ETV Bharat / state

ಬಳ್ಳಾರಿ ಆರ್​ಟಿಒ ಕಚೇರಿ ಮೇಲೆ ಎಸಿಬಿ ದಾಳಿ - undefined

ಬಳ್ಳಾರಿ ಜಿಲ್ಲೆಯ ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಆರ್​​ಟಿಒ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ  ಮತ್ತು ಖಾಸಗಿ ಏಜೆಂಟ್ಗಳ​ ತನಿಖೆ ನಡೆಸಿದರು.

ಎಸಿಬಿ
author img

By

Published : May 28, 2019, 3:16 AM IST

ಬಳ್ಳಾರಿ: ನಗರದ ಆರ್​​ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 33 ಖಾಸಗಿ ಏಜೆಂಟ್​​ಗಳಿಂದ ಲಕ್ಷಾಂತರ ರೂ. ನಗದು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಆರ್​​ಟಿಒ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಖಾಸಗಿ ಏಜೆಂಟರುಗಳ ತನಿಖೆ ನಡೆಸಿದರು. ಕಚೇರಿಯಲ್ಲಿ ವಾಹನಗಳ ನೋಂದಣಿ, ಚಾಲನಾ ಪರವಾನಗಿ, ನಿರ್ವಾಹಕ ಲೈಸನ್ಸ್, ವಾಹನಗಳ ಪರ್ಮಿಟ್ ಇನ್ನಿತರ ಸರ್ಕಾರಿ ಕೆಲಸಗಳಿಗಾಗಿ ಅಧಿಕಾರಿಗಳು, ಸಿಬ್ಬಂದಿ, ಏಜೆಂಟ್​​ಗಳು ಲಂಚ ಪಡೆಯುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ.

ಎಸಿಬಿ ದಾಳಿ

ದಾಳಿ ವೇಳೆ 33 ಖಾಸಗಿ ಏಜೆಂಟ್​​ಗಳಿಂದ 3,94,000 ರೂ. ವಶಪಡಿಸಿಕೊಳ್ಳಲಾಗಿದೆ. ಶೋಧನಾ ಕಾಲಕ್ಕೆ ದಾಖಲಾತಿಗಳ ಅನ್ವಯ ವಹಿವಾಟು ನಡೆಸಿದ ಮೊತ್ತ 3,41,000 ರೂ. ಇದನ್ನು ಸ್ವೀಕೃತಿ ಪಡೆದು ಸಾರಿಗೆ ಅಧಿಕಾರಿಗಳಿಗೆ ಹಣ ಹಿಂತಿರುಗಿಸಲಾಗಿದೆ. ಸೋಮವಾರ ಬ್ಯಾಂಕ್​​ಗೆ ಜಮಾ ಮಾಡಬೇಕಾದ ಹಗರಿ ಚೆಕ್​​ ಪೋಸ್ಟ್​​ನಲ್ಲಿ ಸಂಗ್ರಹವಾದ ಮೊತ್ತ 1,96,000 ರೂಪಾಯಿ ಆಗಿದೆ. ಇದನ್ನು ಸಹ ಸ್ವೀಕೃತಿ ಪಡೆದು ಸಾರಿಗೆ ಅಧಿಕಾರಿಗಳಿಗೆ ಹಣ ಹಿಂತಿರುಗಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಸಂಜೆ 7 ಗಂಟೆವರೆಗೆ ಎಸಿಬಿ ತಂಡ ತನಿಖೆ ನಡೆಸಿದೆ.

ಖಾಸಗಿ ಏಜೆಂಟ್​​ಗಳಾದ ಪ್ರಕಾಶ್, ಖಾದರ್, ಅಬ್ದುಲ್, ಪಾಲಾಕ್ಷಿ ಸುರೇಶ್ ಎಂಬುವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗುತ್ತದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.

ಭ್ರಷ್ಟಾಚಾರ ನಿಗ್ರಹ ದಳ ಬಳ್ಳಾರಿ ಡಿವೈಎಸ್​​ಪಿ ಚಂದ್ರಕಾಂತ್ ಪೂಜಾರ್, ಕೊಪ್ಪಳ ಜಿಲ್ಲೆ ಡಿವೈಎಸ್​​ಪಿ ರುದ್ರ ಪೂಜಿನ ಕೊಪ್ಪ, ಬಳ್ಳಾರಿ ಇನ್ಸ್​ಪೆಕ್ಟರ್ ಶ್ರೀಧರ್ ದೊಡ್ಡಿ, ಕೊಪ್ಪಳ ಇನ್ಸ್​ಪೆಕ್ಟರ್ ಬಿಳಿಮಗಿ ತಂಡದಿಂದ ದಾಳಿ ನಡೆದಿದೆ.

ಬಳ್ಳಾರಿ: ನಗರದ ಆರ್​​ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 33 ಖಾಸಗಿ ಏಜೆಂಟ್​​ಗಳಿಂದ ಲಕ್ಷಾಂತರ ರೂ. ನಗದು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಆರ್​​ಟಿಒ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಖಾಸಗಿ ಏಜೆಂಟರುಗಳ ತನಿಖೆ ನಡೆಸಿದರು. ಕಚೇರಿಯಲ್ಲಿ ವಾಹನಗಳ ನೋಂದಣಿ, ಚಾಲನಾ ಪರವಾನಗಿ, ನಿರ್ವಾಹಕ ಲೈಸನ್ಸ್, ವಾಹನಗಳ ಪರ್ಮಿಟ್ ಇನ್ನಿತರ ಸರ್ಕಾರಿ ಕೆಲಸಗಳಿಗಾಗಿ ಅಧಿಕಾರಿಗಳು, ಸಿಬ್ಬಂದಿ, ಏಜೆಂಟ್​​ಗಳು ಲಂಚ ಪಡೆಯುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ.

ಎಸಿಬಿ ದಾಳಿ

ದಾಳಿ ವೇಳೆ 33 ಖಾಸಗಿ ಏಜೆಂಟ್​​ಗಳಿಂದ 3,94,000 ರೂ. ವಶಪಡಿಸಿಕೊಳ್ಳಲಾಗಿದೆ. ಶೋಧನಾ ಕಾಲಕ್ಕೆ ದಾಖಲಾತಿಗಳ ಅನ್ವಯ ವಹಿವಾಟು ನಡೆಸಿದ ಮೊತ್ತ 3,41,000 ರೂ. ಇದನ್ನು ಸ್ವೀಕೃತಿ ಪಡೆದು ಸಾರಿಗೆ ಅಧಿಕಾರಿಗಳಿಗೆ ಹಣ ಹಿಂತಿರುಗಿಸಲಾಗಿದೆ. ಸೋಮವಾರ ಬ್ಯಾಂಕ್​​ಗೆ ಜಮಾ ಮಾಡಬೇಕಾದ ಹಗರಿ ಚೆಕ್​​ ಪೋಸ್ಟ್​​ನಲ್ಲಿ ಸಂಗ್ರಹವಾದ ಮೊತ್ತ 1,96,000 ರೂಪಾಯಿ ಆಗಿದೆ. ಇದನ್ನು ಸಹ ಸ್ವೀಕೃತಿ ಪಡೆದು ಸಾರಿಗೆ ಅಧಿಕಾರಿಗಳಿಗೆ ಹಣ ಹಿಂತಿರುಗಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಸಂಜೆ 7 ಗಂಟೆವರೆಗೆ ಎಸಿಬಿ ತಂಡ ತನಿಖೆ ನಡೆಸಿದೆ.

ಖಾಸಗಿ ಏಜೆಂಟ್​​ಗಳಾದ ಪ್ರಕಾಶ್, ಖಾದರ್, ಅಬ್ದುಲ್, ಪಾಲಾಕ್ಷಿ ಸುರೇಶ್ ಎಂಬುವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗುತ್ತದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.

ಭ್ರಷ್ಟಾಚಾರ ನಿಗ್ರಹ ದಳ ಬಳ್ಳಾರಿ ಡಿವೈಎಸ್​​ಪಿ ಚಂದ್ರಕಾಂತ್ ಪೂಜಾರ್, ಕೊಪ್ಪಳ ಜಿಲ್ಲೆ ಡಿವೈಎಸ್​​ಪಿ ರುದ್ರ ಪೂಜಿನ ಕೊಪ್ಪ, ಬಳ್ಳಾರಿ ಇನ್ಸ್​ಪೆಕ್ಟರ್ ಶ್ರೀಧರ್ ದೊಡ್ಡಿ, ಕೊಪ್ಪಳ ಇನ್ಸ್​ಪೆಕ್ಟರ್ ಬಿಳಿಮಗಿ ತಂಡದಿಂದ ದಾಳಿ ನಡೆದಿದೆ.

Intro:ಆರ್.ಟಿ.ಓ ಕಚೇರಿ ಮೇಲೆ ಎಸಿಬಿ ದಾಳಿ. 33 ಖಾಸಗಿ ಏಜೆಂಟ್ ಗಳಿಂದ 3,94,000 ರೂಪಾಯಿ ವಶ. ತನಿಖೆ ಮುಂದುವರೆಸಿದ್ದಾರೆ.


ಬಳ್ಳಾರಿ ಜಿಲ್ಲೆಯ ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿಯ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಶೋಧನೆ ಮತ್ರು ಲಕ್ಷಾಂತರ ರೂಪಾಯಿ ಮೋತ್ತ ವಶಕ್ಕೆ.


Body:ನಗರದ ಆರ್.ಟಿ.ಓ ಕಚೇರಿಯಲ್ಲಿ ಇಂದು ಮಧ್ಯಾಹ್ನ 12 ಗಂಟೆ 25 ನಿಮಿಷಕ್ಕೆ ಎಸಿಬಿ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆರ್.ಟಿ.ಓ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಖಾಸಗಿ ಏಜೆಂಟ್ ಮೇಲೆ ದಾಳಿ ನಡೆಸಿದರು.

ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿಯ ಕಚೇರಿ ವಾಹನಗಳ ನೋಂದಣಿ, ಚಾಲನಾ ಪರವಾನಿಗೆ, ನಿರ್ವಾಹಕ ಲೈಸೆನ್ಸ್, ವಾಹನಗಳ ಪರ್ಮಿಂಟ್ ಇನ್ನಿತರ ಸರ್ಕಾರಿ ಕೆಲಸಗಳಿಗಾಗಿ ಆರ್.ಟಿ.ಓ ಅಧಿಕಾರಿಗಳು, ಸಿಬ್ಬಂದಿಗಳು, ಏಜೆಂಟ್ ಗಳು ಲಂಚ ಪಡೆಯುತ್ತಾ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇಲೆಗೆ ದಾಳಿ ಮಾಡಿದ್ದಾರೆ.

33 ಖಾಸಗಿ ಏಜೆಂಟ್ ಗಳ ಬಳಿ
3,94,000 ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಶೋಧನಾ ಕಾಲಕ್ಕೆ ದಾಖಲಾತಿಗಳ ಅನ್ವಯ ವಹಿವಾಟು ನಡೆಸಿದ ಮೊತ್ತ 3,41,000 ರೂಪಾಯಿ ಇದನ್ನು ಸ್ವೀಕೃತಿ ಪಡೆದು ಸಾರಿಗೆ ಅಧಿಕಾರಿಗಳಿಗೆ ಹಣ ಹಿಂತಿರುಗಿಸಲಾಗಿದೆ.

ಇಂದು ಬ್ಯಾಂಕಿಗೆ ಜಮಾ ಮಾಡಬೇಕಾದ ಹಗರಿ ಚಕ್ ಪೋಸ್ಟ್‌ ನಲ್ಲಿ ಸಂಗ್ರಹವಾದ ಮೊತ್ತ 1,96,000 ರೂಪಾಯಿ ಆಗಿದೆ. ಇದನ್ನು ಸಹ ಸ್ವೀಕೃತಿ ಪಡೆದು ಸಾರಿಗೆ ಅಧಿಕಾರಿಗಳಿಗೆ ಹಣ ಹಿಂತಿರುಗಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 7 ಗಂಟೆವರೆಗೆ ಎಸಿಬಿ ತಂಡ ತನಿಖೆ ಮಾಡಿದ್ದಾರೆ.

ಖಾಸಗಿ ಏಜೆಂಟ್ ರಾದ ಪ್ರಕಾಶ್, ಖಾದರ್, ಅಬ್ದುಲ್, ಪಾಲಕ್ಷಿ ಸುರೇಶ್ ವಶಪಡಿಸಿಕೊಂಡಿದ್ದಾರೆ. ತನಿಖೆಯನ್ನು ಮುಂದುವರಿಸಲಾಗುತ್ತದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.




Conclusion:ಭ್ರಷ್ಟಾಚಾರ ನಿಗ್ರಹ ದಳ ಬಳ್ಳಾರಿ ಡಿವೈಎಸ್ ಪಿ ಚಂದ್ರಕಾಂತ್ ಪೂಜಾರ್, ಕೊಪ್ಪಳ ಜಿಲ್ಲೆ ಡಿ ವೈ ಎಸ್ ಪಿ ರುದ್ರ ಪೂಜಿನ ಕೊಪ್ಪ, ಬಳ್ಳಾರಿ ಇನ್ಸ್ಪೆಕ್ಟರ್ ಶ್ರೀಧರ್ ದೊಡ್ಡಿ, ಕೊಪ್ಪಳ ಇನ್ಸ್ಪೆಕ್ಟರ್ ಬಿಳಿಮಗಿ, ಮಠಪತಿ ಮತ್ತು ಕೊಪ್ಪಳ ಮತ್ತು ಬಳ್ಳಾರಿ ಸಿಬ್ಬಂದಿಗಳಾದ ಸತೀಶ್, ತಿಮ್ಮರೆಡ್ಡಿ, ವಸಂತ ಕುಮಾರ್, ದಿವಾಕರ್, ಸೂರ್ಯನಾರಾಯಣ, ಯುವರಾಜ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎಸಿಬಿ ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸುವುದು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.