ಬೆಳಗಾವಿ: ಏಕಲವ್ಯ ಸಿನಿ ಪಿಕ್ಚರ್ಸ್ ಅವರ ನಾ ಕಂಡ ಕನಸು ಕಣ್ತೆರೆದಾಗ ಚಲನಚಿತ್ರದ ಹಾಡುಗಳ ಆಡಿಯೋ ಬಿಡುಗಡೆ ಸಮಾರಂಭ ಸಂಗೀತ ನಿರ್ದೇಶಕ ಸೋನು ಅಶೋಕ ಭಜಂತ್ರಿ ನೇತೃತ್ವದಲ್ಲಿ ಖಾಸಗಿ ಹೋಟೆಲ್ನಲ್ಲಿ ನಡೆಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಸೋನು ಅಶೋಕ ಭಜಂತ್ರಿ ಅವರು, ಏಕಲವ್ಯ ಸಿನಿ ಪಿಕ್ಚರ್ಸ್ ಬ್ಯಾನರ್ನಲ್ಲಿ ನಾ ಕಂಡ ಕನಸು ಕಣ್ತೆರೆದಾಗ ಚಲನಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧಗೊಂಡಿದೆ. ಆದ್ರೆ, ಕೋವಿಡ್- 19 ಸೋಂಕು ತಡೆ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಬಂದ್ ಇರುವುದರಿಂದ ಚಿತ್ರ ಬಿಡುಗಡೆ ವಿಳಂಬವಾಗಿದೆ. ಇದಕ್ಕಾಗಿ ನಿರ್ಮಾಪಕರು ಮತ್ತು ಚಿತ್ರರಸಿಕರ ಅಪೇಕ್ಷೆಯಂತೆ ಚಿತ್ರದ ಹಾಡುಗಳ ಆಡಿಯೋ ಬಿಡುಗಡೆ ಮಾಡಲಾಗಿದೆ ಎಂದರು.
ನಾ ಕಂಡ ಕನಸು ಕಣ್ತೆರೆದಾಗ ಚಲನಚಿತ್ರವೂ ವಿಭಿನ್ನ ಕಥಾಹಂದರದ ವಿಶಿಷ್ಟ ಚಿತ್ರವಾಗಿದೆ. ಆದ್ರೆ, ಬಿಡುಗಡೆಗೆ ದಿನ ಎಣಿಸುತ್ತಿದ್ದೇವೆ. ಈಗ ರಾಜ್ಯದಾದ್ಯಂತ ಆಡಿಯೋ ಬಿಡುಗಡೆ ಮಾಡಲಾಗುತ್ತಿದೆ. ಸಿಂಚನಾ ದೀಕ್ಷಿತ್, ಬೆಳಗಾವಿಯ ಲಕ್ಷ್ಮೀ ತಳವಾರ ಹಾಡು ಹಾಡಿದ್ದಾರೆ ಎಂದರು.