ETV Bharat / state

'ಈ ಚುನಾವಣೆಯಲ್ಲಿ ಅವರನ್ನು ಸೋಲಿಸಬೇಕು.. ಇಲ್ಲವಾದರೆ ನಿಮ್ಮ ಜಮೀನು, ಮನೆ ಹೋಗ್ತವೆ': ರಮೇಶ್ ಜಾರಕಿಹೊಳಿ

author img

By

Published : Feb 17, 2023, 10:30 AM IST

ಗ್ರಾಮೀಣ ಶಾಸಕಿಯನ್ನ ಈ ಚುನಾವಣೆಯಲ್ಲಿ ಸೋಲಿಸಬೇಕು. ಇಲ್ಲವಾದರೆ ನಿಮ್ಮ ಜಮೀನು, ಮನೆ ಹೋಗ್ತವೆ- ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ.

Ramesh Jarkiholi
ರಮೇಶ್ ಜಾರಕಿಹೊಳಿ
ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ

ಬೆಳಗಾವಿ: ಗ್ರಾಮೀಣ ಶಾಸಕಿಯನ್ನ ಈ ಚುನಾವಣೆಯಲ್ಲಿ ಸೋಲಿಸಬೇಕು. ಇಲ್ಲವಾದರೆ ನಿಮ್ಮ ಜಮೀನು, ಮನೆ ಹೋಗ್ತವೆ. ಶಾಸಕರ ಸಂಬಂಧಿಕರೇ ಮೊದಲು ನಿಮ್ಮ ಜಮೀನು ಮಾರಬೇಕಾಗುತ್ತದೆ. ಈ ಚುನಾವಣೆ ಬಹಳ ಮುಖ್ಯವಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ(ಗುರುವಾರ) ಬೆಳಗಾವಿ ಗ್ರಾಮೀಣ ಹೀರೆ ಬಾಗೇವಾಡಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಅವರ ಅಭಿಮಾನಿಗಳ ಬಳಗದಿಂದ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅವರು ಎನ್ನು ಮಾಡುತ್ತಾರೆ ಅದಕ್ಕೆ ನಾವು ಗಟ್ಟಿ ಇದ್ದೇವೆ. ಅವರು ಎನು ಕೊಡುತ್ತಾರೋ ಅದರ 2 ಪಟ್ಟು ಕೊಡಲು ತಯಾರಿಗೆದ್ದೇವೆ. ಇಲ್ಲಿ ನಿಮ್ಮ ಜಾತಿವರು ಎಂದು ಹೇಳುತ್ತಾರೆ. ಪಶ್ಚಿಮದ ಕಡೆ ಹೋಗಿ ನಿಮ್ಮ ಮಗಳು ಎನ್ನುತ್ತಾರೆ. ಬಹಳ ಕಲಾಕಾರ ಇದ್ದಾರೆ ಅವರು. ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂದರೆ ನೀವು ಗಟ್ಟಿಯಾಗಿ ಚುನಾವಣೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ 4 ವರ್ಷದಿಂದ ಸಂಘಟನೆ ಕುಂಠಿತವಾಗಿತ್ತು. ಈಗ ಎಲ್ಲರೂ ಒಂದೇ ವೇದಿಕೆಯಲ್ಲಿ ಬಂದು ಅಭಿವೃದ್ಧಿ ಮಾಡುತ್ತೇವೆ ಎಂದ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.

ನೀರಾವರಿ ಇಲಾಖೆಯಲ್ಲಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಹಿರೇಬಾಗೇವಾಡಿ ಗ್ರಾಮದಲ್ಲಿ ಕೆರೆ ಕಟ್ಟುವುದರಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ಮಾಡುತ್ತಿದ್ದರೂ, ಆ ಗೋಲ್ ಮಾಲ್​​ನಲ್ಲಿ ನೂರಾರು ಕೋಟಿ ರೂ.ತಿಂದು ಮುಚ್ಚಲು ಯತ್ನಿಸಿದರು. ಈ ವಿಚಾರದಿಂದ ನಾನು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಗ್ರಾಮೀಣ ಕ್ಷೇತ್ರ ಹಾಗೂ ಬೆಳಗಾವಿ ರಾಜಕೀಯವಾಗಿ ನಾವು ತಯಾರು ಮಾಡಿರುವ ಕ್ಷೇತ್ರ. ಆದರೆ ಇಲ್ಲಿನ ಶಾಸಕರು ಎದೆ ತಟ್ಟಿಕೊಂಡು ನಾನೇ ಅಭಿವೃದ್ಧಿ ಮಾಡಿದೆ ಎಂದು ಹೇಳುತ್ತಾರೆ. ಬಿಜೆಪಿ ಸರ್ಕಾರ ಇದೆ. ಅವರು ಅನುದಾನ ಕೊಟ್ಟಿದ್ದಾರೆ. ಆದರೆ ಇವರು ಸುಳ್ಳು ಹೇಳುತ್ತಾ ಕಮಿಷನ್‌ ಬೆನ್ನು ಬಿದ್ದಿದ್ದಾರೆ ಎಂದು ಸ್ಥ ಆಕ್ರೋಶ ವ್ಯಕ್ತಪಡಿಸಿದರು.

ಹೆಬ್ಬಾಳ್ಕರ್ ಜತೆಗೆ ಯಾರು ಇರಲ್ಲ: ಇನ್ನು 2 ತಿಂಗಳಲ್ಲಿ ಎಲ್ಲವೂ ಖಾಲಿ ಆಗುತ್ತದೆ. ಅವರ ಗಾಡಿಯಲ್ಲಿ ಮಗ, ತಮ್ಮ ಏಜೆಂಟರ್‌ಗಳು ಉಳಿಯುತ್ತಾರೆ. ಚುನಾವಣೆ ನಂತರ ಹೆಬ್ಬಾಳ್ಕರ್ ಜತೆಗೆ ಯಾರು ಇರಲ್ಲ. ಬಿಜೆಪಿಗೆ ಯಾರು ಅಭ್ಯರ್ಥಿ ಫೈನಲ್ ಆಗಿಲ್ಲ. ವರಿಷ್ಠರ ಹೇಳಿದಂತೆ ಆಯ್ಕೆ ಮಾಡೋಣ‌. ಒಳ್ಳೆಯ ಅಭ್ಯರ್ಥಿ ಕೊಡಿ ಎಂದು ಅವರ ಬಳಿ ಬೇಡಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಎಲ್ಲರನ್ನೂ ಕರೆದುಕೊಂಡು ಕಾರ್ಯಕ್ರಮ ಮಾಡುತ್ತೇವೆ ಎಂದು ರಮೇಶ್​​ ಜಾರಕಿಹೊಳಿ ಕಾರ್ಯಕರ್ತರಿಗೆ ಹೇಳಿದರು.

ಕಳೆದ 2 ಸಭೆಗಳಲ್ಲಿ ಮಾತನಾಡಿದಾಗ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ನನ್ನ ವಿರುದ್ಧ, ನಳೀನ್​​ ಕುಮಾರ್​ ಕಟೀಲ್ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮೇಲೆ ಕೇಸ್ ಹಾಕಿದರು. ದುರ್ದೈವದ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷದವರು ರೋಡ್ ಮೇಲೆ ಹಂಚುವುದನ್ನ ಕಂಡು ಸುಮ್ಮನಿದ್ದೇವೆ. ಇಂದು ಕಾಂಗ್ರೆಸ್ ಪಕ್ಷ ಇಷ್ಟು ಕೆಳಮಟ್ಟಕ್ಕೆ ಬಂದಿರುವುದು ದುರಂತ ಎಂದರು.

ಗ್ರಾಮೀಣ ಕ್ಷೇತ್ರದಲ್ಲಿ ಮಾಡಿರುವುದನ್ನೇ ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕಳೆದ ಐದು ವರ್ಷದ ಹಿಂದೆ ನಾವೇ ಎಷ್ಟು ಕಷ್ಟ ಪಟ್ಟು ಶಾಸಕರನ್ನ ಮಾಡಿದ್ದೇವೆ. ರೋಡ್ ಮಾಡಿದ್ದೇನೆ ಎನ್ನುತ್ತಾರೆ. ಅದನ್ನು ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆ ಸದಸ್ಯರು ಮಾಡುತ್ತಾರೆ. ಪಂಚಾಯಿತಿಗೆ ಅನುದಾನ ಬಂದ ಹಾಗೆ ಶಾಸಕರಿಗೆ ಬರುತ್ತದೆ. ಅವರು ಮಾಡುತ್ತಾರೆ. ಬಾಗೇವಾಡಿಯಲ್ಲಿ ಸುಧಾರಣೆ ಮಾಡಿದ್ದಕ್ಕೆ ಇಬ್ಬರು ಗುತ್ತಿಗೆದಾರರು ದೊಡ್ಡವರಾಗಿದ್ದಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​​ಗೆ ಟಾಂಗ್ ನೀಡಿದರು.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪರ್ಧೆ: ಶ್ರೀಗಳಿಗೆ ಬೇಡಿಕೆ ಸಲ್ಲಿಸಿದ ಪಂಚಮಸಾಲಿ ಮುಖಂಡರು

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ

ಬೆಳಗಾವಿ: ಗ್ರಾಮೀಣ ಶಾಸಕಿಯನ್ನ ಈ ಚುನಾವಣೆಯಲ್ಲಿ ಸೋಲಿಸಬೇಕು. ಇಲ್ಲವಾದರೆ ನಿಮ್ಮ ಜಮೀನು, ಮನೆ ಹೋಗ್ತವೆ. ಶಾಸಕರ ಸಂಬಂಧಿಕರೇ ಮೊದಲು ನಿಮ್ಮ ಜಮೀನು ಮಾರಬೇಕಾಗುತ್ತದೆ. ಈ ಚುನಾವಣೆ ಬಹಳ ಮುಖ್ಯವಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ(ಗುರುವಾರ) ಬೆಳಗಾವಿ ಗ್ರಾಮೀಣ ಹೀರೆ ಬಾಗೇವಾಡಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಅವರ ಅಭಿಮಾನಿಗಳ ಬಳಗದಿಂದ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅವರು ಎನ್ನು ಮಾಡುತ್ತಾರೆ ಅದಕ್ಕೆ ನಾವು ಗಟ್ಟಿ ಇದ್ದೇವೆ. ಅವರು ಎನು ಕೊಡುತ್ತಾರೋ ಅದರ 2 ಪಟ್ಟು ಕೊಡಲು ತಯಾರಿಗೆದ್ದೇವೆ. ಇಲ್ಲಿ ನಿಮ್ಮ ಜಾತಿವರು ಎಂದು ಹೇಳುತ್ತಾರೆ. ಪಶ್ಚಿಮದ ಕಡೆ ಹೋಗಿ ನಿಮ್ಮ ಮಗಳು ಎನ್ನುತ್ತಾರೆ. ಬಹಳ ಕಲಾಕಾರ ಇದ್ದಾರೆ ಅವರು. ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂದರೆ ನೀವು ಗಟ್ಟಿಯಾಗಿ ಚುನಾವಣೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ 4 ವರ್ಷದಿಂದ ಸಂಘಟನೆ ಕುಂಠಿತವಾಗಿತ್ತು. ಈಗ ಎಲ್ಲರೂ ಒಂದೇ ವೇದಿಕೆಯಲ್ಲಿ ಬಂದು ಅಭಿವೃದ್ಧಿ ಮಾಡುತ್ತೇವೆ ಎಂದ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.

ನೀರಾವರಿ ಇಲಾಖೆಯಲ್ಲಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಹಿರೇಬಾಗೇವಾಡಿ ಗ್ರಾಮದಲ್ಲಿ ಕೆರೆ ಕಟ್ಟುವುದರಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ಮಾಡುತ್ತಿದ್ದರೂ, ಆ ಗೋಲ್ ಮಾಲ್​​ನಲ್ಲಿ ನೂರಾರು ಕೋಟಿ ರೂ.ತಿಂದು ಮುಚ್ಚಲು ಯತ್ನಿಸಿದರು. ಈ ವಿಚಾರದಿಂದ ನಾನು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಗ್ರಾಮೀಣ ಕ್ಷೇತ್ರ ಹಾಗೂ ಬೆಳಗಾವಿ ರಾಜಕೀಯವಾಗಿ ನಾವು ತಯಾರು ಮಾಡಿರುವ ಕ್ಷೇತ್ರ. ಆದರೆ ಇಲ್ಲಿನ ಶಾಸಕರು ಎದೆ ತಟ್ಟಿಕೊಂಡು ನಾನೇ ಅಭಿವೃದ್ಧಿ ಮಾಡಿದೆ ಎಂದು ಹೇಳುತ್ತಾರೆ. ಬಿಜೆಪಿ ಸರ್ಕಾರ ಇದೆ. ಅವರು ಅನುದಾನ ಕೊಟ್ಟಿದ್ದಾರೆ. ಆದರೆ ಇವರು ಸುಳ್ಳು ಹೇಳುತ್ತಾ ಕಮಿಷನ್‌ ಬೆನ್ನು ಬಿದ್ದಿದ್ದಾರೆ ಎಂದು ಸ್ಥ ಆಕ್ರೋಶ ವ್ಯಕ್ತಪಡಿಸಿದರು.

ಹೆಬ್ಬಾಳ್ಕರ್ ಜತೆಗೆ ಯಾರು ಇರಲ್ಲ: ಇನ್ನು 2 ತಿಂಗಳಲ್ಲಿ ಎಲ್ಲವೂ ಖಾಲಿ ಆಗುತ್ತದೆ. ಅವರ ಗಾಡಿಯಲ್ಲಿ ಮಗ, ತಮ್ಮ ಏಜೆಂಟರ್‌ಗಳು ಉಳಿಯುತ್ತಾರೆ. ಚುನಾವಣೆ ನಂತರ ಹೆಬ್ಬಾಳ್ಕರ್ ಜತೆಗೆ ಯಾರು ಇರಲ್ಲ. ಬಿಜೆಪಿಗೆ ಯಾರು ಅಭ್ಯರ್ಥಿ ಫೈನಲ್ ಆಗಿಲ್ಲ. ವರಿಷ್ಠರ ಹೇಳಿದಂತೆ ಆಯ್ಕೆ ಮಾಡೋಣ‌. ಒಳ್ಳೆಯ ಅಭ್ಯರ್ಥಿ ಕೊಡಿ ಎಂದು ಅವರ ಬಳಿ ಬೇಡಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಎಲ್ಲರನ್ನೂ ಕರೆದುಕೊಂಡು ಕಾರ್ಯಕ್ರಮ ಮಾಡುತ್ತೇವೆ ಎಂದು ರಮೇಶ್​​ ಜಾರಕಿಹೊಳಿ ಕಾರ್ಯಕರ್ತರಿಗೆ ಹೇಳಿದರು.

ಕಳೆದ 2 ಸಭೆಗಳಲ್ಲಿ ಮಾತನಾಡಿದಾಗ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ನನ್ನ ವಿರುದ್ಧ, ನಳೀನ್​​ ಕುಮಾರ್​ ಕಟೀಲ್ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮೇಲೆ ಕೇಸ್ ಹಾಕಿದರು. ದುರ್ದೈವದ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷದವರು ರೋಡ್ ಮೇಲೆ ಹಂಚುವುದನ್ನ ಕಂಡು ಸುಮ್ಮನಿದ್ದೇವೆ. ಇಂದು ಕಾಂಗ್ರೆಸ್ ಪಕ್ಷ ಇಷ್ಟು ಕೆಳಮಟ್ಟಕ್ಕೆ ಬಂದಿರುವುದು ದುರಂತ ಎಂದರು.

ಗ್ರಾಮೀಣ ಕ್ಷೇತ್ರದಲ್ಲಿ ಮಾಡಿರುವುದನ್ನೇ ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕಳೆದ ಐದು ವರ್ಷದ ಹಿಂದೆ ನಾವೇ ಎಷ್ಟು ಕಷ್ಟ ಪಟ್ಟು ಶಾಸಕರನ್ನ ಮಾಡಿದ್ದೇವೆ. ರೋಡ್ ಮಾಡಿದ್ದೇನೆ ಎನ್ನುತ್ತಾರೆ. ಅದನ್ನು ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆ ಸದಸ್ಯರು ಮಾಡುತ್ತಾರೆ. ಪಂಚಾಯಿತಿಗೆ ಅನುದಾನ ಬಂದ ಹಾಗೆ ಶಾಸಕರಿಗೆ ಬರುತ್ತದೆ. ಅವರು ಮಾಡುತ್ತಾರೆ. ಬಾಗೇವಾಡಿಯಲ್ಲಿ ಸುಧಾರಣೆ ಮಾಡಿದ್ದಕ್ಕೆ ಇಬ್ಬರು ಗುತ್ತಿಗೆದಾರರು ದೊಡ್ಡವರಾಗಿದ್ದಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​​ಗೆ ಟಾಂಗ್ ನೀಡಿದರು.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪರ್ಧೆ: ಶ್ರೀಗಳಿಗೆ ಬೇಡಿಕೆ ಸಲ್ಲಿಸಿದ ಪಂಚಮಸಾಲಿ ಮುಖಂಡರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.