ಬೆಳಗಾವಿ: ನಗರದ ರೈಲ್ವೆ ನಿಲ್ದಾಣ ಇತಿಹಾಸದ ನೆನಪುಗಳಿಗೆ ಜೀವ ತುಂಬುವ ನಿಲ್ದಾಣವಾಗಿದ್ದು, ಅಭಿವೃದ್ಧಿ ಹೊಂದಬೇಕು ಎಂಬ ಬಹು ದಿನಗಳ ಕನಸು ಈಗ ಸಾಕಾರಗೊಳ್ಳುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರೋ ಆಧುನೀಕರಣ ಕಾಮಗಾರಿ ಪರಿಶೀಲಿಸಿ ಮಾತಮಾಡಿದ ಅವರು, ರೈಲ್ವೆ ನಿಲ್ದಾಣದಲ್ಲಿ ಮತ್ತೊಂದು ಫ್ಲಾಟ್ಫಾರ್ಮ್, ಆಧುನಿಕತೆಗೆ ತಕ್ಕಂತೆ ಹೋಟೆಲ್, ಮಾರುಕಟ್ಟೆ ಎಲ್ಲವೂ ಇಲ್ಲಿ ನಿರ್ಮಾಣಗೊಳ್ಳಲಿವೆ ಎಂದರು.
ಮಹಾತ್ಮ ಗಾಂಧಿ ನಡೆದಾಡಿದ ಈ ನೆಲದ ಇತಿಹಾಸವನ್ನು ನೆನಪಿಸುವಂತೆ ನಿಲ್ದಾಣದ ಮುಂಭಾಗವನ್ನು ವಿನ್ಯಾಸಗೊಳಿಸಲು ತಜ್ಞರು, ತಂತ್ರಜ್ಞರು, ಯೋಜಕರು ಈಗಾಗಲೇ ಆಧುನಿಕ ರೂಪುರೇಷೆ ಸಿದ್ಧಪಡಿಸಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನ ಡಿ. 25ರ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.