ETV Bharat / state

ರಮೇಶ್ ಜಾರಕಿಹೊಳಿ ಕೌರವ.. ನಾವು ಪಾಂಡವರು.. ಎಸ್‌ ಆರ್‌ ಪಾಟೀಲ್

ಪ್ರವಾಹ ಬಂದ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ನಾಪತ್ತೆಯಾಗಿದ್ದರು. ಆದರೆ, ಈಗ ಜನರ ಮುಂದೆ ಹೋಗೆ ಹೇಗೆ ಮತ ಕೇಳುತ್ತಾರೆ ಎಂದು ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

author img

By

Published : Nov 27, 2019, 5:27 PM IST

sr patil latest news,ಎಸ್.ಆರ್​.ಪಾಟೀಲ್ ಲೇಟೆಸ್ಟ್ ನ್ಯೂಸ್
ಎಸ್‌.ಆರ್‌.ಪಾಟೀಲ್

ಗೋಕಾಕ್​: ಉಪಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಕೆ ಮಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್​ ಆರ್ ​ಪಾಟೀಲ್ ನಾವು ಪಾಂಡವರು. ರಮೇಶ್​ ಜಾರಕಿಹೊಳಿ‌ ಕೌರವ. ಕೊನೆಗೆ ಗೆಲುವು ನಮ್ಮದೇ ಆಗಲಿದೆ ಎಂದಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಕಾಂಗ್ರೆಸ್ ‌ಕಚೇರಿ ಮುಂಭಾಗದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, 17 ಜನ ಶಾಸಕರು ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಲೋಕಸಭಾ ಚುನಾವಣೆ, ‌ಪ್ರವಾಹ ಸಂದರ್ಭದಲ್ಲಿ ರಮೇಶ್​ ಜಾರಕಿಹೊಳಿ‌ ನಾಪತ್ತೆಯಾಗಿದ್ದರು. ಪ್ರವಾಹ ಸಂದರ್ಭದಲ್ಲಿ ಸತೀಶ್​ ಜನರಿಗೆ ಆಪತ್ಬಾಂಧವರ ರೀತಿ ಬಂದು ಸಹಾಯ ಮಾಡಿದ್ದಾರೆ. ಸತೀಶ್​ ಜಾರಕಿಹೊಳಿ ಮನಸ್ಸು ಮಾಡಿದ್ರೆ ಕಾಂಗ್ರೆಸ್ ಗೆಲುವು ನಿಶ್ಚಿತ. ಸತೀಶ ಜಾರಕಿಹೊಳಿ ಮತ್ತು ನನ್ನ ಸಚಿವ ಸ್ಥಾನ ಒಮ್ಮೆ ಹೋಗಿದೆ. ಸಚಿವ ಸ್ಥಾನ‌‌ ಹೋಗೋ ಹಿಂದಿನ ದಿನ ಇದ್ರೇ ಇರಲಿ ಹೋದ್ರೆ ಹೊಗಲಿ ಅಂತಾ ನಾವಿಬ್ಬರೂ ಮಾತನಾದ್ದೆವು ಎಂದಿದ್ದಾರೆ.

ರಮೇಶ ಜಾರಕಿಹೊಳಿ‌ ಚುನಾವಣೆಯನ್ನು ಲಖನ್ ಮಾಡುತ್ತಿದ್ದರು. ರಮೇಶ್​ ಅವರನ್ನ ಸೋಲಿಸುವ ತಂತ್ರ ಲಖನ್‌ಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷವನ್ನು ರಮೇಶ್​ ಯಾಕೆ ಬಿಟ್ಟರು ಎಂಬುದು ಇಂದಿಗೂ ಅರ್ಥ ಆಗುತ್ತಿಲ್ಲ. ಮತದಾರರಿಗೆ ಈ ಸಂದರ್ಭ ಬಂದಿದ್ದು ದುರ್ದೈವ. ಚುನಾವಣೆ ನಿಲ್ಲುವ ಅವಕಾಶ ಸಿಕ್ಕಿದೆ. ಆದರೆ, ಜನರ ಮುಂದೆ ರಮೇಶ್​ ಹೇಗೆ ಮತ ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಅನರ್ಹರ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ. ಮತದಾರರ ಕೈಗೆ ಸಿಕ್ಕು ಪರೀಕ್ಷೆಗೆ ಒಳಪಡಲಿ ಎಂದು ತೀರ್ಪು ನೀಡಿದ್ದಾರೆ. ಅನರ್ಹ ಶಾಸಕರನ್ನ ಜನತಾ ನ್ಯಾಯಾಲಯ ಮುಂದೆ ಕಳುಹಿಸಿದ್ದಾರೆ. ಜನರೇ ಈಗ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದಿದ್ದರು. 6 ವರ್ಷದಲ್ಲಿ ಅವರು 12 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ, ಅವರಿಂದ ಅದು ಸಾಧ್ಯವಾಗಿಲ್ಲ. ಬದಲಿಗೆ ನೋಟ್​ ಬ್ಯಾನ್ ಮಾಡಿ ಕೈಗಾರಿಕೆಗಳು ಬಂದ್ ಆಗುವಂತೆ ಮಾಡಿದರು. ದೇಶದ 3 ಕೋಟಿ ಜನರು ಉದ್ಯೋಗ ಕಳೆದುಕೊಳ್ಳುವಂತಾಯಿತು ಎಂದಿದ್ದಾರೆ.

ವೀರೇಶ್ವರ ಲಿಂಗಾಯತ ಮತದಾರರು ನಮ್ಮ ಜತೆಗೆ ಇದ್ದಾರೆ. ಲಿಂಗಾಯತ ಸಮುದಾಯದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಸೇರಿದಂತೆ ಹಲವರನ್ನು ಕಾಂಗ್ರೆಸ್ ಸಿಎಂ ಮಾಡಿದೆ. ದೇಶದ ಲಿಂಗಾಯತರು ಕಾಂಗ್ರೆಸ್ ಜತೆಗೆ ಇದ್ದಾರೆ. ಬಸವಣ್ಣನ ತತ್ವದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಯುತ್ತಿದೆ ಎಂದಿದ್ದಾರೆ.

ಗೋಕಾಕ್​: ಉಪಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಕೆ ಮಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್​ ಆರ್ ​ಪಾಟೀಲ್ ನಾವು ಪಾಂಡವರು. ರಮೇಶ್​ ಜಾರಕಿಹೊಳಿ‌ ಕೌರವ. ಕೊನೆಗೆ ಗೆಲುವು ನಮ್ಮದೇ ಆಗಲಿದೆ ಎಂದಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಕಾಂಗ್ರೆಸ್ ‌ಕಚೇರಿ ಮುಂಭಾಗದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, 17 ಜನ ಶಾಸಕರು ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಲೋಕಸಭಾ ಚುನಾವಣೆ, ‌ಪ್ರವಾಹ ಸಂದರ್ಭದಲ್ಲಿ ರಮೇಶ್​ ಜಾರಕಿಹೊಳಿ‌ ನಾಪತ್ತೆಯಾಗಿದ್ದರು. ಪ್ರವಾಹ ಸಂದರ್ಭದಲ್ಲಿ ಸತೀಶ್​ ಜನರಿಗೆ ಆಪತ್ಬಾಂಧವರ ರೀತಿ ಬಂದು ಸಹಾಯ ಮಾಡಿದ್ದಾರೆ. ಸತೀಶ್​ ಜಾರಕಿಹೊಳಿ ಮನಸ್ಸು ಮಾಡಿದ್ರೆ ಕಾಂಗ್ರೆಸ್ ಗೆಲುವು ನಿಶ್ಚಿತ. ಸತೀಶ ಜಾರಕಿಹೊಳಿ ಮತ್ತು ನನ್ನ ಸಚಿವ ಸ್ಥಾನ ಒಮ್ಮೆ ಹೋಗಿದೆ. ಸಚಿವ ಸ್ಥಾನ‌‌ ಹೋಗೋ ಹಿಂದಿನ ದಿನ ಇದ್ರೇ ಇರಲಿ ಹೋದ್ರೆ ಹೊಗಲಿ ಅಂತಾ ನಾವಿಬ್ಬರೂ ಮಾತನಾದ್ದೆವು ಎಂದಿದ್ದಾರೆ.

ರಮೇಶ ಜಾರಕಿಹೊಳಿ‌ ಚುನಾವಣೆಯನ್ನು ಲಖನ್ ಮಾಡುತ್ತಿದ್ದರು. ರಮೇಶ್​ ಅವರನ್ನ ಸೋಲಿಸುವ ತಂತ್ರ ಲಖನ್‌ಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷವನ್ನು ರಮೇಶ್​ ಯಾಕೆ ಬಿಟ್ಟರು ಎಂಬುದು ಇಂದಿಗೂ ಅರ್ಥ ಆಗುತ್ತಿಲ್ಲ. ಮತದಾರರಿಗೆ ಈ ಸಂದರ್ಭ ಬಂದಿದ್ದು ದುರ್ದೈವ. ಚುನಾವಣೆ ನಿಲ್ಲುವ ಅವಕಾಶ ಸಿಕ್ಕಿದೆ. ಆದರೆ, ಜನರ ಮುಂದೆ ರಮೇಶ್​ ಹೇಗೆ ಮತ ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಅನರ್ಹರ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ. ಮತದಾರರ ಕೈಗೆ ಸಿಕ್ಕು ಪರೀಕ್ಷೆಗೆ ಒಳಪಡಲಿ ಎಂದು ತೀರ್ಪು ನೀಡಿದ್ದಾರೆ. ಅನರ್ಹ ಶಾಸಕರನ್ನ ಜನತಾ ನ್ಯಾಯಾಲಯ ಮುಂದೆ ಕಳುಹಿಸಿದ್ದಾರೆ. ಜನರೇ ಈಗ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದಿದ್ದರು. 6 ವರ್ಷದಲ್ಲಿ ಅವರು 12 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ, ಅವರಿಂದ ಅದು ಸಾಧ್ಯವಾಗಿಲ್ಲ. ಬದಲಿಗೆ ನೋಟ್​ ಬ್ಯಾನ್ ಮಾಡಿ ಕೈಗಾರಿಕೆಗಳು ಬಂದ್ ಆಗುವಂತೆ ಮಾಡಿದರು. ದೇಶದ 3 ಕೋಟಿ ಜನರು ಉದ್ಯೋಗ ಕಳೆದುಕೊಳ್ಳುವಂತಾಯಿತು ಎಂದಿದ್ದಾರೆ.

ವೀರೇಶ್ವರ ಲಿಂಗಾಯತ ಮತದಾರರು ನಮ್ಮ ಜತೆಗೆ ಇದ್ದಾರೆ. ಲಿಂಗಾಯತ ಸಮುದಾಯದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಸೇರಿದಂತೆ ಹಲವರನ್ನು ಕಾಂಗ್ರೆಸ್ ಸಿಎಂ ಮಾಡಿದೆ. ದೇಶದ ಲಿಂಗಾಯತರು ಕಾಂಗ್ರೆಸ್ ಜತೆಗೆ ಇದ್ದಾರೆ. ಬಸವಣ್ಣನ ತತ್ವದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಯುತ್ತಿದೆ ಎಂದಿದ್ದಾರೆ.

Intro:ಅರ್ನಹರು ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆ: ಎಸ್‌ಆರ್‌ಪಾಟೀಲ್Body:ಗೋಕಾಕ: ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆ.17 ಜನ ಶಾಸಕರು ಪಕ್ಷಕ್ಕೆ ಮೋಸ ಮಾಡಿದ್ದಾರೆ.ರಮೇಶ ಜಾರಕಿಹೊಳಿ‌ ಚುನಾವಣೆಯನ್ನು ಲಖನ್ ಮಾಡುತ್ತಿದ್ದರು. ರಮೇಶ ಸೋಲಿಸುವ ತಂತ್ರ ಲಖನ್ ಗೊತ್ತಿದೆ ಎಂದು ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಹೇಳಿದರು.

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ ಜಾರಕಿಹೊಳಿ ಪರ ಕಾಂಗ್ರೆಸ್ ‌ಕಚೇರಿ ಮುಂಭಾಗದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆ, ‌ಪ್ರವಾಹ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ‌ ನಾಪತ್ತೆರಾಗಿದರು. ಪ್ರವಾಹ ಸಂದರ್ಭದಲ್ಲಿ ಸತೀಶ ಜನರಿಗೆ ಆಪತ್ತು ಬಾಂಧವರ ರೀತಿ ಬಂದು ಸಹಾಯ ಮಾಡಿದ್ದಾರೆ. ಸತೀಶ ಜಾರಕಿಹೊಳಿ ಮನಸ್ಸು ಮಾಡಿದ್ರೆ ಕಾಂಗ್ರೆಸ್ ಗೆಲವು ನಿಶ್ಚಿತ. ಸತೀಶ ಜಾರಕಿಹೊಳಿ, ನನ್ನ ಸಚಿವ ಸ್ಥಾನ ಒಮ್ಮೆ ಹೋಗಿದೆ. ಸಚಿವ ಸ್ಥಾನ‌‌ ಹೋಗೋ ಹಿಂದಿನ ದಿನ ನಾವಿಬ್ರು ಮಾತನಾಡಿದ್ವಿ. ಇದ್ರೇ ಇರಲಿ ಹೋದ್ರೆ ಹೊಗಲಿ ಅಂತ ಮಾತನಾಡಿದಿವಿ.

ಗೋಕಾಕ್ ಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಕೆ ಮಾಡಿದ ಅವರು ನಾವು ಪಾಂಡವರು, ರಮೇಶ ಜಾರಕಿಹೊಳಿ‌ ಕೌರವರು. ಕೊನೆಗೆ ಗೆಲ್ಲುವು ನಮ್ಮದೇ ಆಗಲಿದೆ. ಕಾಂಗ್ರೆಸ್ ಪಕ್ಷವನ್ನು ರಮೇಶ ಯಾಕೆ ಬಿಟ್ಟರು ಎಂಬುದು ಇಂದಿಗೂ ಅರ್ಥ ಆಗುತ್ತಿಲ್ಲ. ಮತದಾರರಿಗೆ ಈ ಸಂದರ್ಭ ಬಂದಿದ್ದು ದುರ್ದೈವ. ಚುನಾವಣೆ ನಿಲ್ಲೋ ಅವಕಾಶ ಸಿಕ್ಕಿದೆ. ಆದ್ರೆ ಜನರ ಮುಂದೆ ರಮೇಶ ಹೇಗೆ ಮತ ಕೇಳ್ತಾರೆ...

ಅನರ್ಹರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ. ಸುಪ್ರೀಂ ಹೇಳಿದ್ದು ಮತದಾರರ ಕೈಯಲ್ಲಿ ಸಿಕ್ಕು ಪರೀಕ್ಷೆಗೆ ಒಳಪಡಲಿ ಎಂದು ತೀರ್ಪು ನೀಡಿದ್ದಾರೆ.
ಅನರ್ಹ ಶಾಸಕರು ಜನತಾ ನ್ಯಾಯಾಲಯ ಮುಂದೆ ಕಳುಹಿಸಿದ್ದಾರೆ. ಜನರೇ ಈಗ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ೨ ಕೋಟಿ ಉದ್ಯೋಗ ಕೊಡ್ತಿನಿ ಅಂದಿದ್ದರು. ೬ ವರ್ಷದಲ್ಲಿ ಅವರು ೧೨ ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ ಅವರಿಂದ ಅದು ಸಾಧ್ಯವಾಗಿಲ್ಲ. ಬದಲಿಗೆ ನೋಟು ಬ್ಯಾನ್ ಮಾಡಿ ಕೈಗಾರಿಕೆಗಳು ಬಂದ್ ಆಗುವಂತೆ ಮಾಡಿದರು. ದೇಶದ ೩ ಕೋಟಿ ಜನರು ಉದ್ಯೋಗ ಕಳಿದುಕೊಳ್ಳುವಂತಾಯಿತು..

ವೀರೇಶ್ವರ ಲಿಂಗಾಯತ ಮತದಾರರು ನಮ್ಮ ಜತೆಗೆ ಇದ್ದಾರೆ. ಲಿಂಗಾಯತ ಸಮುದಾಯದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಸೇರಿದಂತೆ ಹಲವರನ್ನು ಕಾಂಗ್ರೆಸ್ ಸಿಎಂ ಮಾಡಿದ್ದು. ದೇಶದ ಲಿಂಗಾಯತರು ಕಾಂಗ್ರೆಸ್ ಜತೆಗೆ ಇದ್ದಾರೆ. ಬಸವಣ್ಣನ ತತ್ವದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಯುತ್ತಿದೆ ಎಂದರು

kn_gkk_03_27_srpatil_speech_photo_kac10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.