ETV Bharat / state

ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿ ನಿಪ್ಪಾಣಿಯಲ್ಲಿ ಅರೆಸ್ಟ್​ ​

author img

By

Published : Dec 24, 2019, 8:22 AM IST

ಅಬಕಾರಿ ಇಲಾಖೆಯ ಚಿಕ್ಕೋಡಿ ಉಪವಿಭಾಗದ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 50 ಸಾವಿರ ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸಿದ ಘಟನೆ ನಿಪ್ಪಾಣಿ ನಗರದಲ್ಲಿ ನಡೆದಿದೆ.

ವ್ಯಕ್ತಿಯ ಬಂಧನ
ವ್ಯಕ್ತಿಯ ಬಂಧನ

ಚಿಕ್ಕೋಡಿ: ಅಬಕಾರಿ ಇಲಾಖೆಯ ಚಿಕ್ಕೋಡಿ ಉಪವಿಭಾಗದ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 50 ಸಾವಿರ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸಿರುವ ಪ್ರಕರಣ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ್​ನ ಲಕ್ಷ್ಮಣ್​ ಬಾಳು ಚವ್ಹಾಣ್​ ಬಂಧಿತ. ಈತ ಗೋವಾದಿಂದ ಕೊಲ್ಲಾಪುರಕ್ಕೆ ಕಾರಿನಲ್ಲಿ ಮದ್ಯ ಸಾಗಿಸುವಾಗ ನಗರ ಹೊರವಲಯದಲ್ಲಿರುವ ಅಮರ್ ಹೋಟೆಲ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿದ್ದಾರೆ.

ಸುಮಾರು 53 ಲೀಟರ್​ಗಳ 6 ಬಾಕ್ಸ್​ಗಳು ಮತ್ತು12 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಅಬಕಾರಿ ಡಿಎಸ್‍ಪಿ ವಿಜಯಕುಮಾರ ಹಿರೇಮಠ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇನ್ಸ್​ಪೆಕ್ಟರ್ ಬಸವರಾಜ ಕರಮಣ್ಣವರ, ಸಬ್‍ ಇನ್ಸ್​ಪೆಕ್ಟರ್ ಸುರೇಂದ್ರ ಅರಗಲ್, ಶಾಂತಾರಾಮ ಹೆಗಡೆ, ಸಿಬ್ಬಂದಿ ಹಸನಸಾಬ ನದಾಫ್, ರಾಜು ಅಂಬಾರಿ, ಸಯ್ಯದ್ ಫಯಾಜ್ ಪಾಲ್ಗೊಂಡಿದ್ದರು.

ಚಿಕ್ಕೋಡಿ: ಅಬಕಾರಿ ಇಲಾಖೆಯ ಚಿಕ್ಕೋಡಿ ಉಪವಿಭಾಗದ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 50 ಸಾವಿರ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸಿರುವ ಪ್ರಕರಣ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ್​ನ ಲಕ್ಷ್ಮಣ್​ ಬಾಳು ಚವ್ಹಾಣ್​ ಬಂಧಿತ. ಈತ ಗೋವಾದಿಂದ ಕೊಲ್ಲಾಪುರಕ್ಕೆ ಕಾರಿನಲ್ಲಿ ಮದ್ಯ ಸಾಗಿಸುವಾಗ ನಗರ ಹೊರವಲಯದಲ್ಲಿರುವ ಅಮರ್ ಹೋಟೆಲ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿದ್ದಾರೆ.

ಸುಮಾರು 53 ಲೀಟರ್​ಗಳ 6 ಬಾಕ್ಸ್​ಗಳು ಮತ್ತು12 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಅಬಕಾರಿ ಡಿಎಸ್‍ಪಿ ವಿಜಯಕುಮಾರ ಹಿರೇಮಠ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇನ್ಸ್​ಪೆಕ್ಟರ್ ಬಸವರಾಜ ಕರಮಣ್ಣವರ, ಸಬ್‍ ಇನ್ಸ್​ಪೆಕ್ಟರ್ ಸುರೇಂದ್ರ ಅರಗಲ್, ಶಾಂತಾರಾಮ ಹೆಗಡೆ, ಸಿಬ್ಬಂದಿ ಹಸನಸಾಬ ನದಾಫ್, ರಾಜು ಅಂಬಾರಿ, ಸಯ್ಯದ್ ಫಯಾಜ್ ಪಾಲ್ಗೊಂಡಿದ್ದರು.

Intro:ಗೋವಾ ರಾಜ್ಯದಿಂದ ಆಕ್ರಮವಾಗಿ ಮಧ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನBody:

ಚಿಕ್ಕೋಡಿ :

ಅಬಕಾರಿ ಇಲಾಖೆಯ ಚಿಕ್ಕೋಡಿ ಉಪವಿಭಾಗದ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 50 ಸಾವಿರ ಮೌಲ್ಯದ ಮದ್ಯ ಹಾಗೂ ವ್ಯಕ್ತಿಯನ್ನು ವಶಪಡಿಸಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಚಂದಗಡನ ಲಕ್ಷ್ಮಣ ಬಾಳು ಚವಾಣ ಬಂಧಿತ ವ್ಯಕ್ತಿ. ಬಂಧಿತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಅಬಕಾರಿ ಇಲಾಖೆ ಪೊಲೀಸರು ತಿಳಿಸಿದ್ದಾರೆ.
ಗೋವಾ ರಾಜ್ಯದಿಂದ ಕೊಲ್ಹಾಪೂರಕ್ಕೆ ಕಾರಿನಲ್ಲಿ ಮದ್ಯ ಸಾಗಿಸುವಾಗ ನಗರ ಹೊರವಲಯದಲ್ಲಿರುವ ಅಮರ ಹೊಟೆಲ್ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸಿದ ಅಬಕಾರಿ ಇಲಾಖೆ ಪೊಲೀಸರು ಸುಮಾರು 53 ಲೀಟರ್ ಗಳ 6 ಬಾಕ್ಸ್‍ಗಳನ್ನು ರೂ.12 ಲಕ್ಷ ಮೌಲ್ಯದ ಕಾರಿನೊಂದಿಗೆ ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಡಿಎಸ್‍ಪಿ ವಿಜಯಕುಮಾರ ಹಿರೇಮಠ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇನ್‍ಸ್ಪೆಕ್ಟರ್ ಬಸವರಾಜ ಕರಮನ್ನವರ, ಸಬ್‍ಇನ್‍ಸ್ಪೆಕ್ಟರ್ ಸುರೇಂದ್ರ ಅರಗಲ್, ಶಾಂತಾರಾಮ ಹೆಗಡೆ, ಸಿಬ್ಬಂದಿಗಳಾದ ಹಸನಸಾಬ ನದಾಫ್, ರಾಜು ಅಂಬಾರಿ, ಸಯ್ಯದ್ ಫಯ್ಯಾಜ್ ಪಾಲ್ಗೊಂಡಿದ್ದರು.


Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.