ETV Bharat / state

Video: ಜಿ-20 ಪ್ರತಿನಿಧಿಗಳಿಂದ ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆ

author img

By

Published : Jul 14, 2023, 9:42 PM IST

Updated : Jul 14, 2023, 10:53 PM IST

ಹಂಪಿ ಸ್ಮಾರಕಗಳ ಕುರಿತು ಜಿ-20 ಪ್ರತಿನಿಧಿಗಳಿಗೆ ಪ್ರವಾಸಿ ಮಾರ್ಗದರ್ಶಿಗಳು ಮಾಹಿತಿ ನೀಡಿದರು.

ಜಿ-20 ಪ್ರತಿನಿಧಿಗಳು
ಜಿ-20 ಪ್ರತಿನಿಧಿಗಳು

ಜಿ-20 ಪ್ರತಿನಿಧಿಗಳಿಂದ ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆ

ವಿಜಯನಗರ : ಶೆರ್ಪಾ ಸಭೆಯ ನಂತರ ಶುಕ್ರವಾರ ಸಂಜೆ ಜಿ-20 ಪ್ರತಿನಿಧಿಗಳು ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು. ಪ್ರವಾಸೋದ್ಯಮ ಇಲಾಖೆ, ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯಿಂದ ಸ್ಮಾರಕ ವೀಕ್ಷಣೆ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಹಂಪಿಯ ಮಹಾನವಮಿ ದಿಬ್ಬ, ಹಜಾರರಾಮ, ಕಮಲ ಮಹಲ್ ಹಾಗೂ ಗಜಶಾಲೆ, ರಾಣಿ ಅರಮನೆ ಅಧಿಷ್ಠಾನ ಹಾಗೂ ವಿವಿಧ ಸ್ಮಾರಕಗಳ ಕುರಿತು ಪ್ರವಾಸಿ ಮಾರ್ಗದರ್ಶಿಗಳು ಗೌರವಪೂರಕವಾಗಿ ಸ್ವಾಗತಿಸುತ್ತಾ ಮಾಹಿತಿ ನೀಡಿದರು.

ಐತಿಹಾಸಿಕ ಮಹತ್ವ ಸಾರುವ ಸಾಂಸ್ಕೃತಿಕ ಉಡುಪನ್ನು ಧರಿಸಿ ಸ್ವಾಗತ
ಐತಿಹಾಸಿಕ ಮಹತ್ವ ಸಾರುವ ಸಾಂಸ್ಕೃತಿಕ ಉಡುಪನ್ನು ಧರಿಸಿ ಸ್ವಾಗತ

ಮಹಾನವಮಿ ದಿಬ್ಬದ ಮೇಲೆ ಹತ್ತಿ ಸುತ್ತಲಿನ ಹಂಪಿ ಪರಿಸರವನ್ನು ಕಣ್ತುಂಬಿಕೊಂಡ ಜಿ-20 ಪ್ರತಿನಿಧಿಗಳು ನಂತರ ದಿಬ್ಬದ ಸುತ್ತಲೂ ಕೆತ್ತಿರುವ ಆಕರ್ಷಕ ಉಬ್ಬು ಶಿಲೆಗಳನ್ನು ಕಂಡು ಬೆರಗಾದರು. ಮಹಾನವಮಿ ದಿಬ್ಬದ ಸಮೀಪದಲ್ಲಿರುವ ಪುಷ್ಕರಣಿಯನ್ನು ಕಂಡು ಆಗಿನ ಕಾಲದ ನೀರು ಸರಬರಾಜು ವ್ಯವಸ್ಥೆಯ ಮಾಹಿತಿ ತಿಳಿದುಕೊಂಡರು. ನಂತರ ರಾಜ ಸಭಾಂಗಣ, ನೆಲಸ್ತರದ ಕೋಣೆ, ಹಜಾರ ರಾಮಚಂದ್ರ ದೇವಾಲಯ ವೀಕ್ಷಿಸಿದರು. ಪ್ರತಿ ಸ್ಮಾರಕಗಳ ಬಳಿ ಇಲಾಖೆಯಿಂದ ನಿಯೋಜಿಸಿದ ಪ್ರವಾಸಿ ಮಾರ್ಗದರ್ಶಿಗಳು ಮಾಹಿತಿ ನೀಡಿದರು.

ಹಂಪಿ ವೈಭವ ಕಣ್ತುಂಬಿಕೊಂಡ ಜಿ-20 ಪ್ರತಿನಿಧಿಗಳು
ಹಂಪಿ ವೈಭವ ಕಣ್ತುಂಬಿಕೊಂಡ ಜಿ-20 ಪ್ರತಿನಿಧಿಗಳು

ಭಾರತೀಯ ಶೆರ್ಪಾ ಸಭೆಯ ಅಮಿತಾಬ್ ಕಾಂತ್ ಸೇರಿದಂತೆ ಅತ್ಯುನ್ನತ ಅಧಿಕಾರಿಗಳು ಮಳೆ ನಂತರವು ಸಹ ಉತ್ಸಾಹದಿಂದ ಸ್ಮಾರಕಗಳ ವೀಕ್ಷಣೆ ಜೊತೆಗೆ ತಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡರು. ಪೊಲೀಸ್ ಸಿಬ್ಬಂದಿಗಳು ಜಿ-20 ಪ್ರತಿನಿಧಿಗಳು ಸ್ಮಾರಕಗಳ ವೀಕ್ಷಣೆಗೆ ತೆರಳುವ ಮಾರ್ಗಗಳಲ್ಲಿ ಸಂಚಾರ ಮುಕ್ತ ವ್ಯವಸ್ಥೆಯನ್ನು ಕೈಗೊಂಡು ತೆರಳಲು ಅನುವು ಮಾಡಿಕೊಟ್ಟರು.

ಇಂದು ಸಂಜೆ ಆಯೋಜಿಸಿದ್ದ ಸ್ಮಾರಕಗಳ ವೀಕ್ಷಣೆ ನಂತರ ಹಂಪಿಯ ವಿಜಯವಿಠಲ ದೇವಸ್ಥಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿ-20 ಪ್ರತಿನಿಧಿಗಳು ಫಿದಾ ಆಗಿದ್ದಾರೆ.

ಹಂಪಿಯ ವಿಜಯವಿಠಲ ದೇವಸ್ಥಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ
ಹಂಪಿಯ ವಿಜಯವಿಠಲ ದೇವಸ್ಥಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ
ವಿಜಯವಿಠ್ಠಲ ದೇವಸ್ಥಾನದ ವಿಶಾಲ ಮಾರ್ಗದಲ್ಲಿ ನಡೆದು ಬರುತ್ತಿದ್ದ ಅತ್ಯುನ್ನತ ಪ್ರತಿನಿಧಿಗಳಿಗೆ ನಗಾರಿ ಬಾರಿಸುವ ಮೂಲಕ ಸ್ವಾಗತ ಕೋರಲಾಯಿತು. ಕಗ್ಗತ್ತಲ ನಡುವೆ ಸ್ಮಾರಕಗಳಿಗೆ ಅಳವಡಿಸಿದ್ದ ವಿದ್ಯುತ್ ದೀಪಾಲಂಕಾರಗಳು ಭವ್ಯವಾಗಿ ಸ್ವಾಗತಿಸಿದರು. ವಿಜಯವಿಠ್ಠಲ ದೇವಸ್ಥಾನದ ಸಮೀಪದಲ್ಲಿ ಬರುತ್ತಿದ್ದಂತೆ ಕಹಳೆ ಊದಿ ಸ್ವಾಗತಿಸಲಾಯಿತು.

ಮಂಟಪದಲ್ಲಿ ಕಲಾವಿದರು ಜಾನಪದ ಗೀತೆಗೆ ಕೋಲಾಟ ಪ್ರದರ್ಶಿಸಿದರು. ನಂತರ ಅರಸನ ತುಲಾಭಾರಕ್ಕೆ ಅಲ್ಲಿನ ಐತಿಹಾಸಿಕ ಮಹತ್ವ ಸಾರುವ ಸಾಂಸ್ಕೃತಿಕ ಉಡುಪನ್ನು ಧರಿಸಿದ್ದ ಪ್ರವಾಸಿ ಮಾರ್ಗದರ್ಶಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ವಿಜಯವಿಠಲ ದೇವಸ್ಥಾನದತ್ತ ಬಂದರು. ಖ್ಯಾತ ಜಾನಪದ ಗಾಯಕಿ ಶಿಲ್ಪಾ ಮುಡಬಿ ಅವರಿಂದ "ಆರತಿ ಬೆಳಗಿರಿ ಕಾರುಣ್ಯ ಮೃಢ ಹರನಿಗೆ" ಎಂಬ ಜಾನಪದ ಹಾಡಿನ ಮೂಲಕ ಅತಿಥಿಗಳನ್ನು ವಿಜಯವಿಠಲ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.

ವಿಜಯವಿಠ್ಠಲ ದೇವಸ್ಥಾನದ ಆವರಣದ ಪ್ರತಿ ಮಂಟಪದ ಕಲಾವಿದರು ತಮ್ಮ ಕಲಾ ಪ್ರದರ್ಶನ ಮುಂದುವರೆಸಿದರು. ಭರತ್ಯ ನಾಟ್ಯ, ಮೊಹಿನಿಯಾಟ್ಟಂ, ಓಡಿಸ್ಸಿ, ಕುಚುಪುಡಿ ನೃತ್ಯಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಪ್ರತಿನಿಧಿಗಳಿಗೆ ಕಲ್ಲಿನ ರಥ, ಸಪ್ತ ಸ್ವರ ಮಂಟಪದ ಮಹತ್ವ ಸಾರಿ ಸಪ್ತಸ್ವರ ಕಂಬದಲ್ಲಿ ಬರುವ ಸ್ವರಗಳನ್ನು ಒಮ್ಮಿಸಿ ಕೇಳಿಸಿದರು. ನಂತರ ವಿಕ್ಕು ವಿನಾಯಕ್ ತಂಡದಿಂದ ಗಟ ವಾದನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಇದನ್ನೂ ಓದಿ : ಸಾಂಸ್ಕೃತಿಕ ಪರಂಪರೆ ಭೂತಕಾಲದ ಆಧಾರ ಸ್ತಂಭ, ಭವಿಷ್ಯದ ಮಾರ್ಗವಾಗಿದೆ: ಪ್ರಹ್ಲಾದ್​ ಜೋಶಿ

ಜಿ-20 ಪ್ರತಿನಿಧಿಗಳಿಂದ ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆ

ವಿಜಯನಗರ : ಶೆರ್ಪಾ ಸಭೆಯ ನಂತರ ಶುಕ್ರವಾರ ಸಂಜೆ ಜಿ-20 ಪ್ರತಿನಿಧಿಗಳು ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು. ಪ್ರವಾಸೋದ್ಯಮ ಇಲಾಖೆ, ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯಿಂದ ಸ್ಮಾರಕ ವೀಕ್ಷಣೆ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಹಂಪಿಯ ಮಹಾನವಮಿ ದಿಬ್ಬ, ಹಜಾರರಾಮ, ಕಮಲ ಮಹಲ್ ಹಾಗೂ ಗಜಶಾಲೆ, ರಾಣಿ ಅರಮನೆ ಅಧಿಷ್ಠಾನ ಹಾಗೂ ವಿವಿಧ ಸ್ಮಾರಕಗಳ ಕುರಿತು ಪ್ರವಾಸಿ ಮಾರ್ಗದರ್ಶಿಗಳು ಗೌರವಪೂರಕವಾಗಿ ಸ್ವಾಗತಿಸುತ್ತಾ ಮಾಹಿತಿ ನೀಡಿದರು.

ಐತಿಹಾಸಿಕ ಮಹತ್ವ ಸಾರುವ ಸಾಂಸ್ಕೃತಿಕ ಉಡುಪನ್ನು ಧರಿಸಿ ಸ್ವಾಗತ
ಐತಿಹಾಸಿಕ ಮಹತ್ವ ಸಾರುವ ಸಾಂಸ್ಕೃತಿಕ ಉಡುಪನ್ನು ಧರಿಸಿ ಸ್ವಾಗತ

ಮಹಾನವಮಿ ದಿಬ್ಬದ ಮೇಲೆ ಹತ್ತಿ ಸುತ್ತಲಿನ ಹಂಪಿ ಪರಿಸರವನ್ನು ಕಣ್ತುಂಬಿಕೊಂಡ ಜಿ-20 ಪ್ರತಿನಿಧಿಗಳು ನಂತರ ದಿಬ್ಬದ ಸುತ್ತಲೂ ಕೆತ್ತಿರುವ ಆಕರ್ಷಕ ಉಬ್ಬು ಶಿಲೆಗಳನ್ನು ಕಂಡು ಬೆರಗಾದರು. ಮಹಾನವಮಿ ದಿಬ್ಬದ ಸಮೀಪದಲ್ಲಿರುವ ಪುಷ್ಕರಣಿಯನ್ನು ಕಂಡು ಆಗಿನ ಕಾಲದ ನೀರು ಸರಬರಾಜು ವ್ಯವಸ್ಥೆಯ ಮಾಹಿತಿ ತಿಳಿದುಕೊಂಡರು. ನಂತರ ರಾಜ ಸಭಾಂಗಣ, ನೆಲಸ್ತರದ ಕೋಣೆ, ಹಜಾರ ರಾಮಚಂದ್ರ ದೇವಾಲಯ ವೀಕ್ಷಿಸಿದರು. ಪ್ರತಿ ಸ್ಮಾರಕಗಳ ಬಳಿ ಇಲಾಖೆಯಿಂದ ನಿಯೋಜಿಸಿದ ಪ್ರವಾಸಿ ಮಾರ್ಗದರ್ಶಿಗಳು ಮಾಹಿತಿ ನೀಡಿದರು.

ಹಂಪಿ ವೈಭವ ಕಣ್ತುಂಬಿಕೊಂಡ ಜಿ-20 ಪ್ರತಿನಿಧಿಗಳು
ಹಂಪಿ ವೈಭವ ಕಣ್ತುಂಬಿಕೊಂಡ ಜಿ-20 ಪ್ರತಿನಿಧಿಗಳು

ಭಾರತೀಯ ಶೆರ್ಪಾ ಸಭೆಯ ಅಮಿತಾಬ್ ಕಾಂತ್ ಸೇರಿದಂತೆ ಅತ್ಯುನ್ನತ ಅಧಿಕಾರಿಗಳು ಮಳೆ ನಂತರವು ಸಹ ಉತ್ಸಾಹದಿಂದ ಸ್ಮಾರಕಗಳ ವೀಕ್ಷಣೆ ಜೊತೆಗೆ ತಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡರು. ಪೊಲೀಸ್ ಸಿಬ್ಬಂದಿಗಳು ಜಿ-20 ಪ್ರತಿನಿಧಿಗಳು ಸ್ಮಾರಕಗಳ ವೀಕ್ಷಣೆಗೆ ತೆರಳುವ ಮಾರ್ಗಗಳಲ್ಲಿ ಸಂಚಾರ ಮುಕ್ತ ವ್ಯವಸ್ಥೆಯನ್ನು ಕೈಗೊಂಡು ತೆರಳಲು ಅನುವು ಮಾಡಿಕೊಟ್ಟರು.

ಇಂದು ಸಂಜೆ ಆಯೋಜಿಸಿದ್ದ ಸ್ಮಾರಕಗಳ ವೀಕ್ಷಣೆ ನಂತರ ಹಂಪಿಯ ವಿಜಯವಿಠಲ ದೇವಸ್ಥಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿ-20 ಪ್ರತಿನಿಧಿಗಳು ಫಿದಾ ಆಗಿದ್ದಾರೆ.

ಹಂಪಿಯ ವಿಜಯವಿಠಲ ದೇವಸ್ಥಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ
ಹಂಪಿಯ ವಿಜಯವಿಠಲ ದೇವಸ್ಥಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ
ವಿಜಯವಿಠ್ಠಲ ದೇವಸ್ಥಾನದ ವಿಶಾಲ ಮಾರ್ಗದಲ್ಲಿ ನಡೆದು ಬರುತ್ತಿದ್ದ ಅತ್ಯುನ್ನತ ಪ್ರತಿನಿಧಿಗಳಿಗೆ ನಗಾರಿ ಬಾರಿಸುವ ಮೂಲಕ ಸ್ವಾಗತ ಕೋರಲಾಯಿತು. ಕಗ್ಗತ್ತಲ ನಡುವೆ ಸ್ಮಾರಕಗಳಿಗೆ ಅಳವಡಿಸಿದ್ದ ವಿದ್ಯುತ್ ದೀಪಾಲಂಕಾರಗಳು ಭವ್ಯವಾಗಿ ಸ್ವಾಗತಿಸಿದರು. ವಿಜಯವಿಠ್ಠಲ ದೇವಸ್ಥಾನದ ಸಮೀಪದಲ್ಲಿ ಬರುತ್ತಿದ್ದಂತೆ ಕಹಳೆ ಊದಿ ಸ್ವಾಗತಿಸಲಾಯಿತು.

ಮಂಟಪದಲ್ಲಿ ಕಲಾವಿದರು ಜಾನಪದ ಗೀತೆಗೆ ಕೋಲಾಟ ಪ್ರದರ್ಶಿಸಿದರು. ನಂತರ ಅರಸನ ತುಲಾಭಾರಕ್ಕೆ ಅಲ್ಲಿನ ಐತಿಹಾಸಿಕ ಮಹತ್ವ ಸಾರುವ ಸಾಂಸ್ಕೃತಿಕ ಉಡುಪನ್ನು ಧರಿಸಿದ್ದ ಪ್ರವಾಸಿ ಮಾರ್ಗದರ್ಶಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ವಿಜಯವಿಠಲ ದೇವಸ್ಥಾನದತ್ತ ಬಂದರು. ಖ್ಯಾತ ಜಾನಪದ ಗಾಯಕಿ ಶಿಲ್ಪಾ ಮುಡಬಿ ಅವರಿಂದ "ಆರತಿ ಬೆಳಗಿರಿ ಕಾರುಣ್ಯ ಮೃಢ ಹರನಿಗೆ" ಎಂಬ ಜಾನಪದ ಹಾಡಿನ ಮೂಲಕ ಅತಿಥಿಗಳನ್ನು ವಿಜಯವಿಠಲ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.

ವಿಜಯವಿಠ್ಠಲ ದೇವಸ್ಥಾನದ ಆವರಣದ ಪ್ರತಿ ಮಂಟಪದ ಕಲಾವಿದರು ತಮ್ಮ ಕಲಾ ಪ್ರದರ್ಶನ ಮುಂದುವರೆಸಿದರು. ಭರತ್ಯ ನಾಟ್ಯ, ಮೊಹಿನಿಯಾಟ್ಟಂ, ಓಡಿಸ್ಸಿ, ಕುಚುಪುಡಿ ನೃತ್ಯಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಪ್ರತಿನಿಧಿಗಳಿಗೆ ಕಲ್ಲಿನ ರಥ, ಸಪ್ತ ಸ್ವರ ಮಂಟಪದ ಮಹತ್ವ ಸಾರಿ ಸಪ್ತಸ್ವರ ಕಂಬದಲ್ಲಿ ಬರುವ ಸ್ವರಗಳನ್ನು ಒಮ್ಮಿಸಿ ಕೇಳಿಸಿದರು. ನಂತರ ವಿಕ್ಕು ವಿನಾಯಕ್ ತಂಡದಿಂದ ಗಟ ವಾದನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಇದನ್ನೂ ಓದಿ : ಸಾಂಸ್ಕೃತಿಕ ಪರಂಪರೆ ಭೂತಕಾಲದ ಆಧಾರ ಸ್ತಂಭ, ಭವಿಷ್ಯದ ಮಾರ್ಗವಾಗಿದೆ: ಪ್ರಹ್ಲಾದ್​ ಜೋಶಿ

Last Updated : Jul 14, 2023, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.