ETV Bharat / state

ಚಿಕ್ಕೋಡಿಯಲ್ಲಿ ನಿಲ್ಲದ ವರ್ಷಧಾರೆಯ ಅಬ್ಬರ; ರೈತರಿಗೆ ಟೆನ್ಶನ್‌

author img

By

Published : Sep 25, 2019, 12:37 PM IST

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಕಾಗವಾಡ ಅಥಣಿ ಭಾಗದಲ್ಲಿ ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ.

non-stop-rain-in-belagavi-district-chikkodi

ಚಿಕ್ಕೋಡಿ: ಚಿಕ್ಕೋಡಿ ಉಪವಿಭಾಗದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಗಡಿಭಾಗದ ರೈತರಿಗೆ ತೊಂದರೆಯಾಗಿದೆ.

ಎರಡನೇ ದಿನಕ್ಕೆ ಕಾಲಿಟ್ಟ ಮಳೆ

ಚಿಕ್ಕೋಡಿ, ರಾಯಬಾಗ, ಕಾಗವಾಡ ಅಥಣಿ ಭಾಗದಲ್ಲಿ ಮುಂದುವರೆದ ಮಳೆಯಿಂದ ಜನರಿಗೆ ಅದ್ರಲ್ಲೂ ರೈತಾಪಿ ವರ್ಗಕ್ಕೆ ತೀವ್ರ ಕಿರಿಕಿರಿಯಾಗುತ್ತಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರಿಗೆ ಮಳೆ ತಲೆನೋವು ತಂದಿಟ್ಟಿದೆ. ಇನ್ನೇನು ಬೆಳೆದು ನಿಂತ ಬೆಳೆಗಳನ್ನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಜಡಿಮಳೆ ಸುರಿಯುತ್ತಿದೆ. ಹೀಗಾಗಿ ಕೈಗೆ ಸಿಕ್ಕ ತುತ್ತು ಬಾಯಿಗೆ ಬರುತ್ತಾ ಇಲ್ವೋ ಅನ್ನೋ ಚಿಂತೆ ಗಡಿಭಾಗದ ಅನ್ನದಾತನದ್ದು.

ಈ ವೇಳೆಗಾಗಲೇ ಬೆಳೆದ ಬೆಳೆಗಳೆಲ್ಲವನ್ನು ಕಟಾವು‌ ಮಾಡಿ ಬಿಸಿಲಿಗೆ ಒಣಗುವುದಕ್ಕೆ ಹಾಕಲಾಗುತ್ತಿತ್ತು. ಆದ್ರೆ, ಅನಿರೀಕ್ಷಿತ ಮಳೆ ತೊಡಕುಂಟುಮಾಡಿದೆ.

ಚಿಕ್ಕೋಡಿ: ಚಿಕ್ಕೋಡಿ ಉಪವಿಭಾಗದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಗಡಿಭಾಗದ ರೈತರಿಗೆ ತೊಂದರೆಯಾಗಿದೆ.

ಎರಡನೇ ದಿನಕ್ಕೆ ಕಾಲಿಟ್ಟ ಮಳೆ

ಚಿಕ್ಕೋಡಿ, ರಾಯಬಾಗ, ಕಾಗವಾಡ ಅಥಣಿ ಭಾಗದಲ್ಲಿ ಮುಂದುವರೆದ ಮಳೆಯಿಂದ ಜನರಿಗೆ ಅದ್ರಲ್ಲೂ ರೈತಾಪಿ ವರ್ಗಕ್ಕೆ ತೀವ್ರ ಕಿರಿಕಿರಿಯಾಗುತ್ತಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರಿಗೆ ಮಳೆ ತಲೆನೋವು ತಂದಿಟ್ಟಿದೆ. ಇನ್ನೇನು ಬೆಳೆದು ನಿಂತ ಬೆಳೆಗಳನ್ನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಜಡಿಮಳೆ ಸುರಿಯುತ್ತಿದೆ. ಹೀಗಾಗಿ ಕೈಗೆ ಸಿಕ್ಕ ತುತ್ತು ಬಾಯಿಗೆ ಬರುತ್ತಾ ಇಲ್ವೋ ಅನ್ನೋ ಚಿಂತೆ ಗಡಿಭಾಗದ ಅನ್ನದಾತನದ್ದು.

ಈ ವೇಳೆಗಾಗಲೇ ಬೆಳೆದ ಬೆಳೆಗಳೆಲ್ಲವನ್ನು ಕಟಾವು‌ ಮಾಡಿ ಬಿಸಿಲಿಗೆ ಒಣಗುವುದಕ್ಕೆ ಹಾಕಲಾಗುತ್ತಿತ್ತು. ಆದ್ರೆ, ಅನಿರೀಕ್ಷಿತ ಮಳೆ ತೊಡಕುಂಟುಮಾಡಿದೆ.

Intro:ನಿಲ್ಲದ ಮಳೆರಾಯನ ಆರ್ಭಟ : ಎರಡನೇ ದಿನಕ್ಕೆ ಕಾಲಿಟ್ಟ ಮಳೆBody:

ಚಿಕ್ಕೋಡಿ :

ಚಿಕ್ಕೋಡಿ ಉಪವಿಭಾಗದಲ್ಲಿ ಮುಂದುವರೆದ ಮಳೆರಾಯ, ಎರಡು ದಿನದಿಂದ ನಿರಂತರ ಸುರಿಯುತ್ತಿರುವ ಬಾರೀ ಮಳೆಯಿಂದ ಕಂಗಾಲಾದ ಗಡಿಭಾಗದ ರೈತರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಕಾಗವಾಡ ಅಥಣಿ ಭಾಗದಲ್ಲಿ ಮುಂದುವರೆದ ಮಳೆಯಿಂದ ಜನರು ಬೆಸತ್ತಿದ್ದಾರೆ. ಮಳೆಯಿಂದ ಬೇಸತ್ತಿರುವ ಜನರಿಗೆ ಮತ್ತೆ ಮಳೆಯ ಹೊಡೆತ ಎದುರಾಗಿದ್ದು, ಕೃಷಿ ಚಟುವಟಿಕೆ ಮಾಡುತ್ತಿದ್ದ ರೈತರಿಗೆ ಮಳೆರಾಯ ಶಾಖ ನೀಡಿದ್ದಾನೆ. ಇನ್ನೇನು ಬೆಳೆದು ನಿಂತ ಬೆಳೆಗಳೆಲ್ಲವು ಕಟಾವಕ್ಕೆ ಬಂದಿದ್ದು, ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಸಿಕ್ಕ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ ಗಡಿ ಭಾಗದ ಜನರ ಸ್ಥಿತಿ.

ಈ ವೇಳೆಗಾಗಲೆ ಬೆಳೆದ ಬೆಳೆಗಳೆಲ್ಲವು ಕಟಾವು‌ ಮಾಡಿ ಬಿಸಲಿಗೆ ಒಣಗಲು ಭೂಮಿಯ ಮೇಲೆ ಬಿಟ್ಟಿದ್ದ ರೈತರಿಗೆ ಈ ಅನಿರೀಕ್ಷಿತ ಮಳೆಯಿಂದ ಶಾಖ ಆಗಿದ್ದು, ಗಡಿ‌ ಭಾಗದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

Conclusion:
ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.