ETV Bharat / state

ಅಯೋಗ್ಯರು ವಾಮಮಾರ್ಗದಿಂದ ಈ ಉಪಚುನಾವಣೆ ಎದುರಿಸುತ್ತಿದ್ದಾರೆ.. ರಾಯರೆಡ್ಡಿ ವಾಗ್ದಾಳಿ - By election 2019

ಉಪಚುನಾವಣೆ ಸಮೀಪುಸುತ್ತಿದೆ. ವಿಜಯನಗರದ ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್​​ ಮಗನ ಮದುವೆ ನೆಪ ಹೇಳಿ ವಾಮಮಾರ್ಗದಲ್ಲಿ ಚುನಾವಣೆ ಎದುರಿಸಲು ಹೊರಟಿದ್ದಾರೆ ಎಂದು ವಿಜಯನಗರ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ.

Basavaraj Rayareddy
ಆನಂದ್​​ ಸಿಂಗ್​ ಮೇಲೆ ಬಸವರಾಜ ರಾಯರೆಡ್ಡಿ ಆರೋಪ
author img

By

Published : Nov 27, 2019, 7:18 PM IST

ಬಳ್ಳಾರಿ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಎದುರಾದ ಈ ಉಪಚುನಾವಣೆಯನ್ನು ಆಯೋಗ್ಯ (ಅನರ್ಹ) ಶಾಸಕರು ವಾಮಮಾರ್ಗದಿಂದ ಎದುರಿಸಲು ಹೊರಟಿದ್ದಾರೆ ಎಂದು ವಿಜಯನಗರ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಬಸವರಾಜ ರಾಯರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಡಿಸೆಂಬರ್ 1ರಂದು ಅವರ ಪುತ್ರನ ವಿವಾಹವನ್ನ ಅದ್ಧೂರಿಯಾಗಿ ಮಾಡಲು‌ ಹೊರಟಿದ್ದಾರೆ. ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ತಿಳಿಸಿದರು.

ಅವರ ಪುತ್ರನ ವಿವಾಹದ ನೆಪದಲ್ಲಿ ಸರಿಸುಮಾರು ಎರಡು ಕೋಟಿ ರೂ.ಗಳ ಹಣವನ್ನ ಭೋಜನ ಕೂಟಕ್ಕೆ ಖರ್ಚು ಮಾಡುತ್ತಿದ್ದಾರೆ. 2.6 ಮತದಾರರಿಗೆ ಅಂದಾಜು 8 ಗ್ರಾಂನ 51 ಸಾವಿರ ಗೋಲ್ಡ್ ಕಾಯಿನ್ ಹಂಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬಳ್ಳಾರಿ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಎದುರಾದ ಈ ಉಪಚುನಾವಣೆಯನ್ನು ಆಯೋಗ್ಯ (ಅನರ್ಹ) ಶಾಸಕರು ವಾಮಮಾರ್ಗದಿಂದ ಎದುರಿಸಲು ಹೊರಟಿದ್ದಾರೆ ಎಂದು ವಿಜಯನಗರ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಬಸವರಾಜ ರಾಯರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಡಿಸೆಂಬರ್ 1ರಂದು ಅವರ ಪುತ್ರನ ವಿವಾಹವನ್ನ ಅದ್ಧೂರಿಯಾಗಿ ಮಾಡಲು‌ ಹೊರಟಿದ್ದಾರೆ. ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ತಿಳಿಸಿದರು.

ಅವರ ಪುತ್ರನ ವಿವಾಹದ ನೆಪದಲ್ಲಿ ಸರಿಸುಮಾರು ಎರಡು ಕೋಟಿ ರೂ.ಗಳ ಹಣವನ್ನ ಭೋಜನ ಕೂಟಕ್ಕೆ ಖರ್ಚು ಮಾಡುತ್ತಿದ್ದಾರೆ. 2.6 ಮತದಾರರಿಗೆ ಅಂದಾಜು 8 ಗ್ರಾಂನ 51 ಸಾವಿರ ಗೋಲ್ಡ್ ಕಾಯಿನ್ ಹಂಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

Intro:ಅಯೋಗ್ಯರು ವಾಮಮಾರ್ಗದಿಂದ ಈ ಉಪಚುನಾವಣೆ ಎದುರಿಸಲು ಒಂಟಂತಿದೆ: ಬಸವರಾಜ ರಾಯರೆಡ್ಡಿ..!
ಬಳ್ಳಾರಿ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಎದುರಾದ
ಈ ಉಪಚುನಾವಣೆಯನ್ನು ಆಯೋಗ್ಯ (ಅನರ್ಹ) ಶಾಸಕರು ವಾಮಮಾರ್ಗದಿಂದ ಎದುರಿಸಲು ಒಂಟಂತಿದೆ ಎಂದು ವಿಜಯನಗರ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಬಸವರಾಜ ರಾಯರೆಡ್ಡಿ ಶಂಕೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ವಿಜಯನಗರ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಡಿಸೆಂಬರ್ 28ರಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಕಾರ್ಯಕ್ರಮದ ವಿವರ ನೀಡಲು
ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಜಯ
ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಡಿಸೆಂಬರ್ 1 ರಂದು ಅವರ ಪುತ್ರನ ವಿವಾಹವನ್ನ ಅದ್ಧೂರಿಯಾಗಿ ಮಾಡಲು‌ ಹೊರಟಿತ್ತಿದ್ದಾರೆ. ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.
ಅವರ ಪುತ್ರನ ವಿವಾಹದ ನೆಪದಲ್ಲಿ ಸರಿಸುಮಾರು ಎರಡುಕೋಟಿ ರೂ.ಗಳ ಹಣವನ್ನ ಭೋಜನಕೂಟಕ್ಕೆ ಖರ್ಚು ಮಾಡುತ್ತಿದ್ದಾರೆ.
ಒಂದು ಊಟಕ್ಕೆ 500 ರೂ ಖರ್ಚು ಮಾಡುತ್ತಿದ್ದಾರೆ. ಪೆಂಡಾಲ್
ಗೆ ಎರಡು ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಇದಲ್ಲದೇ 2.6 ಮತದಾರರಿಗೆ ಆನರ್ಹ ಶಾಸಕ ಆನಂದಸಿಂಗ್ ಅವರು ಅಂದಾಜು 51 ಸಾವಿರ ಗೋಲ್ಡ್ ಕಾಯಿನ್ ಹಂಚಲು ಮುಂದಾಗಿದ್ದಾರೆ.
ಈ ಬಗ್ಗೆಯೂ ಕಾಂಗ್ರೆಸ್ ಪಕ್ಷ ಆಯೋಗಕ್ಕೆ ದೂರು ನೀಡಲಿದೆ. ವಿವಾಹ‌ ಮಹೋತ್ಸವ ಸಮಾರಂಭದ ಸಂದರ್ಭ ಸಿಸಿ ಟಿವಿ ಕ್ಯಾಮರಾ ಹಾಗೂ ಸ್ಪೆಷಲ್ ಸ್ಕ್ವಾಡ್ ಕಳಿಸಬೇಕು. ಎಲ್ಲವನ್ನೂ ಲೆಕ್ಕ ಇಟ್ಟು ಆನಂದಸಿಂಗ್ ಅವರ ಚುನಾವಣಾ ವೆಚ್ಚದ ಖಾತೆಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ ‌ರಾಯರೆಡ್ಡಿ.
Body:ಈ ಉಪಚುನಾವಣೆ ಕಾಂಗ್ರೆಸ್ ಗೆ ಅತ್ಯಂತ ಪ್ರಮುಖ ಚುನಾವಣೆ.
ಬಿಜೆಪಿಯವರು ನಾವು ದೇಶಭಕ್ತರು, ಪ್ರಾಮಾಣಿಕರು ಅಂತಾ ಹೇಳ್ಕೋತಾರೆ. ಆದ್ರೆ ಅವರು ಮಾಡುವ ಎಲ್ಲ ಕೆಲಸಗಳು
ಅನೈತಿಕ, ಅವರು ಲಜ್ಜೆಗೆಟ್ಟವರು. ನಿನ್ನೆ ಮಹಾರಾಷ್ಟ್ರದಲ್ಲಿ ಕೈ ಸುಟ್ಟಿಕೊಂಡ್ರು. ಬೇರೆ ಪಕ್ಷದ ಶಾಸಕರಿಗೆ ಹಣದ ಆಮಿಷವೊಡ್ಡು ತ್ತಾರೆ. ಈ ದೇಶದ ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುತ್ತಿದ್ದಾರೆ.‌ ನೈತಿಕ ರಾಜಕಾರಣ ಉಳಿಯಬೇಕಾದ್ರೆ 15 ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಆಯ್ಕೆ ಮಾಡಬೇಕು. ವಿಜಯನಗರದಲ್ಲಿ ಅವರು ಎಷ್ಟೇ ಹಣ ಕೊಟ್ರೂ ಜನ ಮಾತ್ರ ಕಾಂಗ್ರೆಸ್ ಗೆ ಮತ ಹಾಕ್ತಾರೆ ಎಂದ್ರು‌ ರಾಯರೆಡ್ಡಿ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_EX_MINISTER_RAYYA_REDY_BYTE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.