ETV Bharat / state

ದೊಡ್ಡ ಉದ್ಯಮಿಗಳು ಹೇಳಿದಂತೆ ಕಾನೂನುಗಳ ತಿದ್ದುಪಡೆ.. ರಾಧಾಕೃಷ್ಣ ಉಪಾಧ್ಯ ಕಿಡಿ - ಎಸ್​ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಹೇಳಿಕೆ

ಕೇಂದ್ರ ಸರ್ಕಾರವು ಕಾರ್ಮಿಕರಿಗೆ ಯಾವುದನ್ನೂ ಸುಮ್ಮನೆ ಕೊಟ್ಟಿಲ್ಲ. ಎಲ್ಲವೂ ಹೋರಾಟದಿಂದಲೇ ಬಂದಿದೆ ಎಂದು ಎಸ್​ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಹೇಳಿದರು.

ಎಐಟಿಯುಸಿಯ ಜಿಲ್ಲಾಮಟ್ಟದ ಪ್ರಥಮ ಕಾರ್ಮಿಕರ ಸಮ್ಮೇಳನ
author img

By

Published : Nov 24, 2019, 5:48 PM IST

Updated : Nov 24, 2019, 10:42 PM IST

ಬಳ್ಳಾರಿ: ‌‌ಸರ್ಕಾರವು ಕಾರ್ಮಿಕರಿಗೆ ಯಾವುದನ್ನೂ ಸುಮ್ಮನೆ ಕೊಟ್ಟಿಲ್ಲ. ಎಲ್ಲವೂ ಹೋರಾಟದಿಂದಲೇ ಬಂದಿದೆ ಎಂದು ಎಸ್​ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಎಐಟಿಯುಸಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಥಮ ಕಾರ್ಮಿಕರ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೊಡ್ಡ ಉದ್ಯಮಿಗಳು ಹೇಳಿದಂತೆ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ದೂರಿದರು. ಕಾರ್ಮಿಕರು ಪ್ರಜ್ಞಾವಂತಿಕೆಯ ಪಾತ್ರ ವಹಿಸಬೇಕಿದ್ದು, ಕಾರ್ಮಿಕರ ಕೆಲಸವನ್ನು ಕೇವಲ ಸಂಬಳಕ್ಕಾಗಿ ಮಾಡುತ್ತಿಲ್ಲ ಅದು ಅವರ ಬದುಕು‌. ಸರ್ಕಾರಗಳು ಅವರ ಬದುಕನ್ನು ಬೀದಿಗೆ ತಂದು ನಿಲ್ಲಿಸುತ್ತಿವೆ ಎಂದರು.

ಎಐಟಿಯುಸಿಯ ಜಿಲ್ಲಾಮಟ್ಟದ ಕಾರ್ಮಿಕರ ಪ್ರಥಮ ಸಮ್ಮೇಳನ

ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ದುಡಿಯುವ ಕಾರ್ಮಿಕರ ಮೇಲೆ ದಾಳಿ ಮಾಡುತ್ತಲೇ ಇದೆ ಎಂದರು‌. ನಮ್ಮ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳುತ್ತಿದ್ದು, ನಮ್ಮ ಸೌಲಭ್ಯಗಳನ್ನು ನಮಗೆ ಕೊಡುತ್ತಿಲ್ಲ ಎಂದರು.

ಬಳ್ಳಾರಿ: ‌‌ಸರ್ಕಾರವು ಕಾರ್ಮಿಕರಿಗೆ ಯಾವುದನ್ನೂ ಸುಮ್ಮನೆ ಕೊಟ್ಟಿಲ್ಲ. ಎಲ್ಲವೂ ಹೋರಾಟದಿಂದಲೇ ಬಂದಿದೆ ಎಂದು ಎಸ್​ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಎಐಟಿಯುಸಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಥಮ ಕಾರ್ಮಿಕರ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೊಡ್ಡ ಉದ್ಯಮಿಗಳು ಹೇಳಿದಂತೆ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ದೂರಿದರು. ಕಾರ್ಮಿಕರು ಪ್ರಜ್ಞಾವಂತಿಕೆಯ ಪಾತ್ರ ವಹಿಸಬೇಕಿದ್ದು, ಕಾರ್ಮಿಕರ ಕೆಲಸವನ್ನು ಕೇವಲ ಸಂಬಳಕ್ಕಾಗಿ ಮಾಡುತ್ತಿಲ್ಲ ಅದು ಅವರ ಬದುಕು‌. ಸರ್ಕಾರಗಳು ಅವರ ಬದುಕನ್ನು ಬೀದಿಗೆ ತಂದು ನಿಲ್ಲಿಸುತ್ತಿವೆ ಎಂದರು.

ಎಐಟಿಯುಸಿಯ ಜಿಲ್ಲಾಮಟ್ಟದ ಕಾರ್ಮಿಕರ ಪ್ರಥಮ ಸಮ್ಮೇಳನ

ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ದುಡಿಯುವ ಕಾರ್ಮಿಕರ ಮೇಲೆ ದಾಳಿ ಮಾಡುತ್ತಲೇ ಇದೆ ಎಂದರು‌. ನಮ್ಮ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳುತ್ತಿದ್ದು, ನಮ್ಮ ಸೌಲಭ್ಯಗಳನ್ನು ನಮಗೆ ಕೊಡುತ್ತಿಲ್ಲ ಎಂದರು.

Intro:ದೊಡ್ಡ ಉದ್ಯಮಿಗಳು ಹೇಳಿದಂತೆ ಕಾನೂನು : ರಾಧಾಕೃಷ್ಣ ಉಪಾಧ್ಯಾ. Body:ಎಲ್ಲವನ್ನೂ ಗೌರವಧನದ ಆಧಾರದ ಮೇಲೆ ದುಡಿಸಿಕೊಳ್ಳುತ್ತಿದ್ದಾರೆ. ದೊಡ್ಡ ಉದ್ಯಮಿಗಳು ಹೇಳಿದಂತೆ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದ್ದಾರೆ‌‌ ಎಂದು
ಎಸ್ ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯಾ ದೂರಿದರು.

ನಗರದ ಗಾಂಧಿ ಭವನದಲ್ಲಿ ಎಐಟಿಯುಸಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಥಮ ಕಾರ್ಮಿಕರ ಸಮ್ಮೇಳನದಲ್ಲಿ ಮಾತನಾಡಿದ ಅವರು ಸರ್ಕಾರ ಕಾರ್ಮಿಕರಿಗೆ ಯಾವುದನ್ನೂ ಸುಮ್ಮನೆ ಕೊಟ್ಟಿಲ್ಲ. ಎಲ್ಲವೂ ಹೋರಾಟದಿಂದಲೇ ಬಂದಿದೆ. ಆದರೆ, ಈಗ ಎಲ್ಲವನ್ನೂ ತಿದ್ದುಪಡಿ ಮಾಡಲು ಹೊರಡಿವೆ‌‌ ಎಲ್ಲವನ್ನೂ ಖಾಸಗೀಕರಣ ಮಾಡಲಾಗುತ್ತಿದೆ‌. ಎಲ್ಲವೂ ತಾತ್ಕಾಲಿಕವಾಗುತ್ತಿವೆ.

ಯಾವುದೂ ಶಾಶ್ವತವಿಲ್ಲ. ಎಲ್ಲವನ್ನೂ ಗೌರವಧನದ ಆಧಾರದ ಮೇಲೆ ದುಡಿಸಿಕೊಳ್ಳುತ್ತಿದ್ದಾರೆ. ದೊಡ್ಡ ಉದ್ಯಮಿಗಳು ಹೇಳಿದಂತೆ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದ್ದಾರೆ‌‌.

ಕಾರ್ಮಿಕರು ಪ್ರಜ್ಞಾವಂತಿಕೆಯ ಪಾತ್ರ ವಹಿಸಬೇಕಿದೆ. ಕಾರ್ಮಿಕರು ಕೆಲಸವನ್ನು ಕೇವಲ ಸಂಬಳ ಕ್ಕಾಗಿ ಮಾಡುತ್ತಿಲ್ಲ. ಅದು ಅವರ ಬದುಕು‌. ಸರ್ಕಾರಗಳು ಅವರ ಬದುಕನ್ನು ಹೀರಿ ಅವರನ್ನು ಬೀದಿಗೆ ಬೀಳಿಸುತ್ತಿದ್ದಿರಿ ಎಂದು ತಿಳಿಸಿದರು. ಸಂಘಟನೆಗಳು ದುಡ್ಡು ಕಿತ್ತು ಕಾರ್ಮಿಕರಿಗೆ ಮೋಸ ಮಾಡುತ್ತಿವೆ.

ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸೋಮಶೇಖರ್ ಮಾತನಾಡಿ ಸಂಘಟನೆಯನ್ನು ಬಲ ಪಡಿಸುವ ಕೆಲಸ ಮಾಡಬೇಕು. ರಾಜ್ಯದಾದ್ಯಂತ ಸಮ್ಮೇಳನ ನಡೆಯುತ್ತಿವೆ‌. 2020 ರ ಫೆಬ್ರವರಿಯಲ್ಲಿ ಅಖಿಲ ಭಾರತ ಸಮ್ಮೇಳನ ನಡೆಯಲಿದೆ. ಝಾರ್ಖಂಡ್ ನ ದನ್ಬಾಗ್ ನಲ್ಲಿ ನಡೆಯಲಿದೆ‌.

ಜ. 4,5ರಂದು ಮೂರನೇ ರಾಜ್ಯ ಸಮ್ಮೇಳನ ನಡೆಯಲಿದೆ‌:-

ಕೇಂದ್ರ ಸರ್ಕಾರ ದುಡಿಯುವ ಕಾರ್ಮಿಕರ ಮೇಲೆ ಒಂದಾನೊ‌ಂದು ದಾಳಿ ಮಾಡುತ್ತಲೇ ಇದೆ‌. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ರಿದ್ದಾರೆ‌. ನಮ್ಮ ಸೌಲಭ್ಯಗಳನ್ನು ನಮಗೆ ಕೊಡುತ್ತಿಲ್ಲ. ಎಲ್ಲಾ ಸರ್ಕಾರಗಳು ದೇಶದ ಕಾರ್ಮಿಕರ ರಕ್ತ ಹೀರುತ್ತಿವೆ. ದೇಶ ಸ್ವಾತಂತ್ರ್ಯಗೊಂಡು 70 ವರ್ಷ ಕಳೆದರೂ ಪರಿಸ್ಥಿತಿ ಬದಲಾಗಿಲ್ಲ.

ಕೇವಲ ಉದ್ಯೋಗ ಕಡಿತ, ಕಾರ್ಖಾನೆ ಮುಚ್ಚುವುದು ದಿನನಿತ್ಯದ ಸಾಮಾನ್ಯ ಸುದ್ದಿಯಾಗುತ್ರಿವೆ. ಜಿಲ್ಲೆಯಲ್ಲಿಯೂ ಗಣಿ ಮತ್ತು ಸ್ಪಾಂಜ್ ಕಾರ್ಖಾನೆಗಳನ್ನು ಮುಚ್ಚಲಾಗಿದೆ. ಹಳ್ಳಿಗಳಲ್ಲಿ ಕೆಲಸ ಸಿಗುತ್ತಿಲ್ಲ.

ಪ್ರತಿಯೊಂದಕ್ಕೂ ನಾವು ತೆರಿಗೆ ಪಾವತಿಸಬೇಕಾಗಿದೆ‌. ನಿಜವಾಗಲೂ ತೆರಿಗೆ ಕಟ್ಟಬೇಕಾದವರು ಕಟ್ಟುತ್ತಿಲ್ಲ‌. ಸಾಮಾನ್ಯ ಜನರಿಂದ ವಸೂಲಿ ಮಾಡಲಾಗುತ್ತಿದೆ‌.

ಸರ್ಕಾರಕ್ಕೆ ಮನುಷ್ಯತ್ವ ಇಲ್ಲ. ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸಿವೆ. ಎಲ್ಲವನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಬಿಎಸ್ಎನ್ಎಲ್ ಮತ್ತು ಬ್ಯಾಂಕ್ಗಳು ದಿವಾಳಿಯಾಗಿಬಿಟ್ಟವು.

ಬ್ಯಾಂಕ್ ಗಳು ದುಡಿದು ಬದುಕು ಕಟ್ಟಿಕೊಳ್ಳಲು ಬಡವರಿಗೆ ಸಾಲ ನೀಡುವುದಿಲ್ಲ . ವಿದೇಶಕ್ಕೆ ಹಾರಿ ಹೋಗುವ ಕೋಟ್ಯಾಧಿಪತಿಗಳಿಗೆ ಕೊಡುತ್ತಾರೆ.

Conclusion:ಈ ಕಾರ್ಯಕ್ರಮದಲ್ಲಿ ಕಾಮ್ರೇಡ್ ಎ.ದೇವದಾಸ್, ಆರ್.ಸೋಮಶೇಖರ್ ಗೌಡ, ನಾಗಲಕ್ಷ್ಮಿ , ಸುರೇಶ್ ಮತ್ತು ವಿವಿಧ ಇಲಾಖೆಯ ನೂರಾರು ಕಾರ್ಮಿಕರು ಹಾಜರಿದ್ದರು.
Last Updated : Nov 24, 2019, 10:42 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.