ETV Bharat / state

ಅನರ್ಹ ಶಾಸಕರನ್ನು ವಿಭೀಷಣನಿಗೆ ಹೋಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ

author img

By

Published : Nov 26, 2019, 10:46 PM IST

ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಮಹಿಳಾ ಬಿಜೆಪಿ ಕಾರ್ಯಕರ್ತರ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

ನಳೀನ ಕುಮಾರ್​​ ಕಟೀಲ್ ಹೇಳಿಕೆ
kateel

ಅಥಣಿ/ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಮಹಿಳಾ ಬಿಜೆಪಿ ಕಾರ್ಯಕರ್ತರ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಇಂದಿನ ರಾಜಕೀಯವನ್ನು ರಾಮಾಯಣದ ಪಾತ್ರಗಳ ಅಮೂಲಕ ವಿವರಿಸಿದ್ರು. ಹನುಮಂತ ಲಂಕೆಗೆ ಹೋದಾಗ ಅಲ್ಲಿ ರಾಮನ ಜಪ ಮಾಡುವ ವಿಭೀಷಣ ಕಂಡಿದ್ದ. ರಾವಣನ ರಾಜ್ಯದಲ್ಲಿದ್ದುಕೊಂಡೇ ವಿಭೀಷಣ ರಾಮನ ಜಪ ಮಾಡುತ್ತಿದ್ದ. ಆ ಮೂಲಕ ರಾಮನ ಪಕ್ಷವನ್ನು ಸೇರಿದ ಮೊದಲ ವ್ಯಕ್ತಿ ವಿಭೀಷಣ. ಈಗ ನಮ್ಮ ರಾಜ್ಯದಲ್ಲಿ ಇಂತಹುದೇ ರಾಮನ ರೀತಿಯ ರಾಜಕಾರಣ ನಡೆಯುತ್ತಿದೆ.

ನಳಿನ ಕುಮಾರ್​​ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

ಯಡಿಯೂರಪ್ಪ ಸಿಎಂ ಆಗಲಿ ಅಂತಾ ಜನ 104 ಸ್ಥಾನ ಕೊಟ್ಟಿದ್ರು. ಆದರೆ ಕುಟುಂಬ ಹಿನ್ನೆಲೆ ಪಕ್ಷ ಮತ್ತು ವಂಶ ಆಡಳಿತ ಹಿನ್ನೆಲೆಯುಳ್ಳ ಪಕ್ಷ ಸೇರಿ ಮೈತ್ರಿ ಸರ್ಕಾರ ಮಾಡಿದರು. ಅವರು ಸಿಎಂ ಕಚೇರಿಯಲ್ಲಿ ಮೈತ್ರಿ ಸರ್ಕಾರ ನಡೆಸಿರಲಿಲ್ಲ. ಫೈವ್‌ ಸ್ಟಾರ್ ಹೋಟೆಲ್‌ನಲ್ಲಿ ಅವರ ಸರ್ಕಾರ ನಡೀತಾ ಇತ್ತು. ಮೈತ್ರಿ ಸರ್ಕಾರದ ಸಿಎಂ ಕೆಲ ಶಾಸಕರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಅದಕ್ಕಾಗಿಯೇ ಅವರೆಲ್ಲ ಆ ಪಕ್ಷ ಬಿಡಬೇಕಾಯಿತು ಎಂದ್ರು. ಕರ್ನಾಟಕದ ಕಲ್ಯಾಣಕ್ಕಾಗಿ 17 ಶಾಸಕರು ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದಾರೆ. ಅವರು ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದಿಲ್ಲ. ಅಭಿವೃದ್ಧಿಗಾಗಿ ಬಂದಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಯಾವುದೇ ಉತ್ತರ ನೀಡಿದೆ ನಗುತ್ತಾ ಮುಂದೆ ಸಾಗಿದರು.

ಅಥಣಿ/ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಮಹಿಳಾ ಬಿಜೆಪಿ ಕಾರ್ಯಕರ್ತರ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಇಂದಿನ ರಾಜಕೀಯವನ್ನು ರಾಮಾಯಣದ ಪಾತ್ರಗಳ ಅಮೂಲಕ ವಿವರಿಸಿದ್ರು. ಹನುಮಂತ ಲಂಕೆಗೆ ಹೋದಾಗ ಅಲ್ಲಿ ರಾಮನ ಜಪ ಮಾಡುವ ವಿಭೀಷಣ ಕಂಡಿದ್ದ. ರಾವಣನ ರಾಜ್ಯದಲ್ಲಿದ್ದುಕೊಂಡೇ ವಿಭೀಷಣ ರಾಮನ ಜಪ ಮಾಡುತ್ತಿದ್ದ. ಆ ಮೂಲಕ ರಾಮನ ಪಕ್ಷವನ್ನು ಸೇರಿದ ಮೊದಲ ವ್ಯಕ್ತಿ ವಿಭೀಷಣ. ಈಗ ನಮ್ಮ ರಾಜ್ಯದಲ್ಲಿ ಇಂತಹುದೇ ರಾಮನ ರೀತಿಯ ರಾಜಕಾರಣ ನಡೆಯುತ್ತಿದೆ.

ನಳಿನ ಕುಮಾರ್​​ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

ಯಡಿಯೂರಪ್ಪ ಸಿಎಂ ಆಗಲಿ ಅಂತಾ ಜನ 104 ಸ್ಥಾನ ಕೊಟ್ಟಿದ್ರು. ಆದರೆ ಕುಟುಂಬ ಹಿನ್ನೆಲೆ ಪಕ್ಷ ಮತ್ತು ವಂಶ ಆಡಳಿತ ಹಿನ್ನೆಲೆಯುಳ್ಳ ಪಕ್ಷ ಸೇರಿ ಮೈತ್ರಿ ಸರ್ಕಾರ ಮಾಡಿದರು. ಅವರು ಸಿಎಂ ಕಚೇರಿಯಲ್ಲಿ ಮೈತ್ರಿ ಸರ್ಕಾರ ನಡೆಸಿರಲಿಲ್ಲ. ಫೈವ್‌ ಸ್ಟಾರ್ ಹೋಟೆಲ್‌ನಲ್ಲಿ ಅವರ ಸರ್ಕಾರ ನಡೀತಾ ಇತ್ತು. ಮೈತ್ರಿ ಸರ್ಕಾರದ ಸಿಎಂ ಕೆಲ ಶಾಸಕರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಅದಕ್ಕಾಗಿಯೇ ಅವರೆಲ್ಲ ಆ ಪಕ್ಷ ಬಿಡಬೇಕಾಯಿತು ಎಂದ್ರು. ಕರ್ನಾಟಕದ ಕಲ್ಯಾಣಕ್ಕಾಗಿ 17 ಶಾಸಕರು ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದಾರೆ. ಅವರು ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದಿಲ್ಲ. ಅಭಿವೃದ್ಧಿಗಾಗಿ ಬಂದಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಯಾವುದೇ ಉತ್ತರ ನೀಡಿದೆ ನಗುತ್ತಾ ಮುಂದೆ ಸಾಗಿದರು.

Intro:ಅನರ್ಹ ಶಾಸಕರನ್ನು ವಿಭಿಷನ್‌ನಿಗೆ ಹೋಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ...ಅಥಣಿ ರಾಘವೇಂದ್ರ ಸಭಾ ಮಂಟಪದ ದಲ್ಲಿ ಹೆಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್Body:*ಅಥಣಿ ವರದಿ

ಅನರ್ಹ ಶಾಸಕರನ್ನು ವಿಭಿಷನ್‌ನಿಗೆ ಹೋಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ...ಅಥಣಿ ರಾಘವೇಂದ್ರ ಸಭಾ ಮಂಟಪದ ದಲ್ಲಿ ಹೆಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಇಂದು ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮ್ಟಳ್ಳಿ ಪರವಾಗಿ ಪ್ರಚಾರ ಕೈಗೊಂಡ ಸಮಯದಲ್ಲಿ ಮಹಿಳಾ ಬಿಜೆಪಿ ಕಾರ್ಯಕರ್ತರ ಸಭೆಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು ತದನಂತರ ಮಾತನಾಡಿದ ಅವರು
ರಾಮಾಯಣ ಕತೆ ಹೇಳಿ ವಿವರಣೆ ನಿಡಿದ ಕಟಿಲ್.
ಹನುಮಂತ ಲಂಕೆಗೆ ಹೋದಾಗ ಅಲ್ಲಿ ರಾಮಜಪ ಮಾಡುವ ವಿಭಿಷನ್ ಕಂಡಿದ್ದ
ರಾವಣನ ರಾಜ್ಯದಲ್ಲಿದ್ದುಕೊಂಡೆ ವಿಭಿಷನ ರಾಮಜಪ ಮಾಡುತ್ತಿದ್ದ ಆ ಮೂಲಕ ರಾಮನ ಪಕ್ಷವನ್ನು ಸೇರಿದ ಮೊದಲ ವ್ಯಕ್ತಿ ವಿಭಿಷನ್ ಈಗ ನಮ್ಮ ರಾಜ್ಯದಲ್ಲಿ ಇಂತಹುದೇ ರಾಮನ ರೀತಿಯ ರಾಜಕಾರಣ ನಡೆಯುತ್ತಿದೆ ಯಡಿಯೂರಪ್ಪ ಸಿಎಂ ಆಗಲಿ ಅಂತಾ ಜನ ೧೦೪ ಸ್ಥಾನ ಕೊಟ್ಟಿದ್ದರು ಆದರೆ ಕುಟುಂಬ ಹಿನ್ನೆಲೆ ಪಕ್ಷ ಮತ್ತು ವಂಶಾಡಳಿತ ಹಿನ್ನೆಲೆ ಪಕ್ಷ ಸೇರಿ ಮೈತ್ರಿ ಸರಕಾರ ಮಾಡಿದ್ದರು ಅವರು ಸಿಎಂ ಕಚೇರಿಯಲ್ಲಿ ಮೈತ್ರಿ ಸರ್ಕಾರ ನಡೆಸಿರಲಿಲ್ಲ. ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಅವರ ಸರ್ಕಾರ ನಡೀತಾ ಇತ್ತು ಮೈತ್ರಿ ಸರ್ಕಾರದ ಸಿಎಂ ಕೆಲ ಶಾಸಕರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ ಅದಕ್ಕಾಗಿಯೇ ಅವರೆಲ್ಲ ಆ ಪಕ್ಷ ಬಿಡಬೇಕಾಯಿತು ವಿರೋಧ ಪಕ್ಷದಲ್ಲಿ ಇದ್ದವರೋ, ಪಕ್ಷೇತರರು ಅಧಿಕಾರಕ್ಕಾಗಿ ಆಡಳಿತ ಪಕ್ಷ ಸೇರುವ ಇತಿಹಾಸ ಇದೆ

ಆದರೆ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ಕೊಟು ವಿಪಕ್ಷ ಸೇರಿದ್ದು ಎಂದಿಗೂ ನಡೆದಿಲ್ಲ ಆದರೆ ಆ ಇತಿಹಾಸ ನಮ್ಮ ರಾಜ್ಯದಲ್ಲಿ ಸೃಷ್ಟಿಯಾಯಿತು
ಕರ್ನಾಟಕದ ಕಲ್ಯಾಣಕ್ಕಾಗಿ ೧೭ ಶಾಸಕರು ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದಾರೆ ಅವರು ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದಿಲ್ಲ ಅಭಿವೃದ್ಧಿಗಾಗಿ ಬಂದಿದ್ದಾರೆ, ಎಂದು ತಿಳಿಸಿದರು...

ಇದೆ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾದ್ಯಮದ ಪ್ರಶ್ನೆಗೆ ಯಾವುದೇ ಉತ್ತರ ನೀಡಿದೆ ನಗುತ್ತಾ ಮುಂದೆ ಸಾಗಿದರು...Conclusion:ಅಥಣಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.