ETV Bharat / state

ಪ್ರತಿಕೃತಿಗಳಿಗೆ ಅವಮಾನ ಮಾಡಿದವರ ವಿರುದ್ಧ ದೇಶದ್ರೋಹ ಕೇಸ್ ಹಾಕಲು ಚಿಂತನೆ: ಸಚಿವ ಜ್ಞಾನೇಂದ್ರ

author img

By

Published : Dec 21, 2021, 10:45 AM IST

ಕರ್ನಾಟಕದಲ್ಲಿ ಪ್ರತಿಕೃತಿಗಳಿಗೆ ಅಪಮಾನ ಮಾಡುತ್ತಿರುವವರು ಮಾನಸಿಕ ರೋಗಿಗಳು. ಇವರಿಗೆ ಕಡಿವಾಣ ಹಾಕುವ ಉದ್ದೇಶದಿಂದ ದೇಶದ್ರೋಹದ ಪ್ರಕರಣ ಹಾಕಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಗೃಹ ಸಚಿವ
ಗೃಹ ಸಚಿವ

ಬೆಳಗಾವಿ: ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಮಹನೀಯರನ್ನು ಅವಮಾನ ಮಾಡುವವರು ಮಾನಸಿಕ ರೋಗಿಗಳು. ಇಂತವರ ಮೇಲೆ ದೇಶದ್ರೋಹದ ಪ್ರಕರಣ ಹಾಕಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದ ಆನಗೋಳದಲ್ಲಿ ಕನಕದಾಸ ಕಾಲೋನಿಯಲ್ಲಿ ಸಂಗೊಳ್ಳಿ ರಾಯಣ್ಣ ‌ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ಭಾಷೆ, ಜಾತಿಗೆ ಸೀಮಿತವಾಗಿಲ್ಲ. ಇಡೀ ಮನಕುಲವನ್ನು ಉದ್ಧಾರ ಮಾಡಲು ದೇಶವನ್ನು ಸಬಲ ಮಾಡಲು‌ ಕೆಲಸ ಮಾಡಿದ್ದಾರೆ ಎಂದರು.

ಗೃಹ ಸಚಿವರ ಪ್ರತಿಕ್ರಿಯೆ

ಕೆಲ ಕಿಡಗೇಡಿಗಳು ರಾಯಣ್ಣ, ಬಸವಣ್ಣನವರ ಪ್ರತಿಕೃತಿ ವಿರೂಪಗೊಳಿಸುವ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರು ಮರಾಠಿಗರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಕೆಲವೇ ಕೆಲವು ಕಿಡಿಗೇಡಿಗಳು ಹುಳಿ ಹಿಂಡುವ ಕೆಲಸವನ್ನು ಮಾಡ್ತಿದ್ದಾರೆ. ಅಂತವರನ್ನು ನಾವು ಬಿಡೋದಿಲ್ಲ. ರಾಯಣ್ಣನನ್ನು ಬ್ರಿಟಿಷರಿಗೆ ಯಾರು ಹಿಡಿದುಕೊಟ್ಟಿದ್ದಾರೋ ಆ ಕುಲಕ್ಕೆ ಸೇರಿದವರು ಇಂತಹ ಕೆಲಸ ಮಾಡುತ್ತಿದ್ದಾರೆ. ಅಂತರವನ್ನು ನಿಗ್ರಹ ಮಾಡ್ತೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗೆ ಮಸಿ ಬಳಿದು ಮತ್ತೆ ಎಂಇಎಸ್​ ಉದ್ಧಟತನ

ಇನ್ನೊಮ್ಮೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ‌. ಈಗಾಗಲೇ 38 ಜನರು ಬಂಧನವಾಗಿದೆ‌. ಬಸವಣ್ಣನವರ ಫೋಟೋ ವಿರೂಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು, ಶಿವಾಜಿ ಮೂರ್ತಿಗೆ ಮಸಿದ ಬಳಿದ ಏಳು ಜನರನ್ನು ಬಂಧನ ಮಾಡಿದ್ದೇವೆ. ಇವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಅಂತಾ ಚಿಂತನೆ ನಡೆಯುತ್ತಿದೆ. ಇದರ ಹಿಂದೆ ಯಾರ ಕೈವಾಡ ಇದೆ ಅನ್ನೋದನ್ನ ಕಂಡುಹಿಯುತ್ತೇವೆ‌. ಯಾರೊ ಸಣ್ಣ ಸಂಸ್ಥೆಗಳು, ವ್ಯಕ್ತಿಗಳು ಇದರ ಹಿಂದೆ ಇದ್ದಾರೆ‌. ಇದು ಹೊರಗೆ ಬರಬೇಕು. ಅವರ ಮುಖವಾಡ ಕಳಚಬೇಕು. ಆ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಮಹಾರಾಷ್ಟ್ರದಲ್ಲಿ ಕನ್ನಡಿಗರ ರಕ್ಷಣೆಗೆ ಈಗಾಗಲೇ ಅಲ್ಲಿನ ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಚಿಂತನೆಯನ್ನು ಮಾಡುತ್ತೇವೆ ಎಂದು ಹೇಳಿದರು.

ಬೆಳಗಾವಿ: ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಮಹನೀಯರನ್ನು ಅವಮಾನ ಮಾಡುವವರು ಮಾನಸಿಕ ರೋಗಿಗಳು. ಇಂತವರ ಮೇಲೆ ದೇಶದ್ರೋಹದ ಪ್ರಕರಣ ಹಾಕಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದ ಆನಗೋಳದಲ್ಲಿ ಕನಕದಾಸ ಕಾಲೋನಿಯಲ್ಲಿ ಸಂಗೊಳ್ಳಿ ರಾಯಣ್ಣ ‌ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ಭಾಷೆ, ಜಾತಿಗೆ ಸೀಮಿತವಾಗಿಲ್ಲ. ಇಡೀ ಮನಕುಲವನ್ನು ಉದ್ಧಾರ ಮಾಡಲು ದೇಶವನ್ನು ಸಬಲ ಮಾಡಲು‌ ಕೆಲಸ ಮಾಡಿದ್ದಾರೆ ಎಂದರು.

ಗೃಹ ಸಚಿವರ ಪ್ರತಿಕ್ರಿಯೆ

ಕೆಲ ಕಿಡಗೇಡಿಗಳು ರಾಯಣ್ಣ, ಬಸವಣ್ಣನವರ ಪ್ರತಿಕೃತಿ ವಿರೂಪಗೊಳಿಸುವ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರು ಮರಾಠಿಗರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಕೆಲವೇ ಕೆಲವು ಕಿಡಿಗೇಡಿಗಳು ಹುಳಿ ಹಿಂಡುವ ಕೆಲಸವನ್ನು ಮಾಡ್ತಿದ್ದಾರೆ. ಅಂತವರನ್ನು ನಾವು ಬಿಡೋದಿಲ್ಲ. ರಾಯಣ್ಣನನ್ನು ಬ್ರಿಟಿಷರಿಗೆ ಯಾರು ಹಿಡಿದುಕೊಟ್ಟಿದ್ದಾರೋ ಆ ಕುಲಕ್ಕೆ ಸೇರಿದವರು ಇಂತಹ ಕೆಲಸ ಮಾಡುತ್ತಿದ್ದಾರೆ. ಅಂತರವನ್ನು ನಿಗ್ರಹ ಮಾಡ್ತೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗೆ ಮಸಿ ಬಳಿದು ಮತ್ತೆ ಎಂಇಎಸ್​ ಉದ್ಧಟತನ

ಇನ್ನೊಮ್ಮೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ‌. ಈಗಾಗಲೇ 38 ಜನರು ಬಂಧನವಾಗಿದೆ‌. ಬಸವಣ್ಣನವರ ಫೋಟೋ ವಿರೂಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು, ಶಿವಾಜಿ ಮೂರ್ತಿಗೆ ಮಸಿದ ಬಳಿದ ಏಳು ಜನರನ್ನು ಬಂಧನ ಮಾಡಿದ್ದೇವೆ. ಇವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಅಂತಾ ಚಿಂತನೆ ನಡೆಯುತ್ತಿದೆ. ಇದರ ಹಿಂದೆ ಯಾರ ಕೈವಾಡ ಇದೆ ಅನ್ನೋದನ್ನ ಕಂಡುಹಿಯುತ್ತೇವೆ‌. ಯಾರೊ ಸಣ್ಣ ಸಂಸ್ಥೆಗಳು, ವ್ಯಕ್ತಿಗಳು ಇದರ ಹಿಂದೆ ಇದ್ದಾರೆ‌. ಇದು ಹೊರಗೆ ಬರಬೇಕು. ಅವರ ಮುಖವಾಡ ಕಳಚಬೇಕು. ಆ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಮಹಾರಾಷ್ಟ್ರದಲ್ಲಿ ಕನ್ನಡಿಗರ ರಕ್ಷಣೆಗೆ ಈಗಾಗಲೇ ಅಲ್ಲಿನ ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಚಿಂತನೆಯನ್ನು ಮಾಡುತ್ತೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.