕರ ಅಜ್ಞಾನದಿಂದ ಎಂಬುದರ ದಾಟಿಯಲ್ಲಿ ಹಾಡಬಹುದಾಗಿದೆ.
ಈ ಶಾಲೆಯ ಮುಖ್ಯಶಿಕ್ಷಕರ ಕಚೇರಿಯ ಕೊಠಡಿಯ ಪಕ್ಕದಲ್ಲೇ ಹಳೆಯ ಕಾಲದ ತರಗತಿ ಕೊಠಡಿಯಿದೆ. ಆ ಕೊಠಡಿಗೆ ಸುಣ್ಣ, ಬಣ್ಣ ಬಳಿದು ಸಾಕಷ್ಟು ದಶಕಗಳೇ ಗತಿಸಿವೆ. ಕೊಠಡಿಯೊಳಗೆ ಪ್ರವೇಶಿಸಿದರೆ ಸಾಕು. ಮೇಲ್ಚಾವಣಿಗೆ ಹಾಕಲಾದ ಕಟ್ಟಿಗೆಗಳು ಸೀಳಿವೆ. ಇವಾಗ, ಅವಾಗ ಬೀಳುವ ಸ್ಥಿತಿಯಲ್ಲಿರುವ ಈ ಕೊಠ ಡಿಗೆ ಕಟ್ಟಿಗೆ ಕಂಬವನ್ನು ಅದಕ್ಕೆ ಬೆಂಗಾವಲು ಆಗಿ ಹಾಕಲಾಗಿದೆ. ಆರನೇ ತರಗತಿ ವಿದ್ಯಾರ್ಥಿಗಳು ಇದರೊಳಗೆ ವಿದ್ಯಾಭ್ಯಾಸ ಮಾಡುತ್ತಾರೆ. ಕೊಠಡಿಯ ನಾಲ್ಕು ಕಡೆಗಳಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಮಳೆಯ ಬಂದಾಗ ಈ ಕೊಠಡಿಯ ನಾಲ್ಕು ಮೂಲೆಗಳಿಂದ ಮಳೆಯ ನೀರು ಒಳನುಗ್ಗುತ್ತವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಅಲ್ಲದೇ, ಈ ಕೊಠಡಿಯ ಇಂಭಾಗದಲ್ಲೊಂದು ತರಗತಿ ಯೊಂದಿದೆ. ಅದರ ಬಾಗಿಲನ್ನು ಒಳಗಡೆ ತಳ್ಳಿದರೆ ಸಾಕು.
ಅದನ್ನ ತಳ್ಳಿದವರಿಗೇನೆ ಹೊಡ್ಕೊಳ್ಳುತ್ತದೆ. ಕೊಠಡಿಯೊಳಗೆ ಪ್ರವೇಶಿಸಿದರಂತೂ ಮೇಲ್ಚಾವಣಿಗೆ ಹಾಕಲಾಗಿದ್ದ ಕಬ್ಬಿಣದ ಸರಳುಗಳು ಮೇಲೆಕ್ಕೆದ್ದು ಕೊಠಡಿಯ ಸೌಂದರ್ಯವನ್ನೇ ಹಾಳು ಮಾಡಿವೆ.



Body:ಗೋದಾಮು ಆದ ಕೊಠಡಿ: ಇನ್ನೂ ಕೊಠಡಿಯ ಇಂಭಾಗದಲ್ಲೇ ಒಂದು ತರಗತಿ ಕೊಠಡಿಯಿದೆ.‌ ಅದರೊಳಗೆ ಬರೀ ನಿರುಪಯು ಕ್ತ ಸಾಮಾಗ್ರಿಗಳೇ ಬಿದ್ದಿವೆ. ತಗಡಿನ ಶೀಟ್, ವಿದ್ಯಾರ್ಥಿಗಳು ಕುಳಿತಕೊಳ್ಳುವ ಆಸನಗಳು ಸೇರಿದಂತೆ ಇತರೆ ಸಾಮಾಗ್ರಿಗಳು ತುಕ್ಕು ಹಿಡಿದಿವೆ.‌ ಆ ಕೊಠಡಿಯ ಮುಂದೇನೇ ಹೆಚ್ಚುವರಿ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ.
ಸರ್ಕಾರಿ ಶಾಲೆಯ ಸ್ಥಿತಿಗತಿ ಹೀಗಿವೆ ನೋಡಿ: ತಾಲೂಕಿನ
ಅಣತಿ ದೂರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಗತಿ ಹೀಗಿರುವಾಗ ಸಿಎಂ ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಗಳಲ್ಲಿ ಗ್ರಾಮ ವಾಸ್ತ್ರವ್ಯ ಹೂಡುತ್ತಿರುವುದು ಹಾಸ್ಯಾಸ್ಪದ ವೇ ಸರಿ ಎಂದು ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಮೂಲಿಮನೆ ಶಿವರುದ್ರಪ್ಪ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಗ್ರಾಮದಲ್ಲಿ ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ತರಗತಿ ಕೊಠಡಿಗಳ ಸ್ಥಿತಿ ಇಷ್ಟೊಂದು ಶಿಥಿಲಾವ್ಯಸ್ತೆಗೆ ತಲು ಪಲು ಕಾರಣವಾಗಿದೆ.‌ ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಇದ್ದಂಗ ಈ ಶಾಲೆಯಲ್ಲೂ‌ ಕೂಡ ಎರಡೂ ಪಕ್ಷಗಳ ಸರ್ಕಾರ ಆಡಳಿತ ನಡೆಸಿದಂತಿದೆ. ತರಗತಿ ಕೊಠಡಿಗಳ ಅಭಿವೃದ್ಧಿಗೆ ಉಭಯ ಶಾಲೆಗಳ ಮುಖ್ಯಶಿಕ್ಷಕರು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಹನುಮಂತ ಮಾತನಾಡಿ, ಈ ಶಾಲೆಯ ತರಗತಿ ಕೊಠಡಿಗಳು ಶಿಥಿಲಾವ್ಯಸ್ತೆಗೆ ತಲುಪಿವೆ‌.‌ ಸರಿಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ 16 ಕೊಠಡಿಗಳಿವೆ. ಅದರೊಳಗೆ ಬಹುತೇಕ ಕೊಠಡಿಗಳು ಶಿಥಿಲಾವ್ಯಸ್ತೆಗೆ ತಲು ಪಿವೆ.‌ ಅವುಗಳ ದುರಸ್ತಿಕಾರ್ಯಕ್ಕೆ ಈವರೆಗೂ ಶಿಕ್ಷಣ ಇಲಾಖೆ ಮುಂದಾಗುತ್ತಿಲ್ಲ ಎಂದರು.
ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಕೆ.ಕೆ.ಗಾದಿಲಿಂಗಪ್ಪ ಅವರು ಮಾತನಾಡಿ, ಶಾಲೆಯ ನಾಲ್ಕು ಕೊಠಡಿಗಳು ಶಿಥಿಲಾವ್ಯಸ್ತೆಗೆ ತಲುಪಿವೆ. 22 ಶಿಕ್ಷಕರ ಪೈಕಿ ಕೇವಲ 16‌ ಮಂದಿ ಶಿಕ್ಷಕರು
ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. 17 ಕೊಠಡಿಗಳ
ಪೈಕಿ ನಾಲ್ಕಾರು ಕೊಠಡಿಗಳು ವಿದ್ಯಾರ್ಥಿಗಳ ತರಗತಿ ನಡೆಸಲು ಯೋಗ್ಯವಾಗಿಲ್ಲ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.



Conclusion:KN_BLY_01_11_SIRIVAR_GOVT_SCH_VISUALS_7203310

KN_BLY_01a_11_SIRIVAR_GOVT_SCH_VISUALS_7203310

KN_BLY_01b_11_SIRIVAR_GOVT_SCH_VISUALS_7203310

KN_BLY_01c_11_SIRIVAR_GOVT_SCH_VISUALS_7203310

KN_BLY_01d_11_SIRIVAR_GOVT_SCH_VISUALS_7203310

KN_BLY_01e_11_SIRIVAR_GOVT_SCH_VISUALS_7203310

KN_BLY_01f_11_SIRIVAR_GOVT_SCH_VISUALS_7203310

KN_BLY_01g_11_SIRIVAR_GOVT_SCH_BYTE_7203310

KN_BLY_01h_11_SIRIVAR_GOVT_SCH_BYTE_7203310

KN_BLY_01i_11_SIRIVAR_GOVT_SCH_BYTE_7203310

KN_BLY_01j_11_SIRIVAR_GOVT_SCH_BYTE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.