ಬಳ್ಳಾರಿ : ನಗರದ 24ನೇ ವಾರ್ಡ್ನ ಮಾಜಿ ಕಾರ್ಪೊರೇಟರ್ ಎಂ.ಗೋವಿಂದರಾಜಲು ಅವರು ಕಳೆದ 39 ದಿನಗಳಿಂದ ವಿಮ್ಸ್ಯಲ್ಲಿನ ಸಿಬ್ಬಂದಿ, ರೋಗಿಯ ಸಂಬಂಧಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಊಟ ಪ್ಯಾಕೇಟ್ಗಳನ್ನು ವಿತರಿಸುತ್ತಿದ್ದಾರೆ.
ನಿತ್ಯ 1000 ಪ್ಯಾಕೇಟ್ ಊಟ, ನೀರು, ಬಾಳೆಹಣ್ಣುಗಳನ್ನು ವಿತರಿಸಲಾಗುತ್ತಿದ್ದು, ಇಂದು ಕೌಲಬಜಾರ್ ಠಾಣೆಯ ಪಿಎಸ್ಐ ರಘು ಅವರು ಸಾರ್ವಜನಿಕರಿಗೆ ಊಟದ ಪ್ಯಾಕೇಟ್ ವಿತರಣೆ ಮಾಡಿದರು.
![Bellary former corporator M. Govindarajalu](https://etvbharatimages.akamaized.net/etvbharat/prod-images/7031005_553_7031005_1588416219535.png)
ಈ ಸಮಯದಲ್ಲಿ ಡಾ.ಅಶೋಕ್, ಕೌಲಬಜಾರ್ ಠಾಣೆಯ ಪಿಎಸ್ಐ ರಘು ಮತ್ತು ಎಂಜಿಆರ್ ತಂಡದ ಸದಸ್ಯರು ಭಾಗವಹಿಸಿದ್ದರು.