ETV Bharat / state

ಕಿತ್ತೂರು ಉತ್ಸವಕ್ಕೆ ಅದ್ಧೂರಿ ತೆರೆ: ರಂಜಿಸಿದ ಗುರುಕಿರಣ್​ ಸಂಗೀತ, ಜೂ. ಶಿವಣ್ಣ - Kittur utsav in Belagavi

ಬೆಳಗಾವಿಯ ಕಿತ್ತೂರು ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವಕ್ಕೆ ನಿನ್ನೆ ಅದ್ಧೂರಿ ತೆರೆ ಬಿದ್ದಿದೆ.

ಕಿತ್ತೂರು ಉತ್ಸವಕ್ಕೆ ಅದ್ದೂರಿ ತೆರೆ
author img

By

Published : Oct 26, 2019, 3:22 PM IST

ಬೆಳಗಾವಿ: ಮೂರು ದಿನಗಳ ಕಾಲ ನಡೆದ ಐತಿಹಾಸಿಕ ಕಿತ್ತೂರು ಚನ್ನಮ್ಮ ಉತ್ಸವಕ್ಕೆ ನಿನ್ನೆ ರಾತ್ರಿ ಅದ್ದೂರಿ ತೆರೆ ಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಹಾಗೂ ಗುರುಕಿರಣ್ ಸಂಗೀತ ಕಾರ್ಯಕ್ರಮಕ್ಕೆ ಯುವಕರು ಹೆಜ್ಜೆ ಹಾಕಿ ಕಿತ್ತೂರು ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡಿದರು.

ಜಿಲ್ಲೆಯ ಕಿತ್ತೂರು ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಕಿತ್ತೂರು ಆಸ್ಥಾನದ ರಾಣಿ ಚನ್ನಮ್ಮನ ಗತವೈಭವ ಸಾರುವ ಹತ್ತಾರು ಕಾರ್ಯಕ್ರಮಗಳ ಆಯೋಜನೆ ಮಾಡಿದ್ದ ಜಿಲ್ಲಾಡಳಿತ ಯಶಸ್ವಿಯಾಗಿ ಈ ಉತ್ಸವ ಮುಗಿಸಿದ್ದಾರೆ. ಬಗೆ ಬಗೆಯ ಕಲಾ ತಂಡಗಳು, ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯೆ ಕಿತ್ತೂರು ಉತ್ಸವ ಅದ್ಧೂರಿಯಾಗಿ ಸಮಾಪ್ತಿಯಾಗಿದೆ.

ಕಿತ್ತೂರು ಉತ್ಸವಕ್ಕೆ ಅದ್ದೂರಿ ತೆರೆ

ಸತತ ಮಳೆ ಹಾಗೂ ಭೀಕರ ಪ್ರವಾಹದ ಮಧ್ಯೆಯೂ ಈ ಸಲದ ಕಿತ್ತೂರು ಉತ್ಸವದ ಕಳೆ ಕಡಿಮೆಯಾಗದಿರುವುದು ವಿಶೇಷವಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಕಲಾ ತಂಡಗಳು ಆಗಮಿಸಿ ಕಿತ್ತೂರು ನೆಲದಲ್ಲಿ ತಮ್ಮ ಕಲೆ ಪ್ರದರ್ಶನ ಮಾಡಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು.

ಪ್ರತಿ ವರ್ಷ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ 30 ಲಕ್ಷ ಅನುದಾನ ನೀಡುತ್ತಿತ್ತು. ಆದರೆ, ಈ ಬಾರಿಯ ಯಡಿಯೂರಪ್ಪ ಸರ್ಕಾರ 1 ಕೋಟಿ ಅನುದಾನ ನೀಡಿದ್ದು, ಉತ್ಸವಕ್ಕೆ ಮತ್ತಷ್ಟು ಮೆರಗು ಬಂದಂತಾಗಿತ್ತು.

ಬೆಳಗಾವಿ: ಮೂರು ದಿನಗಳ ಕಾಲ ನಡೆದ ಐತಿಹಾಸಿಕ ಕಿತ್ತೂರು ಚನ್ನಮ್ಮ ಉತ್ಸವಕ್ಕೆ ನಿನ್ನೆ ರಾತ್ರಿ ಅದ್ದೂರಿ ತೆರೆ ಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಹಾಗೂ ಗುರುಕಿರಣ್ ಸಂಗೀತ ಕಾರ್ಯಕ್ರಮಕ್ಕೆ ಯುವಕರು ಹೆಜ್ಜೆ ಹಾಕಿ ಕಿತ್ತೂರು ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡಿದರು.

ಜಿಲ್ಲೆಯ ಕಿತ್ತೂರು ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಕಿತ್ತೂರು ಆಸ್ಥಾನದ ರಾಣಿ ಚನ್ನಮ್ಮನ ಗತವೈಭವ ಸಾರುವ ಹತ್ತಾರು ಕಾರ್ಯಕ್ರಮಗಳ ಆಯೋಜನೆ ಮಾಡಿದ್ದ ಜಿಲ್ಲಾಡಳಿತ ಯಶಸ್ವಿಯಾಗಿ ಈ ಉತ್ಸವ ಮುಗಿಸಿದ್ದಾರೆ. ಬಗೆ ಬಗೆಯ ಕಲಾ ತಂಡಗಳು, ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯೆ ಕಿತ್ತೂರು ಉತ್ಸವ ಅದ್ಧೂರಿಯಾಗಿ ಸಮಾಪ್ತಿಯಾಗಿದೆ.

ಕಿತ್ತೂರು ಉತ್ಸವಕ್ಕೆ ಅದ್ದೂರಿ ತೆರೆ

ಸತತ ಮಳೆ ಹಾಗೂ ಭೀಕರ ಪ್ರವಾಹದ ಮಧ್ಯೆಯೂ ಈ ಸಲದ ಕಿತ್ತೂರು ಉತ್ಸವದ ಕಳೆ ಕಡಿಮೆಯಾಗದಿರುವುದು ವಿಶೇಷವಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಕಲಾ ತಂಡಗಳು ಆಗಮಿಸಿ ಕಿತ್ತೂರು ನೆಲದಲ್ಲಿ ತಮ್ಮ ಕಲೆ ಪ್ರದರ್ಶನ ಮಾಡಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು.

ಪ್ರತಿ ವರ್ಷ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ 30 ಲಕ್ಷ ಅನುದಾನ ನೀಡುತ್ತಿತ್ತು. ಆದರೆ, ಈ ಬಾರಿಯ ಯಡಿಯೂರಪ್ಪ ಸರ್ಕಾರ 1 ಕೋಟಿ ಅನುದಾನ ನೀಡಿದ್ದು, ಉತ್ಸವಕ್ಕೆ ಮತ್ತಷ್ಟು ಮೆರಗು ಬಂದಂತಾಗಿತ್ತು.

Intro:ವೈಭವದ ಕಿತ್ತೂರು ಉತ್ಸವಕ್ಕೆ ಅದ್ದೂರಿ ತೆರೆ : ಸಮಾರೋಪ ಸಮಾರಂಭದ ಒಂದು ಝಲಕ್

ಬೆಳಗಾವಿ : ಮೂರು ದಿನಗಳ ಕಾಲ ನಡೆದ ಐತಿಹಾಸಿಕ ಕಿತ್ತೂರು ಚನ್ನಮ್ಮ ಉತ್ಸವಕ್ಕೆ ನಿನ್ನೆ ರಾತ್ರಿ ಅದ್ದೂರಿ ತೆರೆ ಕಂಡಿದೆ. ಸಮಾರೋಪ ಸಮಾರಂಭದಲ್ಲಿ ನಡೆದ ಸಂಸ್ಕ್ರತಿಕ ಕಾರ್ಯಕ್ರಮಗಳು ಹಾಗೂ ಗುರುಕಿರಣ್ ಸಂಗೀತ ಕಾರ್ಯಕ್ರಮಕ್ಕೆ ಯುವಕರು ಹೆಜ್ಜೆ ಹಾಕಿ ಕಿತ್ತೂರು ಉತ್ಸವಕ್ಕೆ ಮೆರಗು ನೀಡಿದರು.

Body:ಜಿಲ್ಲೆಯ ಕಿತ್ತೂರು ಕೋಟೆ ಆವರಣದಲ್ಲಿ ನಡೆದ ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವ ನಿನ್ನೆ ರಾತ್ರಿ ಸಮಾರೋಪಗೊಂಡಿತು. ಮೂರು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಕಿತ್ತೂರು ಆಸ್ಥಾನದ ರಾಣಿ ಚನ್ನಮ್ಮನ ಗತವೈಭವ ಸಾರುವ ಹತ್ತಾರು ಕಾರ್ಯಕ್ರಮಗಳ ಆಯೋಜನೆ ಮಾಡಿದ್ದ ಜಿಲ್ಲಾಡಳಿತ ಯಶಸ್ವಿಯಾಗಿ ಈ ಉತ್ಸವ ಮುಗಿಸಿದ್ದಾರೆ. ಬಗೆ ಬಗೆಯ ಕಲಾ ತಂಡಗಳು. ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯೆ ಕಿತ್ತೂರು ಉತ್ಸವ ಸಮಾಪ್ತಿಯಾಗಿದೆ.

ಸತತ ಮಳೆ ಹಾಗೂ ಭೀಕರ ಪ್ರವಾಹದ ಮಧ್ಯೆಯೂ ಈ ಸಲದ ಕಿತ್ತೂರು ವುತ್ಸವದ ಕಳೆ ಕಡಿಮೆಯಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮಳ ಉತ್ಸವ ಅದ್ದೂರಿಯಾಗಿ ನಡೆದಿದೆ. ರಾಜ್ಯದ ನಾನಾ ಭಾಗಗಳಿಂದ ಕಲಾ ತಂಡಗಳು ಆಗಮಿಸಿ ಕಿತ್ತೂರು ನೆಲದಲ್ಲಿ ತಮ್ಮ ಕಲೆ ಪ್ರದರ್ಶನ ಮಾಡಿದ್ದು ವಿಶೇಷ. ಜೊತೆಗೆ ಪ್ರತಿ ವರ್ಷ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ 30 ಲಕ್ಷ ಅನುದಾನ ನೀಡುತ್ತಿತ್ತು ಆದರೆ ಈ ಬಾರಿಯ ಯಡಿಯೂರಪ್ಪ ಸರ್ಕಾರ 1 ಕೋಟಿ ಅನುದಾನ ನೀಡಿದ್ದು ಉತ್ಸವಕ್ಕೆ ಮತ್ತಷ್ಟು ಮೆರಗು ಬಂದಂತಾಗಿತ್ತು.

Conclusion:ಇಷ್ಟೆಲ್ಲ ಅದ್ದೂರಿಯಾಗಿ ಕಿತ್ತೂರು ಉತ್ಸವ ನಡೆದರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತ್ರ ಈ ಕಡೆ ತಲೆ ಹಾಕಲಿಲ್ಲ. ಕಿತ್ತೂರು ಉತ್ಸವದಲ್ಲಿ ಪಾಲ್ಗೊಂಡರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಬಲವಾಗಿ ಇರುವ ಕಾರಣ ಮುಖ್ಯಮಂತ್ರಿಗಳು ಈ ಮೂಢನಂಬಿಕೆಗೆ ಒಳಗಾದರಾ ಎಂಬ ಅನುಮಾನ ಕಾಡುತ್ತದೆ. ಒಟ್ಟಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ಮಡಿದ ಕಿತ್ತೂರು ಆಸ್ಥಾನದ ರಾಣಿ ಚನ್ನಮ್ಮನ ಉತ್ಸಾಹ ವೈಭವದೊಂದಿಗೆ ಅದ್ದೂರಿ ತೆರೆ ಕಂಡಿದ್ದು ವಿಶೇಷ.

ಬೈಟ್ : ಜೂನಿಯರ್ ಶಿವರಾಜಕುಮಾರ್ ( ಬೆಳಗಾವಿ )

: ಅಶ್ವಿನಿ ಸುರೇಶ್ ( ಬೆಂಗಳೂರು ಕಲಾವಿದೆ )

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.