ETV Bharat / state

ಪ್ರಚೋದನಕಾರಿ ಭಾಷಣ: ಶಾಸಕ ರೆಡ್ಡಿ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಆಗ್ರಹ

author img

By

Published : Jan 18, 2020, 9:35 PM IST

ಪ್ರಚೋದನಕಾರಿ ಭಾಷಣದ ಆರೋಪದಡಿ ಶಾಸಕ ರೆಡ್ಡಿ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ಆಗ್ರಹಿಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

District Congress demands, District Congress demands action against MLA Reddy, provocative speech MLA Reddy news, ಪ್ರಚೋದನಕಾರಿ ಭಾಷಣ ಮಾಡಿದ ಶಾಸಕ ರೆಡ್ಡಿ, ಪ್ರಚೋದನಕಾರಿ ಭಾಷಣ ಮಾಡಿದ ಶಾಸಕ ರೆಡ್ಡಿ ಸುದ್ದಿ, ಶಾಸಕ ರೆಡ್ಡಿ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಆಗ್ರಹ
ಶಾಸಕ ರೆಡ್ಡಿ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಆಗ್ರಹ

ಬಳ್ಳಾರಿ: ಪ್ರಚೋದನಕಾರಿ ಭಾಷಣದ ಆರೋಪದಡಿ ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ ಎಂಎಲ್​ಸಿಗಳಾದ ಅಲ್ಲಂ ವೀರಭದ್ರಪ್ಪ, ಸೈಯದ್ ನಾಸೀರ್ ಹುಸೇನ್, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿದಂತೆ ಇತರರು ತೆರಳಿ ಬಳ್ಳಾರಿ ನಗರ ಶಾಸಕ‌‌ ಗಾಲಿ ಸೋಮಶೇಖರರೆಡ್ಡಿ ವಿರುದ್ಧ ಶಿಸ್ತುಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಶಾಸಕ ರೆಡ್ಡಿ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಆಗ್ರಹ

ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ಪ್ರತ್ಯೇಕವಾಗಿ ಮನವಿ‌ ಸಲ್ಲಿಸಿದರು.

ಬಳ್ಳಾರಿಯ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಮಾತನಾಡಿ, ನಾವು ಕರೆಕ್ಟ್ ಆಗಿ ವಿಚಾರಣೆ ಮಾಡುತ್ತಿದ್ದೇವೆ. ವಿಚಾರಣೆ ತನಿಖಾ ಹಂತದಲ್ಲಿದೆ. ಆ ಕುರಿತು ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಹಂಪಿ ಉತ್ಸವ ಮುಗಿದ ಬಳಿಕ ಬಳ್ಳಾರಿ‌ ನಗರ ಶಾಸಕ ಸೋಮಶೇಖರರೆಡ್ಡಿ ವಿರುದ್ಧ ದಾಖಲಾದ ಪ್ರಚೋದನಕಾರಿ ಭಾಷಣ ಆರೋಪದ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದೇವೆ. ಈಗ ತನಿಖೆ ವಿಚಾರಣೆ ಹಂತದಲ್ಲಿದೆ. ನಾವು ತನಿಖೆಯಾದ ಬಳಿಕ ಅವರನ್ನ ಬಂಧಿಸಬೇಕೋ ಅಥವಾ ಬೇಡವೋ ಎಂಬುದರ ಕುರಿತು‌ ಕಾನೂನಾತ್ಮಕವಾಗಿ ವಿಚಾರಿಸುವುದಾಗಿ ತಿಳಿಸಿದರು.

ಎಂಎಲ್‌ಸಿ ಅಲ್ಲಂ ವೀರಭದ್ರಪ್ಪ ಮಾತನಾಡಿ, ಪ್ರಚೋದನ ಕಾರಿ ಭಾಷಣದ ಆರೋಪ‌ದಡಿ ಶಾಸಕ ಸೋಮಶೇಖರರೆಡ್ಡಿ ಅವರನ್ನ ಕೂಡಲೇ ಬಂಧಿಸಬೇಕು. ಇಲ್ಲಾಂದ್ರೆ ಐದು ಜಿಲ್ಲೆ ಕಾರ್ಯಕರ್ತರನ್ನೊಳಗೊಂಡಂತೆ‌ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಕರೆ‌ಕೊಟ್ಟಂತೆ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಕಾರ್ಯಕರ್ತರು ಇಲ್ಲಿ‌ ಸೇರಲಿದ್ದು, ಶಾಸಕ‌ ರೆಡ್ಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಈ‌ ಪ್ರತಿಭಟನೆ ಕೈಗೊಳ್ಳಲಾಗುವುದು. ಆದ್ರೆ ಪೊಲೀಸ್ ಇಲಾಖೆ 25 ದಿನಗಳ ಕಾಲಾವಕಾಶ ಕೇಳಿದೆ. ಅಲ್ಲಿಯವರೆಗೆ ಕಾದು‌ ನೋಡೋಣ ಎಂದು ಅಲ್ಲಂ ವೀರಭದ್ರಪ್ಪ ತಿಳಿಸಿದರು.

ಬಳ್ಳಾರಿ: ಪ್ರಚೋದನಕಾರಿ ಭಾಷಣದ ಆರೋಪದಡಿ ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ ಎಂಎಲ್​ಸಿಗಳಾದ ಅಲ್ಲಂ ವೀರಭದ್ರಪ್ಪ, ಸೈಯದ್ ನಾಸೀರ್ ಹುಸೇನ್, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿದಂತೆ ಇತರರು ತೆರಳಿ ಬಳ್ಳಾರಿ ನಗರ ಶಾಸಕ‌‌ ಗಾಲಿ ಸೋಮಶೇಖರರೆಡ್ಡಿ ವಿರುದ್ಧ ಶಿಸ್ತುಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಶಾಸಕ ರೆಡ್ಡಿ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಆಗ್ರಹ

ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ಪ್ರತ್ಯೇಕವಾಗಿ ಮನವಿ‌ ಸಲ್ಲಿಸಿದರು.

ಬಳ್ಳಾರಿಯ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಮಾತನಾಡಿ, ನಾವು ಕರೆಕ್ಟ್ ಆಗಿ ವಿಚಾರಣೆ ಮಾಡುತ್ತಿದ್ದೇವೆ. ವಿಚಾರಣೆ ತನಿಖಾ ಹಂತದಲ್ಲಿದೆ. ಆ ಕುರಿತು ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಹಂಪಿ ಉತ್ಸವ ಮುಗಿದ ಬಳಿಕ ಬಳ್ಳಾರಿ‌ ನಗರ ಶಾಸಕ ಸೋಮಶೇಖರರೆಡ್ಡಿ ವಿರುದ್ಧ ದಾಖಲಾದ ಪ್ರಚೋದನಕಾರಿ ಭಾಷಣ ಆರೋಪದ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದೇವೆ. ಈಗ ತನಿಖೆ ವಿಚಾರಣೆ ಹಂತದಲ್ಲಿದೆ. ನಾವು ತನಿಖೆಯಾದ ಬಳಿಕ ಅವರನ್ನ ಬಂಧಿಸಬೇಕೋ ಅಥವಾ ಬೇಡವೋ ಎಂಬುದರ ಕುರಿತು‌ ಕಾನೂನಾತ್ಮಕವಾಗಿ ವಿಚಾರಿಸುವುದಾಗಿ ತಿಳಿಸಿದರು.

ಎಂಎಲ್‌ಸಿ ಅಲ್ಲಂ ವೀರಭದ್ರಪ್ಪ ಮಾತನಾಡಿ, ಪ್ರಚೋದನ ಕಾರಿ ಭಾಷಣದ ಆರೋಪ‌ದಡಿ ಶಾಸಕ ಸೋಮಶೇಖರರೆಡ್ಡಿ ಅವರನ್ನ ಕೂಡಲೇ ಬಂಧಿಸಬೇಕು. ಇಲ್ಲಾಂದ್ರೆ ಐದು ಜಿಲ್ಲೆ ಕಾರ್ಯಕರ್ತರನ್ನೊಳಗೊಂಡಂತೆ‌ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಕರೆ‌ಕೊಟ್ಟಂತೆ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಕಾರ್ಯಕರ್ತರು ಇಲ್ಲಿ‌ ಸೇರಲಿದ್ದು, ಶಾಸಕ‌ ರೆಡ್ಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಈ‌ ಪ್ರತಿಭಟನೆ ಕೈಗೊಳ್ಳಲಾಗುವುದು. ಆದ್ರೆ ಪೊಲೀಸ್ ಇಲಾಖೆ 25 ದಿನಗಳ ಕಾಲಾವಕಾಶ ಕೇಳಿದೆ. ಅಲ್ಲಿಯವರೆಗೆ ಕಾದು‌ ನೋಡೋಣ ಎಂದು ಅಲ್ಲಂ ವೀರಭದ್ರಪ್ಪ ತಿಳಿಸಿದರು.

Intro:ಪ್ರಚೋದನಕಾರಿ ಭಾಷಣದ ಆರೋಪದಡಿ ಶಾಸಕ ರೆಡ್ಡಿ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ಆಗ್ರಹ
ಬಳ್ಳಾರಿ: ಪ್ರಚೋದನಕಾರಿ ಭಾಷಣದ ಆರೋಪದಡಿ ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರರೆಡ್ಡಿಯವ್ರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯು ಆಗ್ರಹಿಸಿದೆ.
ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ
ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ ಎಂಎಲ್ ಸಿಗಳಾದ ಅಲ್ಲಂ ವೀರಭದ್ರಪ್ಪ, ಸೈಯದ್ ನಾಸೀರ್ ಹುಸೇನ್, ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುಂಡರಗಿ‌ ನಾಗರಾಜ, ಎ.ಮಾನಯ್ಯ, ಮುಖಂಡರಾದ ಜೆ.ಎಸ್.ಆಂಜನೇಯಲು, ಅಸುಂಡಿ‌‌ ನಾಗರಾಜಗೌಡ, ಹನುಮ ಕಿಶೋಶ, ಬಿ.ಎಂ.ಪಾಟೀಲ್, ಗೋನಾಳು ವಿರೂಪಾಕ್ಷಗೌಡ, ಹುಮಾಯೂನ್‌ ನಾಸೀರ್ ಖಾನ್, ಹೆಚ್.ಅರ್ಜುನ,
ಅರುಣ್ ಕುಮಾರ ಸೇರಿ ಇತರರು ತೆರಳಿ ಬಳ್ಳಾರಿ ನಗರ
ಶಾಸಕ‌‌ ಗಾಲಿ ಸೋಮಶೇಖರರೆಡ್ಡಿಯವ್ರ ವಿರುದ್ಧ ಶಿಸ್ತುಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ಪ್ರತ್ಯೇಕವಾಗಿ ಮನವಿ‌ ಸಲ್ಲಿಸಿದ್ರು.


Body:ಬಳ್ಳಾರಿಯ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಮಾತಾಡಿ, ನಾವ್ ಅಗ್ಧಿ ಕರೆಕ್ಟ್ ಆಗಿ ವಿಚಾರಣೆ ಮಾಡುತ್ತಿದ್ದೇವೆ. ವಿಚಾರಣೆ ತನಿಖಾ ಹಂತದಲ್ಲಿದೆ. ಆ ಕುರಿತು ನಾನೇ ಹೆಚ್ಚಿಗೆ ಮಾತಾಡ್ಲಿಕ್ಕೆ ಹೋಗಲ್ಲ ಎಂದ್ರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತಾಡಿ, ಹಂಪಿ ಉತ್ಸವ ಮುಗಿದ ಬಳಿಕ ಬಳ್ಳಾರಿ‌ ನಗರ ಶಾಸಕ ಸೋಮಶೇಖರರೆಡ್ಡಿಯವ್ರ ವಿರುದ್ಧ ದಾಖಲಾದ ಪ್ರಚೋದನಕಾರಿ ಭಾಷಣ ಆರೋಪದ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದೀವಿ.‌ ಈಗ ವಿಚಾರಣೆ ಹಂತದಲ್ಲಿದೆ. ನಾವ್ ತನಿಖೆಯಾದ ಬಳಿಕ ಅವರನ್ನ ಬಂಧಿಸಬೇಕೋ ಬೇಡವಾ ಎಂಬುದರ ಕುರಿತು‌ ಕಾನೂನಾತ್ಮಕವಾಗಿ ವಿಚಾರಿಸುವುದಾಗಿ ತಿಳಿಸಿದ್ದಾರೆ.






Conclusion:ಎಂಎಲ್ ಸಿ ಅಲ್ಲಂ ವೀರಭದ್ರಪ್ಪ ಮಾತನಾಡಿ, ಪ್ರಚೋದನ ಕಾರಿ ಭಾಷಣದ ಆರೋಪ‌ದಡಿ ಶಾಸಕ ಸೋಮಶೇಖರರೆಡ್ಡಿ ಅವರನ್ನ ಕೂಡಲೇ ಬಂಧಿಸಬೇಕೆಂದ್ರು. ಇಲ್ಲಾಂದ್ರೆ ಐದು ಜಿಲ್ಲೆ ಕಾರ್ಯಕರ್ತರನ್ನೊಳಗೊಂಡಂತೆ‌ ಪ್ರತಿಭಟನೆ ನಡೆಸಲು ಉದ್ದೇ ಶಿಸಲಾಗಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಕರೆ‌ಕೊಟ್ಟಂತೆ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ರಾಯ ಚೂರು ಹಾಗೂ ಕಲಬುರಗಿ ಜಿಲ್ಲೆಗಳ ಕಾರ್ಯಕರ್ತರು ಇಲ್ಲಿ‌ ಸೇರಲಿದ್ದು, ಬೃಹತ್ ಪ್ರತಿಭಟನೆ ನಡೆಸಲಾಗುವುದು. ಶಾಸಕ‌ ರೆಡ್ಡಿ ವಿರುದ್ಧ ಸೂಕ್ತಕ್ರಮ ಕೈಗೊಳ್ಳದಿದ್ದರೆ ಈ‌ ಪ್ರತಿಭಟನೆಗೆ ಮುಂದಾಗಲಾಗುವುದು. ಪೊಲೀಸ್ ಇಲಾಖೆ 25 ದಿನಗಳ ಕಾಲಾವಕಾಶ ಕೇಳಿದೆ. ಕಾದು‌ ನೋಡೋಣ ಎಂದ್ರು.

ಬೈಟ್: ಅಲ್ಲಂ ವೀರಭದ್ರಪ್ಪ, ಎಂಎಲ್ ಸಿ, ಬಳ್ಳಾರಿ.




ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

KN_BLY_2_MLA_REDY_AGAINST_CNG_MEMORANDUM_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.