ETV Bharat / state

ಬಳ್ಳಾರಿ: ಕೊರೊನಾ ಸೋಂಕಿತ ವ್ಯಕ್ತಿ ಅನಾರೋಗ್ಯದಿಂದ ಸಾವು

author img

By

Published : May 19, 2020, 8:24 AM IST

Updated : May 19, 2020, 2:16 PM IST

ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಬಳ್ಳಾರಿಯ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ಅವರ ಮನೆಯಿರುವ ಗಣೇಶ್ ಕಾಲೋನಿಯನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ.

bly
bly

ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿ 61 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಬಳ್ಳಾರಿ ನಗರದ ಡಾ. ರಾಜ್ ರಸ್ತೆಯಲ್ಲಿರುವ ಜಿಲ್ಲಾ ಕೋವಿಡ್ - 19 ಆಸ್ಪತ್ರೆಯಲ್ಲಿನ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ-1185 ಸಾವಿಗೀಡಾಗಿದ್ದು, ಆ ವ್ಯಕ್ತಿ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ತಿಂಗಳು ಬೈಪಾಸ್ ಸರ್ಜರಿಗೂ ಒಳಪಟ್ಟಿದ್ದರು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ನಿನ್ನೆ ತಡರಾತ್ರಿ ರೋಗಿಯ ಸಂಬಂಧಿಕರನ್ನು ಜಿಲ್ಲಾಸ್ಪತ್ರೆಗೆ ಕರೆಸಿ ಅವರ ಆರೋಗ್ಯದ ಸ್ಥಿತಿಗತಿಯ ಕುರಿತು ಮನವರಿಕೆ ಮಾಡಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನ ನುರಿತ ತಜ್ಞರಿಂದ ಪಿ-1185 ರೋಗಿಗೆ ಸತತ ಚಿಕಿತ್ಸೆ ನೀಡಿದರೂ ಫಲಿಸಲಿಲ್ಲ. ಹೀಗಾಗಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಡಿಸಿ ನಕುಲ್ ಸ್ಪಷ್ಟಪಡಿಸಿದ್ದಾರೆ.

death-in-bellary-due-to-corona
ಕಂಟೈನ್ಮೆಂಟ್ ಪ್ರದೇಶ

ಗಣೇಶ್ ಕಾಲೋನಿ ಕಂಟೈನ್ಮೆಂಟ್ ಪ್ರದೇಶ:

ಸೋಂಕಿತ ವ್ಯಕ್ತಿ ತಂಗಿದ್ದ ನಗರದ ಸತ್ಯನಾರಾಯಣಪೇಟೆಯ ಗಣೇಶ ಕಾಲೋನಿಯ 6ನೇ ಕ್ರಾಸ್​ನ 100 ಮೀಟರ್ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವೆಂದು ಜಿಲ್ಲಾಡಳಿತ ಘೋಷಿಸಿದೆ. ಇಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

61 ವರ್ಷದ ವ್ಯಕ್ತಿಯು ಹೃದ್ರೋಗ ಹಿನ್ನೆಲೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಏಪ್ರಿಲ್ 23ರಂದು ದಾಖಲಾಗಿದ್ದರು. ಮೇ 4ರಂದು ಗಣೇಶ ಕಾಲೋನಿಯಲ್ಲಿ ವಾಸವಾಗಿದ್ದರು. ನಂತರ ಉಸಿರಾಟದ ತೊಂದರೆಯಿಂದ ಬಳ್ಳಾರಿ ವಿಮ್ಸ್​ಗೆ ದಾಖಲಾಗಿದ್ದರು. ಮೇ 17ರಂದು ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ.

ಇಂದು ಬೆಳಗ್ಗೆ 5 ಗಂಟೆಗೆ 61 ವರ್ಷದ ವ್ಯಕ್ತಿ ಸಾವನ್ನಪಿದ್ದಾರೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ತಿಳಿಸಿದ್ದಾರೆ.

death-in-bellary-due-to-corona
ಔಷಧಿ ಸಿಂಪಡಣೆ

ಪಾಲಿಕೆ ಪೌರಕಾರ್ಮಿಕರಿಂದ ಔಷಧಿ ಸಿಂಪಡಣೆ, ಮನೆಯಿಂದ ಹೊರ ಬರದಂತೆ ಘೋಷಣೆ:

ಗಣೇಶ್ ಕಾಲೋನಿಯಲ್ಲಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಯಾರು ಮನೆಯಿಮದ ಹೋರಗಡೆ ಬರಬಾರದು ಎಂದು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಮತ್ತು ಹೆಲ್ತ್ ಇನ್ಸ್ಪೆಕ್ಟರ್ ಧ್ವನಿವರ್ಧಕಗಳ ಮೂಲಕ ಹೇಳಿದರು.

ಪಾಲಿಕೆಯ ಪೌರ ಕಾರ್ಮಿಕರು ಗಣೇಶ್ ಕಾಲೋನಿಯ ಸುತ್ತಮುತ್ತಲಿನ 100 ಮೀಟರ್ ಒಳಗೆ ಔಷಧಿ ಸಿಂಪಡಿಸಿದರು.

ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿ 61 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಬಳ್ಳಾರಿ ನಗರದ ಡಾ. ರಾಜ್ ರಸ್ತೆಯಲ್ಲಿರುವ ಜಿಲ್ಲಾ ಕೋವಿಡ್ - 19 ಆಸ್ಪತ್ರೆಯಲ್ಲಿನ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ-1185 ಸಾವಿಗೀಡಾಗಿದ್ದು, ಆ ವ್ಯಕ್ತಿ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ತಿಂಗಳು ಬೈಪಾಸ್ ಸರ್ಜರಿಗೂ ಒಳಪಟ್ಟಿದ್ದರು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ನಿನ್ನೆ ತಡರಾತ್ರಿ ರೋಗಿಯ ಸಂಬಂಧಿಕರನ್ನು ಜಿಲ್ಲಾಸ್ಪತ್ರೆಗೆ ಕರೆಸಿ ಅವರ ಆರೋಗ್ಯದ ಸ್ಥಿತಿಗತಿಯ ಕುರಿತು ಮನವರಿಕೆ ಮಾಡಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನ ನುರಿತ ತಜ್ಞರಿಂದ ಪಿ-1185 ರೋಗಿಗೆ ಸತತ ಚಿಕಿತ್ಸೆ ನೀಡಿದರೂ ಫಲಿಸಲಿಲ್ಲ. ಹೀಗಾಗಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಡಿಸಿ ನಕುಲ್ ಸ್ಪಷ್ಟಪಡಿಸಿದ್ದಾರೆ.

death-in-bellary-due-to-corona
ಕಂಟೈನ್ಮೆಂಟ್ ಪ್ರದೇಶ

ಗಣೇಶ್ ಕಾಲೋನಿ ಕಂಟೈನ್ಮೆಂಟ್ ಪ್ರದೇಶ:

ಸೋಂಕಿತ ವ್ಯಕ್ತಿ ತಂಗಿದ್ದ ನಗರದ ಸತ್ಯನಾರಾಯಣಪೇಟೆಯ ಗಣೇಶ ಕಾಲೋನಿಯ 6ನೇ ಕ್ರಾಸ್​ನ 100 ಮೀಟರ್ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವೆಂದು ಜಿಲ್ಲಾಡಳಿತ ಘೋಷಿಸಿದೆ. ಇಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

61 ವರ್ಷದ ವ್ಯಕ್ತಿಯು ಹೃದ್ರೋಗ ಹಿನ್ನೆಲೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಏಪ್ರಿಲ್ 23ರಂದು ದಾಖಲಾಗಿದ್ದರು. ಮೇ 4ರಂದು ಗಣೇಶ ಕಾಲೋನಿಯಲ್ಲಿ ವಾಸವಾಗಿದ್ದರು. ನಂತರ ಉಸಿರಾಟದ ತೊಂದರೆಯಿಂದ ಬಳ್ಳಾರಿ ವಿಮ್ಸ್​ಗೆ ದಾಖಲಾಗಿದ್ದರು. ಮೇ 17ರಂದು ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ.

ಇಂದು ಬೆಳಗ್ಗೆ 5 ಗಂಟೆಗೆ 61 ವರ್ಷದ ವ್ಯಕ್ತಿ ಸಾವನ್ನಪಿದ್ದಾರೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ತಿಳಿಸಿದ್ದಾರೆ.

death-in-bellary-due-to-corona
ಔಷಧಿ ಸಿಂಪಡಣೆ

ಪಾಲಿಕೆ ಪೌರಕಾರ್ಮಿಕರಿಂದ ಔಷಧಿ ಸಿಂಪಡಣೆ, ಮನೆಯಿಂದ ಹೊರ ಬರದಂತೆ ಘೋಷಣೆ:

ಗಣೇಶ್ ಕಾಲೋನಿಯಲ್ಲಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಯಾರು ಮನೆಯಿಮದ ಹೋರಗಡೆ ಬರಬಾರದು ಎಂದು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಮತ್ತು ಹೆಲ್ತ್ ಇನ್ಸ್ಪೆಕ್ಟರ್ ಧ್ವನಿವರ್ಧಕಗಳ ಮೂಲಕ ಹೇಳಿದರು.

ಪಾಲಿಕೆಯ ಪೌರ ಕಾರ್ಮಿಕರು ಗಣೇಶ್ ಕಾಲೋನಿಯ ಸುತ್ತಮುತ್ತಲಿನ 100 ಮೀಟರ್ ಒಳಗೆ ಔಷಧಿ ಸಿಂಪಡಿಸಿದರು.

Last Updated : May 19, 2020, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.