ETV Bharat / state

ನಾನು ಖಾಕಿ ಡ್ರೆಸ್​ ಬಿಚ್ಚಿ ಬರ್ತೀನಿ, ನೀನು ಬಾ.. ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿ ನಿಂದಿಸಿದ ಪಿಎಸ್​ಐ

author img

By

Published : Aug 12, 2022, 10:22 AM IST

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ ವ್ಯಕ್ತಿಯೊಬ್ಬನಿಗೆ ಕಪಾಳ ಮೋಕ್ಷ ಮಾಡಿ ನಾನು ಖಾಕಿ ಡ್ರೆಸ್​ ಬಿಚ್ಚಿ ಬರ್ತೀನಿ, ನೀನು ಬಾ.. ಅಂತಾ ಹೇಳಿ ನಿಂದಿಸಿರುವ ಪಿಎಸ್ಐ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

Bellary PSI slap to man  PSI slap to man video goes viral i  Bellary news  ನಾನು ಖಾಕಿ ಡ್ರೆಸ್​ ಬಿಚ್ಚಿ ಬರ್ತೀನಿ  ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿ ನಿಂದಿಸಿ ಪಿಎಸ್​ಐ  ಪಿಎಸ್ಐ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್  ಪಿಎಸ್ಐ ಕ್ಷಮೆ  ಪ್ರತಿಭಟನಾಕಾರರ ಮನವೋಲಿಕೆ  ಬಳ್ಳಾರಿ ಸುದ್ದಿ  Etv Bharat Karnataka news  ಈಟಿವಿ ಭಾರತ್​ ಕರ್ನಾಟಕ ಸುದ್ದಿ
ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿ ನಿಂದಿಸಿ ಪಿಎಸ್​ಐ

ಬಳ್ಳಾರಿ: ಕುರುಗೋಡು ತಾಲೂಕಿನ ಕೊಳೂರು ಕ್ರಾಸ್​ನಲ್ಲಿ ಪಿಎಸ್ಐ ರೈತರೊಬ್ಬರಿಗೆ ಲಾಠಿಯಿಂದ ಹೊಡೆದ ಪರಿಣಾಮ ಕಾಲು ಮುರಿದಿದೆ ಎನ್ನುವುದು ಹಾಗೂ ಈ ಘಟನೆಗೆ ಪಿಎಸ್ಐ ಕ್ಷಮೆ ಕೇಳಿದ್ದಾರೆ ಎನ್ನುವ ಸುದ್ದಿಯು ಸದ್ದು ಮಾಡಿತ್ತು. ಆದರೆ ಈ ಪ್ರಕರಣವೀಗ ದಿನಕ್ಕೊಂದು ರೂಪ‌ ಪಡೆಯುತ್ತಿದೆ. ವ್ಯಕ್ತಿಯ ಕಾಲು ಮುರುದಿರಲಿಲ್ಲ.. ಅವರು ಮೊಹರಂನಲ್ಲಿ ಅಲಾಯಿ ಕುಣಿದಿದ್ದಾರೆ ಎನ್ನುವ ಸುದ್ದಿ ವೈರಲ್​ ಆಗಿರುವ ಬೆನ್ನಲೆ ಕಾಲು ಮುರಿದಿರುವ ವ್ಯಕ್ತಿಯ ಕಡೆಯವರೊಬ್ಬರಿಗೆ ಪಿಎಸ್​ಐ ಕಪಾಳ ಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಕೂಡಾ ವೈರಲ್ ಆಗಿದೆ.

ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿ ನಿಂದಿಸಿ ಪಿಎಸ್​ಐ

ಗುರುವಾರ ಮಾಜಿ ಶಾಸಕ ಸುರೇಶ್ ಬಾಬು ಜನ್ಮದಿನದ ಬ್ಯಾನರನ್ನು ಕೋಳೂರಿನಲ್ಲಿ ದುಷ್ಕರ್ಮಿಗಳು ಹರಿದು ಹಾಕಿದ್ದರು. ಈ ಸಂದರ್ಭದಲ್ಲಿ ಕೆಲವರು ಗ್ರಾಮದಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಇದನ್ನು ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಪ್ರತಿಭಟನಾಕಾರರ ಮನವೋಲಿಕೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಕುರುಗೋಡು ಪಿಎಸ್ಐ ಮಣಿಕಂಠ ಕಾಲು ಮುರಿದು ಕೊಂಡಿದ್ದ ವ್ಯಕ್ತಿಯ ಸಂಬಂಧಿಯೊಬ್ಬನಿಗೆ ಕಪಾಳ ಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆ ದೃಶ್ಯವನ್ನು ನೆರೆದಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ನಾನು ಪೊಲೀಸ್ ಡ್ರಸ್ ಬಿಟ್ಟು ಬರುತ್ತೇನೆ, ನೋಡಿಕೊಳ್ಳುತ್ತೇನೆ ಬಾ ಎಂದು ಅವಾಜ್ ಹಾಕಿರುವ ಮಾತು ವಿಡಿಯೋದಲ್ಲಿದೆ‌. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆ ಪಿಎಸ್ಐ ಮಣಿಕಂಠರನ್ನು ಬಳ್ಳಾರಿ ನಗರಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಪಿಎಸ್ಐ ರಘುರನ್ನು ನಿಯೋಜಿಸಲಾಗಿದೆ. ಪಿಎಸ್ಐ ಮಣಿಕಂಠ ವಿರುದ್ಧ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ಹೋಗಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆಯು ಮೇಲ್ನೋಟಕ್ಕೆ ಪೊಲೀಸ್ ಅಧಿಕಾರಿ ಮತ್ತು ಕೋಳೂರು ಗ್ರಾಮದ ವ್ಯಕ್ತಿ ಮಧ್ಯೆಯ ಗಲಾಟೆಯಾದರೂ, ಘಟನೆಯ ಹಿಂದೆ ರಾಜಕೀಯ ಲೆಕ್ಕಾಚಾರ ಮತ್ತು ವೈಷಮ್ಯಗಳನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

ಓದಿ: ದೆಹಲಿ ಸ್ವಾತಂತ್ರೋತ್ಸವದ ಪೆರೇಡ್‌ಗೆ ವಿಜಯನಗರ ವಿದ್ಯಾರ್ಥಿನಿ ಆಯ್ಕೆ

ಬಳ್ಳಾರಿ: ಕುರುಗೋಡು ತಾಲೂಕಿನ ಕೊಳೂರು ಕ್ರಾಸ್​ನಲ್ಲಿ ಪಿಎಸ್ಐ ರೈತರೊಬ್ಬರಿಗೆ ಲಾಠಿಯಿಂದ ಹೊಡೆದ ಪರಿಣಾಮ ಕಾಲು ಮುರಿದಿದೆ ಎನ್ನುವುದು ಹಾಗೂ ಈ ಘಟನೆಗೆ ಪಿಎಸ್ಐ ಕ್ಷಮೆ ಕೇಳಿದ್ದಾರೆ ಎನ್ನುವ ಸುದ್ದಿಯು ಸದ್ದು ಮಾಡಿತ್ತು. ಆದರೆ ಈ ಪ್ರಕರಣವೀಗ ದಿನಕ್ಕೊಂದು ರೂಪ‌ ಪಡೆಯುತ್ತಿದೆ. ವ್ಯಕ್ತಿಯ ಕಾಲು ಮುರುದಿರಲಿಲ್ಲ.. ಅವರು ಮೊಹರಂನಲ್ಲಿ ಅಲಾಯಿ ಕುಣಿದಿದ್ದಾರೆ ಎನ್ನುವ ಸುದ್ದಿ ವೈರಲ್​ ಆಗಿರುವ ಬೆನ್ನಲೆ ಕಾಲು ಮುರಿದಿರುವ ವ್ಯಕ್ತಿಯ ಕಡೆಯವರೊಬ್ಬರಿಗೆ ಪಿಎಸ್​ಐ ಕಪಾಳ ಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಕೂಡಾ ವೈರಲ್ ಆಗಿದೆ.

ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿ ನಿಂದಿಸಿ ಪಿಎಸ್​ಐ

ಗುರುವಾರ ಮಾಜಿ ಶಾಸಕ ಸುರೇಶ್ ಬಾಬು ಜನ್ಮದಿನದ ಬ್ಯಾನರನ್ನು ಕೋಳೂರಿನಲ್ಲಿ ದುಷ್ಕರ್ಮಿಗಳು ಹರಿದು ಹಾಕಿದ್ದರು. ಈ ಸಂದರ್ಭದಲ್ಲಿ ಕೆಲವರು ಗ್ರಾಮದಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಇದನ್ನು ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಪ್ರತಿಭಟನಾಕಾರರ ಮನವೋಲಿಕೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಕುರುಗೋಡು ಪಿಎಸ್ಐ ಮಣಿಕಂಠ ಕಾಲು ಮುರಿದು ಕೊಂಡಿದ್ದ ವ್ಯಕ್ತಿಯ ಸಂಬಂಧಿಯೊಬ್ಬನಿಗೆ ಕಪಾಳ ಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆ ದೃಶ್ಯವನ್ನು ನೆರೆದಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ನಾನು ಪೊಲೀಸ್ ಡ್ರಸ್ ಬಿಟ್ಟು ಬರುತ್ತೇನೆ, ನೋಡಿಕೊಳ್ಳುತ್ತೇನೆ ಬಾ ಎಂದು ಅವಾಜ್ ಹಾಕಿರುವ ಮಾತು ವಿಡಿಯೋದಲ್ಲಿದೆ‌. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆ ಪಿಎಸ್ಐ ಮಣಿಕಂಠರನ್ನು ಬಳ್ಳಾರಿ ನಗರಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಪಿಎಸ್ಐ ರಘುರನ್ನು ನಿಯೋಜಿಸಲಾಗಿದೆ. ಪಿಎಸ್ಐ ಮಣಿಕಂಠ ವಿರುದ್ಧ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ಹೋಗಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆಯು ಮೇಲ್ನೋಟಕ್ಕೆ ಪೊಲೀಸ್ ಅಧಿಕಾರಿ ಮತ್ತು ಕೋಳೂರು ಗ್ರಾಮದ ವ್ಯಕ್ತಿ ಮಧ್ಯೆಯ ಗಲಾಟೆಯಾದರೂ, ಘಟನೆಯ ಹಿಂದೆ ರಾಜಕೀಯ ಲೆಕ್ಕಾಚಾರ ಮತ್ತು ವೈಷಮ್ಯಗಳನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

ಓದಿ: ದೆಹಲಿ ಸ್ವಾತಂತ್ರೋತ್ಸವದ ಪೆರೇಡ್‌ಗೆ ವಿಜಯನಗರ ವಿದ್ಯಾರ್ಥಿನಿ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.