ಅಥಣಿ : ರೈತನ ಹೊಲದಲ್ಲಿ ಕೃಷಿಗಾಗಿ ಬೇಸಿಗೆಯಲ್ಲಿ ನೀರಿಗಾಗಿ ಕೊರೆಸಿದ್ದ ಬೋರವೆಲ್ನಲ್ಲಿ ನೀರು ಬಂದಿರಲಿಲ್ಲ ಆದರೆ ಇಂದು ಇದ್ದಕ್ಕಿದ್ದಂತೆ ನೀರು ಚಿಮ್ಮಿ ಹರಿಯುತ್ತಿದೆ.
ಹೌದು..ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸ್ವಪ್ನಿಲ್ ಪಾಟೀಲ್ ರೈತನ ಹೊಲದಲ್ಲಿ ಬೇಸಿಗೆಯಲ್ಲಿ ಕೊರಸಿದ್ದ ಬೋರವೆಲ್ ನಿಷ್ಕ್ರಿಯವಾಗಿತ್ತು, ಸದ್ಯ ತಾಲೂಕಿನಲ್ಲಿ ಮಹಾ ಮಳೆಗೆ ಬೋರ್ವೆಲ್ ನಲ್ಲಿ ಯಾವುದೇ ಮೋಟಾರ್ ಸಹಾಯ ಇಲ್ಲದೆ ತನ್ನಿಂತಾನೆ ನೀರು ಚಿಮ್ಮುತ್ತಿದ್ದು, ತಾಲೂಕಿನ ಕೆಲವು ಗ್ರಾಮದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ.
ಸರಿ ಸುಮಾರು 7ಇಂಚಿನ ಕಿರಸಿಂಗ್ ಪೈಪ್ ಮುಖಾಂತರ ನೀರು ಚಿಮ್ಮುತ್ತಿದೆ. ಬೇಸಿಗೆಯಲ್ಲಿ ಒಂದು ಹನಿ ನೀರು ಇಲ್ಲದೆ ರೈತ ಪರದಾಡುವಂತಾಗಿದ್ದರೆ, ಮಳೆಗಾಲದಲ್ಲಿ ಈ ರೀತಿ ನೀರಿನಿಂದ ರೈತರಿಗೆ ಸಂಕಷ್ಟ ತಂದೊಡ್ಡಿದೆ.