ETV Bharat / state

ಸಾರಿಗೆ ಸಚಿವರ ಪುತ್ರನ ಮನವೊಲಿಕೆ ಕಾರ್ಯ ಯಶಸ್ವಿ... ಕರ್ತವ್ಯಕ್ಕೆ ಹಾಜರಾದ ನೂರಕ್ಕೂ ಅಧಿಕ ಸಾರಿಗೆ ಸಿಬ್ಬಂದಿ

author img

By

Published : Apr 14, 2021, 9:25 PM IST

ಚಾಲಕ ಮತ್ತು ನಿರ್ವಾಹಕರಿಗೆ ಫೋನ್ ಮಾಡಿದ ಸಚಿವ ಸವದಿ ಪುತ್ರ ಚಿದಾನಂದ ಸವದಿ, ಕೆಲಸಕ್ಕೆ ಹಾಜರಾಗುವಂತೆ ಮನವೊಲಿಸಿದರು. ಪರಿಣಾಮ ಹಲವು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರು.

Minister son Convinced Transport workers
ಸಾರಿಗೆ ಸಚಿವರ ಪುತ್ರನಿಂದ ಮನವೊಲಿಕೆ

ಅಥಣಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಮುಷ್ಕರನಿರತ ಚಾಲಕ, ನಿರ್ವಾಹಕರಿಗೆ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡುವ ಮೂಲಕ ಮನವೊಲಿಕೆ ಪ್ರಯತ್ನ ಮಾಡಿದರು.

ಕಳೆದ ಒಂದು ವಾರದಿಂದ ಕೆಲಸಕ್ಕೆ ಗೈರಾಗಿರುವ ಅಥಣಿ ಡಿಪೋದ ಚಾಲಕ ಮತ್ತು ನಿರ್ವಾಹಕರಿಗೆ ಫೋನ್ ಮಾಡಿದ ಚಿದಾನಂದ ಸವದಿ, ಸರ್ಕಾರ ನಿಮ್ಮ ಜೊತೆ ಇದೆ. ದಯವಿಟ್ಟು ಕೆಲಸಕ್ಕೆ ಮರಳಿ ಎಂದು ಮನವಿ ಮಾಡಿದರು. ಚಿದಾನಂದ ಮನವಿಗೆ ಸ್ಪಂದಿಸಿದ ನೂರಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾದರು.

ಓದಿ : ಸಾರಿಗೆ ಸಚಿವರ ತವರಲ್ಲಿ ಬಸ್​​ಗೆ ಕಲ್ಲೆಸೆತ: ಚಾಲಕನಿಗೆ ಗಾಯ

ಫೋನ್ ಮುಖಾಂತರ ಮತ್ತೆ ಮತ್ತೆ ಸಾರಿಗೆ ಸಿಬ್ಬಂದಿಗೆ ಕರೆ ಮಾಡಿದ ಚಿದಾನಂದ ಸವದಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಬಳಿಕ ಮಾತನಾಡಿದ ಅವರು, ನಾಳೆ ಇನ್ನಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಅಥಣಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಮುಷ್ಕರನಿರತ ಚಾಲಕ, ನಿರ್ವಾಹಕರಿಗೆ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡುವ ಮೂಲಕ ಮನವೊಲಿಕೆ ಪ್ರಯತ್ನ ಮಾಡಿದರು.

ಕಳೆದ ಒಂದು ವಾರದಿಂದ ಕೆಲಸಕ್ಕೆ ಗೈರಾಗಿರುವ ಅಥಣಿ ಡಿಪೋದ ಚಾಲಕ ಮತ್ತು ನಿರ್ವಾಹಕರಿಗೆ ಫೋನ್ ಮಾಡಿದ ಚಿದಾನಂದ ಸವದಿ, ಸರ್ಕಾರ ನಿಮ್ಮ ಜೊತೆ ಇದೆ. ದಯವಿಟ್ಟು ಕೆಲಸಕ್ಕೆ ಮರಳಿ ಎಂದು ಮನವಿ ಮಾಡಿದರು. ಚಿದಾನಂದ ಮನವಿಗೆ ಸ್ಪಂದಿಸಿದ ನೂರಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾದರು.

ಓದಿ : ಸಾರಿಗೆ ಸಚಿವರ ತವರಲ್ಲಿ ಬಸ್​​ಗೆ ಕಲ್ಲೆಸೆತ: ಚಾಲಕನಿಗೆ ಗಾಯ

ಫೋನ್ ಮುಖಾಂತರ ಮತ್ತೆ ಮತ್ತೆ ಸಾರಿಗೆ ಸಿಬ್ಬಂದಿಗೆ ಕರೆ ಮಾಡಿದ ಚಿದಾನಂದ ಸವದಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಬಳಿಕ ಮಾತನಾಡಿದ ಅವರು, ನಾಳೆ ಇನ್ನಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.